Wednesday, December 29, 2010

ಹಾಟ್,ಫ್ಲಾಟ್ ಅಂಡ್ ಕ್ರೌಡೆಡ್" (part 1)

ನೀವು ಬೆಂಗಳೂರಿನ ರಸ್ತೆಯಲ್ಲಿ ಸಂಚರಿಸುವಾಗ ಒಂದು ದೃಶ್ಯ ಗಮನಿಸಿರಬಹುದು,ಅದು ಕಡಿದಾದ ರಸ್ತೆಯಲ್ಲಿ ಕಷ್ಟಪಟ್ಟು ಸಂಚರಿಸುವ ವಾಹನಗಳು,ಪರದಾಡುವ ಪಾದಾಚಾರಿಗಳು ,ದೂಳು ಹೊಗೆಯನ್ನೇ ಉಸಿರಾಡುತ್ತಿರುವ ಮಹಾಜನತೆ. ಅವರ ಈ ಸ್ತಿತಿಗೆ ಕಾರಣ ಮೆಟ್ರೋ ಕಾಮಗಾರಿ. ಇದರ ಕೃಪೆಯಿಂದ ಅಗಲವಾದ ರಸ್ತೆಗಳು ಉಪಯೂಗವಿಲ್ಲದನ್ತಾಗಿವೆ. ಇಂದಿನ ಬೆಂಗಳೂರಿಗರಿಗೆ ಮೆಟ್ರೋ ಬೇಡವಾಗಿರಬಹುದು. ಆದರೆ ಮೆಟ್ರೋ ಸಜ್ಜಾಗುತ್ತಿರುವುದು ನಾಳಿನ ಬೆಂಗಳೂರಿಗರಿಗಾಗಿ. ಅಂದರೆ ನಾಳೆ ಇಲ್ಲಿಗೆ ಬರುವ ಸಹಸ್ತ್ರಾರು ವಲಸಿಗರಿಗೆ. ಬಿಹಾರಿನ ಬಡಗಿಗಳಿಗೆ ,ಒರಿಸ್ಸಾದ ಪೈಂಟರ್ ಗಳಿಗೆ,ಪಂಜಾಬಿನ ಕಮ್ಮಾರರಿಗೆ, ಅಂಗಡಿ ಮಾಡುವ ಮಾರವಾಡಿಗಳಿಗೆ,ಬಂಗಾರದ ಗಿರವಿ ಅಂಗಡಿ ಇಡುವ ಮಲೆಯಾಳಿಗಳಿಗೆ,ಧ್ವನಿಯಿಲ್ಲದ ಕನ್ನಡಿಗರ ಮೇಲೆ ಕರುಣೆ ತೋರಿ ಕನ್ನಡ ಚಿತ್ರಗಳಿಗೆ ಹಿನ್ನೆಲೆ ಧ್ವನಿ ನೀಡಲು ಬರುವ ಗಾಯಕರಿಗೆ,ಸುಲಭ ಶೌಚಾಲಯ ಕಾಯಲು ಬಂದು ಪಾನಿಪುರಿ ಅಂಗಡಿ ಇಡುವ ಉತ್ತರ ಪ್ರದೇಶದ ಭಯ್ಯಗಳಿಗೆ,ಬಾಂಬೆ, ದೆಹಲಿಗಳಲ್ಲಿ ಅಪರಾಧಗಳನ್ನೆಸಗಿ ಬೇoಗಲೂರಿನಲ್ಲಿ ತಲೆಮರೆಸಿಕೊಂಡಿರುವ ಕ್ರಿಮಿನಲ್ಗಳಿಗೆ,ಹೀಗೆ ಮುಂತಾದವರಿಗೆ ಸಾಕಷ್ಟು ಸ್ಸ್ಥಳಾವಕಾಶ ಮಾಡಿಕೊಡುವ ಉದ್ದೇಶದಿಂದ ಮೆಟ್ರೋ ಸಜ್ಜಾಗುತ್ತಿದೆ. ಇಂದು ಬೆಂಗಳೂರಿಗರು ಎಂದು ಕರೆಸಿಕೊಳ್ಳುತ್ತಿರುವ ಜನ ಅಂದು ದೂಳು ,ಹೊಗೆ ಕುಡಿದು ಸತ್ತೆ ಹೋಗಿರುತ್ತಾರೆ.ರಸ್ತೆಗಳನ್ನು ಅಗಲಮಾಡುವ ತರಾತುರಿಯಲ್ಲಿ. ಹೊಸ ಬಡಾವಣೆ ,ಫ್ಲಾಟ್ ಗಳನ್ನು ನಿರ್ಮಿಸುವ ಬರದಲ್ಲಿ ಹಲವಾರು ಬಡ ಬೆಂಗಳೂರಿಗರನ್ನು ಈಗಾಗಲೇ ಎತ್ತಂಗಡಿ ಮಾಡಲಾಗಿದೆ. ಬೆಂಗಳೂರಿಗರನ್ನು ಕಾಡುವ ಮುಖ್ಯ ಸಮಸ್ಯೆ ಎಂದರೆ ದೂಳು, ಹೊಗೆ ಮತ್ತು ಕಾನೂನು. ಎಷ್ಟೂ  ಜನ ಇಲ್ಲಿ ಮನೆಕಟ್ಟಿಕೊಂಡು ಆರಾಮವಾಗಿದ್ದರು. ಈಗ ಅವರು ಮನೆ ಮುಂದೆ ವಾಹನ ನಿಲ್ಲಿಸಿದರೆ ಟ್ರಾಫಿಕ್ ಪೊಲೀಸರು ಜುಲ್ಮಾನೆ ವಿಧಿಸುತ್ತಾರೆ. ಕೆಲವರ ಮನೆ ಮುಂದಿನ ರಸ್ತೆಗಳು ಒನ್ ವೇ ಆಗಿದೆ. ಆದುದರಿಂದ ಅವರು ಸ್ವಂತಮನೆಗಳಿಗೆ ಸುತ್ತಿಬಳಸಿ ಓಡಾಡಬೇಕು, ಪೆಟ್ರೋಲ್ ಉಳಿಸಬೇಕೆಂದರೆ ಕದ್ದೋಡಾಡಬೇಕು!. ನಮಗೆ ಗೊತ್ತಿಲ್ಲದಂತೆಯೇ ನಾವು ಕ್ರಮೇಣ ಅಪರಾಧಿಗಳಾಗುವ ಪ್ರಕ್ರಿಯೆಯೇ ಒಂದು ಸೋಜಿಗ. ಕೃಪೆ: ನಮ್ಮ ಸಂವಿಧಾನ!. ನಮ್ಮ ಊರುಗಳೇ ನಮಗೆ ಬಂಧನ."ತಿಲಕಾಷ್ಟ ಮಹಿಷ ಬಂಧನ" ಎಂಬಂತೆ ಇದು ಒಂಥರಾ ಬಂಧನ. ಹೇಳಿಕೊಳ್ಳಲು ಆದಾಗ ,ಬಿಡಲು ಆಗದ ವಿಚಿತ್ರ ಸ್ತಿತಿ. ಇಲ್ಲಿಗೆ ಬರುವ ವಿಭಿನ್ನ ಜನಸ್ತೋಮದ ನಿರ್ವಾಹಣೆಯ ಅನಿವಾರ್ಯತೆ ,ಹಾಗೂ ಆಡಳಿತಾತ್ಮಕ ಸಂಕೀರ್ಣತೆಗಳಿಂದಾಗಿ ಈ ನಗರವನ್ನು ಕೇಂದ್ರಾಡಳಿತ ಪ್ರದೇಶ ಮಾಡಬೇಕೆಂದು ತೀರ್ಮಾನ ಕೈಗೊಂಡರೂ ಅಚ್ಚರಿ ಇಲ್ಲ. ಇರಲಿ ಬಿಡಿ, ಆಡಳಿತಾತ್ಮಕ ಉದ್ದೇಶಗಳಿಗಾಗಿ ಹಾಗೂ ಜನರ ಒಳಿತಿಗಾಗಿ ಸರ್ಕಾರ ಕೈಗೊಳ್ಳುವ ಎಲ್ಲ ನಿರ್ಧಾರಗಳೂ ಸ್ವಾಗತಾರ್ಹವೇ. ಭಾಷೆ,ಬಣ್ಣ,ಜಾತಿ,ಧರ್ಮ  ..ಮುಂತಾದ ಕ್ಷುಲ್ಲಕ ಕಾರಣಗಳನ್ನು ಮುಂದೊಡ್ಡಿ ಬಹುಸಂಖ್ಯಾತರ ಇಚ್ಚೆಗೆ ವಿರುದ್ಧವಾಗಿ ಹೋಗುವುದು ತಪ್ಪು ಎಂದು ನನಗೂ ಗೊತ್ತಿದೆ. ಜನಮತದ ಮೇಲೆ ಹೋದರೆ ನಾವು ಬೆಂಗಳೂರನ್ನು ಕನ್ನಡ ಮಾತೃಭಾಷೆ ಹೊಂದಿರುವವರ ನೆಲೆಬೀಡು ಎಂದು ಪರಿಗಣಿಸುವಲ್ಲಿ ಕೆಲವು ತಾಂತ್ರಿಕ ದೋಷಗಳನ್ನು ಎದುರಿಸುತ್ತೇವೆ.ಈ ಭಾರಿ ಬೆಂಗಳೂರನ್ನು ವಿಧಾನಸಭೆಯಲ್ಲಿ ಮತ್ತು ಬಿಬಿಎಂಪಿ(ಮಹಾನಗರ ಪಾಲಿಕೆ)ಯಲ್ಲಿ ಪ್ರತಿನಿಧಿಸುವ ಚುನಾಯಿತ ಸದಸ್ಯರಲ್ಲಿ ಹೆಚ್ಚಿನವರು ಕನ್ನಡೇತರ ಮಾತೃಭಾಷೆಯವರು!. ಇರಲಿ, ಅದು ಜನಗಳ ಆಯ್ಕೆ, ಬೆಂಗಳೂರಿನ ಜನರ ಆಯ್ಕೆಯನ್ನು ಮೈಸೂರಿನಲ್ಲೋ ,ಮಂಗಳೂರಿನಲ್ಲೋ ಕುಳಿತಿರುವ ಬುದ್ಧಿಜೀವಿಗಳು ಟೀಕೆ ಮಾಡುವುದು ಅಧಿಕ ಪ್ರಸಂಗಿತನವಾಗುತ್ತದೆ. ನಾವು ಚರ್ಚಿಸುತ್ತಿರುವುದು ಜನರ ಬದುಕಿನ ಬಗ್ಗೆ, ಕೆಲವು ನಗರ ವಾಸಿಗಳು ಕಾಂಕ್ರೀಟ್ ನ ಚಕ್ರವ್ಯೂಹದಲ್ಲಿ ಬಂಧಿಯಾಗಿ ಸಾಯುತ್ತಿರುವ ಬಗ್ಗೆ. ಈ ದೇಶದ ಪ್ರಗತಿ ಕೇವಲ ಕೆಲವೇ ಊರುಗಳಲ್ಲಿ ಕೇಂದ್ರೀಕೃತವಾಗುತ್ತಾ ಅಲ್ಲಿ ಸ್ಥಳೀಯಯರು ವಿವಿಧ ರೀತಿಯ ಕಷ್ಟಗಳಿಗೀಡಾಗುವಂತಹಾ ಪ್ರಸಂಗದ ಬಗ್ಗೆ. ಈ ಬಗ್ಗೆ ಥಾಮಸ್ ಫ್ರೈಡ್ಮ್ಯಾನ್ ಎಂಬುವರು ಬರೆದಿರುವ "ಹಾಟ್,ಫ್ಲಾಟ್ ಅಂಡ್ ಕ್ರೌಡೆಡ್" ಎಂಬ ಪುಸ್ತಕ ನೆನಪಿಗೆ ಬರುತ್ತಿದೆ. ಈ ಬಗ್ಗೆ ಮುಂದಿನ ಭಾಗದಲ್ಲಿ ಬರೆಯುತ್ತೇನೆ. 

ಚಿತ್ರರಂಗ ಮತ್ತು ರಾಜಕೀಯ.



ಇಂದಿನ ಟ್ರೆಂಡ್ ಎಂದರೆ "ನೀನು ಕದ್ದಿದ್ದಿಯ" ಎಂದರೆ 'ನಾನೊಬ್ಬನೇ ಕಳ್ಳನಲ್ಲ , ಅವರೆಲ್ಲ ಕದ್ದಿಲ್ಲವೇ, ಅವರನ್ನೇಕೆ ಯಾರೂ ಕೇಳುವುದಿಲ್ಲ? ಎಂದು ಸವಾಲು ಹಾಕುತ್ತಾರೆ'. ಇಂದು ಇಂದು ನಿನ್ನೆ ಶುರುವಾದ ಟ್ರೆಂಡ್ ಅಲ್ಲ. ಇಂತಹ statement ಗಳನ್ನು ಜನ ಒಪ್ಪುವಂತೆ ಮಾಡಲು ಚಿತ್ರರಂಗ ಕೂಡ ಅಹೋರಾತ್ರಿ ಪ್ರಯತ್ನ ಪಟ್ಟಿದೆ. ಹಿಂದೆ ಎಂಬತ್ತನೇ ದಶಕದಲ್ಲಿ ಬರುತಿದ್ದ ಆಕ್ಷನ್ ಕಥೆಗಳ ಚಿತ್ರಗಳು ಹಿಂಸೆಯನ್ನು ವೈಭವೀಕರಿಸುತಿತ್ತು. ಕೌಬಾಯ್ ರೀತಿಯ ಉಡುಪು ತೊಟ್ಟು ಕುದುರೆಯಲ್ಲಿ ಬಂದು ಜನರನ್ನು ದೋಚುವುದು,ಕೊಲ್ಲುವುದು ಆ ನಂತರ ದೋಚಿದ ಒಂದು ಚಿಕ್ಕ ಭಾಗವನ್ನು ಜನರಿಗೆ ಹಂಚುವುದು. "ಕದ್ದ ಪಾಪ ,ಹಂಚಿ ತಿಂದ ಪರಿಹಾರ " ಎಂಬ ವಿಷಯ ಜನರ ಮನಸ್ಸಿಗೆ ನಾಟಿ ಹೋಯಿತು. ಆ ನಂತರ ರಾಜಕಾರಣಿಗಳು ಇದನ್ನೇ ಜೀವನ ಶೈಲಿಯನ್ನಗಿಸಿಕೊಂಡರು. ಶಾಸಕರಾದ ಕೂಡಲೇ ಸರ್ಕಾರಿ ಜಮೀನನ್ನು,ಹಣವನ್ನು ಕೊಳ್ಳೆ ಹೊಡೆದು ಅದರಲ್ಲಿ ಒಂದಿಷ್ಟು ದುಡ್ಡನ್ನು ಕಲ್ಯಾಣ ಮಂಟಪ ಕಟ್ಟಿಸುವುದಕ್ಕೋ,ಊರಿನ ಜನಕ್ಕೆ ಊಟ ಹಾಕುವುದಕ್ಕೋ ,ಬಡಬಗ್ಗರಿಗೆ ಹಂಚುವುದಕ್ಕೋ ವಿನಿಯೋಗಿಸತೊಡಗಿದರು. ಹೀಗೆ ಜನರ ಪ್ರೀತಿ ಗಳಿಸಿ ನಾಯಕರು ಎನಿಸಿಕೊಂಡರು. ಆದರೆ ದೋಚುವುದು ಅವರಿಗೆ ಅಭ್ಯಾಸವಾಗಿ ಹೋಯಿತು. ಸಾರ್ವಜನಿಕರಿಗೆಂದು ಸರ್ಕಾರ ರೂಪಿಸುವ ಯೋಜನೆಗಳಲ್ಲಿ ದುಡ್ಡು ಹೊಡೆಯಲು ಆರಂಬಿಸಿದರು. ಚಿಕ್ಕಪುಟ್ಟ ವಿಷಯಗಳಲ್ಲೆಲ್ಲಾ ಕಮಿಷನ್ ಕೀಳಲಾರಮ್ಬಿಸಿದರು. ಅವರಿಗೆ ಅದು ಅನಿವಾರ್ಯ ವಾಗಿತ್ತು ಕೂಡ. ಊರಿನಲ್ಲಿ ಊರಹಬ್ಬ ಮಾಡುವವರಿಂದ ಹಿಡಿದು ಗಣಪತಿ ಕೂರಿಸುವವರವರೆಗೆ ಎಲ್ಲರಿಗೂ ಹಣ ಕೊಡಬೇಕಿತ್ತು. ಪರಿಸ್ತಿತಿ ಹೀಗೇ ಇರಬೇಕಾದರೆ ಇನ್ನು ಒಂದು ಟ್ರೆಂಡು ಆರಂಭವಾಯಿತು ಚಿತ್ರರಂಗದಲ್ಲಿ. ಈ ಬಾರಿ ಜನರನ್ನು ವಂಚಿಸುವವರನ್ನು ಹೀರೋ ಗಳೆಂದು ಬಿಂಬಿಸುವ ಟ್ರೆಂಡ್ . ಕಳ್ಳ-ಮಲ್ಲ, ಯಾರಿಗೂ ಹೇಳ್ಬೇಡಿ ...ಗೋಲ್ ಮಾಲ್ ರಾಧಾಕೃಷ್ಣ ...ಇತ್ಯಾದಿ. ಈ ಗೋಲ್ಮಾಲ್ ಸೀರಿಸ್ ಬಹುಶ ಅತ್ಯಂತ ಕೆಟ್ಟದಾಗಿತ್ತು. ಇವುಗಳ ನಾಯಕ ಅನಂತ್ ನಾಗ್ ಜನರನ್ನು ವಂಚಿಸುತಿದ್ದ ಪರಿ ನೋಡಿ ಪ್ರೇಕ್ಷಕರೆಲ್ಲರೂ ಕೇಕೆ ಹಾಕಿ ನಗುತಿದ್ದರು. ಜನರ ಮನಸ್ಸು ವಂಚಕರ ಬಗ್ಗೆ ಎಷ್ಟು insensitive ಆಯಿತು ಎಂದರೆ ವಂಚಕನೆ ಅವರ ಮನಸ್ಸಿನಲ್ಲಿ ಒಂಥರಾ ಹೀರೋ ಆದ. ಈ ಚಿತ್ರಗಳಲ್ಲೇ ನಾಯಕ ನಟ ಎಲ್ಲರಿಗೂ ಮೋಸ ಮಾಡಿ ಅದನ್ನು ಎದೆತಟ್ಟಿ ಸಮರ್ಥಿಸಿಕೊಳ್ಳುತಿದ್ದ.ಇದಕ್ಕೆ ಬೆಳ್ಳಿಪರದೆ ಸಾಲದು ಅಂತ ಕಿರುತೆರೆಯಲ್ಲಿ ಸಹ ಇಂತಹ ಕತಾಹಂದರದ ಸೀರಿಯಲ್ ಗಳು ಮೂಡಿಬರತೊಡಗಿದವು. ಫಣಿ ರಾಮಚಂದ್ರ ಎಂಬುವವನು ಎಂತೆಂತದೋ ಕೀಳು ಅಭಿರುಚಿಯ ತಲೆಚಿಟ್ಟು ಹಿಡಿಸುವ ಸೀರಿಯಲ್ ಗಳನ್ನು ಮಾಡಿ "ಹಾಸ್ಯ"ಎಂಬ ಲೆಬಲ್ನಲ್ಲಿ ಪ್ರಸಾರಮಾಡತೊಡಗಿದ. ಶಾಲಾ ವಿಧ್ಯಾರ್ಥಿಗಳನ್ನು, ದಂಪತಿಗಳನ್ನು, ನಿರುದ್ಯೋಗಿಗಳನ್ನು ,ಪ್ರೇಮಿಗಳನ್ನು ,ಅವರನ್ನು ,ಇವರನ್ನು ಒಟ್ಟಾರೆ ಕಷ್ಟದಲ್ಲಿರುವವರನ್ನು ,ಪ್ರಮಾಣಿಕರನ್ನು ಹಂಗಿಸುವುದೇ ಇದರ ಮುಖ್ಯ ಉದ್ದೇಶವಾಗಿತ್ತು. ಆ ಜನರೇಶನ್ ಇಂತಹ ಚಿತ್ರಗಳನ್ನು ನೋಡುತ್ತಲೇ ಬೆಳೆಯಿತು 18 ವಯಸ್ಸಿಗೆ ಓಟು ಹಾಕುವ ಹಕ್ಕು.ಇಂತಹವರ ಓಟಿನಿಂದ ಬರುವವರು ಹೇಗಿರುತ್ತಾರೆ ? ಎಂಬತ್ತು -ತೊಂಬತ್ತನೆಯ ದಶಕದಲ್ಲಿ ತೋಳಗಳನ್ತಿದ್ದ ರಾಜಕೀಯ ನಾಯಕರು 21 ನೆ ಶತಮಾನದಲ್ಲಿ ನರಿಗಳನ್ತಾದರು.
ಈಗ ನಮ್ಮ ಮುಖ್ಯಮಂತ್ರಿಯ ಮೇಲೆ ಬ್ರಷ್ಟಚಾರದ ಆರೋಪ ಬಂದರೆ 'ನಾನು ಮಾಡಿಲ್ಲ 'ಅಂತ ಅವನು ಹೇಳುವುದಿಲ್ಲ. ಬದಲಾಗಿ ನಾನೇನು ಯಾರೂ ಮಾಡದೆ ಇರೋದನ್ನು ಮಾಡಿಲ್ಲ ಎನ್ನುತ್ತಾನೆ!.
ಈ ಎಲ್ಲಾ ವಿದ್ಯಾಮಾನಗಳನ್ನು ನೋಡಿದರೆ ಇವು ಸಮಾಜದ ಮೇಲೆ ಚಿತ್ರರಂಗದಿಂದ ಆಗುತ್ತಿರುವ ಫಲಶ್ರುತಿ ಅಂತಲೇ ಅನ್ನಬಹುದು.

Sunday, December 26, 2010

ಈ ಅಖಂಡತೆ,ಐಕ್ಯತೆ ಇತ್ಯಾದಿಗಳ ಬಗ್ಗೆ

ಮಂಗಳೂರಿನ ಮಂಜುನಾಥ "ಶಿವ"ಅಲ್ಲವೇ ಅಲ್ಲ!
ಮೇಲ್ಕಂಡ ಮಾತನ್ನು ನಾನು ಹೇಳುತ್ತಿಲ್ಲ.ಇದನ್ನು ಪತ್ತೆ ಮಾಡಿದವರು ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈ.ಇದಕ್ಕೆ ಅವರು ಹಲವು ಉಲ್ಲೇಖಗಳನ್ನು ಕೊಟ್ಟಿದ್ದಾರೆ. "ಮಂಜುನಾಥ" ಎಂಬ ಹೆಸರು ಶಿವ ಸಹಸ್ರನಾಮದಲ್ಲೂ ಇಲ್ಲವಂತೆ!. ಹಾಗಾದರೆ ಈ ಮಂಜ ಮಂಗಳೂರಿನ ಕದ್ರಿಗೆ ಎಲ್ಲಿಂದ ಬಂದ?.ಇದು ಬೌದ್ಧ ದೇವತೆ ಮಂಜುಶ್ರೀ ಮತ್ತು ನಾಥಪಂಥದ ರೀಮಿಕ್ಸ್ ರೂಪ. ಹಿಂದೆ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಬೌದ್ಧಧರ್ಮದ ಪ್ರಭಾವ ವಿತ್ತೆಂದು ನಂತರ 'ಶೈವಧರ್ಮ'ಪ್ರಾಬಲ್ಯಕ್ಕೆ ಬಂತೆಂದು ಹೇಳಲಾಗಿದೆ.ಈಗಿನವರನ್ನು ಕೇಳಿದರೆ ಮಂಜುಶ್ರೀ ಕೂಡ ಹಿಂದೂ ದೇವತೆ,ಶಿವನ ಅವತಾರ ಎನ್ನಬಹುದು. ಹೀಗೆ ಎಲ್ಲಾ ಒಂದೇ.,ಎಲ್ಲಾ ಒಂದೇ ಎನ್ನುತ್ತಾ ಹಲವು ಪ್ರಾಂತೀಯ,ಚಿಕ್ಕ ಚಿಕ್ಕ ದೇವತೆಗಳನ್ನು,ಸಂಪ್ರದಾಯಗಳನ್ನು ಪ್ರಬಲ ಧರ್ಮಗಳು ಆಪೋಶನ ತೆಗೆದುಕೊಂಡಿರುವುದನ್ನು ನಾವು ನೋಡಿದ್ದೇವೆ.ನಮ್ಮ ಭಕ್ತಿ ಪಂಥದ ಸಾಧು/ಸಂತರಿಂದ ಹಿಡಿದು ನಮ್ಮ ಪುಡಾರಿಗಳವರೆಗೆ ಎಲ್ಲರೂ "ಎಲ್ಲಾ ದೇವರುಗಳು ಒಂದೇ"ಎಂಬ ದೇಶಾವಾರಿ ಘೋಷಣೆ ಮಾಡುತ್ತಲೇ ಬಂದಿದ್ದಾರೆ. ಈ ಭಕ್ತಿ ಪಂಥವು ಒಂದು ಅಧ್ಯಾತ್ಮಿಕ ಚಳವಳಿ ಎನ್ನುವುದಕ್ಕಿಂತಾ ಒಂದು ಸಾಮಾಜಿಕ ರಾಜಕೀಯ ಚಳುವಳಿ ಎಂದರೆ ತಪ್ಪಾಗಲಾರದು. ಇದು ಮುಸ್ಲಿಂ ಆಕ್ರಮಣವನ್ನು ವಿರೋಧಿಸುತ್ತಲೇ "ಇಸ್ಲಾಂ ಕೂಡ ತಮ್ಮ ಧರ್ಮದಿಂದ ಬೇರೆಯಲ್ಲ" ಎಂಬ ಸಂದೇಶವನ್ನು 'ಪ್ರಚಾರ' ಮಾಡಲೆಂದೇ ಹುಟ್ಟಿಕೊಂಡ ಚಳವಳಿ.ಆದರೆ ಇಸ್ಲಾಮನ್ನು 'Dilute' ಮಾಡಲು ಈ ಚಳುವಳಿಗೆ ಸಾಧ್ಯವಾಗಲಿಲ್ಲ.ಎಲ್ಲಾ ಧರ್ಮಗಳ ನಂಬಿಕೆಗಳು ಬೇರೆ,ಅವುಗಳ ಸ್ಥಾಪಕರ ಕಾಣ್ಕೆಗಳು ಬೇರೆ,ಎಲ್ಲರೂ ಕಂಡ ದೇವರುಗಳು,ದೇವರ ಪರಿಕಲ್ಪನೆಗಳು ಬೇರೆ ಬೇರೆ.ಅಂದಮೇಲೆ ಎಲ್ಲಾ ದೇವರು ಒಂದೇ ಹೇಗೆ ಆಗಲು ಸಾಧ್ಯ?. ಅಂದ ಮೇಲೆ "ಎಲ್ಲಾ ದೇವರು ಒಂದೇ"ಎನುವುದು ಎಲ್ಲಾ ಕೋಮಿಗೆ ಸೇರಿದ ಜನರನ್ನು ಮೆಚ್ಚಿಸಲು ರೊಪಿಸಲಾದ "ಪೊಲಿಟಿಕಲ್ ಸ್ಟೇಟ್ಮೆಂಟ್ "ಎಂದಾಯಿತಲ್ಲ.
ಎಲ್ಲರು ಒಂದೇ ಎಂಬ ಘೋಷಣೆಗಳು,ಒಂದಾಗುವ ಮಾತುಗಳು,ಏಕೀಕರಣ, ಒಗ್ಗಟ್ಟಿನ ಪರಿಕಲ್ಪನೆ ಇತ್ಯಾದಿಗಳು ಮಾನಸಿಕ ವಸಾಹತುಶಾಹಿತ್ವದ ಮುಖ್ಯ ಅಸ್ತ್ರಗಳು. ಯುರೋಪಿಯನ್ನರು ಬೌತಿಕ ವಸಹಾತುಗಳನ್ನು ಸೃಷ್ಟಿ ಮಾಡಿದವರಲ್ಲಿ ಮೊದಲಿಗರೆಂದು ಹೆಸರು ಗಳಿಸಿದರೂ,ಮಾನಸಿಕ ವಸಾಹತುಶಾಹಿಯ "ಟೆಕ್ನಿಕ್"ಗಳನ್ನು ಅಭಿವೃದ್ದಿಪಡಿಸಿದವರು ಬಾರತಿಯರೇ. ಬೌದ್ಧ,ಜೈನ,ಪಾರ್ಸಿ ಧರ್ಮಗಳ ಮೇಲೆಲ್ಲಾ ಆಕ್ರಮಣ ಮಾಡಿ ಎಲ್ಲಾ ಒಂದೇ ಎಂದು ಅವುಗಳನ್ನು ನಾಶಮಾಡುವ ಒಂದು ಸಂಚು ಗುಪ್ತರ ಯುಗದಲ್ಲಿ ನಡೆದಿತ್ತು. ಬಹುಷಃ ಇಸ್ಲಾಂ ಇಂತಹ ಪ್ರಯತ್ನ ವಿರೋಧಿಸಲು ಹುಟ್ಟಿದ ಪಂಥ ವೆಂದು ಕಾಣುತ್ತದೆ.ಅದುದರಿಂದ ಅದು ತನಗೂ ಇತರರಿಗೂ ಮಧ್ಯ ಎಂದೂ ಅಳಿಸಲಾರದ ರೇಖೆಯನ್ನುಹಾಕಿಕೊಂಡಿದೆ. ಒಬ್ಬ ವರ್ತಕ ನಾಗಿದ್ದಾಗ ಪೈಗಂಬರ್ ಬೌದ್ಧಧರ್ಮದ ವಿನಾಶವನ್ನು ಬೇರೆ ಬೇರೆ ಕಡೆ ಕಣ್ಣಾರೆ ನೋಡಿದ್ದಿರಬಹುದು.

ಸ್ವಾತಂತ್ರ ಕೊಡುವ ಮುಂಚೆ "ಬಾರತಿಯರು ತಮ್ಮನ್ನು ತಾವು ಆಳಿಕೊಳ್ಳಲಾರರು.ಅದಕ್ಕೆ ನಾವು ಆಳುತಿದ್ದೇವೆ"ಎಂಬ ಬೂಟಾಟಿಕೆ ಮಾತನ್ನು ಚರ್ಚಿಲ್ ಆಡುತಿದ್ದ.ನೀವು ಬಾರತವನ್ನು ಅದರ ಪಾಡಿಗೆ ಬಿಡಿ ಎಂಬ ಮಾತು ಅವರಿಗೆ ಕೇಳುತ್ತಿರಲಿಲ್ಲ.ಏಕೆಂದರೆ ಅವರು ಅಖಂಡ ಬ್ರಿಟಿಶ್ ಸಾಮ್ರಾಜ್ಯದ ಪರಿಕಲ್ಪನೆಯಲ್ಲಿ ಮುಳುಗಿದ್ದರು. ನಾನು ಮೇಲೆ ಹೇಳಿದ್ದು ಅದನ್ನೇ. ಈ ಅಖಂಡತೆ,ಐಕ್ಯತೆ, ಇವು ಕೇಳಲು/ಓದಲು ಬಹಳ ಧೀಮಂತ ದ್ಯೇಯಗಳಂತೆ ಕಂಡರೂ ಹೊಟ್ಟೆಯಲ್ಲಿ ವಸಾಹತು ಶಾಹಿಯ ಬೂತವನ್ನು ಬಚ್ಚಿಟ್ಟುಕೊಂಡಿರುತ್ತದೆ. "ನಾವೆಲ್ಲರೂ ಒಂದು" ಎಂದರೆ "ನೀವು ಬೇರೆಯಲ್ಲ"ಎಂದು!. ಈ ಒಂದಾಗುವ ಗೌಜಿನಲ್ಲಿ ನಾವು ನಮ್ಮ ಹಲವು ವಿಶೇಷತೆಗಳನ್ನು ಕಳೆದುಕೊಂಡು ಬಿಡುತ್ತೇವೆ.ಉದಾಹರಣೆಗೆ ಬಾಷಾವಾರು ಪ್ರಾಂತ್ಯ ಎಂಬ ಪುನರ್ವಿಂಗಡನೆಯ ಸಂಧರ್ಭದಲ್ಲಿ ಆದ ಕೆಲವು ತಪ್ಪು ವಿಂಗಡನೆಗಳಿಂದ ತುಳು,ಕೊಡವ ಮುಂತಾದ ಬಾಷೆಗಳು ಗೋರಿ ಸೇರುವ ಹಂತದಲ್ಲಿದೆ!.  ಹಿಂದೆ ಭಾರತ ಸರ್ಕಾರವು ಭಾಷಾವಾರು ಪ್ರಾಂತ್ಯಗಳನ್ನು ರೂಪಿಸುವ ಪ್ರಾಮಾಣಿಕ ಪ್ರಯತ್ನ ಮಾಡಿದಾಗ ಅದು ಈ ಬಗ್ಗೆ ಅಧ್ಯಾಯನ ನಡೆಸಲು ಕೆಲವು ಸಮಿತಿಗಳನ್ನು ರಚಿಸಿತು. ಅದರಲ್ಲಿ ಪ್ರಮುಖವಾದದ್ದು State Reorganisation commission. ಫಜಲ್ ಆಲಿ ಆಯೋಗ ಎಂದು ಸಹಾ ಇದನ್ನು ಕರೆಯುತ್ತಾರೆ. ಇದು 8-6-1954ರಂದು ಮಂಗಳೂರಿಗೆ ಬೇಟಿ ನೀಡಿತು. ತುಳುಭಾಷೆ ದಕ್ಷಿಣ ಭಾರತದ ಪ್ರಮುಖ ಭಾಷೆಯಾದುದರಿಂದ ಈ ಭಾಷೆಯನ್ನು ಆಡುವವರು ಇರುವ ಪ್ರದೇಶಕ್ಕೆ ಬೇಟಿನೀಡಿ ಅಲ್ಲಿನ ಎಲ್ಲೆಗಳನ್ನು ತೀರ್ಮಾನಿಸುವುದು ಆ ಅಯೋಗದ ಉದ್ದೇಶವಾಗಿತ್ತು.ತುಳುನಾಡು ಒಂದು ಸಣ್ಣ ಪ್ರದೇಶವೆಂದಾಗಲಿ ಅಲ್ಲಿನ ಜನರಿಗೆ ದೊಂಬಿಎಬ್ಬಿಸುವ  ಶಕ್ತಿ ಇದೆಯೋ ಇಲ್ಲವೋ ಎಂಬ ಅಂಶವನ್ನ ಆಯೋಗ ಗಮನಕ್ಕೆ ತೆಗೆದುಕೊಳ್ಳಲಿಲ್ಲ. ಏಕೆಂದರೆ ಒಂದು ಆಯೋಗಕ್ಕೆ ಕುತ್ಸಿತ ರಾಜಕೀಯ ಉದ್ದೇಶಗಳು ಮುಖ್ಯವಾಗಿರುವುದಿಲ್ಲ.ಅವು ತಮ್ಮದೇ ಆದ ವೈಜ್ಞಾನಿಕ ಮಾನದಂಡಗಳನ್ನು ಹೊಂದಿರುತ್ತವೆ. ಆದರೆ ರಾಜಕಾರಣಿಗಳು ತಮ್ಮವೇ ಆದ ಪಟ್ಟಭದ್ರ ಹಿತಾಸಕ್ತಿಗಳನ್ನು ಹೊಂದಿರುತ್ತಾರೆ. ಇಂತಹ ಕೆಲವು ಮೂರ್ಖರು ತುಳು ಮಹಾಸಭೆ, ಕಾಂಗ್ರೆಸ್ ಪಕ್ಷ,ಲೋಕಲ್ ಪ್ರಜಾ ಸಮಾಜವಾದಿ ಪಕ್ಷದ ಬ್ಯಾನರ್ ಅಡಿ ಆಯೋಗವನ್ನು ಬೇಟಿಯಾಗಿ "ಕನ್ನಡಿಗರೊಂದಿಗೆ ಸೇರಲು ತುಳುವರು 1928 ರಿಂದಲೇ ಪ್ರಯತ್ನ ನಡೆಸಿರುವ ಪುರಾವೆ ಒದಗಿಸಿದರಂತೆ. ಈ ಮೂರ್ಖರು ಒದಗಿಸಿದ ಪುರಾವೆ ಗಳೇನು ಗೊತ್ತೆ? ಈ ಭಾಗದ ಖ್ಯಾತನಾಮರು (ವರ್ತಕರು, ಉದ್ಯಮಿಗಳು, ಕನ್ನಡ ಕವಿಗಳು ಕರ್ನಾಟಕದ ಬೇರೆ ಬೇರೆ ಭಾಗಗಳಲ್ಲಿ ನಡೆದ ಏಕೀಕರಣ ಸಭೆಗಲ್ಲಿ ಭಾಗವಹಿಸಿ ಭಾಷಣಗಳನ್ನು ಮಾಡಿದ್ದು. ಜೊತೆಗೆ ಕೆಲವರು ತುಳು ಬಾಷೆಯನ್ನು ಆಡುವ ಪ್ರಾಂತ್ಯಗಳನ್ನು ಕೇರಳಕ್ಕೆ ಸೇರಿಸಲಾಗುವುದು ಎಂದು ಗುಲ್ಲೆಬ್ಬಿಸಿದ್ದರಿಂದ  ಹೆದರಿದ ತುಳು ಜನತೆ ಕನ್ನಡಿಗರಾದರೂ ಪರವಾಗಿಲ್ಲ,ಮಲಿಯಾಳಿಗಳ ಸಹಾವಾಸ ಬೇಡವೇ ಬೇಡ ಎಂದು ತೀರ್ಮಾನಿಸಿದರಂತೆ. ಈ ದೀಮಂತ(?) ನಾಯಕರ ಮು೦ಚೂಣಿಯಲ್ಲಿದ್ದ ಕೆಲವು ಹೆಸರುಗಳೆಂದರೆ ಕೇ.ಬೀ. ಜಿನರಾಜ ಹೆಗಡೆ,ಕೆ.ವಾಸುದೇವಾಚಾರ್ಯ,ಪಿಂಟೋ, ಅಮ್ಮೆಂಬಳ ಬಾಳಪ್ಪ ,ಸದಾನಂದ ಹೆಗ್ಡೆ, ಕೆ.ಆರ್.ಕಾರಂತ್....
 ಕೊಡಗು ರಾಜ್ಯ ಸಹಾ ಸ್ವಾತಂತ್ರ ಪೂರ್ವದಲ್ಲಿ ಒಂದು ರಾಜ್ಯವಾಗಿದ್ದದ್ದು ಇಂದು ಕರ್ನಾಟಕದ ಒಂದು ಸಾಮಾನ್ಯ ಜಿಲ್ಲೆ ಯಾಗಿರುವುದು ಇನ್ನೊಂದು ದುರಂತ. 

ಇದು ಮೊದಲಿನಿಂದಲೂ "ಬೇರೆ ಇದ್ದವರಿಗೆ,ಬೇರೆಯೇ ಇರಬಯಸುವವರಿಗೆ,ಬೇರೆಯಾಗಬಯಸುವವರಿಗೆ ಇರುವ ಹಕ್ಕನ್ನು ಕಸಿದುಕೊಂಡು,ಅವರ "ಬೇರೆತನ"ವನ್ನು ಅವರ ವೈಶಿಷ್ಟ್ಯವನ್ನು ನಾಶಮಾಡುವ ಒಂದು ಆಯುಧ".ಬಾರತದ ಮಸ್ಲಿನ್ ಬಟ್ಟೆಯ ನಾಶಕ್ಕೆ ಕಾರಣವಾದುದು ಇಂತಹದೇ ತರ್ಕ. ಇಂಗ್ಲಂಡ್ ಒಂದು ಚಿಕ್ಕ ದೇಶ. ಆದರೆ ಅದು ಒಂದು ಚಿಕ್ಕ ದೇಶವಾಗಿರದೆ ಅಖಂಡ ಯೂರೋಪಿನ ಒಂದು ಬಾಗವಾಗಿದ್ದರೆ ಅದು ಬಾರತದಂತಾ ದೇಶವನ್ನು ತಮ್ಮ ವಸಾಹತನ್ನಾಗಿ ಮಾಡಿಕೊಳ್ಳಲು ಖಂಡಿತ ಸಾಧ್ಯವಾಗುತ್ತಿರಲಿಲ್ಲ.
 Divided we stand,United we Fall! ಎನ್ನಬಹುದು ಯುರೋಪಿಯನ್ನರು.ಏಕೆಂದರೆ ಯೂರೋಪಿನ ಚಿಕ್ಕ ಚಿಕ್ಕ ದೇಶಗಳು ಭೂಖಂಡದ ಮೂಲೆಮೂಲೆ ಗಲ್ಲಿಗೆ ನುಗ್ಗಿ ಅಲ್ಲಿ ರಾಜ್ಯಆಳಲು ಸಾಧ್ಯವಾದದ್ದೇ ಅವರ ಸಣ್ಣತನದಿಂದ !(ಅಕ್ಷರಶಃ). ಸುಮ್ಮನಿರಲಾರದೆ ಹುಳಬಿಟ್ಟುಕೊಂಡರು ಎಂಬಂತೆ ಇವತ್ತು ಕೆಲವು ತಾತ್ವಿಕ ಕಾರಣಗಳಿಂದ ಪ್ರೇರೇಪಿತರಾಗಿ ಯುರೋಪನ್ನು ಒಂದು ಮಾಡಲು ಹೋಗಿ ಪಡಬಾರದ ಕಷ್ಟ ಪಡುತಿದ್ದಾರೆ!.ಇವತ್ತು ಯುರೋಪಿಯನ್ ಯುನಿಯನ್ ಎಂಬ ಸಂಸ್ಥೆಯಿಂದ ಇಂದು ಆ ದೇಶದ ಸ್ತಿತಿವಂತ ರಾಷ್ಟ್ರಗಳಿಗೆ ಅನುಕೂಲಕ್ಕಿ೦ತಾ ಅನಾನುಕೂಲವೇ ಹೆಚ್ಚಾಗಿದೆ. ಯುರೋಪಿಯನ್ ಯುನಿಯನ್ ಪ್ರವರ್ತಕರಿಗೆ ಇದು ನುಂಗಲಾರದ ತುತ್ತಾಗಿದೆ. ಇಂದು ಇದ್ದಂತೆ ೧೪ನೆಯ ಶತಮಾನದಲ್ಲಿಯೂ ಯುರೋಪಿಯನ್ ಯುನಿಯನ್ ಇದ್ದಿದ್ದರೆ ಇಂದು ಅವರು ಬಾರತವನ್ನು ವಸಾಹತಾಗಿ ಮಾಡಲು ಸಾಧ್ಯವೇ ಆಗುತ್ತಿರಲಿಲ್ಲ.! 

(ಅಪೂರ್ಣ ಲೇಖನ,ಪೂರ್ಣಗೊಳಿಸುವ ಉದ್ದೇಶ  ಸದ್ಯಕ್ಕೆ ಇಲ್ಲ! ) 

Saturday, December 25, 2010

ಗಣಪತಿ ಸಚ್ಚಿದಾನಂದನ ಕಿಲಾಡಿತನ.



ಮೈಸೂರಿನ ನಂಜನಗೂಡು ರಸ್ತೆಯಲ್ಲಿ ಗಣಪತಿ ಸಚ್ಚಿದಾನಂದ ಎಂಬಾತ ವೆಂಕಟೇಶನ ಗುಡಿ ಕಟ್ಟಿಸಿದ್ದಾರೆ. ನಾನು ಹೋದಾಗ ನೋಡುತ್ತೇನೆ. ಪೂಜಾರಿಗಳು ಖಾಲಿ ಆರತಿ ತಟ್ಟೆಯ ಮುಂದೆ ಹ್ಯಾಪು ಮೋರೆ ಹಾಕಿ ಕುಂತಿದ್ದಾರೆ!. ಜನರನ್ನು ನೋಡಿದ ಕೂಡಲೇ ಕಿರೀಟದಂತಹ ವಸ್ತುವನ್ನು ಹಿಡಿದುಕೊಂಡು ಅದನ್ನು ತಲೆಗೆ ತಾಗಿಸಲು ಉತ್ಸಾಹದಿಂದ ಪುಟಿದುನಿಲ್ಲುವ ಪೂಜಾರಿಗಳು ಪಾಪ, ಹೀಗೇಕಾದರು? ಎಂದು ಆಲೋಚಿಸುತ್ತ ತೀರ್ಥ ತಗೊಳ್ಳಲು ಹತ್ತಿರ ಹೋದಾಗ ಅದರ ರಹಸ್ಯ ತಿಳಿಯಿತು. ಆ ದೇವಾಲಯದ ಹುಂಡಿಯನ್ನು ಆರತಿ ತಟ್ಟೆಯಂತೆ ಡಿಸೈನ್ ಮಾಡಲಾಗಿದೆ. ಪಕ್ಕದ್ದಲ್ಲಿ ಪೂಜಾರಿಗಳು ಕೂರುವ ಜಾಗ. ತೀರ್ಥ ತಗೊಳ್ಳೋ ಆತುರದಲ್ಲಿ ಅಬ್ಯಾಸಬಲದಿಂದ ಸಡನ್ ಆಗಿ ನೀವು ಚಿಲ್ಲರೆ ಹಾಕಿಬಿಟ್ಟರೆ ಅದು ಜಾರಿ ಸೀದಾ ಸಚ್ಚಿದಾನಂದನ ಹುಂಡಿ ಸೇರುತ್ತದೆ ! ಎಲಾ ನನ ಮಗನೇ...ಇಷ್ತಿಲ್ಲದೆ ಜಗದ್ಗುರು ಆಗುತ್ತಿದ್ದೇಯಾ... ಅಂದ್ಕೊಂಡೆ ...
ಸಚ್ಚಿದಾನಂದ ನನ್ನ ನೆಲ ಕದ್ದಿದ್ದಾನೆ ಅಂತಾ ಪಕ್ಕದ ಜಮೀನಿನ ಅನಿಲ್ ಕುಮಾರ್ ಎಂಬಾತ ಈ ಸ್ವಾಮೀಜಿಯನ್ನು ಜೈಲಿಗೆ ಕಳಿಸಿದ್ದಾಗ ಇಲ್ಲಿನ ಪೂಜಾರಿಗಳಿಗಂತೂ ಹಾಲು ಕುಡಿದಷ್ಟು ಖುಷಿಯಾಗಿರಬೇಕು!

Sunday, December 19, 2010

ದೇವಾಲಯಗಳಿಂದ ಹೊರಬರಲು ಐನೂರು ವರುಷ......

ರಾಜರ ಕಾಲದಿಂದಲೂ ಬಡಜನರನ್ನು ಮೂಸಿಯೂ ನೋಡದಿದ್ದ ದೇವರ ಮಕ್ಕಳೆಲ್ಲಾ ಬೀದಿಗಿಳಿದಿದ್ದಾರೆ.


ಅವರ ಗುರಿ ನಮ್ಮ ದೇಶದ ಜಾತೀಯತೆ ನಿರ್ಮೂಲನ ಮಾಡುವುದು!. ಬಡವರ ಗುಡಿಸಲಿಗೆ ಹೋಗಿ ಉಣ್ಣುವುದು ಇತ್ಯಾದಿ ಮಾಡುವ ಮಥಾದಿಪತಿಗಳು ಆಗಾಗ ಪತ್ರಿಕೆಗಳ ಮುಖಪುಟದಲ್ಲಿ ರಾರಾಜಿಸುತ್ತಾರೆ.

ಇವರಿಗೆ ಈಗ ದಲಿತರ ಬಗ್ಗೆ ವಿಶೇಷ ಆಸಕ್ತಿ. ಏಕೆ ಗೊತ್ತೇ?

ಅದೊಂದು ರೀತಿಯ “customer retension strategy”.

ಮೊದಲೆಲ್ಲಾ ಒಳಗೆ ಬಿಡಿ ಎಂದರೆ ದೇವಸ್ಥಾನದೊಳಕ್ಕೆ ಬಿಡುತ್ತಿರಲಿಲ್ಲ. ಈಗ ಬನ್ನಿ, ಬನ್ನಿ ಅಂತಾ ಕೈಮುಗಿದು ಕರೆಯುತಿದ್ದಾರೆ.

ನಿಜ, ಈಗಲೂ ಜನಜಂಗುಳಿ ದೇವಸ್ಥಾನಕ್ಕೆ ಹೋಗುತ್ತಾರೆ. ಆದರೆ ಈ ರೀತಿ ಹೋಗುವವರ ಪ್ರಬೇದ ಬೇರೆಯಾಗಿದೆ. ಹಿಂದೆ ಮಾಂಸ ತಿನ್ನುವ ಮಂದಿ ದೇವಾಲಯಗಳಲ್ಲಿ ಸ್ವಾಗತಾರ್ಹರಾಗಿರಲಿಲ್ಲ. ಆದರೆ ಈಗ ಹೆಚ್ಚಿನ ದೇವಸ್ಥಾನಗಳ ಹುಂಡಿ ತುಂಬುವವರು ಅದೇ ಮಾಂಸ ತಿನ್ನುವ ಮಂದಿ!. ಯಾವ ಪತ್ರಿಕೆ ನೋಡಿ, ದೇವರಿಗೆ ಕಿರೀಟ ನೀಡುವುದು...ಹಾರ ನೀಡುವುದು ಇದೆ ನವ ಶ್ರೀಮಂತ ಸಮೂಹ. ಈ ಗುಂಪಿಗೆ ಹೊಸಹೊಸ ಜನರನ್ನು, ಅದರಲ್ಲೂ ವಿಶೇಷವಾಗಿ ಊರ್ಧ್ವಮುಖಿಯಾಗಿರುವ,ಪ್ರಗತಿಹೊಂದಲು ಆರಂಬಿಸಿರುವ ಹಿಂದುಳಿದ ವರ್ಗಗಳನ್ನು ಸೇರಿಸಿಕೊಂಡು ಬಿಟ್ಟರೆ ಹುಂಡಿಗಳು, ಆರತಿ ತಟ್ಟೆಗಳು ಜಣ ಜಣ ಅನ್ನುತ್ತವೆ ಅನ್ನುವುದು ಈ ಧಾರ್ಮಿಕ ನಾಯಕರ ಲೆಕ್ಕಾಚಾರ. ಹಿಂದೆ ಸಿಕ್ಕಾಪಟ್ಟೆ ಕೊಟ್ಟು, ಕೈಸುಟ್ಟು ಕೊಂಡ ಹಳೆಭಕ್ತರು ಬಿಟ್ಟು ಹೋದರೂ ಹೊಸ ಭಕ್ತರಿಂದ ಆ ಜಾಗ ತುಂಬಿಸಿಕೊಳ್ಳುವ ಮುಂದಾಲೋಚನೆ. ಇನ್ನು ದೇವರನ್ನು,ಭಕ್ತಿಯನ್ನು ಮಾರುವ ಪ್ರೈವೇಟ್ ಕೇಂದ್ರಗಳೂ ಇವೆ. ಎಲ್ಲಿ ತಮ್ಮ ಬಿಸಿನೆಸ್ಸ್ (ದೇವಾಲಯ) ಮುಜಾರಾಯಿ ಇಲಾಖೆ ವಶಪಡಿಸಿ ಕೊಳ್ಳುತ್ತದೋ ಎಂಬ ಭಯ ಈ ಭಕ್ತಿಯ ವ್ಯಾಪಾರಿಗಳಿಗಿದೆ.ಅದಕ್ಕಾಗಿ, ಹುಂಡಿಗೆ ಬಿದ್ದ ಕೋಟ್ಯಾಂತರ ರೂಪಾಯಿಯಲ್ಲಿ ಒಂದು ಚಿಕ್ಕ ಬಾಗವನ್ನು ಧರ್ಮಕಾರ್ಯಗಳಿಗೆ ಉಪಯೋಗಿಸುತ್ತಾರೆ. ಈ ಮೂಲಕ ಜನರ ಕಣ್ಣಿಗೆ ಮಂಕುಬೂಧಿ ಎರಚುತ್ತಾರೆ. ಧರ್ಮ ಅಪಾಯದಲ್ಲಿದೆ ಎಂಬ ಕೂಗು ಹಾಕುತ್ತಾರೆ. ಅದುದರಿಂದ ಈಗ ಜಾತಿ ಜಾತಿಗಳಲ್ಲಿ ಮಠಗಳು,ಗುರುಪೀಠಗಳು ಆರಂಭವಾಗಿದೆ. ಇವರು ಎಲ್ಲಾ ಸಮಾರಂಭಗಳಿಗೂ ಹಾಜರಾಗಿ ಉಪದೇಶ ಮಾಡಿ ನಾವೆಲ್ಲಾ ವಿದ್ಯಾವಂತರಾಗಬೇಕು ಎಂದು ಕರೇ ಕೊಡುತ್ತಾರೆ. ನಂತರ ವಿದ್ಯಾರ್ಚನೆಯಲ್ಲಿ ಸರಸ್ವತಿಯ ಮಹಿಮೆಯನ್ನು ನಮ್ಮ ಮನಸ್ಸಿನಲ್ಲಿ ಬಿತ್ತುತ್ತಾರೆ. ನಾವು ವಿದ್ಯಾವಂತರಾಗುತ್ತೆವೋ ಇಲ್ಲವೋ ,ನಮ್ಮ ಖರ್ಚಿನಲ್ಲಿ/ಹೆಸರಿನಲ್ಲಿ ಒಂದು ಆಶ್ರಮ,ಒಂದು ಎಂಜಿನಿಯರಿಂಗ್/ಮೆಡಿಕಲ್ ಕಾಲೇಜ್ ,ಒಂದು ದೇವಸ್ಥಾನ ಓಪನ್ ಆಗುತ್ತೆ. ಆದರೆ ಅಲ್ಲಿ ವಿಧ್ಯಾವಂತರಾಗುವುದು ನಮ್ಮ ಜಾತಿಯ,ರಾಜ್ಯದ,ಧರ್ಮದ ಬಡ ಜನ ಅಲ್ಲ, ಡೊನೇಶನ್ ಕೊಡುವ ತಾಕತ್ತಿರುವ ಹೊರರಾಜ್ಯದ,ಹೊರದೇಶದ ಮಂದಿ!. ನಿಮಗಾಗಿ ಏನೂ ಇಲ್ಲಾ ಅಂತಾ ಕೊರಗದಿರಿ ಇದ್ದೆ ಇದಿಯಲ್ಲಾ ದೇವಸ್ಥಾನ!.! ಭಜನೆಮಾಡಲು!.



ಭಕ್ತಿ ಸಂತರಿಂದ ಚಳುವಳಿ ಆರಂಭವಾದಾಗಿನಿಂದ ಇಲ್ಲಿಯವರೆಗೆ ನಾವು ದೇವಾಲಯಗಳಿಂದ ಹೊರಬರಲು ಸುಮಾರು ಐನೂರು ವರುಷಗಳೇ ಸಂದಿವೆ. ಈಗ ನಾವು ಮತ್ತೆ ಮರಳಿ ದೇವಾಲಯಕ್ಕೆ ಹೋಗಿ ಬಂಧಿಯಾಗುವುದು ಎಷ್ಟು ಸರಿ?

The Tale Of The Stairs -ಮೆಟ್ಟಿಲುಗಳ ಕಥೆ

(The tale of the Stairs) A story by Hristo Smirnenski,Orginally written in Bulgarian Language.)ಕನ್ನಡ ಅನುವಾದ  ಕೆಳಗೆ ನೀಡಲಾಗಿದೆ

THE TALE OF STAIRS


"Who are you?" The Devil asked him.




"I am a plebeian by birth and all ragged folk are my brothers. How terrible the world is, how wretched the people are!"



It was a young man who spoke with head erect and clenched fists. He stood at the foot of the Stairs - a high white staircase of rose-flecked marble. He gazed fixedly into the distance where the grey crowds of poverty stirred like the turbid waters of a swollen river. The crowds surged and seethed, raised a forest of thin black arms, thunderous cries of wrath and indignation rent the air and the echo faded slowly and solemnly like distant gun-fire. The crowds grew and grew nearer in clouds of yellow dust, single silhouettes showed more distinctly against the grey horizon. An old man approached, bent low to the ground as if seeking lost youth. A barefoot little girl clutched his ragged clothes and stared at the high Stairs with mild cornflower-blue eyes. Stared and smiled. Then thin grey figures came all in rags, singing a long-drawn funeral chorus. Someone whistled shrilly, somebody else thrusting his hands in his pockets laughed loud and harshly and insanity blazed in his eyes.



"I am a plebeian by birth and all ragged folk are my brothers. How terrible the world is, how wretched the people are! But you there, you at the top there..."



It was a young man who spoke with head erect and fists clenched in manace.



"So you hate those up at the top," the Devil asked, and styly leaned forward towards the young man.



"I shall have my revenge on those nobles and princes. I shall cruelly avenge my brothers - my brothers whose faces are as yellow as sand and who groan more bitterly than the blizzards of December. See their naked bleeding bodies, hear their groans! I shall avenge them. Let me go!"



The Devil smiled: "I am the guardian of those at the top and without a bribe I shall not betray them."



"I have no gold. I have nothing with which to bribe you... I am poor, a youth in rags... But I am willing to give up my life..."



Again the Devil smiled: "O no, I do not ask as much as that. Just give me your hearing."



"My hearing? Gladly... May I never hear anything any more, may I..."



"You still shall hear," the Devil assured him, and made way for him. "Pass!"



The young man set off at a run and had taken three steps in one stride when the hairy hand of the Devil caught him.



"That's enough! Now pause and listen to your brothers groaning below."



The young man paused and listened.



"How strange! Why have they suddenly begun to sing happy songs and to laugh light-heartedly?..." Again he set off at a run.



Again the Devil stopped him. "For you to go three more steps I must have your eyes."



The young man made a gesture of despair. "But then I shall be unable to see my brothers or those I go to punish."



"You still shall see them..." The Devil said. "I will give you different, much better eyes."



The young man rose three more steps and looked back.



"See your brothers' naked bleeding bodies," the Devil prompted him.



"My God, how very strange! When did they manage to don such beautiful clothes? And not bleeding wounds but splendid red roses deck their bodies..."



At very third stair the Devil exacted his little toll. But the young man proceeded, willingly giving everything he had in order to reach his goal and to punish the well-fed nobles and princes. Now one step, just one last step remained and he would be at the top. Then indeed he would avenge his brothers.



"I am a plebeian by birth and all ragged folk..."



"Young man, one last step still remains. Just one more step and you shall have your revenge. But for this last step I always exact a double toll: give me your heart and give me your memory."



The young man protested.



"My heart? No, that is too cruel!"



The Devil gave a deep and masterful laugh: "I am not so cruel as you imagine. In exchange I will give you a heart of gold and a brand-new memory. But if you refuse me, then you shall never avenge your brothers whose faces are the colour of sand and who groan more bitterly than December blizzards."



The young man saw irony in the Devil's green eyes.



"But there will be nobody then more wretched than I. You are taking away all my human nature."



"On the contrary, nobody shall be happier than you. Well, do you agree: just your heart and memory?"



The young man pondered, his face clouded over, beads of sweat ran from the furrowed brow, in anger he tightened his fists and through clenched teeth said: "Very well, then. Take them!"



...And like a swift summer storm of rage and wrath, his dark locks flying in the wind, he crossed the final step. He was now at the very top. And a broad a smile suddenly in his face, his eyes now shone with tranquil joy and his fists relaxed. He looked at the nobles revelling there and looked down to the roaring, cursing, grey ragged crowds below. He gazed, but not a muscle of his face quivered: his face was radiant, happy and content. The crowds he saw below were in holiday attire and their groans were now hymns.



"Who are you?" the Devil asked in a low sly voice.



"I am a prince by birth and the gods are my brothers. How beautiful the world is and how happy are the people!"


ಶ್ರೀ ಬಿ.ವಿ ವೀರಬಧ್ರಪ್ಪ ಎಂಬುವವರು ಇದರ ಕನ್ನಡ ಅನುವಾದವನ್ನು ಮಾಡಿ ಅವರ ವೇದಾಂತ ರೆಜಿಮೆಂಟ್ ಎಂಬ ಪುಸ್ತಕದಲ್ಲಿ ಪ್ರಕಟಿಸಿದ್ದಾರೆ. ಅದು ಈ ಕೆಳಕಂಡಂತಿದೆ.


ಮೂರು ಮೆಟ್ಟಲ ಕತೆ




--------------------------------------------------------------------------------


-ನೀನಾರು?- ದೆವ್ವ ಅವನನ್ನು ಕೇಳಿತು....



-ಹುಟ್ಟಿನಿಂದ ನಾನೊಬ್ಬ ದಲಿತ. ಎಲ್ಲ ಬಡವರು ನನ್ನ ಒಡ ಹುಟ್ಟಿದವರು. ಓ ಈ ಭೂಮಿ ಎಷ್ಟು ಕುರೂಪವಾಗಿದೆ; ಜನರೆಷ್ಟು ದುಃಖಿಗಳಾಗಿದ್ದಾರೆ!



ನೇರ ಹಣೆಯ ಮತ್ತು ಬಿಗಿಮುಷ್ಟಿಯ ಯುವಕ ಈ ಮಾತು ಗಳನ್ನಾಡುತ್ತಿದ್ದ. ಅವನು ನೀಲಿ ಗೆರೆಗಳಿಂದ ಕೂಡಿದ ಬಿಳಿ ಅಮೃತಶಿಲೆಯ ಎತ್ತರವಾದ ಮೆಟ್ಟಿಲುಗಳ ಹಿಂದೆ ನಿಂತಿದ್ದ. ಉಬ್ಬಿದ ನದಿಯ ಕದಡಿದ ನೀರಿನ ಅಲೆಗಳಂತೆ ಭೋರ್ಗರೆಯುತ್ತಿದ್ದ ದೂರದ ದುಃಖಿಗಳ ಸಮೂಹದತ್ತ ಅವನ ದೃಷ್ಟಿ ಕೀಲಿಸಿತ್ತು. ಅವರು ಕದಲಿದರು, ಒಂದು ಗಳಿಗೆ ಅವೇಶಗೊಂಡರು. ಅವರ ಕಪ್ಪು ಒರಟು ಕೈಗಳು ಕಾಡಿನಂತೆ ಎದ್ದು ನಿಂತವು. ಕೋಪದಿಂದ ಕೆರಳಿದ ಅವರ ಕೂಗಿನ ಘರ್ಜನೆ ಗಾಳಿಯಲ್ಲಿ ತುಂಬಿಕೊಂಡಿತು. ಅದರ ಪ್ರತಿಧ್ವನಿ ದೂರದಲ್ಲಿ ಹಾರಿಸಿದ ಫಿರಂಗಿಯ ಗುಂಡುಗಳಂತೆ ಮೊಳಗಿ ನಿಧಾನವಾಗಿ ವಿಧಿವತ್ತಾಗಿ ಸ್ತಬ್ಧವಾಯಿತು. ಗುಂಪು ಒಂದೇ ಸಮನೆ ಹೆಚ್ಚುತ್ತಾ ಹೋಯಿತು. ಸಮೀಪಿಸುತ್ತಿದ್ದ ಕೆಂದೂಳಿನ ಅಲೆಗಳು ಕ್ರಮೇಣ ಮಾನವರ ಆಕಾರ ತಾಳಿದವು. ಕೆಂದೂಳಿನ ಹಿನ್ನೆಲೆಯಲ್ಲಿ ಆ ರೂಪಗಳು ಹೆಚ್ಚು ಹೆಚ್ಚು ಸ್ಪಷ್ಟವಾಗಿ ಕಾಣತೊಡಗಿದವು.



ಒಬ್ಬ ಮುದುಕ ಕಳೆದ ತನ್ನ ಯೌವನವನ್ನು ಹುಡುಕುತ್ತಿರುವಂತೆ ಭೂಮಿಯತ್ತ ಬಾಗಿ ನಡೆಯುತ್ತಿದ್ದ. ಅವನ ಚೆಂದಿ ಬಟ್ಟೆಯನ್ನು ಹಿಡಿದಿದ್ದ ಒಬ್ಬ ಬರಿಗಾಲಿನ ಹುಡುಗಿ ತನ್ನ ಬಿಡುಗಣ್ಣಿನಿಂದ ಎತ್ತರವಾದ ಮೆಟ್ಟಿಲುಗಳನ್ನು ದಿಟ್ಟಿಸಿ ನೋಡಿದಳು. ಅವಳು ತನ್ನ ದೃಷ್ಟಿ ಹರಿಸಿ ಮುಗುಳು ನಗೆ ಸೂಸಿದಳು. ಇತರ ಅನೇಕ ಹರಕು ಬಟ್ಟೆಯ ಕುರೂಪಿ ಕಪ್ಪುಜನ ಏಕತಾನದ ಶೋಕ ಗೀತೆಯೊಂದನ್ನು ಮೇಳದಲ್ಲಿ ಹಾಡುತ್ತಾ ಅವರನ್ನು ಹಿಂಬಾಲಿಸುತ್ತಿದ್ದರು. ಒಬ್ಬ ಶಿಳ್ಳು ಹಾಕಿದ, ಇನ್ನೊಬ್ಬ ತನ್ನ ಕೈಗಳನ್ನು ಪಕ್ಕದ ಜೇಬುಗಳಲ್ಲಿ ಇಳಿಬಿಟ್ಟು ಗಟ್ಟಿಯಾಗಿ, ಒರಟಾಗಿ ನಗುತ್ತಿದ್ದ. ಅವನ ಕಣ್ಣುಗಳು ಅವೇಶದಿಂದ ಉರಿಯುತ್ತಿದ್ದವು.



-ನಾನೊಬ್ಬ ದಲಿತ, ಎಲ್ಲ ಬಡವರು ನನ್ನ ಒಡಹುಟ್ಟಿದವರು. ಓ, ಈ ಭೂಮಿ ಎಷ್ಟು ಕುರೂಪವಾಗಿದೆ; ಜನರೆಷ್ಟು ದುಃಖಿಗಳಾಗಿದ್ದಾರೆ! ಓ ಅಲ್ಲಿ ಎತ್ತರದಲ್ಲಿರುವ ನೀನು...



ನೇರ ಹಣೆಯ ಮತ್ತು ಬಿಗಿಮುಷ್ಠಿಯ ಯುವಕ ಈ ಮಾತುಗಳನ್ನು ಬೆದರಿಸುವವನಂತೆ ಆಡುತ್ತಿದ್ದ.



-ನೀನು ಆ ಮೇಲಿನವನನ್ನು ದ್ವೇಷಿಸುವೆಯಾ?- ಯುವಕನ ಕಡೆಗೆ ಕಪಟತನದಿಂದ ಬಾಗುತ್ತ ದೆವ್ವ ಕೇಳಿತು.



-ಓ, ನಾನು ಈ ರಾಜರ ಮೇಲಿನ ಸೇಡನ್ನು ತೀರಿಸಿಕೊಳ್ಳಲೇಬೇಕು. ಯಾರ ಮುಖಗಳು ಬೂದಿ ಮಣ್ಣಿನಂತೆ ಕಪ್ಪಿಟ್ಟಿವೆಯೋ, ಯಾರು ರೊಯ್ಯನೆ ಬೀಸುವ ಆಷಾಢದ ಗಾಳಿಗಿಂತ ಹೆಚ್ಚು ಭೀಕರವಾಗಿ ಗೋಳಿಡುತ್ತಿದ್ದಾರೋ, ಆ ನನ್ನ ಒಡಹುಟ್ಟಿದವರಿಗಾಗಿ ಅನ್ಯಾಯದ ವಿರುದ್ಧ ಮುಯ್ಯಿ ತೀರಿಸಿಕೊಳ್ಳುತ್ತೇನೆ. ರಕ್ತ ಒಸರುವ ಅವರ ಬತ್ತಲೆ ದೇಹಗಳನ್ನು ನೋಡು, ಅವರ ಗೋಳಿನ ಆಕ್ರಂದನ ಕೇಳು! ನಾನು ಸೇಡು ತೀರಿಸಿಕೊಳ್ಳುತ್ತೇನೆ! ನನ್ನನ್ನು ಹೋಗಲು ಬಿಡು!"




ದೆವ್ವ ಮುಗುಳು ನಕ್ಕಿತು:- ನಾನು ಮೇಲಿನವರ ಕಾವಲುಗಾರ; ಲಂಚವಿಲ್ಲದೆ ನಾನು ದ್ರೋಹ ಬಗೆಯುವುದಿಲ್ಲ.



-ನನ್ನ ಬಳಿ ಚಿನ್ನ ಇಲ್ಲ. ಲಂಚ ಕೊಡಲು ನನ್ನಲ್ಲಿ ಏನೂ ಇಲ್ಲ. ನಾನೊಬ್ಬ ಬಡ ದೌರ್ಭಾಗ್ಯ ಯುವಕ... ಆದರೆ ನಾನು ನನ್ನ ಪ್ರಾಣ ಕೊಡಲು ಸಿದ್ಧ.



ದೆವ್ವ ಮತ್ತೊಮ್ಮೆ ಮುಗುಳುನಕ್ಕಿತು :- ಓ, ಬೇಡ, ನನಗೆ ಅಷ್ಟೊಂದು ಬೇಕಿಲ್ಲ! ನಿನ್ನ ಕಿವಿಯನ್ನಷ್ಟು ಕೊಟ್ಟರೆ ಸಾಕು!



-ಕಿವಿಯನ್ನು? ಸಂತೋಷದಿಂದ... ನಾನು ಇನ್ನು ಮುಂದೆ ಏನೂ ಕೇಳುವುದೇ ಬೇಡ. ಹಾಗೇ ಆಗಲಿ...



-ಇನ್ನು ಮುಂದೆಯೂ ನೀನು ಕೇಳುವೆ!- ದೆವ್ವ ಅವನನ್ನು ಸಾಂತ್ವನಗೊಳಿಸಿ ದಾರಿ ಬಿಟ್ಟಿತು.



-ನಡೆ!



ಯುವಕ ಓಡಿದ, ಅವನು ಒಂದೊಂದು ಸಾರಿ ಮೂರು ಮೂರು ಮೆಟ್ಟಿಲನ್ನು ಜಿಗಿದ. ಆದರೆ ದೆವ್ವದ ಕರಾಳ ಕೈ ಅವನನ್ನು ಇನ್ನೊಮ್ಮೆ ತಡೆಯಿತು:



-ಸಾಕು! ನಿನ್ನ ಒಡಹುಟ್ಟಿದವರು ಕೆಳಗೆ ಹೇಗೆ ಗೋಳಿಡುತ್ತಿದ್ದಾರೆ ಎಂಬುದನ್ನು ಕೇಳಲು ಸ್ವಲ್ಪ ನಿಲ್ಲು.



ಯುವಕ ನಿಂತು ಆಲಿಸಿದ.



-ವಿಚಿತ್ರ. ಯಾಕೆ ಇದ್ದಕ್ಕಿದ್ದ ಹಾಗೆ ಅವರು ಅಷ್ಟು ಖುಷಿಯಿಂದ ಹಾಡುತ್ತ ಹುಚ್ಚು ನಗೆ ನಗುತ್ತಿದ್ದಾರೆ?- ಮತ್ತೆ ಅವನು ಮೇಲೆ ಓಡಿದ.



ದೆವ್ವ ಅವನನ್ನು ಮತ್ತೊಮ್ಮೆ ನಿಲ್ಲಿಸಿತು.



-ಮೇಲಿನ ಮೂರು ಮೆಟ್ಟಿಲನ್ನು ಹತ್ತಲು ನನಗೆ ನಿನ್ನ ಕಣ್ಣು ಬೇಕು! ಯುವಕ ಕೈಯನ್ನು ತಳ್ಳಲು ಯತ್ನಿಸಿ ಹತಾಶನಾದ.



-ಕಣ್ಣು ಕೊಟ್ಟರೆ ನನ್ನ ಒಡಹುಟ್ಟಿದವರನ್ನಾಗಲಿ, ಸೇಡು ತೀರಿಸಿಕೊಳ್ಳಬೇಕಾಗಿರುವವರನ್ನಾಗಲೀ ನಾನು ನೋಡಲಾರೆ!



-ಮುಂದೆಯೂ ನೀನು ನೋಡಬಹುದು... ನಾನು ನಿನಗೆ ಹೆಚ್ಚು ಸುಂದರವಾದ ಬೇರೆ ಕಣ್ಣು ಕೊಡುತ್ತೇನೆ!



ಯುವಕ ಇನ್ನೂ ಮೂರು ಮೆಟ್ಟಿಲು ಹತ್ತಿ ಕೆಳಗೆ ನೋಡಿದ. ದೆವ್ವ ನೆನಪು ಮಾಡಿತು:



-ಅವರ ರಕ್ತ ಬಸಿಯುವ ಬತ್ತಲೆ ದೇಹಗಳನ್ನು ನೋಡು.



-ಓ ನನ್ನ ದೇವರೆ! ಇದು ನಿಜವಾಗಿಯೂ ವಿಚಿತ್ರ; ಯಾವಾಗ ಅವರು ಅಷ್ಟು ಚೆಂದವಾಗಿ ಅಲಂಕಾರ ಮಾಡಿಕೊಳ್ಳಲು ಕಲಿತರು! ರಕ್ತ ಜಿನುಗುವ ಗಾಯ ಗಳಿಂದ ನರಳುತ್ತಿದ್ದ ಅವರು ಎಷ್ಟು ಸುಂದರವಾದ ಕೆಂಪು ಗುಲಾಬಿಗಳಿಂದ ಅಲಂಕೃತರಾಗಿದ್ದಾರೆ!



ಪ್ರತಿ ಮೂರು ಮೆಟ್ಟಲುಗಳಿಗೊಮ್ಮೆ ದೆವ್ವ ತನ್ನ ಕಿರು ಲಂಚವನ್ನು ತೆಗೆದು ಕೊಳ್ಳುತ್ತಿತ್ತು. ಆದರೆ ಯುವಕ ಮೇಲೆ ಹತ್ತುತ್ತಿದ್ದ. ಅವನು ಆ ಹಾಳು ಸ್ಥಳವನ್ನು ತಲುಪಿ ಆ ಕೊಬ್ಬಿದ ರಾಜರ ಮೇಲೆ ಸೇಡು ತೀರಿಸಿಕೊಳ್ಳುವಂತಾದರೆ ಏನು ಕೇಳಿದರೂ ಕೊಡಲು ಸಿದ್ಧವಾಗಿದ್ದ! ಇನ್ನು ಒಂದು ಮೆಟ್ಟಲು, ಒಂದೇ ಒಂದು. ನಂತರ ಅವನು ಅತಿ ಎತ್ತರದಲ್ಲಿರುತ್ತಾನೆ! ತನ್ನ ಒಡಹುಟ್ಟಿದವರಿಗಾದ ಅನ್ಯಾಯದ ವಿರುದ್ಧ ಸೇಡು ತೀರಿಸಿಕೊಳ್ಳುತ್ತಾನೆ!



-ಹುಟ್ಟಿನಿಂದ ನಾನೊಬ್ಬ ದಲಿತ. ಎಲ್ಲ ಬಡವರು.....



-ಯುವಕ, ದೆವ್ವ ಹೇಳಿತು, ಒಂದೇ ಒಂದು ಮೆಟ್ಟಿಲು! ಇನ್ನು ಒಂದೇ ಒಂದು ಮೆಟ್ಟಿಲು ಹತ್ತಿದರೆ ನೀನು ನಿನ್ನ ಸೇಡು ತೀರಿಸಿಕೊಳ್ಳುತ್ತೀಯೆ. ಆದರೆ ಈ ಮೆಟ್ಟಿಲಿಗೆ ನಾನು ಯಾವಾಗಲೂ ಎರಡರಷ್ಟು ಲಂಚ ತೆಗೆದುಕೊಳ್ಳುತ್ತೇನೆ. ನಿನ್ನ ಹೃದಯ ಮತ್ತು ನೆನಪುಗಳನ್ನು ಕೊಡು.



ಯುವಕ ತನ್ನ ಕೈಯನ್ನು ಅಲ್ಲಾಡಿಸಿದ.



-ಹೃದಯ? ಓ, ಸಾಧ್ಯವಿಲ್ಲ! ಇದು ತುಂಬಾ ಕ್ರೂರವಾಯಿತು.



-ದೆವ್ವ ಗಟ್ಟಿಯಾಗಿ ಆತ್ಮವಿಶ್ವಾಸದಿಂದ ನಕ್ಕಿತು.



ನಾನು ಅಷ್ಟು ಕ್ರೂರಿಯಲ್ಲ. ನಾನು ಅದಕ್ಕೆ ಬದಲಾಗಿ ನಿನಗೆ ಒಂದು ಚಿನ್ನದ ಹೃದಯವನ್ನೂ ಮತ್ತು ಹೊಸ ನೆನಪನ್ನು ಕೊಡುತ್ತೇನೆ! ಇದಕ್ಕೆ ಒಪ್ಪಿಕೊಳ್ಳದಿದ್ದರೆ ನೀನು ಈ ಮೆಟ್ಟಿಲನ್ನು ಹತ್ತಲಾರೆ; ಯಾರ ಮುಖಗಳು ಬೂದಿ ಮಣ್ಣಿನಂತೆ ಕಪ್ಪಿಟ್ಟಿವೆಯೋ, ಯಾರು ರೊಯ್ಯನೆ ಬೀಸುವ ಆಷಾಢದ ಗಾಳಿಗಿಂತ ಹೆಚ್ಚು ಭೀಕರವಾಗಿ ಗೋಳಿಡುತ್ತಿದ್ದಾರೋ, ಆ ನಿನ್ನ ಒಡಹುಟ್ಟಿದವರಿಗಾದ ಅನ್ಯಾಯಕ್ಕೆ ಸೇಡು ತೀರಿಕೊಳ್ಳಲಾರೆ.



ಯುವಕ ದೆವ್ವದ ಹಸಿರು ಕಣ್ಣುಗಳನ್ನೂ ದಿಟ್ಟಿಸಿದ:



-ಆದರೆ ನಾನು ಅತ್ಯಂತ ದುಃಖಿಯಾಗುತ್ತೇನೆ; ನೀನು ನನ್ನಿಂದ ಎಲ್ಲ ಮಾನವೀಯತೆಯನ್ನೂ ಕಿತ್ತುಕೊಳ್ಳುತ್ತಿದ್ದೀಯೆ.



ಅದರ ಬದಲು, ಪರಮ ಸುಖಿ...!



ಆದರೆ? ನೀನು ಒಪ್ಪುವೆಯಾ? ನಿನ್ನ ಹೃದಯ ಮತ್ತು ನೆನಪು ಮಾತ್ರ.



ಯುವಕ ಯೋಚಿಸಿದ. ಅವನ ಮುಖದ ಮೇಲೆ ಒಂದು ಕರಾಳ ನೆರಳು ಕವಿಯಿತು. ಅವನ ಸುಕ್ಕುಗಟ್ಟಿದ ಹಣೆಯಿಂದ ಬೆವರಿನ ಉಪ್ಪು ಹನಿಗಳು ಜಿನುಗತೊಡಗಿದವು. ಅವನು ತನ್ನ ಮುಷ್ಟಿಗಳನ್ನು ಬಿಗಿಗೊಳಿಸಿ ಹಲ್ಲಿನ ಸಾಲಿನ ನಡುವೆ ಉಸುರಿದ:



-ಹಾಗೇ ಆಗಲಿ! ಅವನ್ನು ತೆಗೆದುಕೋ!



... ಗಾಳಿಗೆ ಕೆದರಿದ ಕಪ್ಪು ಕೂದಲಿನ ಆ ಯುವಕ ಕೋಪ ಮತ್ತು ಆವೇಶಗಳಿಂದ ಬೇಸಗೆಯ ಚಂಡಮಾರುತದಂತೆ ಕೊನೆಯ ಮೆಟ್ಟಿಲನ್ನೂ ಜಿಗಿದ. ಇದ್ದಕ್ಕಿದ್ದ ಹಾಗೆ ಮುಖ ಮುಗುಳುನಗೆಯಿಂದ ಮಿಂಚಿತು. ಅವನ ಕಣ್ಣುಗಳು ನೆಮ್ಮದಿ ಮತ್ತು ಸಂತಸಗಳಿಂದ ಮಿನುಗಿದುವು. ಅವನ ಮುಷ್ಟಿಗಳು ಸಡಿಲಗೊಂಡವು. ಅವನು ರಾಜನ ಒಡ್ಡೋಲಗವನ್ನು ನೋಡಿದ. ಅವನು ಶಪಿಸುತ್ತಾ ಕೀಗುತ್ತಿದ್ದ ಕಪ್ಪು ಜನರ ಅಸಭ್ಯ ಗುಂಪನ್ನೂ ನೋಡಿದ. ಅವನು ನೋಡೇ ನೋಡಿದ. ಆದರೆ ಅವನ ಮುಖ ಕೋಪದಿಂದ ಗಂಟ್ಟಿಕ್ಕಿಕೊಳ್ಳಲಿಲ್ಲ; ಅದು ಖುಷಿಯಿಂದ ಕಂಗೊಳಿಸುತ್ತಿತ್ತು. ಅವನು ಮೆಟ್ಟಿಲು ಕೆಳಗೆ ವಿನೋದದಲ್ಲಿ ಪಾಲುಗೊಂಡಿದ್ದ ಜನರನ್ನು ಕಂಡ. ಅವರ ನರಳಾಟ ಈಗ ಸ್ತುತಿಪಾಠವಾಗಿತ್ತು.



-ನೀನಾರು?-ಕಪಟದ ಗೊಗ್ಗುರು ಧ್ವನಿಯಲ್ಲಿ ದೆವ್ವ ಅವನನ್ನು ಕೇಳಿತು.



-ಹುಟ್ಟಿನಿಂದ ನಾನೊಬ್ಬ ರಾಜಕುಮಾರ! ದೇವತೆಗಳು ನನ್ನ ಒಡ ಹುಟ್ಟಿದವರು! ಓ, ಈ ಭೂಮಿ ಎಷ್ಟು ಸುಂದರವಾಗಿದೆ; ಜನರು ಎಷ್ಟು ಸುಖಿಗಳಾಗಿದ್ದಾರೆ!



ಹ್ರಿಸ್ಟೊ ಸ್ಮಿರ್‍ನೇನ್‌ಸ್ಕಿಯ ಒಂದು ಬಲ್ಗೇರಿಯನ್ ಕಥೆ

Saturday, December 18, 2010

ಶಂಗರಾಜಾರ್ಯರ ಮಂದ್ರಶಾಸ್ತ್ರಂ !

 ಬೆಂಗಳೂರಿನಲ್ಲಿ ಅಥವಾ ಮೈಸೂರಿನಲ್ಲಿ ಒಂದು ಸುತ್ತು ಓಡಾಡಿ ನೋಡಿದರೆ ಅಚ್ಚರಿ ಆಗುತ್ತದೆ,ಅಲ್ಲಿ ಬೇರು ಬಿಟ್ಟಿರುವ ಮಲಿಯಾಳಿಗಳನ್ನು ನೋಡಿ. ಮೊದಲು ಬೇಕರಿ ಉದ್ಯಮ ಅಯ್ಯಂಗಾರರ ಹಿಡಿತದಲ್ಲಿತ್ತು. ಈಗ ಎಲ್ಲಿ ನೋಡಿದರೂ ಮಲಿಯಾಳಿಗಳದ್ದೇ ಬೇಕರಿ!. ಮೊದಲು ದಿನಸಿ ಅಂಗಡಿಗಳು ತೆಲುಗರ ಒಡೆತನದಲ್ಲಿತ್ತು. ಈಗ ಮಲಿಯಾಳಿಗಳು ಇವರನ್ನು ಹಿಂದೆಹಾಕಿದ್ದಾರೆ.ಈಗ “ಮತ್ತೋಟ್ ಫೈನಾನ್ಸ್” ಎಂಬ ಕಂಪನಿಎಲ್ಲೆಲ್ಲೂ ರಾರಾಜಿಸುತ್ತಿದೆ. ಅದೂ ಮಲ್ಲುಗಳದ್ದೇ. ಪುನೀತ್ ರಾಜ್ ಕುಮಾರ್ ಪ್ರಚಾರ ಮಾಡುವ ಮಲ್ಲಾಪುರಂ ಗೋಲ್ಡ್, ಅಲುಕಾಸ್ ಗೋಲ್ಡ್ ಇವೂ ಅವರದ್ದೇ.ನಮ್ಮಲ್ಲಿ ಮೀನು ಮಾರುವವರೂ ಮಲಿಯಾಳಿಗಳೇ !, ನಮ್ಮ ಕೆರೆಯ ಮೀನು ನಮಗೆ ಮಾರಿ ಲಾಭಗಳಿಸುವ ಜನರ ಕಲಾತ್ಮಕತೆ ನಿಜಕ್ಕೂ ಅಧ್ಭುತ. ಮೀನಿನಿಂದ ಹಿಡಿದು ಅಧ್ಯಾತ್ಮದ ವರೆಗೆ ಎಲ್ಲವೂ ಮಲಿಯಾಲಿಗಳದ್ದೆ ದರ್ಬಾರು. ಉದಾ: ಶ್ರೀ ಶಂಕರಾಚಾರ್ಯರು. ಇಂದಿಗೂ ಸಹಾ ಅಧ್ಯಾತ್ಮಿಕ ಮಾರುಕಟ್ಟೆಯಲ್ಲಿ ಭರಾಟೆಯಿಂದ ಮಾರಾಟವಾಗುವಂತಹ ಶಂಕರರಿಗೆ ಅವರ ಕಾಲದ ಒಬ್ಬನೇ ಒಬ್ಬ ಲೇಖಕ ಮಾತ್ರ ಒಂದಿಷ್ಟು ಸ್ಪರ್ದೆ ನೀಡುತ್ತಾನೆ !. ಯಾರವನು? ವಾತ್ಸಾಯನ. ಅಂತಹುದು ಮಾರಾಟ ಆಗುವುದು ದೊಡ್ಡ ವಿಷಯ ಅಲ್ಲ ಬಿಡಿ.. ಶಂಕರರ ಸರಕು ಮಾರಟವಾಗುವುದೇ ದೊಡ್ಡ ಪವಾಡ!.

ಅವರು ಮಂತ್ರ ಶಾಸ್ತ್ರದ ಬಗ್ಗೆ ಪುಸ್ತಕ ಬರೆದಿದ್ದಾರಂತೆ. ಮಂತ್ರಗಳು ಒಂತರಾ ವೈಬ್ರೆಶನ್ ಸೃಷ್ಟಿಮಾಡುತ್ತದಂತೆ. ಅದರಿಂದ ವಿವಿಧ ಫಲಗಳು ಸಿಗುತ್ತವಂತೆ. ಒಂದು ವೇಳೆ ತಪ್ಪು ಉಚ್ಚಾರಣೆ ಮಾಡಿದರೆ ಫಲ ಸಿಗೊದಿಲ್ಲವಂತೆ.ಹಾಗಂತ ಬೆಳಗೆ ಟಿ ವಿ ನಲ್ಲಿ ಬರುವ ಬುರುಡೆ ಜ್ಯೋತಿಷಿಗಳು ಹೇಳುತ್ತಾರೆ. ಶಂಕರರೇನೋ ಮಂತ್ರವಿದ್ಯೆ ಪುಸ್ತಕ ಬರೆದರು...

ಆದ್ರೆ ಇಲ್ಲಿ ನನಗೊಂದು ಡೌಟ್ ಇದೆ.

ನಮ್ಮ ಮಂತ್ರೋಚ್ಚಾರಣೆ ಯಶಸ್ವಿಯಾಗಬೇಕೆಂದರೆ ನಾವು ಅವರು ಬರೆದಿದ್ದನ್ನು ಫಾಲ್ಲೋ ಮಾಡಬೇಕೋ? ಅಥವಾ ಅವರು ಹೇಳಿದ್ದನ್ನು ಫಾಲ್ಲೋ ಮಾಡಬೇಕೋ ? ,

ನಾನು ಯಾಕೆ ಹೀಗೆ ಕೇಳ್ತಾ ಇದ್ದೀನಿ ಅಂದ್ರೆ ಶಂಕಾರಾಚಾರ್ಯ ಮಲೆಯಾಳಿ ನೋಡಿ. ಅವರು ಮಂತ್ರಗಳನ್ನು ಹೀಗೆ ಉಚ್ಚರಿಸುತಿದ್ದಿರಬಹುದು?....ಹಾ...ಹಾ...ಹಾ... ಸೊ ನಿಮ್ಮ ಸಾಧನೆಗೆ ತಕ್ಕ ಫಲ ಸಿಕ್ಕಿಲ್ಲಾ ಅಂದ್ರೆ ಅವರ ಕೃತಿಗಳನ್ನ ಮಲೆಯಾಳಿ ಆಕ್ಸೆಂಟ್ ನಲ್ಲಿ ಓದಿ ನೋಡಿ... ವೈಬ್ರೆಶನ್ ಕರೆಕ್ಟ್ ಆಗಿ ಬರಬಹುದು !.

ಮಲೆಯಾಳಿಗಳ ಬಾಯಲ್ಲಿ ಅದು ಮಂತ್ರ ಶಾಸ್ತ್ರ ಅಲ್ಲ . ಅದು ಮಂದ್ರಶಾಸ್ತ್ರಂ!....ಗೊತ್ತಾಯ್ತಾ?

Monday, December 13, 2010

ಶ್ರೀ ಅರೋಬಿಂದೋ ಎಂಬ ಅದ್ಯಾತ್ಮಿಕ ದುರಂತ

a ಅರವಿಂದ ಘೋಷ್ ಭಾರತದ ಇತಿಹಾಸದಲ್ಲಿ ಬಹಳ ದೊಡ್ಡ ಹೆಸರು.ಶ್ರೀ ಅರವಿಂದರು ಕೃಷ್ಣಧನ ಘೋಷ್ ಮತ್ತು ಸ್ವರ್ಣಲತಾ ದೇವಿಯರಿಗೆ ತೃತೀಯ ಪುತ್ರನಾಗಿ ಕಲ್ಕತ್ತಾದಲ್ಲಿ ಜನಿಸಿದರು. ಆಂಗ್ಲೇಯರಿಂದ ಪ್ರಭಾವಿತರಾದ ಅವರ ತಂದೆಯು ಅವರಿಗೆ "ಒರೊಬಿಂದೋ ಅಕ್ರಾಯ್ಡ್ ಘೋಷ್" ಎಂಬ ಜನ್ಮನಾಮವನ್ನು ಕೊಟ್ಟರು. ಚಿಕ್ಕವಯಸ್ಸಿನಲ್ಲಿಯೇ ವಿದ್ಯಾಬ್ಯಾಸಕ್ಕಾಗಿ ಅವರನ್ನು ಇಂಗ್ಲೆಂಡಿಗೆ ಕಳುಹಿಸಿದರು . ಇಂಗ್ಲೆಂಡಿನಲ್ಲಿಯೇ ೧೩ ವರ್ಷ ಕಳೆದ ಅರವಿಂದರು, ಪಾಶ್ಚಾತ್ಯ ಸಂಸ್ಕೃತಿ, ಚರಿತ್ರೆ, ಸಾಹಿತ್ಯಗಳನ್ನು ಅಭ್ಯಸಿಸಿ ಪಾಂಡಿತ್ಯವನ್ನು ಪಡೆದು ಕೊಂಡರು. ಹಾಗೆಯೇ, ಅನೇಕ ಯೂರೋಪೀಯ ಭಾಷೆಗಳಲ್ಲಿಯೂ ಪ್ರವೀಣರಾದರು: ಇಂಗ್ಲಿಷ್, ಫ್ರೆಂಚ್, ಲ್ಯಾಟಿನ್, ಗ್ರೀಕ್, ಇಟಾಲಿಯನ್, ಜರ್ಮನ್ ಅವರಿಗೆ ತಿಳಿದಿದ್ದ ಕೆಲವು ಭಾಷೆಗಳು. ಅವರು ಐ.ಸಿ.ಎಸ್ ಪರೀಕ್ಷೆಯಲ್ಲಿ ಉತ್ತೀರ್ಣರಾದರೂ, ಕುದುರೆ ಸವಾರಿಯನ್ನು ತೆಗೆದು ಕೊಳ್ಳದೆ ತಮ್ಮನ್ನು ಅನರ್ಹಗೊಳಿಸಿಕೊಂಡರು. ೧೮೯೩ರಲ್ಲಿ ಅವರು ಭಾರತಕ್ಕೆ ವಾಪಸು ಬಂದು ಬರೋಡದ ಮಹಾರಾಜರ ಆಸ್ಥಾನದಲ್ಲಿ ಕೆಲಸವನ್ನು ಪಡೆದು ಕೊಂಡರು. ಬರೋಡದಲ್ಲಿದ್ದ ಅವಧಿಯಲ್ಲಿ ಅವರು ಭಾರತದ ಸಂಸ್ಕೃತಿ, ಚರಿತ್ರೆ, ಮತ್ತು ಸಾಹಿತ್ಯಗಳನ್ನು ಅಧ್ಯಯನ ಮಾಡಿದರು ಮತ್ತು ಭಾರತೀಯ ಭಾಷೆಗಳಲ್ಲಿಯೂ (ಬಂಗಾಳಿ, ಸಂಸ್ಕೃತ, ಹಿಂದಿ, ಮರಾಠಿ, ಗುಜರಾತಿ, ತಮಿಳು) ಪ್ರಭುತ್ವವನ್ನು ಸಂಪಾದಿಸಿದರು. ಈ ಸಮಯದಲ್ಲಿಯೇ ಅವರು ಕ್ರಾಂತಿಕಾರಿ ಚಟುವಟಿಕೆಗಳನ್ನು ಪ್ರಾರಂಭಿಸಿ ೧೯೦೬ರಲ್ಲಿ (ಬಂಗಾಳದ ವಿಭಜನೆಯ ನಂತರ) ರಾಜಕೀಯದಲ್ಲಿ ಸಕ್ರಿಯ ಪಾತ್ರವಹಿಸಲು ಬರೋಡದಲ್ಲಿನ ತಮ್ಮ ಪದಕ್ಕೆ ರಾಜೀನಾಮೆಯಿತ್ತು ಕಲಕತ್ತೆಗೆ ಬಂದು ನೆಲೆಸಿದರು. ಅಲ್ಲಿ ಅವರು ಸಕ್ರಿಯವಾಗಿ ರಾಜಕೀಯದಲ್ಲಿ ಕಾಲಿಟ್ಟು ಬಂದೇ ಮಾತರಂ ಎಂಬ ಪತ್ರಿಕೆಯ ಸಂಪಾದಕತ್ವವನ್ನು ವಹಿಸಿಕೊಂಡರು. ಈ ನಡುವೆಯೇ, ೧೯೦೬ರಲ್ಲಿ, ಯೋಗವೂ ಕೂಡ ಭಾರತದ ಸ್ವಾತಂತ್ರ್ಯ ಸಾಧನೆಗೆ ಶಕ್ತಿಶಾಲಿ ಸಹಾಯಕವಾಗ ಬಹುದೆಂದು ಚಿಂತಿಸಿ ವಿಷ್ಣು ಭಾಸ್ಕರ ಲೇಲೆ ಎಂಬ ಯೋಗಿಯನ್ನು ಸಂಧಿಸಿದರು: ಈ ಯೋಗಿಯು ತಿಳಿಸಿಕೊಟ್ಟ ಕೆಲವು ವಿಧಾನಗಳನ್ನು ಅನುಸರಿಸಿ ನಿರ್ಗುಣ ಬ್ರಹ್ಮದ ಸಾಕ್ಷಾತ್ಕಾರವನ್ನು ಪಡೆದುಕೊಂಡರೆಂದು ಶ್ರೀ ಅರವಿಂದರು ಹೇಳಿದರು. ಅದೇ ವರ್ಷ, ಅವರು ಅಲೀಪುರದ ವಿಸ್ಫೋಟದ ಪ್ರಕರಣದಲ್ಲಿ ಬಂಧಿತರಾಗಿ, ಒಂದು ವರ್ಷದ ನಡೆದ ವಿಚಾರಣೆಯ ಕಾಲವನ್ನು ಅಲೀಪುರದ ಸೆರೆಯಲ್ಲಿ ಕಳೆದರು: ಈ ಕಾಲದಲ್ಲಿಯೇ ಅವರು ಸಗುಣ ಬ್ರಹ್ಮದ ಸಾಕ್ಷಾತ್ಕಾರವನ್ನು ಪಡೆದುಕೊಂಡರೆಂದು ಹೇಳಿರುವರು. ೧೯೦೯ರಲ್ಲಿ ಖುಲಾಸೆಯಾಗಿ ಇವರ ಬಿಡುಗಡೆಯಾಯಿತು. ಆನಂತರ, ತಮ್ಮ ಅಂತರಾತ್ಮದ ಆದೇಶವನ್ನು ಅನುಸರಿಸಿ ೧೯೧೦ರಲ್ಲಿ ಪುದುಚೇರಿಗೆ ಬಂದು ನೆಲೆಸಿದರು ಮತ್ತು ತಮ್ಮ ಉಳಿದದಿನಗಳನ್ನು ಅಲ್ಲಿಯೇ ಕಳೆದರು.lಸ್ವಾತಂತ್ರ ಸಂಗ್ರಾಮದಲ್ಲಿ ದೊಡ್ಡ ಹೆಸರು ಮಾಡಿದ್ದ ಇವರು ನಂತರ ಭಾರತದ ಅಧ್ಯಾತ್ಮಿಕ ಭೂಪಟದಲ್ಲಿ ಸಹಾ ಅತ್ಯಂತ ದೊಡ್ಡ ಹೆಸರು ಮಾಡಿದ್ದರು. ಆದರೆ ಅವರು ಆರಂಬಿಸಿದ ಅಧ್ಯಾತ್ಮಿಕ ಕ್ರಾಂತಿ ಬಹಳ ದಿನ ಉಳಿಯಲಿಲ್ಲ.ಪಾಂಡಿಚೆರಿಯಲ್ಲಿ ಅವರು ಹಲವು ಕೃತಿಗಳನ್ನು ರಚಿಸಿದರು .
ಅವರ ಕೆಲವು ಕೃತಿಗಳೆಂದರೆ:
ದಿವ್ಯ ಜೀವನ(Life Divine) : ಶ್ರೀ ಅರವಿಂದರ ಪ್ರಮುಖ ತತ್ತ್ವಶಾಸ್ತ್ರ ಕೃತಿ. ಈ ಗ್ರಂಥವು ವಿಶ್ಲೇಷಿಸುವ ಕೆಲವು ವಿಷಯಗಳನ್ನು ಮುಂದೆ ಕೊಟ್ಟಿದೆ: ವಿಕಸನ, ವಿಶ್ವ ಅಭಿವ್ಯಕ್ತಿಯ ಹಲವು ಸ್ತರಗಳು, ಅತೀತ ಮಾನಸ ವಿಕಸನದ ಸಾಧ್ಯತೆಗಳು, ಸನ್ನಿವೇಶಗಳು, ಸೃಷ್ಟಿ-ಸ್ಥಿತಿ-ಲಯ, ಇತ್ಯಾದಿ
ಯೋಗ ಸಮನ್ವಯ(Integral Yoga) - ತಮ್ಮ ಮತ್ತು ಇತರ ಯೋಗಗಳ ವಿಷಯವಾಗಿ ಬರೆದ ಕೃತಿ. ಇತರ ಯೋಗಗಳು ತಮ್ಮ ಯೋಗಕ್ಕೆ ಹೇಗೆ ಪೂರಕ-ಸಾಧಕಗಳಾಗ ಬಹುದೆಂಬುದರ ಮೇಲೆ ಒತ್ತು ಕೊಟ್ಟಿರುವರು.
ಮಾನವ ಚಕ್ರ (Human Cycle)- ಶ್ರೀ ಅರವಿಂದರ ಸಾಮಾಜಿಕ ಮತ್ತು ರಾಜನೀತಿ ವಿಷಯಕ ವಿಶ್ಲೇಷಣೆಗಳು
ವೇದ ರಹಸ್ಯ, ಅಗ್ನಿ ಸೂತ್ರಗಳು - ಶ್ರೀ ಅರವಿಂದರ ವೇದಾರ್ಥ ನಿರೂಪಣೆಯ ಪ್ರಯತ್ನ. ಇವರು ವೇದಗಳನ್ನು ತಮ್ಮ ಅನುಭವಗಳ ಬೆಳಕಿನಲ್ಲಿ ಈ ಗ್ರಂಥಗಳನ್ನು ಹೇಗೆ ಅರ್ಥೈಸಬಹುದೆಂದು ಚರ್ಚಿಸುವರು. ಅಗ್ನಿ ಸೂತ್ರಗಳು ಎಂಬ ಗ್ರಂಥ ಅವರ ಈ ವಿಧಾನದ ನಿದರ್ಶನಗಳು
ಸಾವಿತ್ರಿ - ಶ್ರೀ ಅರವಿಂದರ ಮಹಾಕಾವ್ಯ.
ಯೋಗ ದಾಖಲೆಗಳು - ಶ್ರೀ ಅರವಿಂದರು ೧೯೦೯ರಿಂದ ೧೯೨೭ರ ವರೆಗೆ ದಾಖಲಿಸಿದ್ದ ತಮ್ಮ ಯೋಗ ಸಾಧನಾ ವಿಷಯಕ ಟಿಪ್ಪಣಿಗಳು
ಯೋಗ ಪತ್ರಗಳು (Letters on Yoga)- ಶ್ರೀ ಅರವಿಂದರು ಬರೆದ ಪತ್ರಗಳನ್ನು ಹಲವು ಸಂಪುಟಗಳಲ್ಲಿ ಬೇರೆ ಬೇರೆ ಶೀರ್ಷಿಕೆಗಳಡೆ ವಿಂಗಡಿಸಲಾಗಿದೆ.
ಅವರು ರಚಿಸಿದ ಸಾಹಿತ್ಯರಾಶಿ ಅಗಾದವಾದರೂ ಅವರು ಶಿಷ್ಯರು ಹೇಳುವಂತೆ ಅದರ ರಚನೆಗೆ ಅವರ ಅತಿಮಾನುಷ ಶಕ್ತಿ ಕಾರಣವಿರಲಾರದು.ಯಾಕೆಂದರೆ ಅವರು ಯೋಗವನ್ನು ಕಲಿಯುವ ಮುಂಚೆಯೇ ಹಲವು ವಿಷಯಗಳ ಬಗ್ಗೆ ಹಲವು ಭಾಷೆಗಳಲ್ಲಿ ಅತ್ಯತ್ತಮ ಲೇಖನ ಬರೆಯುವ ಪಾಂಡಿತ್ಯ ಗಳಿಸಿದ್ದರು.
ಅವರು ಅಧ್ಯಾತ್ಮದ ಬಗ್ಗೆ ಬರೆದ ಪುಸ್ತಕಗಳು ಅಷ್ಟೇನೂ "ಬೆಸ್ಟ್ ಸೆಲ್ಲರ್" ಆಗಲಿಲ್ಲ. ಅವರ "ಇಂಟೆಗ್ರಲ್ ಯೋಗ" ಮಾರ್ಗದಲ್ಲಿ ಅಧ್ಯಾತ್ಮಿಕ ಸಾಧನೆ ಮಾಡುತ್ತಿರುವವರ ಸಂಖ್ಯೆ ಸಹಾ ಬಹಳ ಚಿಕ್ಕದು. ಶ್ರೀ ಆರೋಬಿಂದೋ "ದಿ ಲೈಫ್ ಡಿವೈನ್" ಎಂಬ ಪುಸ್ತಕ ಬರೆದರು. ಡಿವೈನ್ ಲೈಫ್ ಎಂದರೆ ಅದು ಅರವಿಂದ ಘೋಶರಿಗೆ ಸಂಬಂದಿಸಿದ ವಿಷಯ ಎಂದು ಹಲವಾರು ಅಂದುಕೊಂಡಿದ್ದಾರೆ.ವಾಸ್ತವವಾಗಿ "ಡಿವೈನ್ ಲೈಫ್ ಸೊಸೈಟಿ" ಎಂಬುದು ಸ್ವಾಮಿ ಶಿವಾನಂದರಿಗೆ ಸಂಬಂದಿಸಿದ ಸಂಸ್ಥೆ. ಭಾರತದ ಅಧ್ಯಾತ್ಮಿಕ ಜಗತ್ತಿನ ಮೊತ್ತಮೊದಲ ಪ್ರಮುಖ ವ್ಯಕ್ತಿತ್ವಗಳಲ್ಲಿ ಒಬ್ಬರಾಗಿದ್ದ ಸ್ವಾಮೀ ಶಿವಾನಂದರು ಸಹಾ ಶ್ರೀ ಅರವಿಂದರ ಸಮಕಾಲೀನರು. ಆಗ ಇವರ ಆಶ್ರಮ ರಿಷಿಕೇಶದಲ್ಲಿತ್ತು. ಅರವಿಂದರಿಗಿಂತ ಇವರು ಹಿಂದು ಧರ್ಮ ಪ್ರಚಾರದಲ್ಲಿ ಸಕ್ರಿಯರಾಗಿದ್ದರು.ಇವರು ಒಂದುರೀತಿ ಪ್ರಚಾರಪ್ರಿಯ. ಎಲೆಮರೆಯ ಕಾಯಿಯಂತಿದ್ದ ಅರವಿಂದರು ಪಾಂಡಿಚೇರಿಯ ಮನೆಯಲ್ಲಿ ಸಾಧನೆ,ಬರವಣಿಗೆಯಲ್ಲಿ ಮಗ್ನರಾಗಿದ್ದರು. ಹೊರಗಿನ ಜಗತ್ತಿನೊಂದಿಗೆ ಬರಿಯ ಪತ್ರ ವ್ಯವಹಾರ ಮಾತ್ರ. ಅವರ ಅನುಯಾಯಿ "ಮಾತಾಶ್ರಿ"ಯವರ ಸಾವಿನ ನಂತರ ಶ್ರೀ ಆರೋಬಿಂದೋ ರ ಹೆಸರು ಅದ್ಯಾತ್ಮಿಕ ಜಗತ್ತಿನಿಂದ ಕ್ರಮೇಣ ಮಾಯವಾಗತೊಡಗಿತು. ನಾವು ಇಲ್ಲಿ ಯೋಚಿಸಬೇಕಾದದ್ದು ಇಷ್ಟೇ, ಅಷ್ಟೆಲ್ಲಾ ಕೃತಿಗಳನ್ನು ರಚಿಸಿದ,ಅಷ್ಟೆಲ್ಲಾ ಸಾಧನೆಗೈದ ಈ ಮಹಾನ್ ಚೇತನ ಇಂದು ಅಧ್ಯಾತ್ಮಿಕ ಜಗತ್ತಿನಿಂದ ಮಾಯವಾಗಿರುವುದಕ್ಕೆ ಕಾರಣ ಏನು?, ಇಂದು ಅಧ್ಯಾತ್ಮ ಎಂಬುದು ಒಂದು ಬಹುಕೋಟಿ ಉದ್ಯಮ. ಅಕ್ಷರಾಭ್ಯಸವೇ ಇಲ್ಲದವರು, ಕಳ್ಳರು, ಸುಳ್ಳರು,ವಂಚಕರು,ಅತ್ಯಾಚಾರಿಗಳು,ಅಲ್ಪಜ್ಞಾನಿಗಳು ಇಂತವರೆಲ್ಲರೂ ಕೋಟಿಗಟ್ಟಲೆ ಭಕ್ತರನ್ನು ಆಕರ್ಷಿಸುತ್ತಿರುವಾಗ "ಆರೋವಿಲ್ಲೇ" (ಅರವಿಂದರ ಆಶ್ರಮ) ಯಾಕೆ ಲಾಟರಿ ಹೊಡೀತಿದೆ ಎಂಬ ಯಕ್ಷಪ್ರಶ್ನೆ ನನ್ನನ್ನು ಕಾಡಹತ್ತಿತು.ನಾನು ಪಾಂಡಿಚೆರಿಗೆ ಹೋದದ್ದು 1995 ರಲ್ಲಿ. ಆಗ ಆ ಅಶ್ರಮ ಖಾಲಿ ಹೊಡೆಯುತಿತ್ತು. ಈಗ ಸ್ವಲ್ಪ ಜನಜಂಗುಳಿ ಹೆಚ್ಚಾಗಿರಬಹುದು. ಒಟ್ಟಾರೆ ಕಲ್ಕಿ ಭಗವಾನರ,ನಿತ್ಯಾನಂದರ,ಅಥವಾ ಗಣಪತಿ ಸಚ್ಚಿದಾನಂದರ ಆಶ್ರಮದಲ್ಲಿ ಇರುವಷ್ಟು ಜನಜಂಗುಳಿ ಇರಲಾರದು.
ಯಾಕೆ? ಯಾಕೆ? ಯಾಕೆ?.......
ಆಧ್ಯಾತ್ಮ ಎಂಬುದು ಚೀನಾದ ಸರಕುಗಳಿದ್ದಂತೆ. ಇದು ಅಧಿಕೃತ ಮಾರಾಟಗಾರರಿಂತ ರಸ್ತೆ ಬದಿಯ ವ್ಯಾಪಾರಿಗಳ ಕೈಯಲ್ಲಿ ಚೆನ್ನಾಗಿ ಮಾರಾಟ ಆಗುತ್ತದೆ. ಕಳ್ಳರು ಬಣ್ಣಬಣ್ಣದ ಮಾತನ್ನಾಡಿ ಇಂತಹ ಸರಕುಗಳನ್ನು ಗಿರಾಕಿಗಳಿಗೆ ತಾಗಿಸಬಲ್ಲರು.ಇಂತಹಾ ವಸ್ತುಗಳನ್ನು ಕೊಳ್ಳುವವರಿಗೆ ಶೋ ರೂಮ್ ಗಳೆಂದರೆ ಅಪಥ್ಯ. ಇಂತಹ ಮಾಲನ್ನು ತಯಾರಿಸಲು ಶ್ರೀ ಆರೋಬಿಂದರು ಅವರ ಜೀವಿತಾವಧಿಯ ಅಷ್ಟು ಕಾಲವನ್ನು ವ್ಯಯಿಸಿದ್ದು ಎಂತಹ ದುರಂತ! ಅವರು ಬರೆದದ್ದು ಮಣಗಟ್ಟಲೆ!. ಆದರೆ ಅಧ್ಯಾತ್ಮ ಅರಸಿ ಹೊರಟವರಿಗೆ ಅದು ರುಚಿಸಿದಂತೆ ಕಾಣುತ್ತಿಲ್ಲ.ಅವರಿಂದ ಆಮೇಲೆ ಬಂದವರು ಅರೆಬರೆ ಜ್ಞಾನದಲೇ ಮಿಂಚುತಿದ್ದಾರೆ. ಹಿಂದಿನ ಯಾವುದೊ ಒಂದು ಪೋಸ್ಟ್ ನಲ್ಲಿ ಶ್ರೀ ಅರವಿಂದರ ಬಗ್ಗೆ ಒಂದಿಷ್ಟು ಬರೆದಿದ್ದೆ. ಅದಕ್ಕೆ ಈ ಪೋಸ್ಟ್ ಬರೆಯಬೇಕೆನಿಸಿತು. ಇಂದು ಸಮಾಜ ಬೇಡುವುದು ಅದರ ದುರಾಸೆಗಳನ್ನು ಪೂರೈಸಬಲ್ಲ ಹೊಸ ಹೊಸ ಮಾರ್ಗಗಳನ್ನು. ಅಧ್ಯಾತ್ಮವನ್ನು ಸಹಾ ಒಂದು ಮಾರ್ಗ ಎಂದು ಸಮಾಜ ಪರಿಗಣಿಸಿದರೆ ಅದು ಧರ್ಮಗುರುಗಳ ತಪ್ಪಲ್ಲ!.ವಿಶ್ವಶಾಂತಿಯ ನೆಪದಲ್ಲಿ ನಡೆಸಲಾಗುವ ಎಲ್ಲಾ ಪಠಣ, ಹೋಮ ,ಹವನದ ಹಿಂದೆ ಇರುವುದು ವೈಯುಕ್ತಿಕ ದುರಾಸೆಗಳೇ ಹೊರತು ವಿಶ್ವಶಾಂತಿಯಲ್ಲ. ಅರವಿಂದರು ತನ್ನ ಕಾಣ್ಕೆಗಳನ್ನು ಬರೆದಿಟ್ಟದ್ದೆ ದೊಡ್ಡ ತಪ್ಪಾಯಿತು. ಅವರು ಸುಮ್ಮನೆ ತಪಸ್ಸುಮಾಡಿ,ಸತ್ತುಹೋಗಿದ್ದರೆ ಅವರ ಸಮಾದಿಗೆ ಜನರನ್ನು ಆಕರ್ಷಿಸಿ ಕೋಟಿಕೋಟಿ ಗಳಿಸಬಹುದಿತ್ತೇನೋ? ನಾವು ನಮ್ಮನ್ನ ಕೇಳಿಕೊಳ್ಳಬೇಕಾದ ವಿಷಯ ಏನೆಂದರೆ ನಮಗೆ ಅಧ್ಯಾತ್ಮದಂತಹ ವಸ್ತುವಿನ ಅವಶ್ಯಕತೆ ಇದೆಯೇ?,

Sunday, December 12, 2010

A spiritual Disaster called Sri Aurobindo

(Summary in English)





Sri Aurobindo is a giant in Indian religious and spiritual scene. However today, the Integral Yoga, (A unique spiritual path, propounded by Sri Aurobindo) has got a very small number of fallowing. How come a learned, brilliant sage like Sri Aurobindo has got such a small number of followers when many new comers like Swami Nityananda, Sri sri sri Ravishankar, satya Sai baba Ganapati sachchidananda have got a large bands of disciples! These guys do not have a good academic background; they are not scholars like Sri Aurobindo. Further their spiritual career is marred by scandals. Yet these blacksheeps are attracting devotees from various parts of the world.



Why? Why? Why? I always pondered over this question. At last I got this answer!

Spiritualism is like Chinese products. They are sold well in gray market and footpaths than in the shops of authorized dealers. Hence criminals and fraudsters make more money in spiritual market than saints and enlightened beings.

So friends, my advice if you are going to see god, then beware of Middlemen.


((резюме Russian языке)

духовной опасности называется Шри Ауробиндо

Шри Ауробиндо является гигантом в индийской религиозной и духовной сцене. Однако сегодня, интегральная йога, (уникальный духовный путь, предложенной Шри Ауробиндо) имеет очень малое число следующую. Как же узнали, блестящие мудрец, как Шри Ауробиндо имеет такое небольшое число последователей, когда много новых игроков, как Свами Нитьянанда, Шри Шри Шри Ravishankar, Сатья Саи Баба Ганапати Саччидананда получили большой полосы учеников! Эти ребята не имеют хорошую академическую подготовку, они не такие ученые, как Шри Ауробиндо. Далее их духовного карьера омрачена скандалами. Однако эти blacksheeps привлекают преданных из различных частей мира.

Почему? Почему? Почему? Я всегда думал над этим вопросом. Наконец я получил ответ!

Спиритизм, как китайские товары. Они продаются также в сером рынке и пешеходные дорожки, чем в магазинах официальных дилеров. Следовательно, преступников и мошенников заработать больше денег в духовном рынке, чем святых и просветленных существ.

Так друзья, мой совет, если вы собираетесь, чтобы увидеть Бога, то будьте осторожны с посредниками.



Résumé en French)

Une catastrophe spirituelle appelée Sri Aurobindo

Sri Aurobindo est un géant de la scène religieuse et spirituelle indienne. Cependant, aujourd'hui, le yoga intégral, (un chemin spirituel unique, proposée par Sri Aurobindo) a obtenu un très petit nombre de mise en jachère. Comment se fait un savant, sage brillante comme le Sri Aurobindo a obtenu un si petit nombre de fidèles alors que de nombreux nouveaux venus comme Swami Nityananda, Sri Sri Sri Ravishankar, Satya Sai Baba Sachchidananda Ganapati ont obtenu un grand nombre de bandes de disciples! Ces gars-là n'ont pas une bonne formation académique, ils ne sont pas des érudits comme Sri Aurobindo. Poursuivre leur carrière spirituelle est entachée de scandales. Pourtant, ces blacksheeps attirent fidèles de diverses parties du monde


Pourquoi? Pourquoi? Pourquoi? J'ai toujours réfléchi sur cette question. Enfin, j'ai eu cette réponse!

Spiritisme, c'est comme les produits chinois. Ils sont bien vendus dans le marché gris et les sentiers que dans les boutiques des revendeurs agréés. C'est pourquoi les criminels et les fraudeurs faire plus d'argent dans le marché spirituel que les saints et les êtres illuminés.

Alors les amis, je vous conseille si vous allez voir dieu, méfiez-vous des intermédiaires.


(Zusammenfassung German)

Ein spiritueller Disaster namens Sri Aurobindo



Sri Aurobindo ist ein Riese in der indischen religiösen und spirituellen Szene. Doch heute, den Integralen Yoga, (A einzigartigen spirituellen Weg, der von Sri Aurobindo aufgestellt) hat eine sehr kleine Anzahl von Stilllegung bekam. Wie kommt ein gelehrter, brillante Weise wie Sri Aurobindo hat eine so kleine Zahl von Anhängern, wenn viele Neuanfänger wie Swami Nityananda, Sri Sri Sri Ravishankar, Satya Sai Baba Ganapati Sachchidananda haben einen großen Bands der Jünger bekam bekam! Diese Jungs haben keine guten akademischen Hintergrund, sie sind nicht Gelehrte wie Sri Aurobindo. Weitere ihre spirituelle Karriere ist von Skandalen überschattet. Doch diese blacksheeps ziehen Gläubige aus verschiedenen Teilen der Welt

Warum? Warum? Warum? Ich habe immer dachte über diese Frage. Endlich bekam ich diese Antwort!

Spiritismus ist wie chinesische Produkte. Sie sind gut in grauen Markt und Fußwege als in den Geschäften von autorisierten Händlern verkauft. Daher Verbrecher und Betrüger mehr Geld in der spirituellen Markt als Heiligen und erleuchteten Wesen.

Also Freunde, mein Rat, wenn Sie sich auf Gott sehen, dann hüte dich vor Zwischenhändler.




(Resumen en espaniol)

Un desastre llamado espiritual Sri Aurobindo

Sri Aurobindo es un gigante en la escena religiosa india y espiritual. Sin embargo hoy en día, el Yoga Integral, (Un camino espiritual único, propuesto por Sri Aurobindo) tiene un número muy reducido de barbecho. ¿Cómo es que un sabio, sabio brillante como Sri Aurobindo, tiene como un pequeño número de seguidores que muchos recién llegados como Swami Nityananda, Sri Sri Sri Ravishankar, Satya Sai Baba Sachchidananda Ganapati tienen una banda grande de discípulos! Estos chicos no tienen una buena formación académica, ya que no son eruditos como Sri Aurobindo. Además de su carrera espiritual se ve ensombrecida por los escándalos. Sin embargo, estos blacksheeps están atrayendo a los devotos de diversas partes del mundo.


¿Por qué? ¿Por qué? ¿Por qué? Yo siempre reflexionaba sobre esta cuestión. Por fin tengo esta respuesta!

El espiritismo es como los productos chinos. Se venden bien en el mercado gris y senderos que en las tiendas de distribuidores autorizados. Por lo tanto los criminales y defraudadores ganar más dinero en el mercado espiritual de los santos y seres iluminados.

Así que amigos, mi consejo, si usted va a ver a Dios, entonces ten cuidado de intermediarios.




精神的な災害は、スリランカオーロビンドと呼ばれる



スリランカオーロビンドは、インドの宗教的、精神的なシーンの巨人です。しかし今日、インテグラルヨガ、(スリランカオーロビンド提唱されたユニークな精神的なパス)休閑非常に少ない数を持っている。どのようにスリランカオーロビンドように学び、華麗な賢人はスワミNityananda、スリランカスリランカスリランカRavishankarのような多くの新規参入は、SatyaはサイババGanapatiのsachchidanandaは、弟子たちの大バンドを持っている信者のような小さな数を持って来て!これらの人は良い学歴を持っていない、彼らはスリランカオーロビンドのような学者ではありません。また、彼らの精神的なキャリアはスキャンダルによって損なわれます。しかし、これらのblacksheepsは、世界の様々な部分から信者を集めています。



なぜですか?なぜですか?なぜですか?私はいつもこの質問で考えました。最後に私はこの回答を得た!

スピリチュアリズムは、中国製品のようなものです。彼らは正規代理店のお店に比べて灰色の市場や歩道でよく売られています。したがって、犯罪者や詐欺師は、聖人よりも精神的な市場と悟りを開いた人間のより多くのお金を確認します。

友達を見るためには、私のアドバイスは、あなたの仲買人の用心して、神を参照してくださいする予定がある場合




Samenvatting in het Dutch)

Een spirituele Ramp genoemd Sri Aurobindo



Sri Aurobindo is een reus in de Indiase religieuze en spirituele scène. Vandaag de dag echter, de Integrale Yoga, (een unieke spirituele pad, wordt gepropageerd door Sri Aurobindo) heeft een zeer klein aantal stilgelegd. Hoe komt het dat een geleerde, briljante wijze zoals Sri Aurobindo heeft een dergelijk klein aantal volgelingen toen veel nieuwkomers zoals Swami Nityananda, Sri Sri Sri Ravishankar, Satya Sai Baba Ganapati sachchidananda hebben een grote bands van leerlingen heb! Deze jongens hebben geen goede academische achtergrond, ze zijn niet geleerden zoals Sri Aurobindo. Verder hun geestelijke carrière is ontsierd door schandalen. Toch zijn deze blacksheeps trekken gelovigen uit verschillende delen van de wereld.



Waarom? Waarom? Waarom? Ik heb altijd nagedacht over deze vraag. Eindelijk kreeg ik dit antwoord!

Spiritualisme is als Chinese producten. Ze zijn goed verkocht in de grijze markt en wandelpaden dan in de winkels van geautoriseerde dealers. Vandaar dat criminelen en fraudeurs maken meer geld in spirituele markt dan heiligen en verlichte wezens.

Dus vrienden, mijn advies als je gaat om god te zien, daarna van Tussenpersonen beware

Thursday, December 9, 2010

ಅವಿಭಕ್ತ ಕುಟುಂಬಗಳು

ಈ ಕರ್ಮವೀರ,ತರಂಗದಂತಹಾ ಪತ್ರಿಕೆ ಗಳಲ್ಲಿ ಅವಿಭಕ್ತ ಕುಟುಂಬಗಳ ಬಗ್ಗೆ ಆಗಾಗ ಕೆಲವು ಲೇಖನಗಳು ಪ್ರಕಟ ಆಗುತ್ತಿರುತ್ತವೆ. ಕೆಲವರು ಅದು ನಶಿಸುತ್ತಿರುವ ಬಗ್ಗೆ ಗೋಳಾಡುತ್ತಾರೆ. ಹೀಗೆ ಅವರು ಗೋಳಾಡುವುದರಲ್ಲಿ ಯಾವುದೇ ಆಶ್ಚರ್ಯವಿಲ್ಲ. ಏಕೆಂದರೆ ಒಗ್ಗಟ್ಟು, ಏಕತೆ, ಅವಿಭಾಜಿತ ಇತ್ಯಾದಿ ಪದಗಳೊಂದಿಗೆ ನಮ್ಮದು ಅವಿನಾಭಾವ ಸಂಭಂದ. ಸ್ವತಂತ್ರ ಪೂರ್ವದಿಂದಲೂ. ಈ ಪದಗಳನ್ನು ಎಲ್ಲಿ ಎತ್ತಿದರೂ ಎದ್ದು ನಿಂತು ಜೈಕಾರ ಹಾಕುತ್ತಾರೆ. ಅಷ್ಟು ಭಾವನಾತ್ಮಕ ಸಂಭಂದ. ಒಂದು ಕೋಣೆಯನ್ನು ಭಾಗ ಮಾಡಬೇಕೆಂದರೂ ನಮಗೆ ಎದೆಯುರಿ!.ಅಂತಹುದರಲ್ಲಿ ಸಂಸಾರವನ್ನು ಭಾಗ ಮಾಡುವುದೆಂದರೆ?. ಹಿಂದೆ ರಾಜ್ಯವನ್ನು ಭಾಗ ಮಾಡಬೇಕಲ್ಲಾ ಎಂಬ ಕಾರಣಕ್ಕೆ ಅಣ್ಣ,ತಮ್ಮಂದಿರನ್ನು,ಅಪ್ಪ,ಮಕ್ಕಳನ್ನ ಕೊಂದು ರಾಜ್ಯವಾಳಿದವರು ಆಗಿ ಹೋದ ಪುಣ್ಯ ಭೂಮಿಯಿದು!. ಏನೇನೂ ತಾಂತ್ರಿಕ ಕಾರಣಗಳಿಂದ ನಾವು ಈಗ ಅವಿಭಕ್ತ ಕುಟುಂಬ ಪದ್ದತಿಗೆ ತಿಲಾಂಜಲಿ ಇಡುತಿದ್ದೇವೆ.ಇದು ವಿಕಾಸದ ಒಂದು ಹಂತವೂ ಹೌದು. ಆದರೂ ಈ ಪದ್ದತಿಯ ಬಗ್ಗೆ ನಮ್ಮಲ್ಲಿ ಒಂದು ರೀತಿಯ ಹ್ಯಾಂಗೋವರ್ ಇದೆ. ಈ ಬಗ್ಗೆ ಒಂದು ಚಿಂತನೆ ಇಲ್ಲಿದೆ. ನಿಜವಾಗಿಯೂ ಅವಿಭಕ್ತ ಕುಟುಂಬಗಳು ಅಷ್ಟು ಒಳ್ಳೆಯದೇ ಎಂಬ ಅನುಮಾನ ನಿಮಗೆ ಸಹ ಬಂದಿರಬಹುದು .



ನನಗೆ ಈ ಅಪ್ರಸ್ತುತ ವಿಷಯದ ಬಗ್ಗೆ ಆಲೋಚನೆ ಬಂದದ್ದು ನಮ್ಮ ಕಚೇರಿಯ ಪರಿಸ್ತಿತಿಯ ಒಂದು ಅವಲೋಕನದಿಂದ. ನಮ್ಮದು ದೊಡ್ಡ ಕೋಣೆಯಲ್ಲೇ ಎರಡು ವಿಭಾಗಗಳಿವೆ. ನಮ್ಮ ವಿಭಾಗದಲ್ಲಿ ಕೆಲಸ ಹೆಚ್ಚು. ಪಕ್ಕದ ವಿಭಾಗದಲ್ಲಿ ಕೆಲಸ ಕಡಿಮೆ. ಅಲ್ಲಿರುವವರೋ ,ಹುಟ್ಟಾ ಲೋಫರ್ ಗಳು.ಸೋಮಾರಿಗಳು. ಈ ವಿಭಾಗಕ್ಕೆಲಾ ಮುಖ್ಯಸ್ಥ ಎನ್ನಿಸಿಕೊಂಡವರಿಗೆ ಎಲ್ಲಾ ಶಾಖೆಗಳಿಗೆ ಕೆಲಸವನ್ನು ಸಮಾನವಾಗಿ ಹಂಚುವ,ಮಾಡಿಸುವ ಬುದ್ದಿಯಾಗಲಿ, ಕ್ರಿಯಾಶೀಲತೆಯಾಗಲಿ ಇಲ್ಲ. ಜಾಣಕಿವುಡು,ಜಾಣಕುರುಡು ಇವರ ಜಾಣತನದ ಕುರುಹು! . ಆ ಶಾಖೆಯವರ ಅನಗತ್ಯ ಕಿರುಕುಳ ಸಹಿಸಲಸಾಧ್ಯ. ಆ ಹೆಂಗಸರ ಮತ್ತು ತಾವು ಗಂಡಸರೆಂದು ಕೆಲವೊಮ್ಮೆ ಮರೆತುಬಿಡುವ ಕೆಲವು ಗಂಡಸರ ಕಾಡುಹರಟೆಯಂತೂ ಅವ್ಯಾಹತವಾಗಿ ನಡೆದಿರುತ್ತದೆ. ಇನ್ನು ರಾಮನವಮಿ,ಆಯುಧಪೂಜೆ ಮುಂತಾದವನ್ನು ನಡೆಸುವುದರಲ್ಲಿ ಇವರು ಸದಾ ಮುಂದು(ಮಾಡಬೇಕಾದ ಕೆಲಸಕ್ಕೆ ಹಿಂದು) ಇತ್ಯಾದಿ. ಇದೇ ರೀತಿಯ ಸನ್ನಿವೇಶವನ್ನು ಕುಟುಂಬದಲ್ಲಿ ಅಳವಡಿಸಿ ನೋಡಿ.


ಅವಿಭಜಿತ ಕುಟುಂಬಗಳಲ್ಲಿ ಕೆಲಸಗಳ ಹಂಚಿಕೆ ಸಮರ್ಪಕವಾಗಿರುವುದಿಲ್ಲ. ಯಾರು ಸದೃಡರಾಗಿರುತ್ತಾರೋ ಅವರ ಹೆಗಲಿಗೇ ಎಲ್ಲಾ ಕೆಲಸ ಬೀಳುತ್ತದೆ.ಮೈಗಳ್ಳರಿಗಂತೂ ಇದು ಸ್ವರ್ಗ. ಗುಂಪಿನಲ್ಲಿ ಗೋವಿಂದ. ಇಲ್ಲಿ ಹೆಚ್ಚಿನವರು “ಕೆಲಸಕ್ಕೆ ಕರೀಬೇಡಿ,ಊಟಕ್ಕೆ ಮಾತ್ರ ಮರಿಬೇಡಿ” ಪಾಲಿಸಿ(policy) ಹೊಂದಿರುವವರು. ಇಂತಹವರು ಜವಾಬ್ದಾರಿಯಿಂದ ತಪ್ಪಿಸಿ ಕೊಳ್ಳುತ್ತಾ ಅವರಿವರಿಗೆ ಕಿರಿಕ್ ಮಾಡುತ್ತಾ ಓಡಾಡುತ್ತಿರುತ್ತಾರೆ.ಅವಿಭಕ್ತ ಕುಟುಂಬಗಳಲ್ಲಿ ಮದುವೆಯಾದರೂ ಜವಾಬ್ದಾರಿ ಹೋರಬೇಕಿಲ್ಲ.ಇಲ್ಲಿಗೆ ಮದುವೆಯಾಗಿ ಬರುವವರು (ಹೆಣ್ಣು ಮಕ್ಕಳ ಬಗ್ಗೆ ಹೇಳಬೇಕಿಲ್ಲ,ಏಕೆಂದರೆ ಅವರು ಗಂಡನ ಮನೆಗೆ ಹೊರಟು ಹೋಗುತ್ತಾರಲ್ಲ). ನಾಚಿಗೆ,ಮಾನ,ಮರ್ಯಾದೆ ಬಿಟ್ಟರೆ ಮಾತ್ರ ಮಿಂಚಲು ಸಾಧ್ಯ. ಕೆಲವರು ದೊಡ್ಡ ಗಂಟಲಲ್ಲಿ ಅರಚುವುದು, ರಚ್ಚೆ ಹಿಡಿಯುವದು, ಆತ್ಮಹತ್ಯೆ ಮಾಡಿಕೊಳ್ಳುತ್ತೇನೆಂದು ಹೆದರಿಸುವುದು ಇತ್ಯಾದಿ ಕಲೆಗಳನ್ನು ಕರಗತಮಾಡಿಕೊ೦ಡು ಅವನ್ನು ಸಮಯೋಚಿತವಾಗಿ ಉಪಯೋಗಿಸಿಕೊಂಡು ಆರಾಮವಾಗಿರುತ್ತಾರೆ. ಈ ಹಿನ್ನೆಲೆಯಿಂದ ಬಂದಿರುವ ಕೆಲವು ಹೆಂಗಸರು ಕಚೇರಿಗಳಲ್ಲಿ ಬಂದಾಗ ಸಹಾ ಇದೇ ದುರ್ವಿದ್ಯೆಗಳನ್ನು ಚೆನ್ನಾಗಿ ಬಳಸಿ ಕೆಲಸ ಕದಿಯುತ್ತಾರೆ.ಮೇಲಾಧಿಕಾರಿ ಅಯೋಗ್ಯನಾದರಂತೂ ಇವರೇ de facto ಅಧಿಕಾರಿಯಾಗಿಬಿಡುತ್ತಾರೆ. ಮೋನಿಕಾ ಲೇವಿನ್ಸ್ ಕೀ ಸಹಾ ಹಿಂದಿನ ಜನ್ಮದಲ್ಲಿ ಅವಿಭಕ್ತ ಕುಟುಂಬದ ಹಿನ್ನೆಲೆ ಹೊಂದಿದ್ದಿರಬೇಕೆಂದು ನನ್ನ ಗುಮಾಮಿ!.ಇಂತಹವರಿಗೇ ಕೊನೆಗೆ ಕುಟುಂಬದ ಪಾರುಪತ್ಯ ಸಿಗುವ ಸಾಧ್ಯತೆ ಹೆಚ್ಚು. ರಾಜಕೀಯದಲ್ಲೂ ಅಷ್ಟೇ ತಾನೇ. ಪಕ್ಷದಲ್ಲಿ ಅತೀ ಹೆಚ್ಚು ನಾಲಾಯಕ್ ಆದವನೇ ತಾನೇ ಒಳ್ಳೇ ಪದವಿ ಗಿಟ್ಟಿಸುವುದು!.


ನಾಚಿಗೆ ಸ್ವಬಾವದವರು,ಧ್ವನಿ ಎತ್ತರಿಸಲು ಅಳುಕುವವರು ಈ ಅವಿಭಕ್ತ ಕುಟುಂಬಕ್ಕೆ ಪ್ರವೇಶಿಸಿದರಂತೂ ಅವರ ಜೀವನ ನರಕವೇ ಸರಿ. ಗಂಡನ ಪ್ರೀತಿ ಸಂಪಾದಿಸಿದರೂ ಅದರಿಂದ ಅವರಿಗೆ ಯಾವುದೇ ರೀತಿಯ ರಕ್ಷಣೆ ಸಿಗುವುದಿಲ್ಲ. ಇನ್ನು ಈ ಕುಟುಂಬಗಳಲ್ಲಿ ಸ್ವಲ್ಪ ಮುಗ್ದರಾದವರು,ದಡ್ಡರು ಇದ್ದರೆ ಮುಗಿದುಹೋಯಿತು. ಅವನಿಂದಲೇ ಎಲ್ಲಾ ಕೆಲಸಗಳನ್ನು ಮಾಡಿಸುತ್ತಾರೆ. ಬಾಲ್ಯದಿಂದಲೂ “ನೀನು ದಡ್ಡ,ನಿನಗೇನೂ ತಿಳಿಯುವುದಿಲ್ಲ,ಇತ್ಯಾದಿ ಗಳನ್ನು ನಿರಂತರವಾಗಿ ಹೇಳಿ ಹೇಳಿ ಅವನು ನಿಜವಾಗಿಯೂ ದಡ್ಡನಾಗುವಂತೆ ಮಾಡುತ್ತಾರೆ. ನಮ್ಮಲ್ಲಿ ಹಲವು ಆಸ್ತಿವಂತ ಕುಟುಂಬಗಳಲ್ಲಿ, ಸಿರಿವಂತರ ಮನೆಯಲ್ಲಿ ಇಂತಹ “ದಡ್ಡ ತಮ್ಮ”ಇರುವುದು ನೀವು ನೋಡೇ ಇರುತ್ತೀರಿ. ಇದರ ಹಿಂದಿನ ರಹಸ್ಯವೇನು ಗೊತ್ತೇ?. ಇದು ಆಸ್ತಿ ಹೊಡೆಯಲು ಮಾಡುವ ಪ್ಲಾನ್!.


ಈ ಅವಿಭಕ್ತ ಕುಟುಂಬಗಳ ಸುತ್ತಾ ಹೆಣೆದಿರುವ ಹಲವು ಚಲನಚಿತ್ರಗಳೂ ಬಂದು ಹೋಗಿವೆ. ಅದರಲ್ಲಂತೂ ಚಿತ್ರದುದ್ದಕ್ಕೂ ಕಣ್ಣೀರ ಕೋಡಿಯೇ!. ಮೋಸ ,ವಂಚನೆ,ದ್ರೋಹ ಇತ್ಯಾದಿಗಳೆ ಚಿತ್ರದ ತುಂಬಾ. ಸಜ್ಜನನಾದ ಯಜಮಾನ ಅನುಭವಿಸುವ ಕಷ್ಟ ಒಂದೆರಡಲ್ಲ!. ಕೊನೆಗೆ ಎಲ್ಲಾ ತಪ್ಪನ್ನೂ ಯಾವನೋ ವಿಲನ್ ಮೇಲೆ ಹೊರಿಸಿ ಎಲ್ಲರೂ ಒಂದಾಗುವುದೇ ಚಿತ್ರದ ತಿರುಳಾಗಿರುತ್ತದೆ. ಇದರಲ್ಲೂ ಸಹಾ ಚಿತ್ರದ ಅಂತ್ಯ ಬಹಳ ನಾಟಕೀಯವಾಗಿರುತ್ತವೆ. ಚಿತ್ರದುದ್ದಕ್ಕೂ ಎಳೆದಾಡಿ,ಬಡಿದಾಡಿ ಕೊನೆಗೆ ತ್ಯಾಗ ಮಾಡಿ ಒಂದಾಗುತ್ತಾರೆ. “ತ್ಯಾಗ” ಎಂದರೆ ಕಳೆದುಕೊಳ್ಳುವುದು ಎಂದರ್ಥ. ಅಂದಮೇಲೆ ಒಂದಾಗುವುದರಿಂದ ಈ ಜನ ಗಳಿಸುವುದಾದರೂ ಏನನ್ನು? . ಪ್ರೇಕ್ಷಕನನ್ನು ಚಿತ್ರದುದ್ದಕ್ಕೂ ಹಿಡಿದಿಡುವ ಕಥೆಯ ಅಂತ್ಯ ಎಷ್ಟು ಅತಾರ್ಕಿಕವಾಗಿರುತ್ತದೆ!.ಆದರೆ ಅದನ್ನೇ ಒಂದು “ನೀತಿ” ಎಂಬಂತೆ ತೋರಿಸಿ ಜನರಿಗೆ ತಪ್ಪು ಸಂದೇಶ ನೀಡಲಾಗುತ್ತದೆ. ಈಗ ಹೇಳಿ, ಇಂತಹಾ ವ್ಯವಸ್ಥೆಗಳಿಂದ ನಾವು ಕಳಕೊಳ್ಳುವುದೇನು? ಹಾಗೂ ಪಡಕೊಳ್ಳುವುದೇನು?. ಇವನ್ನು ನಾವು ವೈಭವೀಕರಿಸುವುದು ಯಾವ ಪುರುಷಾರ್ಥಕ್ಕಾಗಿ?.


ನಾನು ಯಾವಾಗಲೂ ನೆಗೆಟಿವ್ ಆಗೇ ಬರೆಯುತ್ತೇನೆಂದು ಕೆಲವರ ಆರೋಪವಗಿರುವುದರಿಂದ ಒಂದಿಷ್ಟು ಪಾಸಿಟಿವ್ ವಿಷಯ ಹೇಳುತ್ತೇನೆ. ಮೊನ್ನೆ ನಾನು ಒಂದು ವೆಬ್ ಸೈಟ್ ನಲ್ಲಿ ಒಂದು ಲೇಖನ ನೋಡಿದೆ. ಅದರ ಶೀರ್ಷಿಕೆ “Create more space through partitions” ಎಂದು. “ವಿಭಜಕಗಳನ್ನು ಅಳವಡಿಸುವ ಮೂಲಕ ಹೆಚ್ಚು ಜಾಗ ಸೃಷ್ಟಿಸಿ”. ನಿಜ. ಇದನ್ನು ಅವರು ಬರೆದಿದ್ದು ಕೋಣೆಗಳಿಗೆ ಸಂಬಂಧಪಟ್ಟಂತೆ. ಆದರೆ ನಾನು ಮೇಲ್ಕಂಡ ಸಾಲುಗಳಲ್ಲಿ ಇದನ್ನು ಅವಿಭಕ್ತ ಕುಟುಂಬಗಳ ಹಿನ್ನೆಲೆಯಲ್ಲಿ ಅಳವಡಿಸಿ ನೋಡಿದ್ದೇನೆ. ಅಲ್ಲಿಗೂ ಇದು ಸೂಟ್ ಆಗುತ್ತದೆ. ಹಿಂದೆ ಆ ಸನ್ನಿವೇಶದಲ್ಲಿ ಅದು ಬಹಳ effective ಇತ್ತು ಅಂತ ಕೆಲವರು ವಾದಿಸಬಹುದು. ಒಬ್ಬ ವ್ಯಕ್ತಿ ಒಳ್ಳೇ ಮಾದರಿ ಯೋಧನಾಗಿದ್ದ ಅನ್ನೋ ಕಾರಣಕ್ಕೆ ಅವನು ಸತ್ತ ನಂತರ ಕೂಡ ಹೆಣ ಇಟ್ಟುಕೊಂಡು ನಾವು ಅದರ ಪಕ್ಕ ಹೆಣದ ಅನುಕರಣೆ ಮಾಡುತ್ತಾ ಮಲಗುತ್ತೇವೆಯೇ?.






ಸಧ್ಯಕ್ಕೆ ಸಾಕಿಷ್ಟು .............

ಉಣಲಾರದ ಉಳ್ಳವರು !(food for thought)




ನಾನು ಮದುವೆ ಮನೆಯೊಂದರಲ್ಲಿ ಊಟ ಮಾಡುತ್ತಿರುತ್ತೇನೆ. ನಾನು ನನ್ನ ಎಲೆಯ ಮೇಲಿದ್ದದ್ದನ್ನೆಲ್ಲ ಮುಗಿಸುತ್ತೇನೆ. ಪಕ್ಕದಲ್ಲಿ ಕುಳಿತವ ಅರ್ಧಂಬರ್ಧ ತಿಂದು ಹಾಗೇ ಉಳಿಸಿ ಮೇಲಕ್ಕೇಳಲು ಹವಣಿಸುತ್ತಿರುತ್ತಾನೆ. ಆಗ ನಾನೆಂದುಕೊಳ್ಳುತ್ತೇನೆ,”ಎಷ್ಟೋ ಮಂದಿಗೆ ತಿನ್ನಲೂ ಇಲ್ಲ. ಈತ ನೋಡು, ಆಹಾರ ಪೋಲು ಮಾಡುತಿದ್ದಾನೆ”. ಹೀಗೆ ಅಂದು ಕೊಂಡ ಮೇಲೆ ಮತ್ತೆ ನಾನೇ ಯೋಚಿಸಿದೆ.”ಸರಿ, ಈತ ಅದೆಲ್ಲವನ್ನೂ ತಿಂದ ಎಂದಿಟ್ಟುಕೊಳ್ಳಿ, ಹೊರಗೆ ತಿನ್ನಲು ಇಲ್ಲದವರ ಹೊಟ್ಟೆ ತುಂಬಿದಂತಾಗುತ್ತದೆಯೇ ?,


ಅಥವಾ ಆ ಅಹಾರವನ್ನು ತಿಂದಾಗ ಅವರು ಅನುಭವಿಸುವ ತೃಪ್ತಿ ಇವನು ಅನುಭವಿಸುತ್ತಾನೆಯೇ?.


ಎರಡೂ ಇಲ್ಲ. ಆದರೂ ನಾವು ಯಾವುದೊ ಅರ್ಥಹೀನ ಸಿದ್ದಾಂತವನ್ನು ಹಿಡಿದು ಕೊಂಡು ಎಳೆದಾಡುತಿದ್ದೇವೆ.ಅವನಿಗೆ ಇಲ್ಲ.ನೀನು ಚೆನ್ನಾಗಿ ಮುಕ್ಕು ಎಂದು ನಮ್ಮ ಓರಗೆಯವರಿಗೆ ಹೇಳುವ ಪ್ರಯತ್ನಮಾಡುತ್ತೇವೆ.ನಮ್ಮ ಪಕ್ಕದ ಮನೆಯಲ್ಲಿ ಒಂದು ಸಂಸಾರ ಇತ್ತು. ಆಯಮ್ಮನಿಗೆ ಮಗುವನ್ನು ಹೊರಗೆ ಕರೆದುಕೊಂಡು ಬಂದು ಊಟ ತಿನ್ನಿಸುತಿದ್ದಳು. ಆ ಪೀಡೆ ತಿನ್ನಲು ಬಹಳ ತಕರಾರು ಮಾಡುತ್ತಿತ್ತಂತೆ.ಅಲ್ಲಿ ಮುಂದುಗಡೆ ಒಂದು ಕಟ್ಟಡ ಕಾಮಗಾರಿ ನಡೆಯುತ್ತಿತ್ತು.ಕೆಲವು ಕೂಲಿಯಾಳುಗಳ ಬಿಡಾರ ಅಲ್ಲಿತು. ಆ ಬಡ ಮಕ್ಕಳ ಮುಂದೆ ಈವಮ್ಮ ತಟ್ಟೆ ಹಿಡಿದು ಕೊಂಡು ಮಗುವಿಗೆ ತಿನ್ನಿಸುವುದನ್ನು ನೋಡಿದರೆ ನನಗೊಂತರಾ ಸಿಟ್ಟು ಬರುತಿತ್ತು, ನಿಮಗೂ ಬರಬಹುದು.ಆದ್ರೆ ನಾನು ಮೇಲೆ ಹೇಳಿದ ಮನೋಬಾವವು ಆಕೆಯ ಮನೋಬಾವಕ್ಕಿಂತಾ ಹೇಗೆ ಬಿನ್ನವಾದದ್ದು?,ಅನ್ನವನ್ನು ಪೋಲು ಮಾಡುವ ಬಗ್ಗೆ ಹಿಂದೆ ಹಲವರು ರೋಷಾವೇಶದಿಂದ ಮಾತಾಡುವುದನ್ನು ನಾನು ನೋಡಿದ್ದೇನೆ. ಹಲವರು ಇದನ್ನು ಚರ್ಚಾಸ್ಪರ್ಧೆಯಲ್ಲಿ ಹೇಳಿದ್ದನ್ನು ಕೇಳಿದ್ದೇವೆ. ಆದರೆ ಇಲ್ಲಿ ನಿಜವಾದ ಸಮಸ್ಯೆ ಏನು ಎಂಬ ಬಗ್ಗೆ ಯೋಚಿಸಿದ್ದೇವೆಯೇ?,ಅದಕ್ಕೆ ಉತ್ತರ ಹುಡುಕಲು ಯತ್ನಿಸಿದ್ದೆವೆಯೇ?. ನಾನು ನೋಡಿದ್ದಂತೆ ಅನ್ನ ಎಸೆಯುವ ಬಗ್ಗೆ ಮಾತಾಡುತಿದ್ದುದು ಸೊ ಕಾಲ್ಡ್ ರೈತರ ಮಕ್ಕಳು. ಆದರೆ ಬೆಲೆ ಒಂದಿಷ್ಟು ಕಡಿಮೆಯಾದ ಕೂಡಲೇ ಟನ್ನು ಗಟ್ಟಲೆ ಟೊಮೇಟೊ,ಈರುಳ್ಳಿ ಇತ್ಯಾದಿಗಳನ್ನು ರಸ್ತೆಯಲ್ಲಿ ಸುರಿದಿದ್ದೇನು?,ಘೋಷಣೆಗಳನ್ನು ಕೂಗಿದ್ದೇನು!, ಎಲ್ಲಿ ಹೋಯಿತು ಆ ಹಂಚಿ ತಿನ್ನುವ ಪ್ರವೃತ್ತಿ?, ಎಲ್ಲಿ ಹೋಯಿತು ಎಲ್ಲವನ್ನೂ ಬಳಸಿ ಜಗತ್ತಿನ ಹಸಿವನ್ನು ನೀಗಿಸುವ ಕೆಚ್ಚು?,ಎಲ್ಲಿ ಹೋಯಿತು ನಮ್ಮ ಕೂಡಿಬಾಳುವ ಕಲ್ಪನೆ?,ಇದೆಲ್ಲದರ ಮೂಲಕ್ಕೆ ಹೋಗದ ನಾವು ನಮ್ಮ ಜಾತ್ರೆಗಳನ್ನು, ಬೆಳದಿಂಗಳ ಊಟಗಳನ್ನು,ಅವಿಭಕ್ತ ಕುಟುಂಬಗಳನ್ನು ತೋರಿಸಿ ಇದೆ ಪ್ರಪಂಚದಲ್ಲಿ ಅತ್ಯಂತ ಶ್ರೇಷ್ಠವಾದ ಸಂಸ್ಕೃತಿಯೆಂದು ಬುರುಡೆ ಬಿಡುತ್ತೇವೆ. ನಾನು ನಮ್ಮ ಸಂಸ್ಕೃತಿಯಲ್ಲಿ ತೃಪ್ತಿ ಎಂಬುದಕ್ಕೆ ಯಾವುದೇ ರೀತಿಯ ಬೆಲೆ ಕೊಡದೇ ಬರಿಯ qualitative ಅಂಶಗಳಿಗೆ ಬೆಲೆ ಕೊಡುತ್ತಾ ಬಂದಿದ್ದೇವೆ. ಇಲ್ಲಿ ನಾವು ನಮ್ಮೊಳಗೇ ತಲೆತಲಾಂತರದಿಂದ ಬೆಳೆಸಿಕೊಂಡು ಬಂದಿರುವ ಅಮಾನವೀಯತೆಯ ಒಂದು ಜಲಕ್ ಕಾಣುತ್ತದೆ. ನಾವು ನಮ್ಮನ್ನೂ,ನಮ್ಮ ಸುತ್ತಲಿನ ಜನರನ್ನೂ ಅರ್ಥ ಮಾಡಿಕೊಂಡಿರುವ ಬಗೆ ಏನು?....ಥೂ...


ನನ್ನ ಮನಸ್ತಿತಿಯ ಮೇಲೆ ನನಗೇ ಮರುಕ ಹುಟ್ಟುತ್ತಿದೆ. ಇದು ಇನ್ನೆಷ್ಟು ದಿನ..ಇನ್ನೊಂದು ಸಾವಿರ ವರ್ಷ?

Monday, December 6, 2010

ಜೀವನ ಪ್ರೀತಿ,ಆಶಾವಾದ ಇತ್ಯಾದಿಗಳ ಬಗ್ಗೆ ನನಗೆ ತೋಚಿದಂತೆ ....

ನಮನ್ನೆಲ್ಲರನ್ನೂ ಉದ್ದರಿಸಲು ಶತಮಾನಗಳ ಹಿಂದೆ ಅವತರಿಸಿದ ಮಹಾ ಪುರುಷರಿಗೆ, ಪ್ರವಾದಿಗಳಿಗೆ,ಸಾಧು ಸಂತರಿಗೆಲ್ಲರಿಗೂ ಅಂತರ್ದೃಷ್ಟಿ  ಇತ್ತೆಂದೂ, ಮುಂದಿನದನ್ನು ನೋಡುವ ದೃಷ್ಠಿ ಕೂಡ ಇತ್ತೆಂದು ಹೇಳಲಾಗಿದೆ.
ಅವರ್ಯಾರಿಗೂ ಇರದ ದೃಷ್ಠಿ ನಮಗಿದೆ.ಅದು ನಮ್ಮ ಹಿಂದಿನದನ್ನು ನೋಡುವ ದೃಷ್ಠಿ.
ನಿಜ. ನಮ್ಮ ಬೂತಕಾಲವನ್ನು ನಾವು ನೋಡಿದ್ದೇವೆ,ಇತಿಹಾಸ ಓದುವ ಮೂಲಕ.
ನಮ್ಮ ಹಿಂದಿನ ಆ ಮಹಾಮಹಿಮರು ಕಂಡ ಕಾಣ್ಕೆಗಳು ನಿಜವಲ್ಲ ಎಂಬ ಸತ್ಯವನ್ನು ನಾವು ನೋಡಿದ್ದೇವೆ.
ಆದರೆ ಕೆಲವು ತಾಂತ್ರಿಕ ಕಾರಣಗಳಿಂದ ನಾವು ನೋಡಿದ್ದನ್ನು ನಂಬಲು ನಿರಾಕರಿಸುತ್ತೇವೆ!. ನೋಡಿದರೂ ನೋಡದಂತೆ ನಟಿಸುತ್ತೇವೆ. ನಮಗೆ ಕೆಲವು ದೊಡ್ಡವರೆನ್ನಿಸಿಕೊಂಡಿರುವವರು ಹೇಳುತ್ತಾರೆ. ಕೆಟ್ಟದ್ದನ್ನು ನೋಡಬೇಡ.ಹಿಂಸೆಯ ದೃಶ್ಯಗಳನ್ನು ನೋಡಬೇಡ, ಕಾಮಕೇಳಿಯ ದೃಶ್ಯಗಳನ್ನು ನೋಡಬೇಡ ಎಂದು ಹೇಳುತ್ತಲೇ ಬಂದಿದ್ದಾರೆ. ನೋವು ಸಹಾ ನಮ್ಮ ಸುತ್ತಲಿನ ಸಾವು ನೋವುಗಳನ್ನು, ರೋಗರುಜಿನಗಳನ್ನು ನೋಡಿದರೂ ,ನೋಡದಂತೆ ನಡೆಯುತ್ತಾ, ಸ್ವರ್ಗಾರೋಹಣಕ್ಕೆ ಹೊರಟ ಪಾಂಡವರಂತೆ ,ನಾವು ಮಾತ್ರ ಸ್ವರ್ಗ ಸೇರುತ್ತೇವೆಂಬ ಆಶಾವಾದದ ಪಥದಲ್ಲಿ ಹೆಜ್ಜೆ ಹಾಕುತ್ತೇವೆ. ಯಾರೋ ಒಬ್ಬ ಓಹಿಲೇಶ್ವರ,ಯಾರೋ ಒಬ್ಬ ವಿನೋಬಾ,ಯಾರೋ ಒಬ್ಬ ಗಾಂಧಿಯನ್ನು ತೋರಿಸಿ ಸಮಾಜ ಹೇಗೆ ಎಲ್ಲಾ ಸಂಕಷ್ಟಗಳಿಗೆ ಉತ್ತರ ಹೊಂದಿದೆ ಎಂಬ ನೆಪ ಹೇಳುತ್ತೇವೆ. ಇದು ಜೀವನ ಪ್ರೀತಿಯೇ?. ನಾವು ಯಾವುದನ್ನು ಕೆಟ್ಟದ್ದು ಎಂದು ಬಾಯ್ಮಾತಿನಲ್ಲಿ ಸಾರುತ್ತೆವೂ ಅವೇ ಎರಡು ಸಾವಿರ ವರ್ಷಗಳಿಂದ ಜನ ಜೀವನದ ಮೇಲೆ ಸವಾರಿ ಮಾಡುತ್ತಾ ಬಂದಿದೆ!.

ಇಂದಿನ ವೇದಾಂತಿಗಳು,ಪ್ರಗತಿಪರರು,ಪುರೋಗಾಮಿಗಳು ಎಲ್ಲರೂ ಅವರವರ ಸಿದ್ದಾಂತಗಳೊಂದಿಗೆ ಆಶಾವಾದವನ್ನು ಬೆರೆಸುತ್ತಾ ತರ್ಕಗಳ ಆಧಾರದ ಮೇಲೆ ವಾದ ಮಂಡಿಸುತ್ತಾರೆ,ಕಣ್ಣು ಮುಚ್ಚಿ ಹಾಲು ಕುಡಿಯುವ ಬೆಕ್ಕಿನಂತೆ....

ಯಾವ ಕಾಲಗಟ್ಟದಲ್ಲಿಯೂ ವಾಸ್ತವ ಜೀವನಕ್ಕೆ ಸಲ್ಲದ ಸಾಧು,ಸಂತ ಸುಧಾರಕರ ಪ್ರಸ್ತುತತೆಯನ್ನು ಸಾರುವ ಯಶಸ್ವಿ ಪ್ರಯತ್ನ ಮಾಡುತ್ತಲೇ ಹೋಗುತ್ತಾರೆ.

ಈ ಪ್ರಪಂಚದಲ್ಲಿ ಪ್ರಪಂಚಕ್ಕೆ ಎಷ್ಟು ಮಂದಿ ತಮ್ಮನ್ನು ತಾವೇ ಕೊಂದುಕೊಳ್ಳುತ್ತಾರೆ?,ಪ್ರಪಂಚದಲ್ಲಿ ಹೋಗಲಿ,ಈ ಪುಣ್ಯಭೂಮಿ ಭಾರತದ ಹೃದಯಭಾಗ ಬೆಂಗಳೂರಿನ ಅಂಕಿ ಅಂಶಗಳನ್ನೇ ತೆಗೆದುಕೊಳ್ಳಿ.ಈ ಸಾಯುವ ಮಂದಿಗೆ ಯಾವುದೇ ದನಿಯಿಲ್ಲ.ಯಾಕೆಂದರೆ ಮಾತಾಡುವ ಬಲ ಇರುವವರಿಗೆ ಮೌನವಾಗಿರುವವರ ದೌರ್ಬಲ್ಯ ಅತಾರ್ಕಿಕವಾಗಿರುತ್ತದೆ.ಸಾಯುವವರನ್ನು ಬದುಕಿಸುತ್ತೇವೆ ಎಂದು ಹೇಳಿಕೊಳ್ಳುವ ಕೌನ್ಸೆಲಿಂಗ್ ಸೆಂಟರ್ ಗಳಿವೆ.ಆದರೆ ಇದು ಎಷ್ಟರ ಮಟ್ಟಿಗೆ ಯಶಸ್ವಿಯಾಗಿವೆ?. ಇದೊಂದು ರೀತಿಯ ಸಾಂಕೇತಿಕ ಪ್ರಯತ್ನ. ‘ನಾನು ಸರಿ,ನೀನು ತಪ್ಪು’ ಎಂದು ಸಾಯುವವನ ಮನ ಒಲಿಸುವುದು ಇವುಗಳ ಗುರಿಯಂತೆ! ನಿಜವಾಗಿ ಸಾಯಲು ಹೊರಡುವವ ಇವರಿಗೆ ಫೋನ್ ಮಾಡುತ್ತಾನೆಯೇ?.
ನಮಲ್ಲಿ ಹೆಣ ವನ್ನು ಕಿತ್ತು ತಿನ್ನುವುದು ಅನ್ನುತ್ತಾರಲ್ಲಾ,ಆ ರೀತಿ ಆತ್ಮಹತ್ಯೆ ಮಾಡಿಕೊಳ್ಳುವವರನ್ನೇ ಕಚ್ಚಾ ವಸ್ತುವನ್ನಾಗಿ ಉಪಯೋಗಿಸುವ ಒಂದು ಉದ್ಯಮವಿದು!. ಇರಲಿ, ಆದರೆ ಹೀಗೆ ಸಾಯುವ ಜನಗಳ್ಯಾರೂ ತಮ್ಮ ಭಾವನೆಗಳನ್ನು ವ್ಯಕ್ತ ಪಡಿಸುವುದಿಲ್ಲ.ಅವರ ಚಿಂತನೆಗಳನ್ನು ದಾಖಲಿಸುತಿಲ್ಲ. ಆದುದರಿಂದ ಇಂತಹವರ ಅಭಿಪ್ರಾಯಗಳು ನಮ್ಮ ಸಾಂಸ್ಕೃತಿಕ ಜಗತ್ತಿನಲ್ಲಾಗಲಿ ,ಸಾಹಿತ್ಯರಂಗದಲ್ಲಾಗಲಿ ಯಾವುದು ಅಲೆ ಎಬ್ಬಿಸುವುದಿಲ್ಲ.ಪರಿಣಾಮ ಇಂದಿನ ಸಾಹಿತ್ಯ ಎಂಬುದು ಕೆಲವೇ ಕೆಲವು ಪಟ್ಟಬದ್ರ ವಿಚಾರಧಾರೆಯ ಪ್ರಚಾರಕ್ಕೆ ಸೀಮಿತಗೊಂಡು ನಿಂತ ನೀರಾಗಿದೆ.
ಬುದ್ಧ,ಸಾಕ್ರೆಟಿಸ್ ರಿಗೆ ವಿಷ ಹಾಕಲಾಯಿತು.ಕ್ರಿಸ್ತ ನೋವ್ಉಣ್ಣುತ್ತಾ ಶಿಲುಬೆಗೆ ನೇತಾಡಬೇಕಾಯಿತು.ಬಸವಣ್ಣ ಆತ್ಮಹತ್ಯೆ ಮಾಡಿಕೊಳ್ಳಬೇಕಾಯಿತು. ಇನ್ನುಳಿದ ಶರಣರು ಕಾಲಗರ್ಭದಲ್ಲಿ ಕರಗಿಹೋದರು. ಗಾಂಧಿಯ ತ್ಯಾಗ ಬಲಿದಾನಗಳ ಸಮಾಧಿಯ ಮೇಲೆ ನೆಹರು ಕುಟುಂಬದ ಕಳೆಗಳು ಹುಲುಸಾಗಿ ಬೆಳೆದವು. ಲೆನಿನ್ ತತ್ವಗಳ ಆಧಾರದ ಮೇಲೆ ಕಟ್ಟಿದ ಸೋವಿಯತ್ ರಾಷ್ಟ್ರವನ್ನು ರಕ್ತ ಪಿಪಾಸು ಸ್ಟಾಲಿನ್ ಹೈಜಾಕ್ ಮಾಡಿದ. ಸಮಾಜವಾದದ ಮಂತ್ರ ಜಪಿಸುತ್ತಲೇ ಮುಸೋಲಿನಿ,ಸ್ಟಾಲಿನ್,ಮಾವೋ,ಪೋಲ್ ಪಾಟ್,ಗುಜ್ಮಾನ್ ಮುಂತಾದವರು ಭೂಖಂಡವನ್ನು ರಕ್ತದಿಂದ ತೊಳೆದರು. ನಾವು ಎಲ್ಲಾ ಧರ್ಮಗಳು ಒಳ್ಳೆಯದೇ ಎಂಬ ಬೂಟಾಟಿಕೆಯ ಮಾತಾಡುತ್ತೇವೆ. ಈ ಧರ್ಮಗಳ ಏಕಾಧಿಪತ್ಯ ಉಚ್ಚ್ರಾಯಸ್ತಿತಿಯಲ್ಲಿದ್ದಾಗ ಇತರ ಧರ್ಮೀಯರೊಂದಿಗೆ ಎಷ್ಟು ಕ್ರೂರವಾಗಿ ವರ್ತಿಸಿತು. ಶಾಂತಿ,ಅಹಿಂಸೆಯ ಪ್ರತಿಪಾದಕ ಎಂದು ಕರೆದು ಕೊಳ್ಳುವ ಭಾರತವು ಕುರ್ದಿಶ್ ಹಳ್ಳಿಗಳ ಮೇಲೆ ಆಸಿಡ್ ಬಾಂಬ್ ಹಾಕಿಸಿ ಹಲವರನ್ನು ಕೊಂದ ಸದ್ದಾಂ ಹುಸ್ಸೈನ್ ನ ಸೇನಾ ಆಡಳಿತವನ್ನು ವಿಶ್ವಸಂಸ್ಥೆಯಲ್ಲಿ ಹಲವಾರು ಬಾರಿ ಬೆಂಬಲಿಸಿತು!.

ಇಂದಿನ ನಾಗರಿಕ(ಎಂದು ಹೇಳಿಕೊಳ್ಳುವ) ಸಮಾಜದಲ್ಲಿಯೂ ಸಹಾ ನಾವು ಹಿಂದೆಂದೋ ಯಾವುದೊ ಯುದ್ದದಲ್ಲಿ ಗೆದ್ದ ಕಾರಣಕ್ಕೆ ವಿಜಯೋತ್ಸವ ಆಚರಿಸಿಕೊಳ್ಳುತ್ತೇವೆ. ನಮ್ಮ ಆನಂದೊತ್ಸವದಲ್ಲಿ ಹಲವು ಕೋಳಿಗಳು,ಕುರಿಗಳು,ದನಗಳೂ ಮತ್ತು ರೇಷ್ಮೆ ಹುಳಗಳು ವದ್ದಾಡಿ ಸಾಯುತ್ತವೆ.ಅವುಗಳ ಆಕ್ರಂದನ ಕೂಡ ಕೇಳದ ನಾವು ಸಾಂಕೇತಿಕವಾಗಿ ಮಹಾವೀರ,ಗಾಂಧೀ ಮುಂತಾದವರ ಗುಣಗಾನ ಮಾಡಿ ಅವರ ತತ್ವವನ್ನು ಶಾಲೆಗಳಲ್ಲಿ ಬೋದಿಸುತ್ತೇವೆ. ನಿಯಮಗಳನ್ನು,ಪರಂಪರೆಯನ್ನು,ಕಾನೂನನ್ನು ಪಾಲಿಸುವಂತೆ ಹೇಳಿಕೊಡುತ್ತೇವೆ. ಅವರು ಸಮಾಜದ ಒಳ್ಳೆಯ ಪ್ರಜೆಯಾಗ ಬೇಕೆಂದು ಬಯಸುತ್ತೇವೆ.ಆದರೆ ತಲೆತಲಾಂತರದಿಂದ ಬಂದಿರುವ ಒಂದು ಕ್ರಮವನ್ನು ಗಮನಿಸಿ. ಈ ಆದರ್ಶ ಸಮಾಜದ ಅತಿ ದೊಡ್ಡ ಪಲಾನುಭವಿಗಳೆಂದರೆ ಈ ನಿಯಮಗಳಿಂದ ವಿನಾಯಿತಿ ಪಡೆದ ಜನ!. ಅದೇ ರಾಜರು,ಮಂತ್ರಿಗಳು ಇತ್ಯಾದಿ.ಅದೇ ಈ ಸಾಮಾಜಿಕ ವ್ಯವಸ್ತೆಯ ಉದ್ದೇಶ ಸಹಾ. ವರ್ಗ ಪದ್ಧತಿ,ವರ್ಣಾಶ್ರಮ ಇತ್ಯಾದಿ ಎಲ್ಲಾ ಪರಿಸ್ತಿತಿಗೂ ಒಗ್ಗಿಕೊಂಡು ರೂಪಬದಲಾಯಿಸಿಕೊಂಡು ಉಳಿದುಕೊಳ್ಳುತ್ತವೆ.ಉದಾಹರಣೆಗೆ ಬ್ರಾಹ್ಮಣ ಸಮಾಜದ ತಾರತಮ್ಯ ಇತ್ಯಾದಿಗಳನ್ನು ಖಂಡಿಸುತ್ತಾ ಹಲವು ಬುದ್ದಿವಂತರು ಒಳ್ಳೊಳ್ಳೆ ಪದವಿ ಪಟ್ಟಗಳನ್ನು ಸಂಪಾದಿಸಿದರು.ತನ್ಮೂಲಕ ಹೊಸ ವರ್ಗದ ಮೇಲ್ಪದರ ಸೇರಿಕೊಂಡರು.ಆದರೆ ಪ್ರಗತಿಪರರು ಯಾವುದೊ ಹಳೆ ಸಿಲಬಸ್ಸಿನ(syllabus)ಪಟ್ಯ ಓದುತ್ತಾ ಇನ್ನೂ ಜಾತಿಪದ್ದತಿಯನ್ನು ಖಂಡಿಸುವಲ್ಲೇ ಇದ್ದಾರೆ. ಆದರೆ ಮೌನವಾಗಿ ಒಂದು ಹೊಸ ವರ್ಗ ಸೃಷ್ಟಿಯಾಗಿ ನಿಂತಿದೆ. ಅದು ಹಳೆಯ ಅನಿಷ್ಟ ಪದ್ದತಿಯಿಂದ ತನ್ನ ಶಕ್ತಿ ಪಡೆದಿದೆ ಎನ್ನುವುದು ಸುಳ್ಳಲ್ಲವಾದರೂ ಈಗ ಅದನ್ನು ಬಿಟ್ಟರೂ ಸ್ವತಂತ್ರವಾಗಿ ನಿಲ್ಲುವ ಶಕ್ತಿಯನ್ನ ಅದು ಹೊಂದಿದೆ. ಅನ್ಯಾಯಕ್ಕೆ ವಿರುದ್ದ ಹೊರಡಲು ಹೊರಟವರೆಲ್ಲ ಅನ್ಯಾಯದ ಬಾಗವಾಗಿ ರೂಪಾಂತರ ಗೊಳ್ಳುವುದನ್ನು ನಾವು ನೋಡಿದ್ದೇವೆ. ಇದಕ್ಕೆ ಸಂಭಂದಿಸಿದಂತೆ ಬರೆಯಲಾಗಿರುವ ಒಂದು ಕಥೆ ಬಹಳ ಮನೋಜ್ಞ ವಾಗಿದೆ . ದುಡ್ಡು  ಕಾಸು,ಪದವಿ ಎಲ್ಲಾ ಸಿಕ್ಕಮೇಲೆ ತಣ್ಣಗಾದ ಕವಿಗಳ,ಕ್ರಾಂತಿಕಾರರ ದೃಷ್ಟಾಂತಗಳು ನಮ್ಮ ಕಣ್ಣ ಮುಂದಿದೆ.( ಈ ಲಿಂಕ್ ನೋಡಿ  http://navyanta.blogspot.com/2010/12/tale-of-stairs.html

ಇಂತಹ ಸಮಾಜದಲ್ಲಿ ಜೀವನ ಪ್ರೀತಿಯ,ಆಶಾವಾದದ ಮಾತುಗಳನ್ನಾಡುವುದು ಆತ್ಮವಂಚನೆ ಎನಿಸುತ್ತದೆ.

ಪ್ರತಿಕ್ರಿಯೆ



      

¤ªÀÄä `£ÀªÁåAvÀ' ¨ÁèUï £ÉÆÃrzÉ. AiÀiÁPÉÆà K£ÉÆà ¤ªÀÄä §gÀºÀUÀ¼À°è MAzÀÄ «zsÀzÀ PÀµÁAiÀÄ G½zÀÄ©lÖAwzÉ. C¤¹PÉUÀ¼ÀÄ PÉ®ªÀÅ PÀqÉ vÀÄA§ ¹¤Pï C¤¸ÀÄvÀÛzÉ. GzÁ.UÉ, C®èªÀÄ£À §UÉV£À ¤ªÀÄä ¤®ÄªÀÅ. `PÉÆlÖ PÀÄzÀÄgÉAiÀÄ£ÉÃgÀ®jAiÀÄzÉ...' JA§ ªÀZÀ£ÀªÀ£ÀÄß ¤ÃªÀÅ UÀ滹gÀĪÀ jÃw vÀÄA§ ºÀUÀÄgÀªÁVzÉ. ªÀåAUÀå GqÁ¥sÉUÀ¼ÀÄ wÃgÁ C£ÀÄavÀªÁV §¼ÀPÉAiÀiÁVgÀĪÀÅzÀÄ £À£ÀUÀ¤ß¹zÀAvÉ ¤ªÀÄä §gÀªÀtÂUÉAiÀÄ°è JzÀÄÝvÉÆÃgÀĪÀ Cw ªÀÄÄRå zÉÆõÀ.

 

¤ªÀÄä §gÀºÀUÀ¼ÀÄ PÉ®ªÀÅ PÀqÉ wÃgÁ ¤gÁ±ÁªÁzÀzÀ zÀ¤ ºÉÆgÀr¸ÀÄvÀÛªÉ. £ÀªÀÄä vÀ¯ÉªÀiÁj£À C£ÉÃPÀ d£À F ¹¤¹dA, UÉÆAzÀ®, fêÀ£À «gÉÆâü ¤®ÄªÀÅUÀ½AzÀ PÀAUÉƽ¸ÀÄwÛgÀĪÀÅzÀÄ ¨ÉøÀgÀ vÀj¸ÀĪÀ «µÀAiÀÄ. EAxÀ ¥À¯ÁAiÀÄ£ÀªÁ¢ CªÀvÁgÀUÀ¼À£Éßà vÁ£Éà £ÀªÀågÀÄ ZÁ°ÛAiÀÄ°è ElÄÖPÉÆAqÀzÀÄÝ? ºÁUÁzÀgÉ £ÀªÀå ªÀå¸À£ÀzÀ CAvÀå ¤ªÀÄä zsÉÆÃgÀuÉAiÀÄ°è DVgÀĪÀÅzÁzÀgÀÆ J°è?

 

`C¨Ëmï «Ä'AiÀÄ°è ¤ÃªÀÅ ªÁåSÁ夹gÀĪÀ ¸ÀAªÉÃzÀ£Á²Ã®vÉAiÀÄÄ ºÁUÉ ±À§ÝUÀ¼À ºÉÆgÀvÁV CxÀðzÀ ªÁºÀPÀªÁV PÉ®¸À ªÀiÁrzÀ GzÁºÀgÀuÉ ¸Á»vÀå ¥ÀgÀA¥ÀgÉAiÀįÉèà E®è. EzÀ£ÀÄß ¤ÃªÀÅ UÀªÀĤ¸À¨ÉÃPÀÄ ªÀÄvÀÄÛ `ªÁUÀxÀð'zÀ ªÀiË®åªÀ£ÀÄß zsÁ夸À¨ÉÃPÀÄ. »ÃVzÀÆÝ ¤ªÀÄä ªÉÊZÁjPÀvÉAiÀÄ ZÀÄgÀÄPÀÄvÀ£À ¥ÀjuÁªÀÄPÁjAiÀiÁVzÉ; ¸ÀÄvÀÛ®£ÀÄß PÁtĪÀ M¼ÀUÀtÄÚ ¤ªÉÆä¼ÀUÉ vÉgÉ¢gÀĪÀÅzÀgÀ J®è ¸ÀÆZÀ£ÉUÀ¼ÀÆ ¸ÀàµÀÖªÁVªÉ.

 

DzÀgÀÆ ¤ªÀÄä aAvÀ£ÉUÀ¼ÀÄ `¤gÀAPÀıÀªÀÄwAiÉƧâ£À CªÁAvÀgÀPÁj aAvÀ£ÉUÀ¼ÀÄ' J¤¸ÀĪÀ ªÀÄÄ£Àß ¤ÃªÀÅ C¥ÁAiÀĪÀ£ÀÄß ¤ªÁj¹PÉƼÀÄî«gÉAzÀÄ D²¸ÀĪÉ. £ÁªÉ®è MmÁÖgÉ ¨É¼ÉAiÀĨÉÃPÁVgÀĪÀÅzÀÄ »ÃUÉ ¥ÀgÀ¸ÀàgÀ «ªÀıÉðAiÀÄ ªÀÄÆ®PÀªÉÃ.

 

«±Áé¸À«gÀ°.

 

 

 

                                                                                                       ²æäªÁ¸ÀgÁdÄ

Saturday, November 27, 2010

ಆಯ್ದ ಕನ್ನಡ ಕವನಗಳು(ಭಾಗ -3)

ಆಯ್ದ ಕನ್ನಡ ಕವನಗಳು(ಭಾಗ -3)
 
ಕನ್ನಡ ರಾಜ್ಯೋತ್ಸವದ ಹಿನ್ನೆಲೆಯಲ್ಲಿ ನನ್ನಲ್ಲಿರುವ ಕೆಲವು ಆಯ್ದ ಕವನಗಳನ್ನು ನನ್ನ ಬ್ಲಾಗ್ನಲ್ಲಿ ಹಾಕುವ ಪ್ರಯತ್ನ ಮಾಡುತಿದ್ದೇನೆ.
ಇದು ನಾನು ರಾಜ್ಯೋತ್ಸವವನ್ನು ಆಚರಿಸಿಕೊಳ್ಳುತ್ತಿರುವ ವಿಧಾನ.
ಈ ಕವನವನ್ನು 'ಕೆ.ವಿ.ತಿರುಮಲೇಶ್' ಬರೆದಿರುವ ಕವನ ಸಂಕಲನ "ಮುಖಾಮುಖಿ" (1978) ಯಿಂದ ಆಯ್ದು ಕೊಳ್ಳಲಾಗಿದೆ.

ಆಯ್ದ ಕನ್ನಡ ಕವನಗಳು-ಭಾಗ 4

 ಕನ್ನಡ ರಾಜ್ಯೋತ್ಸವದ ಹಿನ್ನೆಲೆಯಲ್ಲಿ ನನ್ನಲ್ಲಿರುವ ಕೆಲವು ಆಯ್ದ ಕವನಗಳನ್ನು ನನ್ನ ಬ್ಲಾಗ್ನಲ್ಲಿ ಹಾಕುವ ಪ್ರಯತ್ನ ಮಾಡುತಿದ್ದೇನೆ.
ಇದು ನಾನು ರಾಜ್ಯೋತ್ಸವವನ್ನು ಆಚರಿಸಿಕೊಳ್ಳುತ್ತಿರುವ ವಿಧಾನ.
ಈ ಕವನವನ್ನು'ಹಾಲೇಶ.ಮ.ಪಾಟೀಲ' ಇವರು ಬರೆದಿರುವ ಕವನ ಸಂಕಲನ  'ಶೂದ್ರ'(1972) ರಿಂದ ಆಯ್ದುಕೊಳ್ಳಲಾಗಿದೆ.

ಆಯ್ದ ಕನ್ನಡ ಕವನಗಳು(ಭಾಗ 3) ಹುಲಿ ಮತ್ತು ದನ"

ಆಯ್ದ ಕನ್ನಡ ಕವನಗಳು(ಭಾಗ ೩)
ಈ ಕವನವನ್ನು ರಾಮಚಂದ್ರದೇವ ಅವರು ರಚಿಸಿದ ಕವನ ಸಂಕಲನ 'ಬೊಮ್ಮನ ಸತಿಗೆ ಮೂಗಿಲ್ಲ'(1978) ರಿಂದ ಆಯ್ದು ಕೊಳ್ಳಲಾಗಿದೆ.

Friday, November 26, 2010

ಸಣ್ಣ ಗುರುಗಳ ದೊಡ್ಡ ಶಿಷ್ಯರು

ಸಣ್ಣ ಗುರುಗಳ ದೊಡ್ಡ ಶಿಷ್ಯರು

ಕನ್ನಡ ರಾಜ್ಯೋತ್ಸವದ ಹಿನ್ನೆಲೆಯಲ್ಲಿ ನನ್ನಲ್ಲಿರುವ ಕೆಲವು ಆಯ್ದ ಲೇಖನಗಳನ್ನು ನನ್ನ ಬ್ಲಾಗ್ನಲ್ಲಿ ಹಾಕುವ ಪ್ರಯತ್ನ ಮಾಡುತಿದ್ದೇನೆ.


ಇದು ನಾನು ರಾಜ್ಯೋತ್ಸವವನ್ನು ಆಚರಿಸಿಕೊಳ್ಳುತ್ತಿರುವ ವಿಧಾನ.

ಈ ಲೇಖನವನ್ನು 'ಬಿ.ವಿ .ವೀರಭದ್ರಪ್ಪ ನವರ  'ವೇದಾಂತ ರೆಜಿಮೆಂಟ್ " ನಿಂದ ಆಯ್ದು ಕೊಳ್ಳಲಾಗಿದೆ.

Wednesday, November 24, 2010

ಕನಕ ಜಯಂತಿಯ ಹಿನ್ನೆಲೆಯಲ್ಲಿ

ಕನಕ ಜಯಂತಿಯನ್ನು ದಿ :24-11-1010 ರಂದು ರಾಜ್ಯಾದ್ಯಂತ ಆಚರಿಸಲಾಯಿತು. ಇದರ ಆಚರಣೆಯ ಸಂಭಂದವಾಗಿ ಹಾಕಲಾದ ಬಿತ್ತಿ ಫಲಕಗಳಲ್ಲಿ ಹಾಗು cut out ಗಳಲ್ಲಿ ಕುರುಬ ಜನಾಂಗದ ಹಿರಿ -ಕಿರಿ ನಾಯಕರುಗಳೇ ರಾರಾಜಿಸುತ್ತಿರುವುದನ್ನು ನಾವೆಲ್ಲರೂ ನೋಡಿದೆವು. ಯಾರಿಗೂ ಆಶ್ಚರ್ಯ ಆಗಲಿಲ್ಲ. ಕಾರಣ ಕನಕದಾಸ ಕೂಡ ಕುರುಬ ಜನಾಂಗದಲ್ಲಿ ಹುಟ್ಟಿದವನು. ಆದರೆ ಇಂದು ಕನಕದಾಸ ಕುರುಬ ಜನಾಗಕ್ಕೆ ಅಪ್ರಸ್ತುತ. ಆತನ ಹಿರಿಮೆ ಏನು? ಒಬ್ಬ ಕವಿ ಎಂದೆ?. ಹಾಡುಗಾರ ಎಂದೆ?.
ಶ್ರೀ ಕನಕದಾಸರು (೧೫೦೯-೧೬೦೯) ೧೫-೧೬ ನೆಯ ಶತಮಾನಗಳಲ್ಲಿ ಜನಪ್ರಿಯವಾದ ಭಕ್ತಿ ಪ೦ಥದ ಮುಖ್ಯ ಹರಿದಾಸರಲ್ಲಿ ಒಬ್ಬರು. ಹಾಗೆಯೇ ಕನ್ನಡ ಭಾಷೆಯ ಪ್ರಸಿದ್ಧ ಕವಿಗಳು.
ಕನಕದಾಸರು ಸುಮಾರು ೨೦೦ ಕೀರ್ತನೆಗಳನ್ನು ರಚಿಸಿ ಹಾಡಿದ್ದಾರೆ. ಅವರ ಐದು ಮುಖ್ಯ ಕಾವ್ಯಕೃತಿಗಳು ಇಂತಿವೆ:
ಮೋಹನತರ೦ಗಿಣಿ (ಕೃಷ್ಣ ಚರಿತೆ)
ನಳಚರಿತ್ರೆ
ರಾಮಧಾನ್ಯಚರಿತೆ
ಹರಿಭಕ್ತಿಸಾರ
ನೃಸಿ೦ಹಸ್ತವ (ಉಪಲಬ್ದವಿಲ್ಲ)
ಇವರಿಗೆ ಮಾದ್ವಾಚಾರ್ಯರ ಭೋಧನೆಯ ಯಾವ ಅಂಶ ಇಷ್ಟವಾಯಿತು ಗೊತ್ತಿಲ್ಲ. ಆದರೆ ಇವರು ಮಧ್ವ ಪರಂಪರೆಯ ಶ್ರೀ ವ್ಯಾಸರಾಯರನ್ನು ಗುರುವಾಗಿ ಸ್ವೀಕರಿಸಿದರೆಂದು ಚರಿತ್ರೆಯಲ್ಲಿ ಹೇಳಲಾಗಿದೆ.
ಕನಕದಾಸರು ಇಂದು ಪ್ರಚಾರಕ್ಕೆ ಬಂದಿರುವುದು ಆತ ಒಬ್ಬ ಸಂತ ಎಂಬ ಕಾರಣಕ್ಕೆ. ಇನ್ನೊಂದು ಅರ್ಥದಲ್ಲಿ ಹೇಳಬೇಕೆಂದರೆ ಆತ ಎಲ್ಲಾ ಕುರುಬರಂತೆ ಇರಲಿಲ್ಲ ಎಂಬ ಕಾರಣಕ್ಕಾಗಿ. ಇಂದು ಅವನ ಜಯಂತಿಯ ಆಚರಣೆಯ cut out ನಲ್ಲಿ ಮಿಂಚುತ್ತಿರುವ ಜನಗಳ್ಯಾರೂ ಅವನಂತೆ "ದಾಸ"ನಾಗಿಲ್ಲ. ಹಾಗಾಗಿ ಒಂದರ್ಥದಲ್ಲಿ ಆತ converted ಕುರುಬ. ಆತನ ಬದುಕನ್ನು ಮತ್ತೆ ಮತ್ತೆ ಹೈ ಲೈಟ್ ಮಾಡುವ ಮೂಲಕ ಎಲ್ಲರೂ ಕನಕದಾಸ ನಂತಾಗಿ ಎಂಬ ಮೆಸೇಜ್ ನೀಡಲು ಸರ್ಕಾರ ಪ್ರಯತ್ನಿಸುತ್ತಿದೆ.
ಕನ್ನಡ ಸಾಹಿತ್ಯಕ್ಕೆ ಒಳ್ಳೆಯ ಕೊಡುಗೆ ನೀಡಿರುವ ಕನಕದಾಸ ಆದರಣೀಯರು ಎಂಬುದು ಸತ್ಯವಾದರೂ ಅವರು ಅನುಕರಣೀಯರಲ್ಲ ಎಂಬುದನ್ನು ನಾವು ಅರಿಯಬೇಕಾಗಿದೆ. ಆದರೆ ಈ ಸಮಾರಂಭದ ಅಧ್ಯಕ್ಷತೆ ವಹಿಸುವ ಪ್ರತಿಯೊಬ್ಬ ಗಣ್ಯರು ಕುರುಬರೆಲ್ಲಾ ಕನಕರನ್ನು ಅನುಕರಿಸುವಂತೆ ಕರೆ ನೀಡುತ್ತಾರೆ.!

"ಕುರುಬರೇ,ನಿಮ್ಮ ಲೈಫ್ ಸ್ಟೈಲ್ ಸರಿ ಇಲ್ಲ.ನಿಮ್ಮ ಆಹಾರ ಪದ್ಧತಿ ಸರಿ ಇಲ್ಲ. ನೀವೆಲ್ಲರೂ "ದಾಸ" ರಾಗಿ ಉದ್ದಾರವಾಗಿ"ಎಂಬರ್ಥದಲ್ಲಿ ಮಾತಾಡುವ ಸರ್ಕಾರದ ಹೆಡ್ ಎಡ್ಡಿ ಯೇ (ಯೆಡಿಯೂರಪ್ಪನೆ) ಕನಕ ಜಯಂತಿಯಂದು ದೆಹಲಿಯ ಪಾರ್ಟಿ ಮುಖ್ಯಸ್ತರ ಮುಂದೆ ಅಧಿಕಾರ ಉಳಿಸಿಕೊಳ್ಳಲು ತಿಪ್ಪರಲಾಗ ಹಾಕುತಿದ್ದ. ಗುರುಗಳ ಗುಲಾಮನಾಗುವ ತನಕ ದೊರೆಯದಲ್ಲ ಮುಕುತಿ ಎಂದು ಯಾರೋ ಹೇಳಿದ್ದಾರೆ,ಅದು ಕನಕರೋ,ಪುರಂದರರೋ,ಇನ್ನ್ಯಾರೋ ನನಗೆ ಗೊತ್ತಿಲ್ಲ.ಆದರೆ ಮಾಧ್ವರ ಮಠಕ್ಕೆ ಅಡ್ಡ ಬೀಳುವುದರಿಂದ ನಿತ್ಯನಾರಕಿಗಳ ಪಂಗಡಕ್ಕೆ ಯಾವ ರೀತಿ ಮುಕ್ತಿ ಸಿಗುತ್ತದೋ ಆ ಕಾಗಿನೆಲೆ ಆದಿಕೇಶವರಾಯನಿಗೇ ಗೊತ್ತು!.

ಇದ್ದುಬದ್ದುದನ್ನೆಲ್ಲ ಬಿಟ್ಟು ಉಡುಪಿ ಮಠಕ್ಕೆ ಅಡ್ಡ ಬಿದ್ದ ಕನಕದಾಸರ ಮಾದರಿಯನ್ನು ಯೆಡಿಯೂರಪ್ಪನೆ ಏಕೆ ಪಾಲಿಸಬಾರದಿತ್ತು?.

ಕನಕದಾಸರು ತನ್ನ ಶ್ರೀಮಂತಿಕೆಯನ್ನು ಬಿಟ್ಟು ದಾಸರಾದರು.ಆದರೆ ಯೆಡಿಯೂರಪ್ಪನವರು ಏನೇ ಆದರೂ ಅಧಿಕಾರ ತ್ಯಾಗಮಾಡುವುದಿಲ್ಲ ಎಂದು ಹೇಳಿದ್ದಾರೆ.ಇರಲಿ ,ಇವರದೊಂಥರಾ  ಸೂ ಸೂ ....ಸೂ..ಸೂಯೋಧನನ ಛಲ!. very good.

ಹೀಗಂದಮಾತ್ರಕ್ಕೆ ಅವರು ಯಾವುದೇ ತ್ಯಾಗ ಮಾಡಿಲ್ಲ ಎಂದರ್ಥವಲ್ಲ. ಆತ ಬೇಕಾದಷ್ಟು ತ್ಯಾಗ ಮಾಡಿದ್ದಾರೆ. ಅಧಿಕಾರ ಕಿತ್ತುಕೊಳ್ಳಬೇಡಿ.ಬೇಕಾದರೆ ನನ್ನ ಮಕ್ಕಳನ್ನು,ಬಂಧು ಬಳಗವನ್ನು ದೂರ ಇಡುತ್ತೇನೆ ಎಂದು ಹೇಳಿದ್ದಾರೆ.ಇದೂ ಒಂದು ರೀತಿಯ ತ್ಯಾಗವೇ ತಾನೇ?. ಒಂದು ರೀತಿಯಲ್ಲಿ ಎಡ್ಡಿ ಕನಕದಾಸರನ್ತೆಯೇ ಎಂದಾಯಿತು. ಅಷ್ಟು ಅಧಿಕಾರ ಇದ್ದರೂ,ಲಿನ್ಗಾಯಿತರಾದರೂ ಎಡ್ಡಿ ಉಡುಪಿ ಮಠದ ಗುಲಾಮರಂತೆ ವರ್ತಿಸುತಿದ್ದಾರೆ. ಕನಕದಾಸರು ಕೂಡ ಅಷ್ಟೆಲ್ಲ ಜ್ಞಾನ ಸಂಪಾದಿಸಿದ್ದರೂ, ಸಾಕ್ಷಾತ್ಕಾರ(?) ಪಡೆದಿದ್ದರೂ ಉಡುಪಿ ಮಠಕ್ಕೆ ನಿಷ್ಠೆಯಿಂದ ನಡೆದು ಕೊಳ್ಳುತಿದ್ದರು. ಹುಟ್ಟಿನಿಂದ ಬ್ರಾಹ್ಮಣರಾಗಿರದ ಕನಕರು ನಿತ್ಯನಾರಕಿಗಳ ಕೆಟಗರಿಗೆ ಸೇರುತ್ತಾರಾ ಎಂಬುದು ಚರ್ಚಾರ್ಹ. ಒಟ್ಟಾರೆ ಇಬರಿಬ್ಬರ ನಡುವೆ ಇಷ್ಟು ವ್ಯತ್ಯಾಸ ಇದ್ದರೂ ಸಾಮ್ಯತೆಯ ಕೊ0ಡಿಯೊಂದು ಗೋಚರವಾಗುತ್ತದೆ.ಶ್ರೀ ರಾಮಕೃಷ್ಣರು ಹೇಳುವಂತೆ ಎಲ್ಲರೂ ಹುಚ್ಚರೆ. ಕೆಲವರಿಗೆ ಅಧಿಕಾರದ ಹುಚ್ಚು.ಕೆಲವರಿಗೆ ಹೆಣ್ಣಿನ ಹುಚ್ಚು.ಕೆಲವರಿಗೆ ಮಣ್ಣಿನ ಹುಚ್ಚು,ಕೆಲವರಿಗೆ ದೇವರ ಹುಚ್ಚು.". ಒಟ್ಟಾರೆ ಜಗತ್ತು ಹುಚ್ಚರ ಸಂತೆ. ಕನಕದಾಸರ ಹುಚ್ಚು ಸ್ವಲ್ಪ ಕಡಿಮೆ ಅಪಾಯಕಾರಿ.ಆ ಕಾರಣಕ್ಕಾಗಿಯೇ  ಕನಕ ವಂದ್ಯಾರ್ಹ.ಎಡ್ಡಿ ನಿಂದ್ಯಾರ್ಹ!.

Friday, November 19, 2010

'ಮಾಧ್ಯಮ'ಎಂಬ 'ಮಧ್ಯ'

ಇಂದು 'ಮಾದ್ಯಮ' ತನ್ನ ಉಚ್ಚ್ರಾಯ ಸ್ತಿತಿಯಲ್ಲಿದೆ. ತನಗೆ ಬೇಕೆನಿಸಿದನ್ನು ಬೇಕುಬೇಕಾದಂತೆ ನೀಡಲು ಸಶಕ್ತವಾಗಿದೆ.ಆದರೆ ಮಾಧ್ಯಮಗಳಿಂದ ಸಾಧ್ಯ ಎಂದು ನಾವು ಆನಾದಿಕಾಲದಿಂದಲೂ ಹೊಂದಿದ್ದ ನಂಬಿಕೆಯನ್ನು ನಾವು ಬದಲಿಸಿಕೊಳ್ಳಬೇಕಾಗಿದೆ. ಮಾಧ್ಯಮಗಳು ಸಮಾಜವನ್ನೇ ಬದಲಿಸಬಹುದು ಎಂಬ ಪರಿಕಲ್ಪನೆ ಸುಳ್ಳಾಗಿದೆ. ಬದಲಿಸಬಹುದೇನೋ ,ಆದರೆ ನಕಾರಾತ್ಮಕವಾಗಿ. ಸಕಾರತ್ಮಕವಾಗಿ ಬದಲಿಸುವ ಪ್ರಯತ್ನ ಬೇಕಾದಷ್ಟು ನಡೆದಿದೆ.ಆದರೆ ಸಕಾರಾತ್ಮಕ ತರಂಗಗಳನ್ನು ಸ್ವೀಕರಿಸಲು ನಾವು ಸಿದ್ದರಿಲ್ಲ!. ಆದುದರಿಂದ ಕಲೆ,ಸಂಸ್ಕೃತಿ, ವಿಜ್ಞಾನಕ್ಕೆ ಮೀಸಲಿಟ್ಟ ಚಾನಲ್ ಗಳು ಇಂದು ಟಿ.ಅರ್.ಪಿ.ರೇಟಿಂಗ್ ನಲ್ಲಿ ಮನೋರಂಜನೆಗೆ ಮೀಸಲಾದ ಚಾನಲ್ ಗಳಿಗಿಂತ ಹಿಂದಿದೆ. ಆ ಚಾನಲ್ ಗಳು ತಾವೂ ಸಹಾ ಶುದ್ಧ ಮನೋರಂಜನೆಯನ್ನು ನೀಡಲು,ಮೌಲ್ಯಗಳನ್ನು ಸಾರಲು ಶ್ರಮಿಸುತ್ತಿರುವುದಾಗಿ ಹೇಳಿಕೊಳ್ಳುತ್ತವೆ. ಅವುಗಳ ಮೌಲ್ಯಗಳು ಯಾವುದು?, ಬೆಳಗಾದ ಕೂಡಲೇ ದೇವರ ಹೆಸರು ಹಿಡಿದು ಅರಚುವುದು,ನಂತರ ಕೆಲವು ಪುಣ್ಯ ಕ್ಷೇತ್ರಗಳ ಪ್ರಚಾರ,ನಂತರ ಜ್ಯೋತಿಷಿಗಳಿಂದ ದಿನದ ಬವಿಷ್ಯ ಮತ್ತು ಹಿತವಚನ!.

ಆ ನಂತರ ಅಡಿಗೆ,ಹೊಸರುಚಿ,ಆಮೇಲೆ ಮಧ್ಯಾನದ ನಂತರ ಅತ್ತೆ ,ಸೊಸೆ,ಗಂಡ ಹೆಂಡ್ತಿಯರ ಜಗಳ ಪಿತೂರಿ ಇರುವ ಸಿರಿಯಲ್ ಸರಣಿ. ಇವೆಲ್ಲಾ ನಮ್ಮ ಮೌಲ್ಯಗಳನ್ನು ಪ್ರತಿನಿಧಿಸುತ್ತವೆ ಎಂಬುದು ಕೆಲವು ಶ್ರದ್ಧಾವಂತ ಪ್ರೇಕ್ಷಕರ ವಾದ.

ಹೇಗೆ?,

 ಹೇಗೆಂದರೆ ಇಲ್ಲಿ  ನಮ್ಮ ಸಮಾಜ ಒಪ್ಪುವಂಥಹ ಸಂಬಂಧಗಳು ಮತ್ತು ಡ್ರೆಸ್ ಕೋಡ್ ಗಳಿವೆ. ಗಂಡ,ಹೆಂಡ್ತಿ,ಮಾವ,ಅತ್ತೆ,ಅಪ್ಪ,ಅಮ್ಮ,ಅಣ್ಣ,ತಮ್ಮ ಇರುವ ಈ ಚೌಕಟ್ಟಿನಲ್ಲಿ ಜಗಳ,ಹೊಡೆದಾಟ,ಹಿಂಸೆ,ವಿಷಪ್ರಾಶನ,ಮೋಸ,ವಂಚನೆ,ಕೊಲೆ ಯಾವುದು ನಡೆದರೂ ಅದು ಸರ್ವ ಸಮ್ಮತ. ಎಲ್ಲಾ ಆದ ನಂತರ ಧಾರಾವಾಹಿಯಲ್ಲಿ ಅಳಿದುಳಿದ ಮಂದಿ ಪರಸ್ಪರ ಎಲ್ಲವನ್ನೂ ಕ್ಷಮಿಸಿ ಎಲ್ಲರೂ ಒಂದಾಗುವುದು ಕಥೆಯ ತಿರುಳು. ಈ ಸಂಬಂಧಗಳ ಚೌಕಟ್ಟಿನ ಹೊರಗೆ ದಾನ,ಧರ್ಮ ನಡೆದರೂ ಭೂಮಿಯ ಆಪೂರ್ವ ವಸ್ತುಗಳನ್ನು ತೋರಿಸಿದರೂ ಯಾವುದೇ ಉಪಯುಕ್ತ ವಿಷಯದ ಬಗ್ಗೆ ಹೇಳುತಿದ್ದರೋ ನಮಗೆ ಅದು ಹಾದರದಂತೆ ಕಾಣಿಸುತ್ತದೆ!. ನಮ್ಮದೆಂದು ನಮಗನ್ನಿಸದ ಯಾವುದೇ ವಿಷಯವನ್ನು ಖ೦ಡಿಸುವುದರಲ್ಲೂ ನಾವು ಹಿಂದೆಬೀಳುವುದಿಲ್ಲ.ಆದರೆ ಯಾರಾದರೂ ನಮಗೆ ಒದ್ದು ಇದು ನಿಮ್ಮದೇ ಎಂದು ನಮಗೆ ಹೇಳಿದರೆ ನಾವದನ್ನು ಸ್ವೀಕರಿಸುತ್ತೇವೆ. ಉದಾಹರಣೆಗೆ ವೇಶ ಭೂಷಣಗಳು. ನಮ್ಮ ಸಾಂಸ್ಕೃತಿಕ ಉಡುಗೆ ಅಂತಾ ಇಂದು ಶಾಲೆಗೆ,ಆಫೀಸಿಗೆ ಯಾರಾದ್ರೂ ಪಂಚೆ ಉಟ್ಕೊಂಡು,ಮೈಸೂರು ಪೇಟ ಹಾಕ್ಕೊಂಡು ಬರ್ತಾರಾ? ಆಟವ ಶ್ರೀ ರಾಮಚಂದ್ರನ ಹೇರ್ ಸ್ಟೈಲ್ ಅಂತಾ ಯಾರಾದರೂ ಜಟಾಜೂಟಧಾರಿಯಾಗಿ ಓಡಾಡಿದರೆ (ಬುದ್ದಿವಾದ)ಸುಮ್ಮನೆ ಅವನಷ್ಟಕ್ಕೆ ಅವನನ್ನು ಬಿಡ್ತಾರ?,ವಾಡಿಕೆಗಿನ್ತಾ ಒಂದಿಂಚು ಕೂದಲು ಬಿಟ್ಟರೂ ಅದನ್ನು ಆಕ್ಷೆಪಿಸುವಂತಹ ಕಂತ್ರಿಜನಗಳು ನಮ್ಮ ಸಮಾಜದಲ್ಲಿ ಜಾಸ್ತಿ. ಬ್ರಿಟಿಷರು ಒದ್ದದಕ್ಕೆ ನಾವು ಕ್ರಾಪ್ ಕಟ್ ಮಾಡಿಸುತ್ತೇವೆ. ಪ್ರಚಲಿತ ಫ್ಯಾಶನ್ ಗಳು ಭಾರತೀಯ ಸಮಾಜದ ಮೇಲೆ ಹಿಂದಿಂದಲೂ ಎಷ್ಟು ಪ್ರಭಾವ ಬೀರುತ್ತಾ ಬಂದಿದೆ ಎಂದರೆ ಭಾರತೀಯ ಸಂಸ್ಕೃತಿಯ ಪುನರುತ್ಥಾನಕ್ಕೆ ಟೊಂಕಕಟ್ಟಿದ್ದ ಶಿವಾಜಿ ಮಹಾರಾಜ ಕೂಡ ಮುಘಲ್ ರಂತೆ ಡ್ರೆಸ್ ಮಾಡಿಕೊಳ್ಳುತಿದ್ದ.

 

 ಹಲವು ಮನೆಗಳಲ್ಲಿ ರಾತ್ರಿಯಾದೊಡನೆ ಅಪರಾಧಕ್ಕೆ ಸಂಭದಿಸಿದ ಕ್ರೈ೦ ನ್ಯೂಸ್  ಮುಂತಾದವನ್ನು ನೋಡುವುದು ನಿತ್ಯಕರ್ಮವಾಗಿದೆ. ಇವರ ರಾತ್ರಿಯ ಎಚ್ಚರದ ಕ್ಷಣಗಳು ಹಿಂಸೆ,ಚೀತ್ಕಾರ,ಆಕ್ರಂದನಗಳಿಂದ ಕೂಡಿರುತ್ತವೆ.(ಇದು ನನ್ನ ಅಭಿಪ್ರಾಯವಷ್ಟೇ).ಇದರಿಂದಾಗುವ ಇತರ ಉಪಯೋಗಗಳನ್ನು ದಯವಿಟ್ಟು ಕಮೆಂಟ್ ಬಾಕ್ಸ್ ನಲ್ಲಿ ಬರೆಯಿರಿ.

ದಿ: 16-11-2010 &17-11-10 ರ TV9 ಯಾವುದೋ ಪಾರ್ಕಿನಲ್ಲಿ ವಿಹಾರಕ್ಕೆ ಬರುವ ಜೋಡಿಗಳನ್ನು ಮಹಿಳೆಯರನ್ನು ಯಾವ ರೀತಿ ಕೆಲವು ಗುಂಪುಗಳು ಅತ್ಯಾಚಾರ ಮಾಡುತ್ತವೆ ಎಂಬುದನ್ನು ತೋರಿಸಿದ್ದರು.  ಇಂತಹವು ದಿನವೂ ಟಿ.ವಿ.ಯಲ್ಲಿ ಪ್ರಕಟವಾಗುತ್ತವೆ. ಆದರೆ ಅವುಗಳ ಬಗ್ಗೆ ಪ್ರತಿಭಟಿಸುವುದಿರಲಿ,ಆಕ್ರೋಶ ವ್ಯಕ್ತಪಡಿಸುವ ಸಂವೇದನಾಶೀಲತೆಯನ್ನು ಕಳೆದುಕೊಂಡಿರುವುದು ಒಂದು ರಾಷ್ಟ್ರೀಯ  ದುರಂತ . ನಮ್ಮ ಮೌಲ್ಯ ಸಂಸ್ಕೃತಿಗಳು ನಮ್ಮನ್ನು ಯಾವ ಮಟ್ಟದಲ್ಲಿ ಇರಿಸಿದೆ ಅಂದರೆ ಅವಿವಾಹಿತ ಜೋಡಿಗಳು ಒಂದು ನಿರ್ಜನ ಪ್ರದೇಶದಲ್ಲಿ ಸರಸ ಸಲ್ಲಾಪದಲ್ಲಿ ತೊಡಗುವುದು ನಮಗೆ ಎಷ್ಟು ದೊಡ್ಡ ಅಪರಾಧವಾಗಿ ಕಾಣುತ್ತದೆ ಎಂದರೆ ಅಲ್ಲಿ ಅವರನ್ನು ಹಿಡಿದು ಅತ್ಯಾಚಾರಕ್ಕೆ ಪ್ರಯತ್ನಿಸುವವರೇ ನಮ್ಮ ಈ ಶ್ರೇಷ್ಠ ಸಂಸ್ಕೃತಿ,ಮೌಲ್ಯಗಳ ಪ್ರತಿಪಾದಕರಂತೆ ಕಾಣುತ್ತಾರೆ!. ಹೀಗೆ ಕೆಲವೊಮ್ಮೆ ಶೋಷಣೆಯ ಮೂಲಕ ಮೊಬೈಲ್ನಿಂದ ತೆಗೆಯಲಾಗುವ ಚಿತ್ರಗಳು ಎಂ.ಎಂ.ಎಸ್.ಮೂಲಕ ಹರಿದಾಡುತಿದ್ದರೆ ಅವನ್ನ ನೋಡಿ ಆನಂದಿಸುವ ಒಂದು ವರ್ಗವನ್ನು ನಮ್ಮ ಸುತ್ತ ಮುತ್ತಲೇ ನಾವು ನೋಡಿರುತ್ತೇವೆ. ಈ ವರ್ಗಕ್ಕೆ ಸೇರಿದ ಒಬ್ಬ "ಮಹಾತ್ಮ"ನಿಗೆ ವಿದೇಶಗಳಿಂದ ಬರುವ ಬ್ಲೂ ಫಿಲಂ ಗಳು ಇಷ್ಟವಾಗುವುದಿಲ್ಲವಂತೆ.  ಹೀಗೆ ಕದ್ದು,ಮುಚ್ಚಿ ತೆಗೆಯುವ ತುಣುಕುಗಳೇ ಇಷ್ಟವಂತೆ,ಅಂತಹವು ಸಿಗುತಿಲ್ಲಾ ಅಂತಾ ಅವನಿಗೆ ದುಕ್ಖವಂತೆ!.

ಇದರಲ್ಲಿರುವ ವ್ಯತ್ಯಾಸವನ್ನು ಸೂಕ್ಷ್ಮವಾಗಿ ಗಮನಿಸಿ. ಪರಸ್ಪರ ಸಮ್ಮತಿಯಿಂದ ವೃತ್ತಿಪರರಾದ ಪ್ರಾಪ್ತವಯಸ್ಕರು ಸಾರ್ವಜನಿಕ ಮನೋರಂಜನೆಗಾಗಿ ನಡೆಸುವ ಒಂದು ಕ್ರಿಯೆ ಒಂದೆಡೆ.

ಹಿಂಸೆಯ ಮೂಲಕ ಬಲವಂತವಾಗಿ ಅವರ ಒಪ್ಪಿಗೆ ಇಲ್ಲದೆ ತೆಗೆದ ದೃಶ್ಯಗಳು ಒಂದೆಡೆ.

ಇವೆರಡನ್ನೂ ಎದುರು ಇಟ್ಟರೆ ಯಾವುದನ್ನುಆಯ್ಕೆ ಮಾಡಿಕೊಳ್ಳುತ್ತೀರಿ ಎಂಬುದು ನಿಮ್ಮ  ಸಂವೆದನಾಶೀಲತೆಯ ಅಳತೆಗೋಲಾಗುತ್ತದೆ. "ನಾನು ಎರಡನ್ನೂ ನೋಡುವುದಿಲ್ಲ, ಶಾಂತಂ,ಪಾಪಂ" ಎನ್ನಬಹುದು ನೀವು. ಆದರೆ ಇದು ನಿಮ್ಮೊಳಗಿನ ಹಸಿವಿಗೊಂದು ಸವಾಲು. ನಾವು ಯಾವುದೇ ವಸ್ತುವನ್ನು ಆಯ್ಕೆ ಮಾಡಿಕೊಳ್ಳುವಾಗ ಸಾಧಾರಣವಾಗಿ ಅವು ನಮ್ಮ ಅಗತ್ಯಗಳನ್ನು ಪೂರೈಸುತ್ತವೆಯೇ? ಎಂಬುದನ್ನು ಗಮನಿಸುತ್ತೇವೆ. ಬೌತಿಕ ವಸ್ತುಗಳ ಅಗತ್ಯಗಳನ್ನು ತುಲನಾತ್ಮಕವಾಗಿ ವಿಶ್ಲೇಷಿಸುವುದು ತುಂಬಾ ಸುಲಭ.ಆದರೆ ಮಾನಸಿಕ ಅಗತ್ಯಗಳ ವಿಶ್ಲೇಷಣೆ ಕೊಂಚ ಕಷ್ಟ. ಆದರೂ ಪ್ರಯತ್ನಿಸೋಣ.ಅಂತಹ ಅಗತ್ಯಗಳು ನಮಗಿರುವುದಕ್ಕೆ ಕಾರಣವೇನು ಎಂದು ನಾವು ಆಲೋಚಿಸಬೇಕಾಗುತ್ತದೆ.ಇದೊಂದು ಸಂಕೀರ್ಣ ವಿಷಯ.ಇದರ ಬಗ್ಗೆ ನಾವು ಮಾಡುವ ವಿಶ್ಲೇಷಣೆಗಳು ವ್ಯಕ್ತಿಯಿಂದ ವ್ಯಕ್ತಿಗೆ ವಿಬಿನ್ನವಾಗಿರುತ್ತದೆ. ನಮ್ಮ ಮನಸ್ಸಿನಲ್ಲಿ ಬೇರು ಬಿಟ್ಟಿರುವ ಹಲವು ಅಂಶಗಳು ನಮ್ಮ ಮನಸ್ತಿತಿಯನ್ನು ನಿರ್ಧರಿಸುತ್ತವೆ. ಈ ಅಂಶಗಳು ಯಾವುವು ಎಂದು ನೀವು ಕಂಡು ಹಿಡಿದರೆ ಅವನ್ನು ನನಗೆ ಹೇಳಿ. ಕಮೆಂಟ್ ಕಾಲಂ ನಲ್ಲಿ ನಿಮಗೆ ಸದಾ ಸ್ವಾಗತವಿದೆ.

ಮತ್ತೆ ಮಾಧ್ಯಮಗಳ ವಿಷಯಕ್ಕೆ ಬರೋಣ. TV 9 ನಲ್ಲಿ ಪ್ರತಿದಿನವೂ ಒಂದು ದೃಶ ತುಣುಕು ಪ್ರಸಾರವಾಗುತ್ತೆ. ಒಬ್ಬ ತಪ್ಪಿತಸ್ತನನ್ನು ಸಾರ್ವಜನಿಕರು ಹಿಡಿದು ಥಳಿಸುತ್ತಿರುವ ದೃಶ್ಯ. ಉದಾಹರಣೆಗೆ ಒಬ್ಬನನ್ನು ಕಳ್ಳತನದ ಆರೋಪದ ಮೇಲೆ ಹಳ್ಳಿಗರು ಕಟ್ಟಿಹಾಕಿ ವಿವಿಧ ರೀತಿಯಲ್ಲಿ ಥಳಿಸುವ,ಹಿಂಸಿಸುವ  ದೃಶ್ಯ. ವ್ಯಭಿಚಾರದ ಆರೋಪದ ಮೇಲೆ ಒಬ್ಬ ಮಹಿಳೆಯನ್ನು ಒಂದು ಗುಂಪು ಥಳಿಸುವ ದೃಶ್ಯ. ಹೀಗೆ ಹಿಂಸೆಯ ನಿರಂತರ ವೈಭವೀಕರಣದಿಂದ ನೋಡುಗರ ಮನಸ್ತಿತಿಯ ಮೇಲೆ ಏನು ಪರಿಣಾಮವಾಗಬಹುದು.

ತಪ್ಪಿತಸ್ತರಿಗೆ ತಕ್ಕ ಶಾಸ್ತಿಯಾಗುತ್ತಿದೆ ಎಂದು ಕೆಲವರು ಹೇಳಬಹುದು. ಆದರೆ ಈ ತಪ್ಪು ಎನ್ನುವುದರ ಪರಿಭಾಷೆ ಏನು?,ಇದನ್ನು ನಿರ್ಧರಿಸುವ ಮಾನದಂಡಗಳೇನು?. ಎಷ್ಟೋ ಸಾರಿ ತಪ್ಪು ಗ್ರಹಿಕೆಯಿಂದ ಕೆಲವರನ್ನು ಥಳಿಸಿದ ಉದಾಹರಣೆಗಳಿವೆ. ಎಷ್ಟೋ ಕಡೆ ಊರಿನ ಪ್ರಮುಖರೆಲ್ಲಾ ಪಂಚಾಯತ್ ಸೇರಿ ಓಡಿ ಹೋದ ಪ್ರೇಮಿಗಳನ್ನು ಹೊಡೆದು ಸಾಯಿಸಿದ್ದಾರೆ. ಹೆಂಗಸರನ್ನು ಮಾಟಗಾತಿಯರೆಂಬ ಆರೋಪದ ಮೇಲೆ  ಹೊಡೆದು ಸಾಯಿಸಲಾಗಿದೆ. ಬೆತ್ತಲೆ ಮೆರವಣಿಗೆ ಮಾಡಲಾಗಿದೆ. ಹರಿಜನರಿಗೆ ಬಹಿಷ್ಕಾರ ಹಾಕಿದ್ದಾರೆ.ವೇದ ಕೇಳಿದ ಕಿವಿಗೆ  ಸೀಸ ಸುರಿದಿದ್ದಾರೆ. ಹೀಗಿರುವಾಗ ಇಂತಹಾ ಹಿಂಡು ಪ್ರವೃತ್ತಿಯನ್ನು ಬೆಳೆಸುವುದರಿಂದ ನಮಗೆ ನಿಮಗೆ ಏನು ಲಾಭ?.


Thursday, November 18, 2010

ಆಯ್ದ ಕನ್ನಡ ಕವನಗಳು -ಭಾಗ-1

ಕನ್ನಡ ರಾಜ್ಯೋತ್ಸವದ ಹಿನ್ನೆಲೆಯಲ್ಲಿ ನನ್ನಲ್ಲಿರುವ ಕೆಲವು ಆಯ್ದ ಕವನಗಳನ್ನು ನನ್ನ ಬ್ಲಾಗ್ನಲ್ಲಿ ಹಾಕುವ ಪ್ರಯತ್ನ ಮಾಡುತಿದ್ದೇನೆ.
ಇದು ನಾನು ರಾಜ್ಯೋತ್ಸವವನ್ನು ಆಚರಿಸಿಕೊಳ್ಳುತ್ತಿರುವ ವಿಧಾನ.
ಇದು ಶ್ರೀ ಶಂಕರ ಮೊಕಾಶಿ ಪುಣೇಕರ ಅವರ ಪದ್ಯ. ಇದು 1970 ರಲ್ಲಿ ಪ್ರಕಟವಾದ ಮಾಯಿಯ ಮೂರು ಮುಖಗಳು ಕವನ ಸಂಕಲನದಿಂದ ಆಯ್ದು ಕೊಳ್ಳಲಾಗಿದೆ.

Sunday, November 14, 2010

ಕುಂಬಾರ ಮತ್ತು ಕಾಲಚಕ್ರ

ಯಾರು ಈ ಕುಂಬಾರ ?,



ಮಡಕೆ ಮಾಡುವವನೇ?


ಮಡಕೆ ಮಾಡುವುದನ್ನು ಬಿಟ್ಟು ಬೇರೇನನ್ನೂ ಮಾಡಲು ಬರದವನೇ?


ಮಡಕೆ ಮಾಡಲು ಬರದೆ ಬರಿದೇ ಕುಂಬಾರ ಎಂದು ಕರೆದುಕೊಳ್ಳುವವನೆ?


ಅಥವಾ ಮಣ್ಣಿನ ಕೆಲಸವನ್ನು ಬಿಟ್ಟು ಬೇರೇನನ್ನು ಮಾಡಬೇಡ ಎಂದು ನಿರ್ಭಂದಿಸಲ್ಪಟ್ಟವನೇ?


ಯಾರು ಈ ಕುಂಬಾರ?


ರೈತನಿಗಿಂತ ಹೆಚ್ಚಾಗಿ ಮಣ್ಣಲ್ಲಿ ಮಣ್ಣಾಗಿ ಬೆರೆವಾತ ಕುಂಬಾರ.ಇಂದಿನ ಪರಿಸ್ತಿತಿ ಆತನನ್ನು ಮಣ್ಣಿಂದ ದೂರ ಮಾಡಿದೆ.ರೈತನಿಗೆ ಮಣ್ಣೊಂದಿಗೆ ಬೆರೆತಷ್ಟೂ ಹೊನ್ನು. ಬೆಳೆದರೂ ಹೊನ್ನು.ಜಮೀನು ಮಾರಿದರೂ ಹೊನ್ನು.


ಕುಂಬಾರನಿಗೆ? ಮಣ್ಣನ್ನು ಮುಟ್ಟಿದಷ್ಟೂ ಮಣ್ಣು....ಬಾಯಿಗೆ!


ಕುಂಬಾರ ಮಣ್ಣಿನ ಮಗ ಎಂದು ಯಾವ ರಾಜಕಾರಣಿಯೂ ಹೇಳುವುದಿಲ್ಲ. ಏಕೆಂದರೆ ಕುಂಬಾರ ಮಣ್ಣಿನ ಮಲಮಗ. ಇಂದಿವನು ಭೂಮಿಗೂ ಬೇಡವಾದವನು,ಭೂಪಾಲನಿಗೂ ಬೇಡವಾದವನು.






ಹಿಂದೆ ಮಡಕೆಗೆ ಬೇಡಿಕೆ ಇತ್ತು.ಪೂರೈಸಿ ಪೂರೈಸಿ ಕುಂಬಾರನ ಕೈ ದಣಿಯಿತು.ಧನ ಸೇರಿತು. ಕುಂಭಾರರ ಮಧ್ಯ ಶೆಟ್ಟಿಗಳು ಉದ್ಹ್ಬವಿಸಿದರು. ಶೂದ್ರ ವೈಶ್ಯನಾದ. ಕಾಲಚಕ್ರ ತಿರುಗುತಿತ್ತು. ನಾನಿಲ್ಲದಿದ್ದರೆ ಇವರ್ಯಾರಿಗೋ ಶಿಸ್ತಾಗಿ ಉಣಲು ಸಾಧ್ಯವಿಲ್ಲ ,ನಾನೇ ಜಗದೊಡೆಯ ಎಂದು ತನ್ನ ಬೆನ್ನು ತಾನೇ ತಟ್ಟಿಕೊಂಡ. ನಾನೇ ಎಲ್ಲದರ ಸೃಷ್ಟಿಕರ್ತ ಎಂದು ಬೀಗಿದ.ಜಗದೊಡೆಯ ಎಂದರೆ ಆ ಜಗದ ರಾಜ. ಪುರಾತನ ದೊರೆ ಶಾಲಿವಾಹನ!.


ಕಾಲಚಕ್ರ ತಿರುಗುತಿತ್ತು. ಚಕ್ರದ ಗಾಲಿಗಳು ಬೇರೆಬೇರೆ ರೀತಿಯಲ್ಲಿ ಉಪಯೋಗಕ್ಕೆ ಬಂತು. ಭಂಡಿಗಳು ಬಂದವು. ಆ ಭಂಡಿಗಳಲ್ಲಿ ಪಿಂಗಾಣಿ ಪಾತ್ರೆಗಳು ಬಂದವು. ಅಂದುಸಹ ಅವು ಬಂದದ್ದು ಚೀನಾದಿಂದ. ಇಂದಿನಂತೆಯೇ!.


ಚಕ್ರ ತಿರುಗುತಿತ್ತು. ಜೊತೆಗೆ ತಲೆ ಕೂಡ.....


ಶಾಲಿವಾಹನರ ಕಾಲ ಮುಗಿದೇ ಹೋಯಿತು. ಕದಂಬರು...ಚಾಲುಕ್ಯರು,ರಾಷ್ಟ್ರಕೂಟ ಹೊಯ್ಸಳರು.....,


ಸರ್ವಜ್ಞ ಒಂದಿಷ್ಟು ಸದ್ದು ಮಾಡಿದ್ದು ಬಿಟ್ಟರೆ ಕುಂಬಾರರ ಹಟ್ಟಿಯಲ್ಲಿ ಕರಾಳ ಮೌನ.


ಕಮಕ್,ಕಿಮಕ್ ಎನ್ನಲಿಲ್ಲ ಕುಂಬಾರ ಶೆಟ್ಟಿ!


ಪಿಂಗಾಣಿ ಆಯಿತು,ಕಂಚಿನ,ಹಿತ್ತಾಳೆಯ...ತಾಮ್ರದ....ಸ್ಟೀಲಿನ ಪಾತ್ರೆಗಳು ಓಡಾಡತೊಡಗಿದವು .ಶೆಟ್ಟಿಯ ಮನೆಗೆ ಧನದ ಹರಿವು ಕಮ್ಮಿಯಾಯಿತು.


ಕಾಲನ ಈನಿರಂತರ ಪ್ರವಾಹದಲ್ಲಿ ತನ್ನ ಚಕ್ರದೊಡನೆ ಯಾಂತ್ರಿಕವಾಗಿ ಸುತ್ತುತಿದ್ದ ಕುಂಬಾರನಿಗೆ ಹಣ ಬಂದದ್ದು ಗೊತ್ತಾಗಲಿಲ್ಲ. ಹೋದದ್ದೂ ಗೊತ್ತಾಗಲಿಲ್ಲ.ನಿಂತದ್ದೂ ಗೊತ್ತಾಗಲಿಲ್ಲ.


ಶೂದ್ರ ವೈಶ್ಯನಾದ. ಮತ್ತೆ ಶೂದ್ರನಾದ. ಬ್ರಿಟಿಷರು ಬರದಿದ್ದರೆ ಅಸ್ಪ್ರಶ್ಯನೇ ಆಗಿಬಿಡುತಿದ್ದನೇನೋ!


ಆತನ ಚಕ್ರ ತಿರುಗುತ್ತಲೇ ಇತ್ತು. ನಿಧಾನವಾಗಿ. .ಈಗ ಅದರ ಮೇಲೆ ಮಡಕೆ ಇಲ್ಲ. ಬರೀ ಮಣ್ಣು. ಚಕ್ರದಿಂದ ಆತ ವಿದ್ಯುತ್ ತಯಾರಿಸಬಹುದಿತ್ತೇನೋ,ಆದರೆ ಅಲ್ಲಿ ಈಗ ಏಳುತ್ತಿರುವುದು ಮಡಿಕೆಯೂ ಅಲ್ಲ.ವಿದ್ಯತ್ ಸಹಾ ಅಲ್ಲ. ಗುಡಿ ಗೋಪುರಗಳು. ತಿರುಗುತ್ತಿರುವ ನೀರು ಸುಳಿಯನ್ನು ಸೃಷ್ಟಿಸುತ್ತದೆ. ಕುಂಬಾರನ ಮುಂದೆ ತಿರುಗುತಿರುವ ಚಕ್ರ ಕೂಡ ಸುಳಿಯನ್ನು ಸೃಷ್ಟಿಸುತ್ತಿರುವಂತೆ ಬಾಸವಾಗುತ್ತಿದೆ. ಈ ಸುಳಿ...ಮೌಡ್ಯದ ಸುಳಿ!.


ಕುಂಬಾರರನ್ನುಉದ್ದರಿಸಲು ,ಸಮುದಾಯದ ನಾಯಕತ್ವ ವಹಿಸಲು ಇತ್ತೀಚೆಗೆ ಕೆಲವರು ಧರೆಗಿಳಿದಿದ್ದಾರೆ.


ಸಮೂದಾಯವನ್ನು ಕಾಡುತ್ತಿರುವ ಕಾಯಿಲೆಗಳಿಗೆ ಚಿಕಿತ್ಸೆ ನೀಡಿ ಸಮುದಾಯವನ್ನು ಮುನ್ನಡೆಸುವುದೇ ಇವರ ಗುರಿಯಂತೆ!. ಕುಂಬಾರರನ್ನು ಸಾಲಾಗಿ ಕೂಡಿಸಿ ಮೌಡ್ಯದ ಮಣ್ಣು ಮೆತ್ತುವ ಪ್ರಾಕೃತಿಕ ಚಿಕಿತ್ಸಾ ಸಮಾವೇಶಗಳು ಜನಾಂಗವನ್ನು ಆರೋಗ್ಯವಂತವನ್ನಾಗಿಸುತ್ತದೆಯೋ? ಅಥವಾ ಪ್ರಗತಿಯತ್ತ ಕೊಂಡೊಯ್ಯುತ್ತದೆಯೂ?


ಕುಂಬಾರನ ಹಸಿಮಣ್ಣಿನ ಮಡಕೆ ಮುಂದೆಂದೂ ಮುರಿಯದಷ್ಟು ಗಟ್ಟಿಗೊಳಿಸುತ್ತದೆಯೋ ಈ ಕಾವಿಯ ಕಾರ್ಮೋಡ?,ಕಾದು ನೋಡೋಣವೇ ಅಥವಾ ನಾವೂ ಈ ಮಣ್ಣಿನ ಉತ್ಸವಕ್ಕೆ ಜಿಗಿಯೋಣವೇ?.

Friday, October 29, 2010

ಸೂಫಿವಾದ

ಈ ಸೂಫಿ ಸಂತರ ಬಗ್ಗೆ ಪುಟಗಟ್ಟಲೆ ಗುಣಗಾನ ಮಾಡಲಾಗಿದೆ. ಅದರಲ್ಲಿ ಒಂದಿಷ್ಟು ಓದಿ ಆಮೇಲೆ ಅದನ್ನು “ನವ್ಯಾಂತ” ದೃಷ್ಟಿಕೋನದಿಂದ ಪರಿಶೀಲಿಸಿದ ನಂತರ ನನಗೆ ಸೂಫಿಗಳ ಬಗ್ಗೆ ಅನ್ನಿಸಿದ್ದನ್ನು ಒಂದೆರಡು ಲೈನಲ್ಲಿ ಬರೆಯಬೇಕು ಅನ್ನಿಸಿದೆ. ಭಾರತದಲ್ಲಿ ಬಿಟ್ಟರೆ ವಿಶ್ವದ ಇನ್ನ್ಯಾವುದೇ ಇಸ್ಲಾಮಿಕ್ ರಾಷ್ಟ್ರಗಳಲ್ಲಿ ಸೂಫಿಗಳಿಗೆ ಅಂತಹ ಗೌರವ ಇಲ್ಲ. ಕಟ್ಟಾ ಇಸ್ಲಾಮಿಕ್ ಆಚರಣೆಗಳಿಗೆ ಹೆಸರಾಗಿರುವ ದೇಶಗಳಲ್ಲಿ ಸೂಫಿ ಸಂತರಿಗೆ ನಾಲ್ಕಾಣೆ ಬೆಲೆ ಇಲ್ಲ. ಇವರ ಕಾರ್ಯಕ್ಷೇತ್ರವೇನಿದ್ದರೂ ಬಾರತ,ಉತ್ತರ ಆಫ್ರಿಕಾ ದಂತಹಾ ಬೆರಕೆ ಧಾರ್ಮಿಕ ನಂಬಿಕೆ ಹೊಂದಿರುವನ್ತಹಾ ದೇಶಗಳು. ಇದು(ಸೂಫಿವಾದ) ಕೂಡ ಬೆರಕೆ ವಿಚಾರಧಾರೆಯೇ. ಆದುದರಿಂದಲೇ ಇದನ್ನು ಚಿಂತಕರು ಹಾಡಿ ಹೊಗಳುವುದು.



ಆದರೆ ಇವರು ಇಸ್ಲಾಂನವರು ಎಂದು ಹೇಳಿಕೊಂಡು ಇಸ್ಲಾಮ್ಗೆ ಇಷ್ಟು ದೂರವಾದ ಬೆರಕೆ ಚಿಂತನೆಗಳನ್ನು ಏತಕ್ಕೆ ತಮ್ಮದಾಗಿಸಿಕೊಂಡರು?


ಸೂಫಿವಾದ ಎಂಬುದು ಭಾರತದಂತ ದೇಶಗಳಿಗೆ ಏಕೆ ಸೀಮಿತವಾಗಿದೆ? ಎಂಬ ಬಗ್ಗೆ ಚಿಂತಿಸುವ ಅನಿವಾರ್ಯತೆ ಇದೆ. ಸೂಫಿವಾದ ಇಸ್ಲಾಂಗಿಂತಾ ಹಿಂದಿನದು ಎಂದು ಕೆಲವರು ವಾಸಿಸುವುದುಂಟು.ಇಸ್ಲಾಂ ಹುಟ್ಟುವುದಕ್ಕೆ ಮುನ್ನ ಅರೇಬಿಯಾ,ಇರಾನ್ ಮುಂತಾದ ಕಡೆ ಬೌದ್ಧ,ಹಿಂದೂ,ಪಾರಸಿಕ ಮತ್ತಿತರ ಲೋಕಲ್ ನಂಬಿಕೆಗಳು ಪ್ರಚಲಿತವಾಗಿತ್ತು.ಇವುಗಳನ್ನು ಅನುಸರಿಸುವ ಸಾದು ಸಂತರು,ಬಿಕ್ಷುಗಳು,ಆರಾಧಕರು ಅಲ್ಲಿ ತಮ್ಮ ಸಾಧನೆ ಮಾಡಿಕೊಂಡಿದ್ದರು. ಇಸ್ಲಾಂ ಬಂದ ಮೇಲೆ ಎಲ್ಲರೂ ಮತಾಂತರ ಹೊಂದಿದಾಗ ಸಮಾಜದಿಂದ ಹೊರಗಿದ್ದ ಅವರು ಹೆಚ್ಚು ತಕರಾರು ಮಾಡದೆ ಮುಖ್ಯವಾಹಿನಿಯಲ್ಲಿ ಬೆರೆತು ತಮ್ಮ ಧಾರ್ಮಿಕ ಅಭ್ಯಾಸಗಳನ್ನು ಕೆಲವು ಬದಲಾವಣೆಗಳೊಂದಿಗೆ ಮುಂದುವರೆಸಿದರು. ನಂತರದ ದಿನಗಳಲ್ಲಿ ಅವರು ಸಂಪೂರ್ಣವಾಗಿ ಇಸ್ಲಾಂ ನ ಭಾಗವಾಗಿ ಹೋದರು. ಕ್ರಮೇಣ ಅದು ಅಲ್ಲಿ ಮಹತ್ವ ಕಳೆದುಕೊಳ್ಳುತ್ತಾ ಬಂತು. ಆ ನಂತರ ಭಾರತಕ್ಕೆ ದಾಳಿಕೋರರೊಂದಿಗೆ ಬಂದು ಇಲ್ಲೇ ಜಾಂಡ ಊರಿದ ಕೆಲವು ಮಂದಿ ಭಾರತದಲ್ಲಿ ಈ ನವ ಸೂಫಿವಾದದ ಪ್ರವರ್ತಕರಾದರು. ಇದರ ಮೂಲವನ್ನು ಅವರು ಅರೇಬಿಯಕ್ಕೆ,ಪ್ರವಾದಿಗೆ ಜೋಡಿಸುತ್ತಾರಾದರೂ ಅದು ಕಟ್ಟುಕತೆ ಎನಿಸುತ್ತದೆ. ಇದು ಭಾರತಕ್ಕಾಗೆ ತಯಾರಿಸಲಾದ ಸರಕು.ಅಲ್ಲಿ ಸಲ್ಲದ ಸೂಫಿಗಳು ಇಲ್ಲಿ ಸಂದರು.ಯಾಕೆಂದರೆ ಇಲ್ಲಿ ಅದರ ಪ್ರಚಾರಕ್ಕೆ ತಕ್ಕ ಪರಿಸರವಿತ್ತು. ಹನ್ನೊಂದನೇ ಶತಮಾನದಲ್ಲಿ ತುರ್ಕರು ಇಲ್ಲಿಗೆ ಬಂದಾಗ ಭಾರತೀಯ ಸಮಾಜ ಬಹಳ ಸಂಕೀರ್ಣವಾಗಿತು. ಈ ಸಮಾಜದೊಂದಿಗೆ ಸಂವಾದ ಬೆಳೆಸುವುದು ಅಷ್ಟು ಸುಲಭವಾಗಿರಲಿಲ್ಲ.ಅಲ್ಬೇರುನಿ ಹೇಳುವಂತೆ “ಭಾರತೀಯರು ಹೊರಗಿನವರೊಂದಿಗೆ ಸುಲಭವಾಗಿ ಯಾವುದೇ ವಿಚಾರವನ್ನು ಹಂಚಿಕೊಳ್ಳುವುದಿಲ್ಲ. ಇತರರನ್ನು ತಮ್ಮ ನಡುವೆ ಬರಗೊಡುವುದಿಲ್ಲ.”.....ಇತ್ಯಾದಿ.


ಆದರೆ ಬೈರಾಗಿಗಳು,ಸಾಧು ಸಂತರುಗಳಿಗೆ ಅವರು ಬಹಳ ಗೌರವ ನೀಡುತಿದ್ದರು. ಕೆಲವು ಬುದ್ದಿವಂತ ಮುಲ್ಲಾಗಳು ಇದನ್ನು ಅರಿತು ತಾವೂ ಕೂಡ ಇಸ್ಲಾಂ ಧರ್ಮಕ್ಕೆ ಸೇರಿದ್ದ ಬೈರಾಗಿಗಳು ಎಂಬ ಸೋಗು ಹಾಕಲಾರಮ್ಬಿಸಿದರು. ಲೋಕಲ್ ಸಂತರಂತೆ ನಕಲಿ ಪವಾಡಗಳನ್ನು ಮಾಡಿ ಜನರನ್ನು ಮರುಳುಗೊಳಿಸಲು ಆರಂಬಿಸಿದರು. ಇಲ್ಲಿನ ಲೋಕಲ್ ಸಂತರೊಂದಿಗೆ ಸೇರಿ ಅವರ ಟೆಕ್ನಿಕ್ ಗಳನ್ನು ಕರಗತ ಮಾಡಿಕೊಂಡರು. ಇವರುಗಳು ಭಕ್ತಿ ಸಂತರೊಂದಿಗೆ ಸಂವಾದಗಳನ್ನು ನಡೆಸಿದ್ದು, ಯೋಗಿಗಳೊಂದಿಗೆ ಸೇರಿ ಅವರ ಕೆಲವು ಅಭ್ಯಾಸಗಳನ್ನು ಜೀವನ ಶೈಲಿಯಲ್ಲಿ ಅಳವಡಿಸಿಕೊಂಡಿದ್ದು, ನಾಥಪಂಥದ ಸಂತರೊಂದಿಗೆ ಓಡಾಡಿದ್ದು...ಮುಂತಾದವು ನಮ್ಮ ಇತಿಹಾಸದಲ್ಲಿ ಬಹು ಚರ್ಚಿತವಾಗಿವೆ. ********ಎಂಬುವವನು ಕೃಷ್ಣನ ಆರಾಧಕನಂತೆ!.***೮***** ಪಂಥದವರು  ಪ್ರಾಣಾಯಾಮವನ್ನು ಹೋಲುವ ಉಸಿರಾಟದ ಕ್ರಿಯೆಗಳನ್ನು ತಮ್ಮ ಸಾಧನೆಯಲ್ಲಿ ಅಳವಡಿಸಿಕೊಂಡಿದ್ದರ೦ತೆ!. ಇನ್ನೊಬ್ಬ ಸೂಫಿ ಸಂತ ಹಲವು ದಿನ ತಲೆಕೆಳಗೆ ಕಾಲುಮೇಲೆ ಮಾಡಿ ಜಂತಿಗೆ ಕಟ್ಟಿಕೊಂಡು ಹಲವುದಿನ ತೂಗಾಡಿಸಿಕೊಂಡಿದ್ದನಂತೆ! (ಈ ವಿಧಾನವನ್ನು ಹಿಂದೂ ಅಧ್ಯಾತ್ಮಿಕ ಸಾಧನೆಯಲ್ಲಿ ಊರ್ಧ್ವಮುಖಿ ಯೋಗ ಎಂದು ಕರೆಯುತ್ತಾರೆ).ಇನ್ನೊಬ್ಬ ವೃತ್ತಿಯಿಂದ ಕಟುಕನಂತೆ. ಆದರೂ ಸಂತನಂತೆ ಜೀವನ ನಡೆಸುತಿದ್ದನಂತೆ!. ಚಿಸ್ತಿ ಪಂಥದವರು ಬಡತನವನ್ನು ಆಯ್ದು ಕೊಂಡರೆ ಸುಹಾರ್ವರ್ದಿ ಪಂಥದವರು ಬಹಳ ವೈಭವೋಪೇತ ಜೀವನ ಶೈಲಿಯನ್ನು ಆಯ್ದು ಕೊಂಡಿದ್ದರು. ಇವನೆಲ್ಲಾ  ಪಂಡಿತರು ಧಾರ್ಮಿಕ ಮಹಾಸಂಗಮವೆಂದು ವರ್ಣಿಸಿದ್ದಾರೆ. ವಾಸ್ತವವಾಗಿ ಇವರು ಸ್ಥಳೀಯ ಧಾರ್ಮಿಕ ಜಗತ್ತಿನೊಂದಿಗೆ ಸಂಬಂಧ ಬೆಳೆಸಿದ್ದು ಇವರ ವಂಚನೆಯ ವಿಧಾನಗಳನ್ನು ಕಲಿಯುವ ಉದ್ದೇಶಗಳಿಂದ. ಸಂತರ ಹಾವ ಭಾವಗಳು, ನಕಲಿ ಪವಾಡಗಳು, ಸ್ಥಳ ಮಹಾತ್ಮೆ ಗಳೆನ್ನುವ ಲೋಕಲ್ ಕಟ್ಟು ಕಥೆಗಳು, ಗಿಮಿಕ್ಕ್ ಗಳು, ದಾನ-ಧರ್ಮ ಮಾಡುವ ಶೈಲಿ,ಮೈ ಮೇಲೆ ದೇವರು ಬರಿಸಿಕೊಳ್ಳುವುದು, ಭಕ್ತಿ ಸಾಹಿತ್ಯದ ಮೂಲಕ ಮೌಡ್ಯ ಬಿತ್ತಿ ಬೆಳೆಸುವ ಕಲೆ ಇತ್ಯಾದಿಗಳನ್ನೆಲ್ಲಾ ಚೆನ್ನಾಗಿ ಅಧ್ಯಯನ ಮಾಡಿ ಅವನ್ನು ಅವರೂ ಶಕ್ಯಾನುಸಾರ ಉಪಯೋಗಿಸತೊಡಗಿದರು. ಇಸ್ಲಾಂನ ಖಡ್ಗ ಪ್ರವೇಶಿಸಲಾಗದ ಸ್ಥಳಗಳನ್ನು ಸೂಫಿಗಳು ಸುಲಭವಾಗಿ ತಲುಪಿದರು. ಇಲ್ಲಿನ ಮುಗ್ಧ ಗ್ರಾಮೀಣ ಜನತೆಯ ಮೇಲೆ ಬಹಳ ಗಾಡವಾಗಿ ಪ್ರಭಾವ ಬೀರಿದರು. ದುಡಿಯದೇ ಸುಲಭವಾಗಿ ಜೀವನ ನಡೆಸುವ ಉದ್ದೇಶದಿಂದ ಕೆಲವು ಬುದ್ದಿವಂತ ವಲಸಿಗರು ಈ ಕೆಲಸ ಆರಂಬಿಸಿದರೂ ರಾಜಾಶ್ರಯ ಪಡೆದನಂತರ “ಮತಾಂತರ” ಇವರ ಮುಖ್ಯ ಕೆಲಸ ವಾಯಿತು. “ದೇವರ ಸೈನ್ಯ” ಆ ಸ್ಥಳ ಪ್ರವೇಶಿಸುವ ಒಂದೆರಡು ವರುಷ ಮೊದಲು ಸೂಫಿಗಳು ಆ ಜಾಗದಲ್ಲಿ ಬಂದು ತಮ್ಮ “ಖಂಖಾ “ಗಳನ್ನು ತೆರೆಯುತಿದ್ದರು. ಉದಾಹರಣೆಗೆ ದಿಲ್ಲಿಯ ಸುತ್ತ ಮುತ್ತಲಿನ ಹಿಂದೂ ಸಾಂದ್ರತೆ ಇರುವ ಪ್ರದೇಶಗಳಲ್ಲಿ ಇವರುಗಳು ವಾಸಿಸತೊಡಗಿದರು. ನಂತರ ಮೆಲ್ಲನೆ ರಾಜಸ್ತಾನ್ ಪ್ರವೇಶಿಸಿದರು. (ರಾಜಸ್ತಾನವನ್ನು ತುರ್ಕರಿಗೆ ಪಶ್ಚಿಮದಿಂದ ಪ್ರವೇಶಿಸಲು ಸಾಧ್ಯವಾಗಿರಲಿಲ್ಲ. ಆದರೆ ದಿಲ್ಲಿ ಯಿಂದ ಪ್ರವೇಶಿಸಲು ಸುಲಭವಾದದ್ದು ಈ ಸಂತರ ಕರಾಮತ್ತಿನಿಂದಲೇ.) ಆ ನಂತರ ದಕ್ಷಿಣಕ್ಕೆ ಸೂಫಿವಾದವನ್ನ ತಂದವನು ಮೊಹಮ್ಮದ್ ಬಿನ್ ತೊಗಲಕ್. ಆತ ತನ್ನ ರಾಜಧಾನಿಯನ್ನು ದಕ್ಷಿಣಕ್ಕೆ ಸ್ಥಳಾಂತರಿಸುವ ಉದ್ದೇಶ ಇಟ್ಟುಕೊಂಡಿದ್ದರಿಂದ ದಿಲ್ಲಿಯಲ್ಲಿದ್ದ ಒಂದಿಷ್ಟು ಸೂಫಿಗಳನ್ನು ಹಿಡಿದುಕೊಂಡು ಬಂದು ಇಲ್ಲಿ ಬಿಟ್ಟ. ಇಲ್ಲಿ ಬಹುಮನಿ ಸಾಮ್ರಾಜ್ಯ ಸ್ಥಾಪನೆ ಯಾಗುವಲ್ಲಿ ಸೂಫಿಗಳ ಕೊಡುಗೆಯೂ ಇದೆ.


ಒಟ್ಟಾರೆ ಹೇಳುವುದಾದರೆ ಸೂಫಿವಾದದ ಮುಖ್ಯ ಉದ್ದೇಶ “ಮತಾಂತರ”. ಈ ಉದ್ದೇಶ ೧೦೦% ನೆರವೇರಿದ ಪ್ರದೇಶದಲ್ಲಿ ಸೂಫಿವಾದ ಮಾಯವಾಗುತ್ತದೆ ಎಂಬುದನ್ನು ನಾವು ಪಾಕಿಸ್ತಾನ್ ಮತ್ತು ಆಫ್ಘಾನಿಸ್ತಾನದ ಉದಾಹರಣೆಗಳಿಂದ ತಿಳಿಯಬಹುದು. ಒಟ್ಟಾರೆ ಈ ಪಂಥದ ಒಳ ಮರ್ಮವನ್ನು ಸರಿಯಾಗಿ ಗಮನಿಸದೆ ಮೇಲ್ಮುಖದಲ್ಲಿ ಕಂಡುಬರುವ ತತ್ವ ವಿಚಾರಗಳನ್ನೇ ಅಧ್ಯಯನ ಮಾಡಿ ಅವುಗಳನ್ನು ಉತ್ಪ್ರೇಕ್ಷೆ ಮಾಡಿ ಬರೆಯುವ ಮೂಲಕ ನಮ್ಮ ಚಿಂತಕರು ಮೂಡನಂಬಿಕೆಗಳ ಪ್ರಚಾರಕ್ಕೆ ಸಹಕಾರ ನೀಡುತ್ತಿರುವುದು ವಿಷಾದದ ಸಂಗತಿ.

Wednesday, October 20, 2010

SMS ನಗೆಹನಿ

ಗುಂಡ: ತಾತ ,ತಾತ, ಕಾಂಡೋಮ್ ಅಂದ್ರೆ ಏನು?
ತಾತ : (ಕಸಿವಿಸಿಗೊಂಡು) ಹೋಗೋ, ಹುಟ್ಸೂಳೆಮಗನೆ, ನನ್ಗೊತಿಲ್ಲ !.
ಗುಂಡ : ನನ್ಗೊತ್ತಲೇ ಮುದ್ಕಾ, ನಿನ್ಗೊತ್ತಿಲ್ಲಾ ಅಂತಾ, ನಿನ್ಗೊತ್ತಿದ್ದ್ರೆ ಆಸ್ತಿ 14 ಪಾಲಾಗ್ತಿರ್ಲಿಲ್ಲ.. 

ದೇವಾಲಯಗಳಿಂದ ದೂರವಿರಿ

ಇತ್ತೀಚಿನ ದಿನಗಳಲ್ಲಿ ದೇವರ ಸಾಕ್ಷಾತ್ಕಾರ (?) ಪಡೆದಿರುವ ಸಂತರಿಗೆಲ್ಲ ಒಂದು ಗೀಳು ಆರಂಭವಾಗಿದೆ. ಅದೇನೆಂದರೆ ದೇವಸ್ಥಾನ ಕಟ್ಟಿಸುವ ಗೀಳು!
ದೇವರು ಗುಡಿಯೊಳಗಿಲ್ಲ....
ದೇವರು ನಮ್ಮ ಒಳಗೇ ಇದ್ದಾನೆ...
ಸ್ತಾವರಕ್ಕಳಿವುಂಟು...ಜಂಗಮಕ್ಕಳಿವಿಲ್ಲ....
ಇತ್ಯಾದಿ ಪ್ರವಚನ ನೀಡಿದ ಮೇಲೆ "ಮಹಾಜನಗಳೇ, ನಾವು ದೇವಾಲಯವೊಂದನ್ನು ನಿರ್ಮಿಸುತಿದ್ದೇವೆ.ಅದಕ್ಕೆ ನಿಮ್ಮ ತನು ಮನ ಧನ ಸಹಕಾರ ಬೇಕು" ಎಂದೆನ್ನುತ್ತಾರೆ. "ಏನು ಕೇಶವಪ್ರಸಾದ್, ನಿಮ್ಮ ಫ್ರೆಂಡ್ಸ್ಗಳ ಹತ್ತಿರ ಕಲೆಕ್ಟ್ ಮಾಡಿ, ದೇವರ ಕೆಲಸ...ಸೇರಿ ಮಾಡೋಣ"...ಎನ್ನುತ್ತಾರೆ.
ಎಲಾ,ಇವನಾ....ಇಷ್ಟು ಹೊತ್ತು ಬೇರೆಯದನ್ನೇ ಹೇಳಿದ್ದನಲ್ಲ ಎಂಬ ಅನುಮಾನ ನಿಮಗೆ ಬಂದರೆ  ಅದಕ್ಕೆ ಇನ್ನೊಂದು ಸಮಜಾಯಿಷಿ ಕೂಡಾ ಅವರ ಬಳಿ ತಯಾರಿದೆ.ಅದು ಈ ಕೆಳಕಂಡಂತಿದೆ.
"ನಾವು ದೇವಾಲಯಕ್ಕೆ ಏಕೆ ಹೋಗಬೇಕು? ಏಕೆಂದರೆ ದೇವರು ಅಲ್ಲಿ ಮಾತ್ರ ಇದ್ದಾನೆ ಎಂಬ ಕಾರಣಕ್ಕಲ್ಲ. ಅಲ್ಲಿ ಹಲವಾರು ಜನ ಭಕ್ತಿಯ ಪವಿತ್ರ ಭಾವನೆಗಳನ್ನು ಹೊತ್ತು ಬರುತ್ತಾರೆ. ಅವರ ಪಾಸಿಟಿವ್ ವೈಬ್ರೇಶನ್ ನಿಂದ ಆ ಪರಿಸರ ಬಹಳ ಚೇತೋಹಾರಿ ತರಂಗಗಳಿಂದ ತುಂಬಿ ತುಳುಕುತ್ತಿರುತ್ತವೆ. ಆದುದರಿಂದ ದೇವಾಲಯಕ್ಕೆಹೋದರೆ ನಿಮ್ಮ ಮನಸ್ಸಿನ ದುಃಖ ದುಮ್ಮಾನಗಳು ಕಡಿಮೆಯಾಗಿ ಮನಸು ಗೆಲುವಾಗುತ್ತದೆ.ನೀವು ದೇವರನ್ನು ನಂಬದಿದ್ದರೂ ಪರವಾಗಿಲ್ಲ. ದೇವಸ್ಥಾನಕ್ಕೆ ಬೇಟಿಕೊಟ್ಟು ನೋಡಿ. ನಿಮ್ಮ ಮನಸ್ಸು ಪ್ರಶಾಂತವಾಗುತ್ತದೆ."
.
        ಆಹಾ, ಎಂತಹ ಸುಂದರ ಪರಿಕಲ್ಪನೆ. ಈಗ ಒಂದು ನಿಮಿಷ ವಾಸ್ತವ ಜಗತ್ತಿಗೆ ಬನ್ನಿ. ನಿಮ್ಮನ್ನೇ ತೆಗೆದುಕೊಳ್ಳಿ. ನೀವು ದೇವಸ್ತಾನಕ್ಕೆ ಏಕೆ ಹೋಗುತ್ತೀರಾ? ಎಂಥಹ ಸಮಯದಲ್ಲಿ ದೇವಾಲಯಗಳು ನಿಮ್ಮನ್ನು ಸೆಳೆಯುತ್ತದೆ?
ಹೆಚ್ಚಿನವರು ದೇವಾಲಯಕ್ಕೆ ಹೋಗುವುದು "ಸಂಕಟ ಬಂದಾಗ ವೆಂಕಟ ರಮಣ" ಎಂಬ ಕಾರಣಕ್ಕೆ.
ಚಿಂತೆ,ದುಃಖ,ಬೇಸರ, ಅಗಲಿಕೆ, ವಿರಹ, ನಷ್ಟ,ಸೋಲು ಮುಂತಾದ ಸಮಸ್ಯೆ ಎದುರಾದಾಗ ಅಥವಾ ಅವು ಮನಸ್ಸಿನ ಯಾವುದೋ ಒಂದು ಭಾಗದಲ್ಲಿ ಇಣುಕಿದಾಗ ನಾವು ದೇವರನ್ನ ನೆನೆಸಿಕೊಳ್ಳುತ್ತೇವೆ. ಮನೆಯಲ್ಲಿ ಪ್ರಾರ್ಥನೆ ಮಾಡುವುದು ಸಾಲದು,ಅಲ್ಲಿಂದ ದೇವರ 'ನೆಟ್ವರ್ಕ್' ಸಿಗುವುದಿಲ್ಲ ಎನ್ನಿಸಿದಾಗ ದೇವರ ಗುಡಿಗೆ ಹೋಗುತ್ತೇವೆ.ಲೋಕಲ್ ದೇವರು ವೀಕ್ ಎನಿಸಿದಾಗ ಸ್ಟ್ರಾಂಗ್ ಎಂದು ನಾವು ಭಾವಿಸಿರುವ ಪುರಾತನ ತೀರ್ಥಕ್ಷೇತ್ರಗಳಿಗೋ,ಪವಾಡಗಳು ನಡೆಯುತ್ತವೆ ಎಂದು ನಂಬಲಾಗಿರುವ ಸ್ಥಳಕ್ಕೋ ಹೋಗುತ್ತೇವೆ. ನಮ್ಮನ್ನು ರಕ್ಷಿಸುವ ಆ ಸರ್ವಶಕ್ತ  ದೇವರುಗಳು ನಮ್ಮ ಹತ್ತಿರ ಇರುತ್ತಾರೋ?...... ಅದು ಇಲ್ಲ!. ಸಾಬರುಗಳ ಭಯದಿಂದ ಬೆಟ್ಟ ಗುಡ್ದಗಳಲ್ಲಿ ಗಿರಿ ಕಂದರಗಳಲ್ಲಿ ಹೋಗಿ ನೆಲೆಸಿರುತ್ತಾರೆ. ಅಲ್ಲಿ ಹೋಗುವುದೇ ಒಂದು ಸಾಹಸ.
ಈಗ ಹೇಳಿ ದೇವಸ್ಥಾನಕ್ಕೆ ಹೋಗುವುದರಿಂದ ಪಾಸಿಟಿವ್ ಎನರ್ಜಿ ಸಿಗುತ್ತಾ? ....
ಭಕ್ತರು ದೇವಸ್ತಾನಕ್ಕೆ ತರುವುದು ದುಃಖ,ದಣಿವು,ವಿರಹ,ಭಯ,ಅಭದ್ರತೆ,ಪರಾವಲಂಬನೆ,ಕೋರಿಕೆ,ಬೇಡಿಕೆ,ದೈನ್ಯತೆ,ವ್ಯಾಕುಲತೆ,ಮಾನಸಿಕ ಪರಾವಲಂಬತೆ ಇತ್ಯಾದಿಗಳನ್ನು.
ಅಲ್ಲಿ ಯಾವ ತರಂಗ ಇರುತ್ತೆ ಸ್ವಾಮೀ?,ನೀವೇ ಗಾಳಿಯಲ್ಲಿ ಆಲಿಸಿ...ದೇವರೇ ಅದು ಕೊಡು,ಇದು ಕೊಡು,ಕಾಪಾಡು ಇತ್ಯಾದಿ ಇತ್ಯಾದಿ ಪ್ರಲಾಪಗಳು!. ದೇವರಿಗೆ ಧನ್ಯವಾದ ಹೇಳಲು ಬರುವವರು ಬಹಳ ಕಡಿಮೆ. ಹರಕೆ ತೀರಿಸಲು ಬರುವವರಿಗಿಂತ ಹರಕೆ ಹೋರಲು ಬರೋರೆ ಹೆಚ್ಚು. ಅಲ್ಲಿ ಹೆಚ್ಚಾಗಿ ಹೋಗುವವರ ಮನಸ್ಸಿನಲ್ಲಿ "ಕೊಡು}}}},ಕೊಡು}}}, ಬೇಕು}}, ಬೇಕು}}} ,ಕಾಪಾಡು}},ಕಾಪಾಡು}}} .. ಇತ್ಯಾದಿ ತರಂಗಗಳು ಸೇರಿಕೊಂಡು ಇನ್ನಷ್ಟು ಭಯಭೀತರನ್ನಾಗಿಯೋ, ಲೋಭಿಗಳನ್ನಾಗಿಯೋ ಮಾಡುತ್ತದೆ.ಮನಸ್ಸಿಗೆ ನೆಮ್ಮದಿ ಸಿಗುತ್ತೆ ಎನ್ನುವುದು ಒಂದು ರೀತಿಯ ತಾತ್ಕಾಲಿಕ ಅನುಭವ. ಆದರೆ ಮನಸ್ಸಿನಲ್ಲಿ ಸುಪ್ತವಾಗಿ ಉಳಿಯುವಂತಹ ಹಲವು ನೆಗೆಟಿವ್ ತರಂಗಗಳು ನಿಮ್ಮಲ್ಲಿ ಸೇರಿಕೊಳ್ಳುತ್ತವೆ.ಕೆಲವು ವಿದ್ವಂಸಕ ಕೋಮುಗಳು ವಾರದ ಪ್ರಾರ್ಥನೆಯ ನಂತರ ಗಲಭೆ ಆರಂಭಿಸುವುದು ಅದೇ ಕಾರಣದಿಂದ. ಈ ಪ್ರಾರ್ಥನೆ ಮುಂತಾದವು ಸುಪ್ತ ಮನಸ್ಸಿನಲ್ಲಿ ಕ್ಷೋಭೆಯನ್ನು,ಆತಂಕವನ್ನು ಹೆಚ್ಚಿಸುತ್ತವೆ.ಧರ್ಮಗಳು ಭಯೋತ್ಪಾದನೆಯನ್ನು ಸೃಷ್ಟಿ ಮಾಡುವುದಕ್ಕೆ ಅದೇ ಮುಖ್ಯ ಕಾರಣ.ಪ್ರಾರ್ಥನೆ ಮನುಷ್ಯನಲ್ಲಿ ಭಯ ಬಿತ್ತುತ್ತದೆ.ನಂತರ ಆ ಭಯ ಸಮಾಜದಲ್ಲಿ ಹೆಮ್ಮರವಾಗಿ ಬೆಳೆಯುತ್ತವೆ. ಆದುದರಿಂದ ಇನ್ನು ಮುಂದೆ ದೇವಸ್ಥಾನಕ್ಕೆ ಹೋಗುವ ಮೊದಲು ಸಾವಿರ ಬಾರಿ ಆಲೋಚಿಸಿ.ನೀವು ಆಸ್ತಿಕರೇ ಆಗಿರಬಹುದು ಅಥವಾ ನಾಸ್ತಿಕರಾಗಿರಬಹುದು ದೇವಾಲಯಗಳ ಬಳಿ ದಯವಿಟ್ಟು ಹೋಗಬೇಡಿ. ಗಟಾರಗಳು ದೇಹಕ್ಕೆ ಬಾಧೆ ತರುವಂತಹಾ ಸಂಕ್ರಾಮಿಕ ರೋಗಗಳಿಗೆ ಆಗರವಾಗಿರುವಂತೆ ಆರಾಧನೆಯ ಮತ್ತು ಪ್ರಾರ್ಥಿಸುವ ಸ್ಥಳಗಳು ಮಾನಸಿಕ ರೋಗಗಳ ಅಗರವಾಗಿರುತ್ತವೆ. ದೈಹಿಕವಾಗಿ ಕಾಡುವ ಖಾಯಿಲೆಗಳನ್ನ ಸುಲಭವಾಗಿ ಕಂಡುಹಿಡಿಯಬಹುದು.ಆದರೆ ಮಾನಸಿಕ ಖಾಯಿಲೆಯನ್ನು ಕಂಡು ಹಿಡಿಯುವುದೇ ಕಷ್ಟ.ಖಾಯಿಲೆ ಇದೆ ಎಂದು ಗೊತ್ತಾಗುವ ಮೊದಲೇ ಅದು ಇಡೀ ಸಮುದಾಯಕ್ಕೆ ಹಬ್ಬುತ್ತದೆ.
ನಮ್ಮ ದೇಶದಲ್ಲಿ ಬ್ರಷ್ಟಾಚಾರ ಹೆಚ್ಚಲು ಜನ ದೇವಸ್ಥಾನ,ಚರ್ಚು,ದರ್ಗಾಗಳಿಗೆ ಹೋಗುತ್ತಿರುವುದೇ ಒಂದು ಮುಖ್ಯ ಕಾರಣವಿರಬಹುದೇ ಎಂಬುದು ನನ್ನ ಇತ್ತೀಚಿನ ಗುಮಾನಿ! .

Sunday, October 17, 2010

ಬೆಳಕು

ನಮ್ಮಲ್ಲಿ ಕೆಲವರು ಎಷ್ಟು ವಿಚಿತ್ರ ವೆಂದರೆ ಮನೆಯ ಹೊರಗೆ ಇರುಳೆಲ್ಲಾ ವಿದ್ಯುತ್ ದೀಪ ಹಚ್ಚಿಡುತ್ತಾರೆ.(ಲಕ್ಷ್ಮಿ ಬರುತ್ತಾಳೆಂದು?)
ಆದರೆ ಮನೆಯೊಳಗೆ ಲೈಟು ಉರಿಸಬೇಕೆಂದರೆ "ಅಯ್ಯೋ ಕರೆಂಟು ಕರ್ಚಾಗುತ್ತಲ್ಲಪ್ಪ" ಎಂದು ಚಿಂತಿಸುತ್ತಾರೆ.

Thursday, September 23, 2010

ವಿಶ್ವೇಶ್ವರಯ್ಯನವರು ಓದುತಿದ್ದಾಗ......

"ಏಯ್ ಕತ್ತೆ,.... ವಿಶ್ವೇಶ್ವರಯ್ಯನವರು ಬೀದಿ ದೀಪದ ಕೆಳಗೆ ಕುಳಿತುಕೊಂಡು ಓದುತಿದ್ದರಂತೆ, ಇಷ್ಟೆಲ್ಲಾ ಸೌಲಭ್ಯ ಇದ್ದರೂ ಓದಲು ನಿನಗೇನೋ ದಾಡಿ.." ಎಂದು ಆಗಾಗ ದಡ್ಡಮನುಷ್ಯರು ಮಕ್ಕಳಿಗೆ ಬಯ್ಯುವುದನ್ನು ನೀವು ಕೇಳಿರುತ್ತೀರಿ. 
"ವಿಶ್ವೇಶ್ವರಯ್ಯನವರು ಓದುತಿದ್ದಾಗ ಇನ್ನು ಬೀದಿ ದೀಪವೂ ಇರಲಿಲ್ಲ. ಕರೆಂಟೂ ಇರಲಿಲ್ಲ!!!! 

Tuesday, September 21, 2010

ಪುಟ್ಟರಾಜ ಗವಾಯಿಗಳ ಮಾದರಿ

ನಿನ್ನೆ ಗದಗದ ಪುಟ್ಟರಾಜ ಗವಾಯಿಗಳು ಸಾವನಪ್ಪಿದರು. "ಒಂದು ಕೆನ್ನೆಗೆ ಹೊಡೆದರೆ ಇನ್ನೊಂದು ಕೆನ್ನೆ ತೋರಿಸು"ಎಂಬ ಏಸು ಕ್ರಿಸ್ತನ ವಾಣಿಯಂತೆ ಕಣ್ಣನ್ನು ಕಿತ್ತುಕೊಂಡು ಅನ್ಯಾಯ ಮಾಡಿದ್ದ ಭಗವಂತನನ್ನು ಕ್ಷಮಿಸಿ ಆ ಭಗವಂತನ ಹೆಸರಿನಲ್ಲಿ ಹಲವು ಜನಕ್ಕೆ ಒಳ್ಳೆದಾಗುವಂತಹ ಕೆಲಸವನ್ನು ಮಾಡಿದರು. ಹಲವು ಶಿಷ್ಯರಿಗೆ ಆಶ್ರಯನೀಡಿದರು.ಬದುಕನ್ನು ಸನ್ಯಾಸಿಯಾಗಿಯೇ ಕಳೆದರು.
 ದೇವರು ಅವರೊಂದಿಗೆ ಇರಲಿಲ್ಲ. ಒಂದುವೇಳೆ ಅವನು ಇದ್ದರೆ ಅವನು ಇರುವುದು ಬ್ರಷ್ಟ್ರರ ಕಡೆ ಮತ್ತು ಅಯೋಗ್ಯರ ಕಡೆ.ಅವನು/ಅವನ ಬೆಂಬಲಿಗರು ಕೆಡಿಸುವ ಸಮಾಜವನ್ನು ಸುದಾರಣೆ ಮಾಡುವಂತಹ ಜನರಿಗೂ ಅವನ ಹೆಸರು ಹೇಳಿಕೊಂಡು ಕೆಲಸ ಮಾಡುವ ಅನಿವಾರ್ಯತೆ ಇದೆ. ಇದು ಎಲ್ಲಾ ಕಾಲಕ್ಕೋ ಸತ್ಯ. ಸೂಫಿ ಸಂತರಿರ ಬಹುದು. ಭಕ್ತಿ ಸಂತರಿರಬಹುದು. ಅವರುಗಳು ಕೆಲವು ಒಳ್ಳೆಯ ಕೆಲಸ ಮಾಡಿದರು.ಅದನ್ನು ದೇವರಿಗೆ ಆರೋಪಿಸಿದರು. ಜನರ ಚಿಂತನೆಯ ದಿಕ್ಕನ್ನು ಬದಲಾಯಿಸಲು ನಂಬಿಕೆಯ ಊರುಗೋಲು ಅತಿ ಅವಶ್ಯಕ. ಏಕೆಂದರೆ ಜನರ ಮನಸ್ಸು ಮೌಡ್ಯದ ಕೆಸರಲ್ಲಿ ಹೂತು ಹೋಗಿದೆ. ಮುಳ್ಳನ್ನು ಮುಳ್ಳಿನಿಂದಲೇ ತೆಗೆಯುವ ಅನಿವಾರ್ಯತೆ ಎಲ್ಲಾ ಸಮಾಜ ಸುದಾರಕರಿಗಿತ್ತು. ಲಿಂಗ ತೋರಿಸಿದರೆ ಯಡಿಯೂರಿ ಕಾಸು ಬಿಚ್ಚುತ್ತಾನೆ. ಗಾಂಧಿ ಪ್ರತಿಮೆ ತೋರಿಸಿದರೆ ಬಿಚ್ಚುತ್ತಾನ? ಖಂಡಿತಾ ಇಲ್ಲ. ಅದಕ್ಕಾಗಿಯೇಇರಬೇಕು ಪವಾಡ ಪುರುಷನೆಂದು ಹೆಸರು ಗಳಿಸಿದ್ದ ಅಲ್ಲಮನನ್ನು ಕರೆದುಕೊಂಡು ಬಂದು ವಿಚಾರಮಂಟಪದ ಅಧ್ಯಕ್ಷನನ್ನಾಗಿಸಿದರು. ಕೊನೆಗೆ ಅಲ್ಲಿ ಆರ್ಥಿಕ ವಿಚಾರಕ್ಕಿಂತ ಪಾರಮಾರ್ಥಿಕ ವಿಚಾರಗಳಿಗೆ ಒತ್ತು ನೀಡಲಾಯಿತು. ಇದರಿಂದ ಬಸವಣ್ಣನ ಕ್ರಾಂತಿಗೆ ಯಾವುದೇ ಉಪಯೋಗವಾಗಲಿಲ್ಲ. ಕಲ್ಯಾಣದ ಕ್ರಾಂತಿಗೆ ಶಕ್ತಿಕೇಂದ್ರವಾಗಬಹುದಿದ್ದ ಈ ವಿಚಾರಮಂಟಪ ಸೋಮಾರಿಗಳ ಪಾರಮಾರ್ಥಿಕ ಕಾಡುಹರಟೆಯ ರಂಗಸ್ಥಳವಾಯಿತು. ಕ್ರಾಂತಿ ವಿಫಲವಾಯಿತು. ಬಸವಣ್ಣ ಸೋಲುಣ್ಣಬೇಕಾಯಿತು. ನಂತರ ಈ ವಿಚಾರ ಮಂಟಪಗಳು ಮಠ ಗಳಾದವು. "ಮಠ" ಚಿತ್ರದ ಟೈಟಲ್ "ಕೆಲಸಕ್ಕೆ ಕರೀಬೇಡಿ,ಊಟಕ್ಕೆ ಮಾತ್ರ ಮರಿಬೇಡಿ"ಎಂಬುದನ್ನೇ ಈ ಸ್ವಾಮೀಜಿಗಳು ತಮ್ಮ ಜೀವನದ ಧ್ಯೇಯವಾಕ್ಯ ಮಾಡಿಕೊಂಡಿದ್ದರು. ಶತ ಶತಮಾನಗಳವರೆಗೆ ಹಾಗೇ ಇತ್ತು. ಕ್ರಿಸ್ತಿಯನ್ನರು ಬಂದು ಇಲ್ಲಿ ಹಣ ಹೂಡಿ ಶಾಲೆಗಳನ್ನು ತೆಗೆದಕೂಡಲೇ ಇವರು ಸಹ ಎಚ್ಚೆತ್ತು ಶಾಲೆಗಳನ್ನು ಓಪನ್ ಮಾಡತೊಡಗಿದರು. ಈ ಸೇವಾ ಮನೋಬಾವವೂ ಹೆಚ್ಚು ದಿನ ಉಳಿಯಲಿಲ್ಲ. ಪಾರಮಾರ್ಥಿಕ ಸೋಮಾರಿತನದ ಬುದ್ದಿ ಮತ್ತೆ ಮುಸುಕಿನಿದ ಇಣುಕತೊಡಗಿತು. ಹುಟ್ಟುಗುಣ ಸುಟ್ಟರೆ ಹೋಗುತ್ತದೆಯೇ? ಎಂಬ ಗಾದೆಯಂತೆ ಶಿಕ್ಷಣವು "ಶಿಕ್ಷಣ ಮಾಫಿಯಾ"ಆಯಿತು. ಶಾಲೆಗಳು ಬೋದಕರ,ಶಿಕ್ಷಣ ತಜ್ಞರ ಸ್ವತ್ತಾಗಲಿಲ್ಲ.ಶಿಕ್ಷನೋದ್ಯಮಿಗಳ ಸ್ವತ್ತಾಯಿತು.ದಾರ್ಮಿಕ ನಾಯಕರು ಜ್ಞಾನವನ್ನು ಗುತ್ತಿಗೆ ಹಿಡಿದಂತೆ ವರ್ತಿಸಿದ್ದೆ ಇದಕ್ಕೆ ಮುಖ್ಯ ಕಾರಣ.
ಪುಟ್ಟರಾಜ ಗವಾಯಿಗಳಿಗೆ ಸಂಗೀತ ಶಾಲೆ ತೆಗೆಯಬೇಕು ಅನ್ನಿಸಿತು. ಇಂಜಿನಿಯರಿಂಗ್ /ಮೆಡಿಕಲ್ ಕಾಲೇಜು ತೆಗೆಯಬೇಕು ಅನ್ನಿಸಲಿಲ್ಲ. ಏಕೆಂದರೆ ಅವರಿಗಿದ್ದದ್ದು ನಿಜವಾದ ಜ್ಞಾನ. ಅದನ್ನು ಅವರು ಪ್ರಾಮಾಣಿಕವಾಗಿ ಹಂಚಿದರು. ತನ್ನಲಿದ್ದದ್ದನ್ನು ಎಲ್ಲರಿಗೂ ಹಂಚಿದರು. (ಇಲ್ಲಿ ನಾವು ಮಲ್ಲಾಡಿ ಹಳ್ಳಿಯ ಸ್ವಾಮೀಜಿಯನ್ನು ನೆನೆಸಿಕೊಳ್ಳಬಹುದು.) ಆದರೆ ಕೆಲವು ಸ್ವಾಮೀಜಿಗಳಿಗೆ ಮೆಡಿಕಲ್ ಸೈಯನ್ಸ್ ಆಗಲಿ ಇಂಜಿನಿಯರಿಂಗ್ ಆಗಲಿ ಪಾಠಮಾಡಲು ಬರುವುದಿಲ್ಲ. ಆದರೂ ಇನ್ಜಿನೆರಿಂಗ್ /ಮೆಡಿಕಲ್ ಕಾಲೇಜ್ ತೆಗೆಯುವ ತೆವಲು. ದುಡ್ಡು ಸರ್ಕಾರದ್ದು,ಹೆಸರು ಇವರದ್ದು. ನೀಡಲಾಗುವ ಜ್ಞಾನ ವಿದೇಶದ್ದು!. ದುರಂತ ಎಂದರೆ ಇಂತಾ ದೊಡ್ಡ ಮಾಫಿಯಾಗಳ ಶಿಕ್ಷಣ ಸಂಸ್ತೆಗಳಿಗೆ ರಾಷ್ಟ್ರಪತಿಗಳು ಬರುತ್ತಾರೆ.
"In rome,be a Roman" ಎನ್ನುವಂತಹಾ ಇಂದಿನ ಪರಿಸ್ತಿತಿಯಲ್ಲಿ ಗವಾಯಿಗಳು ನಡೆದ ಹಾದಿಯಲ್ಲಿ ಇತರರು ನಡೆಯುವುದರಿಂದ ಏನಾದರೂ ಉಪಯೋಗವಿದೆಯೇ?  

Sunday, September 19, 2010

ಸಮಾಜ ಮತ್ತು ಬೇಲಿ


ಗಾಂಧೀಜಿಯವರ ಗ್ರಾಮಸ್ವರಾಜ್ಯದ ಚಿತ್ರಣವನ್ನು ಜನರ ಮನಸ್ಸಿಗೆ ತಂದು ಆಡಳಿತವನ್ನು ಹಳ್ಳಿಗೆ ತೆಗೆದುಕೊಂಡು ಹೋಗಬಹುದು, ಬರಿ ಆಲದಮರದ ಕೆಳಗಿನ ಪಂಚಾಯತಿಯಿಂದ ಜನರ ಸಮಸ್ಯೆ ಬಗೆಹರಿಸಬಹುದು ಎಂದೆಲ್ಲಾ ಬೊಗಳೆ ಹೊಡೆದು ಸ್ವತಂತ್ರ ಹೋರಾಟಕ್ಕೆ ಜನರನ್ನು ಸೆಳೆದು ಅವರನ್ನ ಬ್ರಿಟಿಷರ ಬೂಟುಗಾಲುಗಳ ಕೆಳಗೆ ಹಾಕಿ ಒದೆಸಿದ್ದ ಧೀಮಂತ ನಾಯಕರಗಳೆಲ್ಲಾ ಸ್ವತಂತ್ರ ಬಂದ ಕೂಡಲೇ ಬದಲಾದರು. ಸಾಮಾನ್ಯ ಜನರಿಗೂ ಆಳುವವರಿಗೂ ವ್ಯತ್ಯಾಸ ಬೇಡವೇ ಎನಿಸಿತು. ಈ ಅಸೆ ಮನಸ್ಸಿಗೆ ಬಂದೊಡನೆ ಎದ್ದು ನಿಂತದ್ದು ವಿಧಾನಸೌಧ. ನೀಚಾತಿನೀಚ ಬ್ರಿಟಿಷ್ ಅಧಿಕಾರಿಗೂ ಇಂತಹ ತಾರತಮ್ಯದ ಆಲೋಚನೆ ಬಂದಿರಲು ಸಾಧ್ಯವಿಲ್ಲ. ಅತ್ತ ಸ್ವಾತಂತ್ರ ಬರುತ್ತಲೇ ಬಹಳ ದಿನಗಳಿಂದ ಹತ್ತಿಕ್ಕಿದ್ದ "ಮೇಲು-ಕೀಳು" ಉಚ್ಚ ನೀಚ" ಒಡೆಯ-ಸೇವಕ ಮುಂತಾದ ಭಾವನೆಗಳು ರೆಕ್ಕೆ ಪುಕ್ಕ ಕಟ್ಟಿ ಹಾರತೊಡಗಿದವು. ಸಬರಮತಿ ಆಶ್ರಮದ ಗುಡಿಸಲಿಂದ ರಾಮರಾಜ್ಯ ಕಟ್ಟುತ್ತೇವೆ ಎಂದು ಘೋಷಣೆ ಕೂಗುತ್ತಿದ್ದವರು ಸ್ವತಂತ್ರ ಬಂದ ಕೊಡಲೇ ಬ್ರಿಟಿಷರು ಬಿಟ್ಟು ಹೋದ ಬಂಗಲೆಗಳನ್ನು ಆಕ್ರಮಿಸಿಕೊಂಡರು. ನಾವು ಸ್ವತಂತ್ರ ಹೋರಾಟದ ಕಲಿಗಳು ಎಂದು ಯಾರನ್ನು ಹೊಗಳುತ್ತೆವೆಯೋ ಅವರುಗಳ್ಯಾರೂ ಬಾಷಾವಾರು ಪ್ರಾಂತ್ಯದ ರಚನೆಗೆ ಬೆಂಬಲ ನೀಡಲಿಲ್ಲ. ಬಾಷಾವಾರು ಪ್ರಾಂತ್ಯದ ಕೂಗು ಮುಗಿಲು ಮುಟ್ಟಿದಾಗ ತಾವೂ ಕೂಡ ಎಲ್ಲಿ ಬ್ರಿಟಿಷರ೦ತೆ ಅಧಿಕಾರ ಕಳೆದುಕೊಳ್ಳುತ್ತೆವೋ ಎಂಬ ಭಯಕ್ಕೆ ಬಿದ್ದು ಬಾಷಾವಾರು ಪ್ರಾಂತ್ಯ ರಚನೆಗೆ ಒಪ್ಪಿಗೆ ನೀಡಿದರು. ಇದು ನೇರ ಒಪ್ಪಿಗೆ ಆಗಿರಲಿಲ್ಲ. ಜನರ ಕಣ್ಣೊರೆಸುವ ನಾಟಕವಾಡಿ ಬೀಸುವ ದೊಣ್ಣೆಯಿಂದ ತಪ್ಪಿಸಿಕೊಳ್ಳುವ  ಹುನ್ನಾರವಾಗಿತ್ತು. ಬಾಷಾವಾರು ಪ್ರಾಂತ್ಯದ ಬಗ್ಗೆ ಕೇಂದ್ರದ ಯಾವ ನಾಯಕನಿಗೋ ಸ್ಪಷ್ಟ ಅಭಿಪ್ರಾಯ ಇರಲಿಲ್ಲ. ಅಧಿಕಾರ ಉಳಿಸಿಕೊಳ್ಳುವುದಷ್ಟೇ ಅವರ ಗುರಿಯಾಗಿತ್ತು. ಇಂತಹಾ ಎಡಬಿಡಂಗಿ ನಾಯಕರುಗಳ ಕೈಗೆ ೧೯೨೨ ರಲ್ಲೆನಾದರೂ ಅಧಿಕಾರ ಸಿಕ್ಕಿದ್ದರೆ ಭಾರತದ ಇಂದಿನ ಪರಿಸ್ತಿತಿ ಇನ್ನೂ ಭೀಕರವಾಗಿರುತಿತ್ತು. ಅದಕ್ಕಾಗಿಯೇ ಮಹಾತ್ಮಾ ಗಾಂಧೀ ಸ್ವಾತಂತ್ರ ಚಳುವಳಿಯಿಂದ ಹೊರಬಂದು ಸಮಾಜ ಸುದಾರಣೆಯತ್ತ ಗಮನಹರಿಸಿದರು.
ಆದರೆ ಬಾರತೀಯ ಸಂಸ್ಕ್ರತಿಯ ಮೂಲಭೂತ ಅಂಶವಾದ "ತಾರತಮ್ಯ " ಎಂಬುದು ಎಲ್ಲರಲ್ಲಿಯೂ ಎಲ್ಲೋ ಒಂದೊಂದು ಕಡೆ ಇಣುಕುತ್ತದೆ.  ಜನ ಪರಸ್ಪರರ ಸ್ವಾತಂತ್ರವನ್ನು ಮೊಟಕು ಗೊಳಿಸುವುದರಲ್ಲೇ ತಲ್ಲಿನರಾಗಿರುತ್ತಾರೆ. ಸಂಸ್ಕ್ರತಿಯ ಹೆಸರಿನಲ್ಲಿ ನಾವು ನಮ್ಮ ಪುರಾತನ ವಿಕೃತಿಗಳಿನ್ನು ಪುನರುಜ್ಜೀವನ ಗೊಳಿಸಲು ಪ್ರಯತ್ನಿಸುತಿದ್ದೇವೆ.

ರಾಜಕೀಯ ಮಾಡಲು ಸಮಾಜ ಮತ್ತು ಸಮುದಾಯದ ಹಿರಿಮೆಯ ಬಗ್ಗೆ ಮಾತಾಡುತ್ತೇವೆ. ಸಮುದಾಯ ಹೇಗೆ ಒಟ್ಟಾಗಬೇಕು ಎಂದು ಭಾಷಣ ಮಾಡುತ್ತೇವೆ. ಆದರೆ ಈ ಸಮಾಜದಲ್ಲಿ ಮೇಲ್ಪದರಕ್ಕೆ ಬರುವವನು ಪಡೆಯುವ ಮೊದಲ ಸೌಲಭ್ಯವೆಂದರೆ ".ಬೇಲಿ".
ಬೇಲಿ?
ಹೌದು. ಅವನಿಗೂ ಸಮಾಜಕ್ಕೂ ನಡುವೆ ಒಂದು ಬೇಲಿ. ಉದಾಹರಣೆಗೆ ಅಧಿಕಾರಿಯಾಗುವವನು ಒಂದು ಖಾಸಗಿ ಕೊಠಡಿ ಪಡೆಯುತ್ತಾನೆ. ನಂತರ ಒಬ್ಬ ಗಾರ್ಡು ಇರುವ ಒಂದು ಬಂಗಲೆ ಹೊಂದುತ್ತಾನೆ. ಅದು ಅವನಿಗೇ ಒಂದು ರೀತಿಯ ಘನತೆ ತಂದು ಕೊಡುತ್ತದೆ ಎಂದು ಭಾವಿಸಲಾಗುತ್ತೆ.
ಇದರಿಂದಲೇ ನಮ್ಮ ನಾಯಕರು ಆಶ್ರಮಗಳನ್ನು ಬಿಟ್ಟು ರಾಷ್ಟ್ರಪತಿ ಭಾವನದಂತಹಾ ವೈಭವೋಪೇತ ಬಂಗಲೆ ಹಿಡಿದು ಕೊಳ್ಳುತ್ತಾರೆ. ಮನುಷ್ಯ ಸಾಧ್ಯವಾದಾಗಲೆಲ್ಲ ಸಮುದಾಯದ ಮತ್ತು ತನ್ನ ನಡುವೆ ಬೇಲಿ ಕಟ್ಟಿಕೊಳ್ಳಲು ಪ್ರಯತ್ನಿಸುತ್ತಾನೆ. ಆದರೆ ಈ ಬೇಲಿಗೆ ಬೇಕಾಗುವ ಸಾಮಾನಿಗಾಗಿ ಅವನು ಸಮುದಾಯವನ್ನೇ ಅಶ್ರಯಿಸಿಕೊಂಡಿರುತ್ತಾನಾದರಿಂದ ಆತ ಸಮಾಜವನ್ನು ಬಲವಾಗಿರಲು ಉತ್ತೇಜಿಸುತ್ತಾನೆ.
ಅವನಿಗೆ  ಸಮಾಜ ಬೇಕು ಆದರೆ ಅವನಿಗೆ ಸಮಾಜ ಬೇಕಾಗಿಲ್ಲ. ಸಮಾಜವನ್ನು,ಸಮಾಜವಾದವನ್ನು ಸೃಷ್ಟಿ ಮಾಡುವವರೂ ಇವರೇ. ತಾರತಮ್ಯ ಮಾಡುವವರೂ ಇವರೇ. ಅಂತೆಯೇ ಸಮಾಜಮುಖಿ ಎಂದು ಕರೆಯಲ್ಪಡುವ ಅಂದೊಲನಗಳು ಸಾಮಾನ್ಯ ಜನರಿಗೆ ಯಾವುದೇ ರೀತಿಯಲ್ಲಿ ಸಹಾಯವಾಗದಿದ್ದರೂ ಅದು ನಾಯಕರಿಗೆ ಬಹಳ ಅನುಕೂಲ ಕರವಾಗಿಪರಿಣಮಿಸಿದೆ. ಆದುದರಿಂದ ಸಾಮಾನ್ಯ ಮನುಷ್ಯ ರಾಜನಿಗಿಂತಲೂ ಹೆಚ್ಚು ರಕ್ತ ಬೆವರು ಸುರಿಸಿದರೂ ಅವನು  ಇತಿಹಾಸದ ಪುಟಗಳನ್ನು ಸೇರುವುದಿಲ್ಲ. ನೇರವಾಗಿ ಗೋರಿಸೇರುತ್ತಾನೆ. ಅವನ ಗೋರಿ ಮೇಲೆ ನಿಲ್ಲಿಸಲಾದ ಕಲ್ಲು ಅವನ ಒಡೆಯನ ಹೆಸರನ್ನು ಹೇಳುತ್ತದೆಯೇ ಹೊರತು ಅವನ ಹೆಸರನ್ನು ಹೇಳುವುದಿಲ್ಲ.(ವಿರಳ). ಸಾಮಾನ್ಯ ಮನುಷ್ಯನು ದುಡಿಯಲು ಕೈಗಳನ್ನು ತಯಾರಿಸುವ ಕಾರ್ಖಾನೆಯಷ್ಟೇ. ಅದಕ್ಕಾಗಿಯೇ ರಾಜಕಾರಣಿಗಳು ಸಾಮೂಹಿಕ ವಿವಾಹವನ್ನು ಮಾಡಿಸುವುದು ಮತ್ತು ಸ್ವತಃ ಸ್ವಾತಂತ್ರರಾಗಿರುವ   ಧಾರ್ಮಿಕ ನಾಯಕರು ವೈವಾಹಿಕ ಮೌಲ್ಯಗಳ ಬಗ್ಗೆ ಭಾಷಣ ಬಿಗಿದು ಅವುಗಳಿಗೆ ಇಲ್ಲದ ಪಾವಿತ್ರತೆಯನ್ನು ಆರೋಪಿಸುವುದು.
(ಸಶೇಷ)