Saturday, December 18, 2010

ಶಂಗರಾಜಾರ್ಯರ ಮಂದ್ರಶಾಸ್ತ್ರಂ !

 ಬೆಂಗಳೂರಿನಲ್ಲಿ ಅಥವಾ ಮೈಸೂರಿನಲ್ಲಿ ಒಂದು ಸುತ್ತು ಓಡಾಡಿ ನೋಡಿದರೆ ಅಚ್ಚರಿ ಆಗುತ್ತದೆ,ಅಲ್ಲಿ ಬೇರು ಬಿಟ್ಟಿರುವ ಮಲಿಯಾಳಿಗಳನ್ನು ನೋಡಿ. ಮೊದಲು ಬೇಕರಿ ಉದ್ಯಮ ಅಯ್ಯಂಗಾರರ ಹಿಡಿತದಲ್ಲಿತ್ತು. ಈಗ ಎಲ್ಲಿ ನೋಡಿದರೂ ಮಲಿಯಾಳಿಗಳದ್ದೇ ಬೇಕರಿ!. ಮೊದಲು ದಿನಸಿ ಅಂಗಡಿಗಳು ತೆಲುಗರ ಒಡೆತನದಲ್ಲಿತ್ತು. ಈಗ ಮಲಿಯಾಳಿಗಳು ಇವರನ್ನು ಹಿಂದೆಹಾಕಿದ್ದಾರೆ.ಈಗ “ಮತ್ತೋಟ್ ಫೈನಾನ್ಸ್” ಎಂಬ ಕಂಪನಿಎಲ್ಲೆಲ್ಲೂ ರಾರಾಜಿಸುತ್ತಿದೆ. ಅದೂ ಮಲ್ಲುಗಳದ್ದೇ. ಪುನೀತ್ ರಾಜ್ ಕುಮಾರ್ ಪ್ರಚಾರ ಮಾಡುವ ಮಲ್ಲಾಪುರಂ ಗೋಲ್ಡ್, ಅಲುಕಾಸ್ ಗೋಲ್ಡ್ ಇವೂ ಅವರದ್ದೇ.ನಮ್ಮಲ್ಲಿ ಮೀನು ಮಾರುವವರೂ ಮಲಿಯಾಳಿಗಳೇ !, ನಮ್ಮ ಕೆರೆಯ ಮೀನು ನಮಗೆ ಮಾರಿ ಲಾಭಗಳಿಸುವ ಜನರ ಕಲಾತ್ಮಕತೆ ನಿಜಕ್ಕೂ ಅಧ್ಭುತ. ಮೀನಿನಿಂದ ಹಿಡಿದು ಅಧ್ಯಾತ್ಮದ ವರೆಗೆ ಎಲ್ಲವೂ ಮಲಿಯಾಲಿಗಳದ್ದೆ ದರ್ಬಾರು. ಉದಾ: ಶ್ರೀ ಶಂಕರಾಚಾರ್ಯರು. ಇಂದಿಗೂ ಸಹಾ ಅಧ್ಯಾತ್ಮಿಕ ಮಾರುಕಟ್ಟೆಯಲ್ಲಿ ಭರಾಟೆಯಿಂದ ಮಾರಾಟವಾಗುವಂತಹ ಶಂಕರರಿಗೆ ಅವರ ಕಾಲದ ಒಬ್ಬನೇ ಒಬ್ಬ ಲೇಖಕ ಮಾತ್ರ ಒಂದಿಷ್ಟು ಸ್ಪರ್ದೆ ನೀಡುತ್ತಾನೆ !. ಯಾರವನು? ವಾತ್ಸಾಯನ. ಅಂತಹುದು ಮಾರಾಟ ಆಗುವುದು ದೊಡ್ಡ ವಿಷಯ ಅಲ್ಲ ಬಿಡಿ.. ಶಂಕರರ ಸರಕು ಮಾರಟವಾಗುವುದೇ ದೊಡ್ಡ ಪವಾಡ!.

ಅವರು ಮಂತ್ರ ಶಾಸ್ತ್ರದ ಬಗ್ಗೆ ಪುಸ್ತಕ ಬರೆದಿದ್ದಾರಂತೆ. ಮಂತ್ರಗಳು ಒಂತರಾ ವೈಬ್ರೆಶನ್ ಸೃಷ್ಟಿಮಾಡುತ್ತದಂತೆ. ಅದರಿಂದ ವಿವಿಧ ಫಲಗಳು ಸಿಗುತ್ತವಂತೆ. ಒಂದು ವೇಳೆ ತಪ್ಪು ಉಚ್ಚಾರಣೆ ಮಾಡಿದರೆ ಫಲ ಸಿಗೊದಿಲ್ಲವಂತೆ.ಹಾಗಂತ ಬೆಳಗೆ ಟಿ ವಿ ನಲ್ಲಿ ಬರುವ ಬುರುಡೆ ಜ್ಯೋತಿಷಿಗಳು ಹೇಳುತ್ತಾರೆ. ಶಂಕರರೇನೋ ಮಂತ್ರವಿದ್ಯೆ ಪುಸ್ತಕ ಬರೆದರು...

ಆದ್ರೆ ಇಲ್ಲಿ ನನಗೊಂದು ಡೌಟ್ ಇದೆ.

ನಮ್ಮ ಮಂತ್ರೋಚ್ಚಾರಣೆ ಯಶಸ್ವಿಯಾಗಬೇಕೆಂದರೆ ನಾವು ಅವರು ಬರೆದಿದ್ದನ್ನು ಫಾಲ್ಲೋ ಮಾಡಬೇಕೋ? ಅಥವಾ ಅವರು ಹೇಳಿದ್ದನ್ನು ಫಾಲ್ಲೋ ಮಾಡಬೇಕೋ ? ,

ನಾನು ಯಾಕೆ ಹೀಗೆ ಕೇಳ್ತಾ ಇದ್ದೀನಿ ಅಂದ್ರೆ ಶಂಕಾರಾಚಾರ್ಯ ಮಲೆಯಾಳಿ ನೋಡಿ. ಅವರು ಮಂತ್ರಗಳನ್ನು ಹೀಗೆ ಉಚ್ಚರಿಸುತಿದ್ದಿರಬಹುದು?....ಹಾ...ಹಾ...ಹಾ... ಸೊ ನಿಮ್ಮ ಸಾಧನೆಗೆ ತಕ್ಕ ಫಲ ಸಿಕ್ಕಿಲ್ಲಾ ಅಂದ್ರೆ ಅವರ ಕೃತಿಗಳನ್ನ ಮಲೆಯಾಳಿ ಆಕ್ಸೆಂಟ್ ನಲ್ಲಿ ಓದಿ ನೋಡಿ... ವೈಬ್ರೆಶನ್ ಕರೆಕ್ಟ್ ಆಗಿ ಬರಬಹುದು !.

ಮಲೆಯಾಳಿಗಳ ಬಾಯಲ್ಲಿ ಅದು ಮಂತ್ರ ಶಾಸ್ತ್ರ ಅಲ್ಲ . ಅದು ಮಂದ್ರಶಾಸ್ತ್ರಂ!....ಗೊತ್ತಾಯ್ತಾ?

No comments: