Sunday, January 30, 2011

ಈ ಜನ ಏರ್ರ್ ....

ಹೊಸಬರು ನಿಮ್ಮೊಂದಿಗೆ ಕಂಡುಬಂದರೆ ಅವರು ಯಾರೆಂದು ವಿಚಾರಿಸುವುದು ಒಂದು ಸಾಮಾನ್ಯ ವಿಷಯ. ಅದು ಮನುಷ್ಯಸಹಜ ಕುತೂಹಲ. ತುಳುನಾಡಿನಲ್ಲಿ  ನಿಮ್ಮೊಂದಿಗೆ ಯಾರಾದರು ಅಪರಿಚಿತರು ಇದ್ದರೆ ಪರಿಚಯಸ್ತರು ಈ 'ಜನ ಏರ್ರ್' ....ಎಂದು ಕೇಳುತ್ತಾರೆ. 'ಜನ' ಎಂದರೆ 'ಮನುಷ್ಯ' ಎಂಬ ಅರ್ಥ ತುಳುವಿನಲ್ಲಿಲ್ಲ. ಮಾತ್ರವಲ್ಲ .ಯಾವ ಭಾಷೆಯಲ್ಲಿಯೂ ಇಲ್ಲ. ಜನ ಎಂಬುದು ಸಂಸ್ಕೃತ ಶಬ್ದ. ಜನ ಎಂದರೆ ಒಂದು ಸಮೂಹ.ವೇದ ಕಾಲದ ಒಂದು ಸಾಮಾಜಿಕ ವಿಂಗಡನೆ. 'ಜನ' ಎಂದು ನಮ್ಮನ್ನು ಸಂಬೋದಿಸಿದಾಗ 'ಓಹೋ,ಪರವಾಗಿಲ್ಲ.ನಮಗೆ ಬಹಳ ಮರ್ಯಾದೆ ಕೊಡುತಿದ್ದಾರೆ,ಬಹುವಚನ ಉಪಯೋಗಿಸುತಿದ್ದಾರೆ" ಅಂತಾ ನಾವಂದುಕೊಳ್ಳಬಹುದು. ಆದರೆ ಅಸಲಿಗೆ ಇಲ್ಲಿ ಮುನುಷ್ಯನಿಗೆ ಮರ್ಯಾದೆಯೂ ಇಲ್ಲ,ಮಹತ್ವವೂ ಇಲ್ಲ. ಅದು ಸೂಚ್ಯವಾಗಿ "ಇವನು ಯಾವ ಜಾತಿ ?" ಎಂದು ಕೇಳುವ ಸ್ಟೈಲ್!. ನಾವು ಈಗ ಇದನ್ನು ಆ ಅರ್ಥದಲ್ಲಿ ಉಪಯೋಗಿಸುತ್ತಿಲ್ಲ.ಕೇವಲ ದೇಶಾವರಿಯಾಗಿ,ಲೋಕರೂಡಿಯಾಗಿ ಉಪಯೋಗಿಸುತಿದ್ದೇವಷ್ಟೇ. ಆದರೆ ಜಾತೀಯತೆ, ಸಂಶಯ ಇತ್ಯಾದಿಗಳು ಹೇಗೆ ಭಾಷೆಯ ಮೂಲಕವೂ ನಮ್ಮನ್ನು ವ್ಯಾಪಿಸಿದೆ ಎನ್ನುವುದಕ್ಕೆ ಇದೊಂದು ಉದಾಹರಣೆ. In our society everything is interlinked.ಎಲ್ಲದಕ್ಕೂ ಒಂದಕ್ಕೊಂದು ಕನೆಕ್ಷನ್ ಇದೆ. ಏನಂತೀರಿ ?

Friday, January 28, 2011

ವಿವಾಹ ವಿಚ್ಛೇಧನಗಳು

ಇತ್ತೀಚೆಗೆ ಸುಧಾ ಮ್ಯಾಗ್ಸೀನ್ ನಲ್ಲಿ ಒಂದು ಲೇಖನ ಓದಿದೆ. ಇಂದಿನ ದಿನಗಳಲ್ಲಿ ಹೆಚ್ಚೆಚ್ಚು ವಿವಾಹ ವಿಚ್ಛೇಧನಗಳಾಗುತ್ತಿರುವ ಬಗ್ಗೆ ಲೇಖಕರು ಅದರಲ್ಲಿ ಗೋಳಾಡಿದ್ದಾರೆ. ಹೌದಲ್ಲಾ, ಓದುವಾಗ ಅನ್ನಿಸಿತು ನನಗೆ. ಆದರೆ ಹೌದು ಅಥವಾ ಇಲ್ಲಾ ಅನ್ನಲು ನಾನು ಯಾರು? ಇಬ್ಬರು ಪ್ರಾಪ್ತ ವಯಸ್ಕರು ಅವರ ವೈಯುಕ್ತಿಕ ಸಮಸ್ಯೆಯನ್ನು ಅವರಿಗೆ ಸರಿಕಂಡ ರೀತಿಯಲ್ಲಿ ಬಗೆಹರಿಸಿಕೊಳ್ಳುವ ಪ್ರಕ್ರಿಯೆಯ ಮಧ್ಯೆ ಮೂಗುತೂರಿಸುವುದು ಅತ್ಯಂತ ಹೇಯ ಮತ್ತು ಅನೈತಿಕ ಕೆಲಸ ಎಂದು ನನಗನಿಸುತ್ತಿದೆ.ಆದುದರಿಂದ ಡೈವೋರ್ಸ್ ನ ಸಾಧಕ ಬಾಧಕಗಳನ್ನು ನಾನಿಲ್ಲಿ ಚರ್ಚಿಸುವ ಪ್ರಯತ್ನ ಮಾಡಿಲ್ಲ. ಹಾಗೆ ಮಾಡಿದರೆ ಕುರುಡರು ಆನೆಯನ್ನು ಮುಟ್ಟಿದ ಕತೆಯನ್ತಾಗುತ್ತದೆ. ಯಾಕೆಂದರೆ ಇಲ್ಲಿ ಪ್ರತಿಯೊಂದು ಪ್ರಕರಣವು ವಿಬಿನ್ನವಾಗಿರುತ್ತದೆ. ಜೊತೆಗೆ ಆ ಜನರ ಮನಸ್ಥಿತಿಯ ಸೂಕ್ಷ್ಮತೆಯ ಅರಿವು ನಮಗಿರಬೇಕಾಗುತ್ತದೆ.


ಈಗಿನ ಜನರಿಗೆ ತಾಳ್ಮೆಯಿಲ್ಲ, ಬದುಕಲು ಗೊತ್ತಿಲ್ಲಾ ,ಅತಿಯಾದ ದುರಾಸೆ,ಮೌಲ್ಯಗಳಿಲ್ಲ ಇತ್ಯಾದಿ ಬಡಬಡಿಸಬಹುದು. ಆದರೆ ಅದರಿಂದ ಪ್ರಕರಣಗಳ ವಸ್ತುನಿಷ್ಠ ಮೌಲ್ಯಮಾಪನ ಆದಂತಾಗುವುದಿಲ್ಲ.

ಸ್ವಲ್ಪ ದಿನದ ಹಿಂದೆ ಬೆಂಗಳೂರಿನ ಪೋಲಿಸ್ ಕಮಿಷನರ್ ಒಬ್ಬರು ಒಂದು ಕಿವಿಮಾತು ಹೇಳಿದ್ದರು. “ಸಂಬಂಧಗಳು ಇಷ್ಟ ಇಲ್ಲಾ ಅಂದ್ರೆ ಕಾನೂನುಬದ್ಧವಾಗಿ ಬಿಟ್ಟುಬಿಡಿ. ಆದರೆ ಹೊಡೆದಾಟ /ಕೊಲೆ ಇತ್ಯಾದಿ ಮಾಡಬೇಡಿ” ಎಂದು ಹೇಳಿದ್ದರು. ಅವರು ಯಾಕೆ ಹಾಗೆ ಹೇಳಿದರು? ,ಪೊಲೀಸರಿಗೆ ಕೆಲಸ ಜಾಸ್ತಿಯಾಗುತ್ತೆ ಅನ್ನೋ ಕಾರಣಕ್ಕಂತೂ ಖಂಡಿತಾ ಅಲ್ಲ.

ಇಂದು ವರದಿಯಾಗುತ್ತಿರುವ ಕೌಟುಂಬಿಕ ಹಿಂಸೆಯ ಸಂಖ್ಯೆ ವಿಚ್ಛೇಧನಗಳ ಸಂಖ್ಯೆಗಿಂತ ಹೆಚ್ಚು.ಇನ್ನು ವರದಿಯಾಗದ ಪ್ರಕರಣಗಳ ಸಂಖ್ಯೆ ಎಷ್ಟಿದೆಯೋ ದೇವರೇ ಬಲ್ಲ. ಕಾರಣಾಂತರಗಳಿಂದ ಇಂಥಾ ವಿಷಯಗಳನ್ನ(ಬಿನ್ನಮತವನ್ನು) ಬಹಿರಂಗಗೊಳಿಸದೆ ತಾವೇ ಒಳಗೊಳಗೇ ಕೊರಗುವ ಗಂಡ/ಹೆಂಡತಿಯರು ಹಲವರಿದ್ದಾರೆ. ಇವರ ಸಮಸ್ಯೆಗಳಿಗೆ ಪರಿಹಾರ ಆಗುತ್ತೋ ಬಿಡುತ್ತೋ ಇದು ನಮ್ಮ ಸಮಾಜಕ್ಕೆ ಬೇಕಾಗಿಲ್ಲ. ಸಮಾಜ ದಂಪತಿಗಳಿಗೆ ನೀಡುತ್ತಿರುವ ಮೆಸೇಜ್ ಇಷ್ಟೇ “ಏನಾದರೂ ಮಾಡಿಕೊಂಡು ಹಾಳಾಗಿ. ಆದರೆ ನಾವು ಹಲವಾರು ವರ್ಷಗಳಿಂದ, ತಲೆತಲಾಂತರಗಳಿಂದ ಮಾಡಿಕೊಂಡು ಬಂದ ಸಂಪ್ರದಾಯ ಬಿಡಬಾರದು”ಅಂತ . ನಮ್ಮ ಗಾದೆಗಳು ಅದಕ್ಕೆ ತಕ್ಕುದಾಗೆ ಇದೆ. ಉದಾ: ಗಂಡಾ ಹೆಂಡತಿಯರ ಜಗಳ ಉಂಡು ಮಲಗುವ ತನಕ, ಎಲ್ಲರ ಮನೆಯ ದೋಸೆಯೂ ತೂತೇ, (ಎಲ್ಲರ ಮನೆಯ ತೂತುಗಳ ಬಗ್ಗೆ ಯಾಕಿಷ್ಟು ಆಸಕ್ತಿ?) , ಏಳೇಳು ಜನುಮದ ಬಂಧ, .....ಋಣಾನುಬಂಧ ರೂಪೇನ ...ಇತ್ಯಾದಿ.ಇಂತಹಾ ತಲೆಹಿಡುಕ ಸ್ಲೋಗನ್ ಗಳನ್ನೇ ಹಿಡಕೊಂಡು ಸಾವಿರಾರು ವರುಷ ಸವೆದಿದ್ದೇವೆ . ಇವತ್ತು ತಾಳಿ ಅನ್ನೋದು ಎಷ್ಟೋ ಜನರ ಕುತ್ತಿಗೆಗೆ ನೇಣಿನ ಹಗ್ಗಕ್ಕಿಂತಾ ಕಷ್ಟದಾಯಕವಾಗಿದೆ.

ನೇಣಾದರೂ ಹಾಕೋ,ಕೊಲೆಯಾದರೂ ಮಾಡು ಏಳೇಳು ಜನ್ಮಕ್ಕೋ ಒಬ್ಬನ್ನೇ ಕಟ್ಕೊಂಡು ಸಾಯಿ ಎಂಬರ್ಥ ಬರೋ ಘೋಷಣೆಯನ್ನು ಒಂದು ಸುಬಾಷಿತ,ಹಾರೈಕೆ ಅಂತಾ ಕರೆಯೋದು ಎಷ್ಟರ ಮಟ್ಟಿಗೆ ಸರಿ.?

ಬಸ್ನಲ್ಲಿ,ಹರಟೆಕಟ್ಟೆಯಲ್ಲಿ,ಆಫಿಸ್ನಲ್ಲಿ ಮಾತ್ಮತ್ನಲ್ಲಿ ವಿಚ್ಛೇಧನವನ್ನು ಕಂಡಿಸುವ ಹಲವರನ್ನು ನೋಡಿದ್ದೇನೆ. ಇವರೆಲ್ಲಾ ಒಂದೇ ವಿಷಯವನ್ನು ಇಷ್ಟು ರೋಷಾವೇಶದಿಂದ ಖಂಡಿಸುತ್ತಾರಲ್ಲಪ್ಪಾ. ಇವರನ್ನು ಒಗ್ಗೂಡಿಸಿರುವ ಅಂಶ ಏನು? ಎಂದು ತುಂಬಾ ತಲೆ ಕೆಡಿಸಿಕೊಂಡೆ. ಇವರೆಲ್ಲಾ ಬೇರೆ ಬೇರೆ ಜಾತಿಗೆ ,ಧರ್ಮಕ್ಕೆ,ವಯೋಮಾನಕ್ಕೆ ಸೇರಿದವರು!.ಸಮಸ್ಯೆ ಇನ್ನಷ್ಟು ಜಟಿಲ ಆಯಿತು. ಆಮೇಲೆ ಒಂದು ಸಮಾನ ಅಂಶ ಗೊತ್ತಾಯಿತು. ಅದೇನು ಗೊತ್ತೇ?

“ಇವರೆಲ್ಲಾ ಬ್ರಷ್ಟರು!”

ಲಂಚದ ಬಗ್ಗೆ, ಕೆಲಸ ಕದಿಯುವ ಬಗ್ಗೆ ಬಹಳ ಪಾಸಿಟಿವ್ ಆಟಿಟ್ಯೂಡ್(?) ಇಟ್ಟುಕೊಂಡಿರುವ ಇವರು ಈ ಬಗ್ಗೆ ಮಾತ್ರ ಯಾಕೆ ಸೆನ್ಸಿಟಿವಿಟಿ ತೋರಿಸುತಿದ್ದಾರೆ ಎಂಬ ಬಗ್ಗೆ ಇನ್ನಷ್ಟು ಕುತೂಹಲ ಸುರುವಾಗಿದ್ದೇ ಈ ಲೇಖನಕ್ಕೆ ನಾಂದಿಯಾಯಿತು.
otherwise ಡಿವೋರ್ಸ್ ಬಗ್ಗೆ ನನ್ನದೇ ಆದ ಯಾವುದೇ ಅಭಿಪ್ರಾಯ ಇಲ್ಲ.

ಸಮಾಜ ಅನ್ನೋದು ಒಂದು ಸಂಕೀರ್ಣ ವ್ಯವಸ್ಥೆ .ಇಲ್ಲಿ ಒಳ್ಳೆಯ ಸ್ಥಿತಿಯಲ್ಲಿ ಇದ್ದೀವಿ ಅನ್ನೋ ಜನ ಯಾವೂದೋ ಒಂದು ಬ್ಯಾಲನ್ಸ್ ನಲ್ಲಿ ನಿಂತಿರುತ್ತಾರೆ. ಸಮಾಜ ಎಂಬುದು ಮನುಷ್ಯನ ಅಸಾಹಾಯಕತೆಯನ್ನು,ದೌರ್ಬಲ್ಯಗಳನ್ನು ಬಂಡವಾಳಮಾಡಿಕೊಂಡು ಕಟ್ಟಲಾದ ಸಂಸ್ಥೆ.

ಅದರಲ್ಲೂ ಬ್ರಷ್ಟರಾದವರು ಈ ಸಾಮಾಜಿಕ ವ್ಯವಸ್ಥೆಯ ಅತಿ ದೊಡ್ಡ ಫಲಾನುಭವಿಗಳು. ಸಮಾಜದ ಪ್ರತಿಯೊಂದು ಘಟಕಗಳಲ್ಲೂ “ಲಾಭದಾಯಕ” ಎಂಬುವ ಬಿಂದುಗಳಿವೆ. ಆ ಬಿಂದುವಿನ ಅಧಿಪತಿ ಒಬ್ಬ ಭ್ರಷ್ಟನೇ ಆಗಿರುತ್ತಾನೆ ಎಂದು ಸೂಕ್ಷ್ಮವಾಗಿ ಗಮನಿಸಿದಾಗ ನಿಮಗೆ ತಿಳಿಯುತ್ತದೆ.(ಉದಾಹರಣೆಗೆ ಒಂದು ಸರ್ಕಾರಿ ಇಲಾಖೆಯನ್ನೇ ನೋಡೋಣ, ಎಂತಹಾ ಕಿತ್ತುಹೋದ ಇಲಾಖೆಯಲ್ಲಿಯೂ ಒಂದು ಲಾಭಬರುವ ಟೇಬಲ್ ಇದ್ದೆ ಇರುತ್ತೆ. ಅಲ್ಲಿಗೆ ಒಬ್ಬ ಖದೀಮನೆ ವರ್ಗ ಮಾಡಿಸಿಕೊಂಡು ಬರುತ್ತಾನೆಯೇ ಹೊರತು ಆ ಟೇಬಲ್ ಎಂದೂ ಸಜ್ಜನನ ಪಾಲಾಗುವುದಿಲ್ಲ!) ಸಮಾಜದಲ್ಲಿ ನಡೆಯುವ ಯಾವುದೇ ಪಲ್ಲಟಗಳು ಇಂದು ಅವರು ಹೊಂದಿರುವ ಸೌಲಭ್ಯಗಳನ್ನು ಕಿತ್ತುಕೊಳ್ಳುತ್ತದೆ ಎಂಬ ಅವ್ಯಕ್ತ ಭಯ ಅವರಲ್ಲಿ ತುಂಬಿರುವುದರಿಂದ ಅವರು ಬದಲಾವಣೆಗಳನ್ನು ವಿರೋಧಿಸುತ್ತಾರೆ. ಮೊದಮೊದಲು ಅವಿಭಕ್ತ ಕುಟುಂಬಗಳ ತೊರೆದು ಸಣ್ಣ ಕುಟುಂಬಗಳನ್ನು ರೂಪಿಸಿಕೊಳ್ಳ ಹೊರಟವರ ಬಗ್ಗೆಯೂ ಇಂತಹದೇ ವಿರೋಧ ವ್ಯಕ್ತವಾದದ್ದನ್ನು ನಾವು ಗಮನಿಸಬಹುದು.(give link to Avibhakata kutumba blog) ಇಂದು ವಿಚ್ಚೇದನ ಪಡೆದವರನ್ನು ಪಡೆಯುವವರನ್ನು ಒಂದು ರೀತಿಯ ಅಸ್ಪಶ್ಯರಂತೆ ಪರಿಗಣಿಸುವ, ಅವರನ್ನು ಮುಖ್ಯವಾಹಿನಿಯಿಂದ ಹೊರಗಿಡುವ ಪ್ರಯತ್ನ ನಡೆಯುತ್ತಿದೆ. ಒಂಟಿ ಜೀವನದ ಬಗ್ಗೆ ಬಯ ಬಿತ್ತುವುದು ಹಾಗು ವಿಚ್ಛೇದಿತ ಬದುಕು ಘೋರವಾದದ್ದು ಎಂಬುದನ್ನು ಉತ್ಪ್ರೇಕ್ಷಿಸಿ ಬರೆಯುವುದರ ಮೂಲಕ ಕನ್ನಡ ಮಾದ್ಯಮಗಳು ವಿಚ್ಛೇದಿತರನ್ನು ಮಾನಸಿಕವಾಗಿ ಹಿಂಸಿಸುತ್ತಿವೆ.ಅವರು ಏನೋ ಮಹಾ ಅಪರಾಧವೆಸಗಿದವರು ಎಂಬಂತೆ ಬಿಂಬಿಸಿ ಅವರಲ್ಲಿ ಅಪರಾಧಿ ಪ್ರಜ್ಞೆ ಮೂಡುವಂತೆ ಮಾಡಲಾಗುತ್ತಿದೆ, ಅಷ್ಟೇ ಅಲ್ಲ ಅವರನ್ನು ಕೀಳಾಗಿ ಕಾಣುವಂತೆ ಇತರರನ್ನು ಪ್ರೇರೇಪಿಸುತ್ತಾರೆ.

“ವಿಚ್ಛೇಧನ”ಎಂಬ ಪದವೇ ಬಹಳ ವಿಚಿತ್ರವಾಗಿದೆ. ಕೇಳುಗರ ಕಿವಿಯಲ್ಲಿ ಅದು “ಶಿರಚ್ಚೇದನ” ಎಂಬ ಪದದಂತೆ ಧ್ವನಿಸುತ್ತದೆ. ಇದನ್ನು ಯಾವ ಮಹಾಶಯ ಸೃಷ್ಟಿಸಿದನೋ ಗೊತ್ತಿಲ್ಲ. ಒಟ್ಟಾರೆ ಈ ಪದವೇ ಕೇಳಲು ಇಷ್ಟು ಕಟೋರ ಎಂದು ಕಂಡುಬರುವಾಗ ನಮ್ಮೊಳಗೇ ಇದರ ಬಗ್ಗೆ ಅವ್ಯಕ್ತವಾಗಿ ಒಂದು ರೀತಿಯ ಭಯ ಮೂಡುವುದು ಸಹಜವಲ್ಲವೇ?. ಆದುದರಿಂದ ,ಈ ಶಬ್ದ ಉಪಯೋಗಿಸುತ್ತಾ ಬೆಳೆದು ಬಂದ ಮಕ್ಕಳ ಮನಸ್ಸಿನಲ್ಲಿ ಈ ಕ್ರಿಯೆಯ ಬಗ್ಗೆ ಇನ್ನಷ್ಟು ತಪ್ಪು ಕಲ್ಪನೆ ಬಿತ್ತಿ ಅವರನ್ನು ಮೂಲಭೂತವಾದಿ ನಂಬಿಕೆಗಳ ಅಡಿಯಾಳಾಗಿ ಮಾಡಿಕೊಳ್ಳುವ ಮಾದ್ಯಮಗಳ ಪ್ರಯತ್ನ ಬಹಳ ಸುಲಭವಾಗಿ ಫಲಕಾರಿಯಾಗಬಲ್ಲದು.

ಜನರನ್ನು ಹೆದರಿಸಿ ದನಗಳಂತೆ ವಿವಾಹವೆಂಬ ದೊಡ್ಡಿಯಲ್ಲಿ ಕೂಡಿಹಾಕುವುದಕ್ಕಿಂತ ಅವರು ನಮ್ಮ ಅವಲಂಬಿ ಸಮಾಜಿಕ ವ್ಯವಸ್ಥೆಯಿಂದ ಸ್ವತಂತ್ರವಾಗಿ ಸ್ವಾವಲಂಬಿಯಾಗುವಂತೆ ಮಾಡುವುದು ನಮ್ಮ ಪ್ರಯತ್ನವಾಗಬೇಕು.ಕೌಟುಂಬಿಕ ಹಿಂಸೆಯಿಂದ ಹೆಂಗಸರನ್ನು,ಮಕ್ಕಳನ್ನು ,ಮಾನಸಿಕ ಹಿಂಸೆಯಿಂದ ಗಂಡಸರನ್ನು ರಕ್ಷಿಸುವಂತಹಾ ಕಾನೂನುಗಳು ರೂಪುಗೊಳ್ಳಬೇಕು. ಈ ನಿಟ್ಟಿನಲ್ಲಿ Domestic Violence Act 2005 ಒಂದು ಒಳ್ಳೆಯ ಕಾನೂನು. ಇದರಿಂದ ಗಂಡಸರಿಗೆ ತೊಂದರೆ ಆಗುತ್ತಿವೆ ಎಂಬ ಧ್ವನಿ ಕೇಳಿಬರುತ್ತಿವೆ.ಇಂತಹ ತಾಂತ್ರಿಕ ದೋಷಗಳನ್ನು ವೈಜ್ಞಾನಿಕ ರೀತಿಯಲ್ಲಿ ತಿದ್ದುಪಡಿ ಮಾಡಬೇಕೇ ಹೊರತು ಮತ್ತೆ ಹಿಂದಿನ ವ್ಯವಸ್ಥೆಗೆ ತೆರಳಿ ಎಂದು ಹೇಳುತ್ತಾ ತಮ್ಮ ಪೂರ್ವಾಗ್ರಹಗಳನ್ನು ಸಮರ್ಥಿಸಿಕೊಳ್ಳುವ ಪ್ರಯತ್ನವನ್ನು ಕಾನೂನು ರಚಿಸುವವರು ಮಾಡಬಾರದು.

ಆದರೆ ಇದಕ್ಕೆ ವ್ಯತಿರಿಕ್ತವಾದ ಪ್ರಯತ್ನಗಳು ನಡೆಯುತ್ತಿರುವುದು ವಿಷಾಧನೀಯ.

ಅದೇನೇ ಇರಲಿ, ಈ ವಿವಾಹ ಬಂಧನಗಳು ಜೀವಾವಧಿ ಶಿಕ್ಷೆಯಾಗಿ ಮಾರ್ಪಡುವ ಸಾಧ್ಯತೆ ಮುಂದಿನ ದಿನಗಳಲ್ಲಿ ಕಡಿಮೆ ಆಗಬಹುದು.

Tuesday, January 25, 2011

About Shri Bhimasena Joshi


ప్రముఖ హిందుస్థానీ గాయకుడైన భీమ్‌సేన్ గురురాజ్ జోషి ఫిబ్రవరి 19, 1922 అన్ద్ దిఎద్ 24 జనుఅర్య్ 2011న కర్ణాటకలోని గదగ్ జిల్లాలో జన్మించాడు. కిరాణా ఘరానాకు చెందిన భీమ్‌సేన్ జోషి 'ఖయాల్ గాయనంలోనే కాక, భక్తిరస ప్రధానమైన భజనలు, అభంగ్‌లు పాడడంలో సిద్ధ హస్తుడు.
 
20 వ శతాబ్దం పూర్వార్థం వరకూ, 'ఖయాల్ గాయనం' గురుశిష్య పరంపర' గా సాగేది. భీమ్‌సేన్ జోషి గురువైన సవాయి గంధర్వ, అబ్దుల్ కరీంఖాన్ కు శిష్యుడు. అబ్దుల్ కరీంఖాన్ అబ్దుల్ వహీద్ ఖాన్‌తో కలిసి, కిరానా ఘరాణా ను స్థాపించాడు.తన 11 వ ఏట, చిన్నతనంలో అబ్దుల్ కరీంఖాన్ గాయనం విని ఉత్తేజితుడై, ఇల్లు వదలి గురువును వెదుక్కుంటూ, ధార్వాడ్ తరువాత పుణె చేరుకున్నాడు. తరువాత గ్వాలియర్ కు వెళ్ళి, 'మాధవ సంగీత పాఠశాల'లో చేరాడు. ఆ పాఠశాలను గ్వాలియర్ మహరాజులు, ప్రముఖ సరోద్ విద్వాంసుడు, హఫీజ్ అలీఖాన్ సహాయంతో నడుపుతుండేవారు. మంచి గురువు కోసం, ఢిల్లీ, కోల్‌కతా, గ్వాలియర్, లక్నో, రాంపూర్, లలో పర్యటించాడు. చివరకు అతని తండ్రి, భీమ్‌సేన్ జోషిని జలంధర్ లో పట్టుకొని, తిరిగి ఇంటికి తోడ్కొని వచ్చాడు. 1936 లో ,సవాయి గంధర్వ, భీమ్‌సేన్‌ను శిష్యుడిగా స్వీకరించాడు. ప్రముఖ హిందుస్తానీ సంగీత గాయని గంగూబాయి హంగల్, అతని సహవిద్యార్థిని. అలా నాలుగేళ్ళు సవాయి గంధర్వ వద్ద సంగీతాన్ని అభ్యసించాడు. భీమ్‌సేన్‌ జోషికి ఇష్టమైన రాగాలు : శుద్ధ కల్యాణ్, మియాన్ కీ తోడి, పురియా ధనశ్రీ, ముల్తానీ, భీమ్‌పలాసీ, దర్బారీ మరియు రామ్‌కలీ లు. భీమ్‌సేన్‌ అబ్దుల్ కరీంఖానే కాక, కేసర్‌బాయి కేర్కర్, బేగం అక్తర్, ఉస్తాద్ అమీర్‌ఖాన్ ల వల్ల ఎంతో ప్రభావితుడైనాడు. చివరకు తన ప్రత్యేక గాయన శైలిని రూపొందించుకొన్నాడు
భీమ్‌సేన్‌ జోషి తండ్రి, గురాచార్య జోషి; బడి పంతులు. చిన్న వయసులోనే భీమ్‌సేన్‌ జోషికి సునంద తో వివాహం జరిగింది. రాఘవేంద్ర మరియు ఆనంద్ జోషిలు గాయకులు. తరువాత భీమ్‌సేన్‌ వత్సల ను పెళ్ళాడాడు. శ్రీనివాస్ జోషి మంచి గాయకుడు; ఎన్నో ఆల్బంలను విడుదల చేశాడు
 
 
బసంత్ బహార్ ( మన్నాడేతో ), బీర్బల్ మై బ్రదర్ ( పండిట్ జస్రాజ్‌తో), తాన్‌సేన్ (1958) మరియు అంకాహీ (1985). భీమ్‌సేన్‌ జోషి కన్నడ భజనలు (దాసవాణి, ఆల్బమ్) మరాఠీ అభంగ్‌లు పాడాడు. జాతీయ ప్రతిపత్తిపై తీసిన సంగీతపరమైన వీడియో, 'మిలే సుర్ మేరా తుమారా' అనేది జగత్ప్రసిద్ధం. భీమ్‌సేన్‌ జోషి తన గురువు సవాయి గంధర్వ గౌరవజ్ఞాపకార్థం ప్రతి సంవత్సరం, డిశంబరు నెలలో పుణె నగరంలో, సవాయి గంధర్వ సంగీత మహోత్సవం ను నిర్వహిస్తాడు.
 
 
అవార్డులు
 
________________________________________________
 
पंडित भीमसेन जोशी (४ फेब्रुवारी, इ.स. १९२२ - २४ जानेवारी इ.स. २०११) हे भारतरत्न या भारतातील सर्वोच्च नागरी सन्मानाने गौरविले गेलेले लोकप्रिय हिंदुस्थानी शास्त्रीय गायक होते.

अनुक्रमणिका

[लपवा]

[संपादन] संगीतशिक्षण

भीमसेन जोशींचे वडील एक शिक्षक होते. भीमसेनचा संगीताकडे असलेला ओढा त्यांना पसंत नव्हता. भीमसेनांनी वैद्यकीय अथवा अभियांत्रिकी शिक्षण घ्यावे असा त्यांचा आग्रह होता. या मतभेदांमुळे अखेर भीमसेनांनी घर सोडण्याचे आणि त्याकाळी शास्त्रीय संगीतासाठी ख्यातनाम असलेल्या ग्वाल्हेर, लखनौ, रामपूर या शहरांपैकी एका ठिकाणी जाण्याचे ठरविले. त्याप्रमाणे त्यांनी इ.स. १९३३ साली वयाच्या अकराव्या वर्षी घर सोडले आणि ते ग्वाल्हेरात दाखल झाले.
त्यानंतर भीमसेन जोशींनी खिशात पैसे आणि पोटात अन्न नसूनदेखील गायनाच्या तळमळीपायी उत्तर भारतात अनेक ठिकाणी भटकंती केली. उस्ताद अब्दुल करीम खाँ, वझेबुवा, केसरबाई केरकर, उस्ताद बिसमिल्ला खाँ, वगैरेंचे गायन-वादन त्यांनी ऐकले. सुरुवातीला ते इनायत खाँ यांचे शिष्य जनाप्पा कुर्तकोटी यांच्याकडे गायन शिकले. त्यानंतर जालंदर येथे पंडित मंगतराम यांच्याकडे व ग्वाल्हेर येथे राजाभय्या पूंछवाले यांच्याकडेही गाण्याचे शिक्षण घेतले. त्यानंतर ते रामपूर येथे मुश्ताक हुसेन खाँ यांच्याकडे काही काळ शिकले. अशा प्रकारे काही वर्षे ग्वाल्हेर, लखनौ, रामपूर येथे व्यतीत केल्यानंतर त्यांचा शोध घेत असलेल्या वडिलांशी त्यांची भेट झाली आणि भीमसेन पुन्हा घरी परत आले. भीमसेनांचा संगीतासाठीचा तीव्र ओढा पाहून त्यांचे वडील भीमसेनांना जवळच असलेल्या कुंदगोळ गावातील रामभाऊ कुंदगोळकर यांच्याकडे घेऊन गेले आणि रामभाऊंनी भीमसेनांना त्यांचे शिष्यत्व दिले. रामभाऊ 'सवाई गंधर्व' म्हणून ख्यातनाम होते. त्यांच्या मार्गदर्शनाखाली, भीमसेनांनी हिंदुस्थानी शास्त्रीय गायनाचे धडे घेतले. रामभाऊ हे किराणा घराण्याच्या पद्धतीचे गायक होते. त्या काळातील परंपरेनुसार भीमसेनांनी गुरुगृही राहून कष्टपूर्वक गायनाचे धडे घेतले. रामभाऊ त्यांच्याकडून तोडी, पुरिया, मुलतानी वगैरे रागांवर रोज सुमारे आठ तास मेहनत करवून घेत. आणि त्यांच्याकडून भीमसेनांनी इ.स. १९३६ ते इ.स. १९४१ पर्यंतच्या काळात शक्य तेवढे ज्ञान आत्मसात केले. त्यावेळी आणि त्यानंतरही ते रोज सोळा तासांचा रियाज करण्याचा स्वतःचा दंडक पाळीत. त्यानंतर गुरू रामभाऊंच्या आज्ञेनुसार भीमसेनांनी त्यांचा निरोप घेतला आणि ते पुणे येथे आले.
भीमसेन जोशींनी, त्यांचे गुरू सवाई गंधर्व यांच्या स्मरणार्थ १९५२ सालापासून पुणे येथे दरवर्षी होणारा सवाई गंधर्व संगीत महोत्सव सुरू केला.
 
कारकीर्द
भीमसेनांनी त्यांची पहिली संगीत मैफिल इ.स. १९४२ साली वयाच्या केवळ एकोणविसाव्या वर्षी पुण्यातील हिराबागेत घेतली. त्यापुढील वर्षीच त्यांच्या काही कानडी आणि हिंदी भाषेतील उपशास्त्रीय गीतांचे पहिल्यांदा ध्वनिमुद्रण झाले. आणि पुढील काही वर्षांनी त्यांच्या शास्त्रीय गायनाचे. सवाई गंधर्वांच्या षष्ट्यब्दी सोहळ्यानिमीत्त त्यांनी गायन केले आणि महाराष्ट्राला त्यांची पहिली नीट ओळख झाली.
 
त्यांची लोकप्रियता आणि त्यामुळे संगीत मैफिलींसाठी करावी लागणारी त्यांची धावपळ वाढली. त्यांच्या त्या काळी वारंवार होणार्‍या विमान प्रवासांमुळे, त्यांना पु.ल.देशपांडे यांनी गमतीने 'हवाईगंधर्व' ही पदवी बहाल केली होती. कित्येक वेळा एकाच दिवसात दोन शहरांतील मैफली घेण्यासाठी ते दोनदा विमानप्रवास करीत.
भीमसेन जोशींना हिंदुस्थानी शास्त्रीय गायन पद्धतीचे ख्याल गायक म्हणत असले तरी त्यांनी १९४० च्या दशकात लखनौमध्ये एक वर्ष राहून तेथील ख्यातनाम गायकांकडून ठुमरी शिकून घेतली होती. ते ठुमरीही अतिशय छान गात. भीमसेन जोशींनी 'संतवाणी' या नांवाने मराठी अभंगगायनाचे अ़क्षरशः हजारो कार्यक्रम केले. कवि वसंत बापट त्यांच्या अभंगवाणी कार्यक्रमात अनेकदा अतिशय सुरेख निरूपण करीत.
भारतात शास्त्रीय गायनाच्या हिंदुस्थानी आणि कर्नाटकी या दोन प्रमुख शाखा मानल्या जातात. भीमसेन जोशींचे वैशिष्ट्य असे की ते दक्षिणी भारतात प्रचलित असलेल्या कर्नाटकी गायनातल्या चीजा हिंदुस्थानी पद्धतीने गाऊन दाखवीत. त्यामुळे त्यांचे गायन कर्नाटकी संगीताची परंपरा असलेल्या दक्षिणी भारतातही, विशेषतः तरुण पिढीमध्ये लोकप्रिय झाले.
अशा या महान गायकाचे सोमवार दिनांक २४ जानेवारी,२०११ रोजी सकाळी ८:०५ वाजता पुणे येथे वयाच्या ८८व्या वर्षी देहावसान झाले.
 
 
गौरव
 
भीमसेन जोशींना अ॑नेक पुरस्कारांनी आणि सन्मानांनी गौरविण्यात आले. त्यांतले काही इ.स. १९७२साली मिळालेलापद्मश्री पुरस्कार, इ.स. १९७६ सालचा संगीत नाटक अकॅडमी पुरस्कार, आणि इ.स. १९८५ सालचा पद्मभूषण पुरस्कार हे आहेत. जयपूर येथील गंधर्व महाविद्यालयाने त्यांना संगीताचार्य ही पदवी दिली तर पुण्याच्या टिळक विद्यापीठाने डि. लिट्. ही पदवी दिली. इतर पुरस्कारांमध्ये पुण्यभूषण पुरस्कार, स्वरभास्कर पुरस्कार, तानसेन पुरस्कार इत्यादींचा समावेश आहे. पुणे आणि गुलबर्गा येथील विद्यापीठांनी त्यांना डॉक्टरेट ने सन्मानित केले आहे. नोव्हेंबर ४, २००८ रोजी भारत सरकारने त्यांना भारतरत्न हा सर्वोच्च नागरी सन्मान देण्याचे जाहीर केले [१].
त्यांनी सुरू केलेला सवाई गंधर्व संगीत महोत्सव हा भारतातील एक मोठा संगीतोत्सव समजला जातो. पुणे विद्यापीठाच्या ललित कलाकेंद्रात पंडित भीमसेन जोशी यांच्या नावाने अध्यासन स्थापण्यात आले आहे.
त्यांनी केलेल्या संगीताच्या सेवेमुळे भारतीय शास्त्रीय संगीतात पंडित भीमसेन जोशींचे स्थान अजरामर झाले आहे.
______________________________________________________--
 
 
பண்டிட் பீம்சென் குருராஜ் ஜோஷி (கன்னடம்: ಪಂಡಿತ ಭೀಮಸೇನ ಗುರುರಾಜ ಜೋಷಿ, மராட்டி: पंडित भीमसेन गुरुराज जोशी, பெப்ரவரி 4, 1922 - சனவரி 24, 2011) இந்துஸ்தானி இசை மரபில் ஓர் இந்திய குரலிசைப் பாடகராவார். கிரான காரனாவின் (பள்ளி) உறுப்பினரான இவர், அவரது கயால் வகைப் பாடல்களுக்கு மிகவும் பிரசித்தி பெற்றவர், அதோடு அவரது பக்திப் பாடல் நிகழ்ச்சிகளுக்கும் (பஜனைகள் மற்றும் அபாங்குகள் ) பிரபலமானவராவார். அவர் இந்தியாவின் உயரிய குடியியல் விருதான பாரத் ரத்னா விருதைப் பெற்றவராவார், அவருக்கு 2008 ஆம் ஆண்டில் அது வழங்கப்பட்டது
 
 
ஆரம்பகால வாழ்க்கை
கர்நாடக மாநிலத்தின் வட பகுதியிலுள்ள கடகா நகரில் ஒரு கன்னட குடும்பத்தில் இவர் பிறந்தார்[2][3]. அவரது தந்தை குராச்சார்யா ஜோஷி ஒரு பள்ளி ஆசிரியராவார். 16 உடன் பிறந்தவர்களில் பீம்சென் மூத்தவராவார். அவரது உடன்பிறந்தவர்களில் சிலர் இன்றும் அவரது கடகாவிலுள்ள முன்னோர்களின் இல்லத்தில் வசித்துவருகின்றனர்[4]. பீம்சென் சிறுவயதில் தாயை இழந்தவர், பின்னர் அவரது சித்தியால் வளர்க்கப்பட்டார்
 
 
தொழில் வாழ்க்கை
20 ஆம் நூற்றாண்டின் முதல் பாதி வரை, காயல் பிரதானமாக குரு சிஷ்யா (குரு-சீடர்) மரபிலேயே கற்றுக்கொடுக்கப்பட்டு வந்தது. பீம்சென்னின் குரு ஸ்வாமி கந்தர்வா, அப்துல் கரீம் கானின் தலைமை சீடராவார், அவர் தனது உறவு சகோதரர் அப்துல் வஹீது கானுடன் இணைந்து கிரானா காரனா என்னும் இந்துஸ்தானி இசைப் பள்ளியைத் தொடங்கினார்.
ஜோஷி இளவயதில் அப்துல் கரீம் கானின் ஒரு ரெக்கார்டிங்கைக் கேட்டு அதில் கவரப்பட்டே பின்னாளில் இசைக் கலைஞராக வேண்டும் என்ற எண்ணத்தைப் பெற்றார். 1933 இல், 11-வயதான பீம்சென் ஒரு குருவைத் தேடிக் கண்டறிந்து இசை கற்பதற்காக வீட்டை விட்டு வெளியேறினார்.[3] ரயிலில் அவரது சக பயணியர்கள் கொடுத்த சிறிய பணத்தின் உதவியைக் கொண்டு பீம்சென் முதலில் தர்வாருக்கும் பின்னர் பூனாவிற்கும் சென்றார். பின்னர் அவர் க்வாலியருக்குச் சென்றார், அங்கு மாதவா இசைப் பள்ளியில் சேர்ந்தார், அது க்வாலியர் மஹாராஜாவினால் நடத்தப்பட்டு வந்த பள்ளியாகும், அதற்கு பிரபலமான சரோத் கலைஞர் ஹாசிஃப் அலி கான் உதவியாக இருந்தார். அவர் டெல்லி, கொல்கத்தா, க்வாலியர், லக்னோ மற்றும் ராம்பூர் உட்பட வட இந்தியாவில் 3 ஆண்டுகள் பயணம் செய்து ஒரு குருவைக் கண்டறிய முயற்சித்தார்.[5] பின்னர், அவரது தந்தை அவரை ஜலந்தரில் கண்டுபிடித்து பீம்சென்னை மீண்டும் வீட்டிற்கு அழைத்துவந்தார்.[3]
1936 இல், சவாய் கந்தர்வா எனப் பிரபலமாக அறியப்படும் தார்வாதைச் சேர்ந்த ராம்பா குண்ட்கோல்கர் அவரது குருவாக இருக்கச் சம்மதித்தார். பீம்சென் ஜோஷி அவரது இல்லத்தில் குரு-சிஷ்யா (ஆசிரியர்-மாணவர்) மரபின்படி தங்கியிருந்தார், அவரது குருவிடமிருந்து இசையறிவைப் பெற்றார், அந்த வேளையில் அவரது இல்லத்தில் பகுதி நேரப் பணிகளையும் செய்துவந்தார். கீரன காரணாவிலிருந்து வந்த மற்றொரு குரலிசைப் பாடகர் கங்குபாய் ஹங்கல் அந்தக் காலகட்டத்தில் பீம்சென்னின் சக மாணவராக இருந்தவராவார். ஜோஷி தனது பயிற்சியை பின்னர் ஸ்வாமி கந்தர்வாவுடன் 1940 ஆம் ஆண்டு வரை தொடர்ந்தார்.
ஜோஷி 1943 ஆம் ஆண்டு மும்பைக்குச் சென்று வானொலி கலைஞராகப் பணியாற்றினார். அங்கு தனது 19 வயதில் நிகழ்ச்சிகளை நடத்தினார். கன்னடம் மற்றும் ஹிந்தியில் சில பக்திப் பாடல்களைக் கொண்டிருந்த அவரது அறிமுக இசைத் தட்டு HMV ஆல் வெளியிடப்பட்டது, அப்போது அவருக்கு வயது 22.
பீம்சென்னின் இசையை விமர்சகர்களும் மக்களும் மிகவும் பாராட்டினர். அவரது நிகழ்ச்சிகள் தன்னிச்சையான இயல்பும், துல்லியமான இசைக் குறிப்புகளும் அவரது அசாதாரணமான குரலிசைப் பயிற்சியைப் பயன்படுத்தி அவர் பாடும் தலை சுற்றும் விதத்திலமைந்த டான்களும் தாளத்தில் அவருக்கு இருந்த மேதைமையும் அவரது புகழுக்கு முக்கிய அம்சங்களாக இருந்தன. அவர் அசாத்தியமான இசைத் தொடர்களையும் டான்களையும் அதிக பிரயத்தனமின்றி தன்னிச்சையாகவே பிரயோகிக்கும் திறமை கொண்டிருக்கக் கூடிய அவர் எப்போதும் இசையில் நீண்ட பயணத்தை மேற்கொள்பவராகவே விளங்கினார். கடினமான கோட்பாடுகளால் கட்டுப்படாதவராக விளங்கிய அவர் அதீத உயரங்களுக்கு பயணித்தும் சில நேரங்களில் விண்மீன்களை அடைந்தும் இசையில் மாயஜாலாங்களைச் செய்தார்.[6] அவர் அரிதாகவே சர்கம் மற்றும் டிஹாய் களைப் பயன்படுத்தினார், அவர் பெரும்பாலும் கிரான காரனாவின் பாரம்பரிய பாடல்களையே விரும்பினார். சில ஆண்டுகளில் அவர் அடிக்கடி பாடும் சில ராகங்களில் மிகுந்த நிபுணத்துவம் பெற்றார். அவர் அதிகமாக விரும்பும் ராகங்கள் என அறியப்படுபவற்றில், சுத்த கல்யாணி, மியான் கி தோடி, பூரிய தனஸ்ரீ, முல்தானி, பீம்பளாசி, தர்பாரி மற்றும் ராம்கலி ஆகியன அடங்கும். அம்துல் கரீம் கான் மட்டுமின்றி, கேசர்பாய் கேர்க்கர், பேகம் அக்த்தர் மற்றும் உஸ்தாத் அமீர் கான் போன்ற பிற இசைக்கலைஞர்களாலும் அவர் மிகவும் கவரப்பட்டார். பீம்சென் விரும்பிய வெவ்வேறு பாணிகளைப் பயன்படுத்தி வெவ்வேறு விதமாக பிரயோகித்த பின்னர் அவரது தனிப்பட்ட பாணி அவருக்குக் கிடைத்தது.[7]
ஜோஷி, பசந்த் பாஹர் (மன்னா டேவுடன்), 'பீர்பால் மை ப்ரதர்' (பண்டிட் ஜஸ்ராஜ்) மற்றும் நோடி ஸ்வாமி நாவு இரோது ஹீகே போன்ற திரைப்படங்களிலும் பாடியுள்ளார். 'தான்சேன்'(1958 ஆம் ஆண்டு வெளியானது)[சான்று தேவை] மற்றும் 'அன்கஹீ'( 1985 ஆம் ஆண்டு வெளியானது) ஆகிய படங்களிலும் பாடியுள்ளார்.
பக்தி இசையில், அவரது பஜனைகள், குறிப்பாக தசவானி ஆல்பமும் மராத்தி அபாங்குகளும் மிகவும் பிரபலமானவை. தேசிய ஒருமைப்பாட்டுக்கான பிரபலமான மிலே சுர் மேரா துமாரா இசை காணொளியில் தொடக்க கலைஞராக வருவது உலகளவில் அறியப்பட்ட அம்சமாகும்.
ஜோஷி வருடாந்தர சாஸ்திரிய இசை விழாவை நடத்துகிறார், அது அவரது குருவின் நினைவாக சவாய் கந்தர்வா இசை விழா என அழைக்கப்படுகிறது. இந்த விழா பூனாவில் ஒவ்வொரு ஆண்டும் டிசம்பர் மாதத்தில் நடைபெறுகிறது.[சான்று தேவை]
 
 
சொந்த வாழ்க்கை
பீம்சென்னின் குடும்பம் அவரது இளம் வயதில் அவருக்கு சுனந்தா காட்டி என்னும் பெண்ணை மணம் முடிக்க ஏற்பாடு செய்தனர்; அவர் பீம்சென்னின் உறவினராவார். அவருக்கு ராகவேந்திரா மற்றும் ஆனந்த் என இரண்டு மகன்கள் இருந்தனர். அவர்கள் இருவருமே மெல்லிசை சாஸ்திரீய குரலிசைக் கலைஞர்களாவர். அவரது மனைவி 1992 ஆம் ஆண்டு காலமானார். பின்னர் பீம்சென் வத்சலா முதோல்கர் என்பவரை மணந்தார். அவர் 2004 ஆம் ஆண்டு காலமானார். பீம்சென்னுக்கும் வத்சலாவுக்கும் இரண்டு மகன்களும் ஒரு மகளும் பிறந்தனர். மூத்த மகன் ஜயந்த் ஓவியரும், இளைய மகன் ஸ்ரீனிவாஸ் குரலிசைக் கலைஞரும் இசை இயற்றுபவரும் ஆவார், மேலும் அவர் சில வணிக ரீதியான படைப்புகளையும் பதிவு செய்திருக்கிறார்
 
 
விருதுகளும் அங்கீகாரங்களும்
  • 1972 - பத்ம ஸ்ரீ
  • 1976 - சங்கீத் நாடக் அகாடமி விருது
  • 1985 - பத்ம பூஷன்
  • 1985 - சிறந்த பின்னணிப் பாடகருக்கான தேசியத் திரைப்பட விருது
  • 1986 - "முதல் பிளாட்டினம் டிஸ்க்" [8]
  • 1999 - பத்ம விபூஷன்
  • 2000 - "ஆதித்ய விக்ரம் பிர்லா கலாஷிக்கார் புரஸ்கார்" [9]
  • 2001 - கன்னட பல்கலைக்கழகத்திலிருந்து "நடோஜா விருது"[10]
  • 2002 - மஹாராஷ்ட்ர பூஷன் [11]
  • 2003 - கேரள அரசின் "ஸ்வாதி சங்கீத புரஸ்காரம்" [12]
  • 2005 - கர்நாடக ரத்னா
  • 2008 - பாரத் ரத்னா
  • 2008 - "ஸ்வாமி ஹரிதாஸ் விருது" [13]
  • 2009 - டில்லி அரசாங்கத்திடமிருந்து "வாழ்நாள் சாதனை விருது"[14]
  • 2010 - பெங்களூரின் ராம சேவா மண்டலியிடமிருந்து, "எஸ் வி நாரயணஸ்வாமி ராவ் தேசிய விருது"
 

Monday, January 24, 2011

ಮೋಸಕ್ಕೆ ವಾಸ್ತು,ವಾಸಕ್ಕೆ ಮನೆ

ಶ್ರೀ ಶಾಂತಾರಾಮ ಸೋಮಯಾಜಿ ಇವರು ವಾಸ್ತುವಿನ ಬಗ್ಗೆ ಬರೆದಿರುವ ಪುಸ್ತಕ ಕಣ್ಣಿಗೆ ಬಿದ್ದೊಡನೆ ಕೈಗೆತ್ತಿಕೊಂಡೆ. ೯೦ ರ ದಶಕದಲ್ಲಿ ಇವರು 'ಸುಧಾ'ಪತ್ರಿಕೆಯಲ್ಲಿ ಬರೆಯುತ್ತಿದ್ದ ಕಥೆಗಳನ್ನು ಓದಿ ಮೆಚ್ಚಿಕೊಂಡಿದ್ದವನು ನಾನು. ಜೊತೆಗೆ ಈತ ವಾಸ್ತುವಿನ ಬಗ್ಗೆ ಏನು ಬರೆದಿರಬಹುದು? ಎಂಬ ಕೂತೂಹಲ. ಇದರ ಶೀರ್ಷಿಕೆ "ಮೋಸಕ್ಕೆ ವಾಸ್ತು,ವಾಸಕ್ಕೆ ಮನೆ" ಎಂದು. ವಾಸ್ತುವನ್ನು ಅತಿಯಾಗಿ ನಂಬುವ ನಮ್ಮ ಸಂಭಂಧಿಕರಿಗೆ ಇದನ್ನು ನೀಡಬೇಕು ಅಂತ ಆ ಕ್ಷಣ ಅನ್ನಿಸಿತು. ಸರಿ, ಬುಕ್ ತಗೊಂಡೆ. ಓದಿದೆ...,ಓದಿದೆ....ವಾಸ್ತುವಿನ ಬಗ್ಗೆ ಏನಿದೆ? ಎಲ್ಲಿದೆ?!.
ಅಂತೂ ಕೊನೆಗೆ 7ನೆಯ  ಅಧ್ಯಾಯದಲ್ಲಿ ವಾಸ್ತುವಿನ ಬಗ್ಗೆ ಒಂದಿಷ್ಟು ವಿಷಯ ಸಿಕ್ಕಿತ್ತು!. ಇದರಲ್ಲಿ ಲೇಖಕರು ವಾಸ್ತುವಿನ ತಾಂತ್ರಿಕ ಅಂಶಗಳ ಬಗ್ಗೆ ಹೆಚ್ಚು ಚರ್ಚಿಸಿಲ್ಲ. ಏಕೆ? ಎಂಬುದನ್ನು  ಪ್ರಸ್ತಾವನೆಯಲ್ಲಿ ಅವರೇ ವಿವರಿಸಿದ್ದಾರೆ.ಈ ಕೃತಿಯ ವ್ಯಾಪ್ತಿ ವಾಸ್ತುಶಾಸ್ತ್ರಕ್ಕಿಂತ ವಿಸ್ತಾರವಾಗಿದೆ.ಇದರಲ್ಲಿ ಲೇಖಕರು ಒಂದು ವಿಷಯನ್ನು ನಾವು ಯಾವ ರೀತಿ ಗ್ರಹಿಸಬೇಕು ಎಂಬುದನ್ನು ತರ್ಕಬದ್ದವಾಗಿ ಚರ್ಚಿಸಿದ್ದಾರೆ. ಜೊತೆಗೆ ಹಲವು ದೃಷ್ಟಾಂತಗಳನ್ನೂ ನೀಡಿದ್ದಾರೆ. ವಿಧ್ಯಾರ್ಥಿಗಳಲ್ಲಿ  ವೈಜ್ಞಾನಿಕ ಮನೋಭಾವ ಬೆಳೆಸುವ ನಿಟ್ಟಿನಲ್ಲಿ ಇದು ಬಹಳ ಸಹಾಯಕವಾಗಬಹುದಾದಂತಹ ಪುಸ್ತಕ. ಆದುದರಿಂದ ಇದನ್ನು ಪಟ್ಯ ಪುಸ್ತಕವಾಗಿ ಮಾಡಿದರೆ ಒಳ್ಳೆಯದು.ಸಾಹಿತ್ಯದ ಹೆಸರಲ್ಲಿ ಕಾಗಕ್ಕ-ಗುಬ್ಬಕ್ಕನ ಕಥೆಗಳನ್ನು ಪಟ್ಯ ಪುಸ್ತಕ ಮಾಡುವುದಕ್ಕಿಂತ ಇಂತಹಾ ವೈಚಾರಿಕ ಕೃತಿಗಳನ್ನು ಓದಿಸಿದರೆ ವಿಧ್ಯಾರ್ಥಿಗಳಿಗೆ,ಅದಕ್ಕಿಂತ ಹೆಚ್ಚಾಗಿ ಮೌಡ್ಯದ ಕಿಲುಬು ಹತ್ತಿಸಿಕೊಂಡಿರುವ ಅಧ್ಯಾಪಕರಿಗೆ ಒಂದಿಷ್ಟು ಸಹಾಯಕವಾಗುತ್ತದೆ. ಈ ಕೃತಿಗೆ 'ಮೋಸಕ್ಕೆ ವಾಸ್ತು,ವಾಸಕ್ಕೆ ಮನೆ" ಎಂಬ ಹೆಸರು ಸರಿಯಿಲ್ಲ ಅನ್ನಿಸುತ್ತೆ. ಯಾಕೆಂದರೆ ಇದರ ಫೋಕಸ್ ವಾಸ್ತುಶಾಸ್ತ್ರದ ಮೇಲೆ ಅಷ್ಟಾಗಿ ಇಲ್ಲ.ಆದುದರಿಂದ ಈ ಪುಸ್ತಕ ಒಂಥರಾ ಅಪೂರ್ಣ ಅನ್ನಿಸುತ್ತೆ. ಹಾಗಾಗಿ ವಾಸ್ತುವಿನ ಬಗ್ಗೆ ಹೆಚ್ಚು ಫೋಕಸ್ ಮಾಡಿ ಇದರ ಮುಂದುವರಿದ ಎರಡನೇ ಭಾಗವನ್ನು ಶ್ರೀ ಸೋಮಯಾಜಿಗಳು ಬರೆಯುತ್ತಾರೆ ಎಂದು ಆಶಿಸೋಣ.
ಇದನ್ನು ನನ್ನ ಸಂಭ೦ದಿಕರಿಗೆ ನೀಡಬೇಕು ಅಂದುಕೊಂಡಿದ್ದೆ. ಆದರೆ ಅದರಿಂದ ಎನೂ ಉಪಯೋಗ ಇಲ್ಲ ಅನ್ನಿಸುತ್ತೆ. ಈಗಾಗಲೇ "ವಾಸ್ತು"ಎಂಬ ವೈರಸ್ ನಿಂದ infect ಆಗಿರುವವರಿಗೆ ಈ ಪುಸ್ತಕ ಮದ್ದಾಗಲಾರದು.ನಂಬಿಕೆ ಎಂಬೋದು ಒಂತರಾ "AIDS" ಇದ್ದಂತೆ. ಹೊಸಬರಿಗೆ ಈ ವೈರಸ್ ಹಬ್ಬದಂತೆ ತಡೆಯಲು ಈ ಕೃತಿಯನ್ನು ಬಳಸಬಹುದಷ್ಟೇ.ಕನ್ನಡ ಸಾಹಿತ್ಯ ಜಗತ್ತಿಗೆ ವೈಜ್ಞಾನಿಕ ಮನೋಧರ್ಮದ ಪ್ರವರ್ತಕರಾಗಿದ್ದ  ಶ್ರೀ ಜಿ.ಟಿ.ನಾರಯಣರಾಯರ ಅಗಲಿಕೆಯಿಂದ ಉಂಟಾದ ಶೂನ್ಯವನ್ನು ತುಂಬುವ ಸಾಮರ್ಥ್ಯ ತಮ್ಮಲಿದೆಯೆಂದು ಶ್ರೀ ಸೋಮಯಾಜಿಗಳು ಈ ಕೃತಿಯ ಮೂಲಕ ತೋರಿಸಿಕೊಟ್ಟಿದ್ದಾರೆ. ಅವರ  ಲೇಖನಿಯಿಂದ ಇಂತಹಾ ಕೃತಿಗಳು ಇನ್ನಷ್ಟು ಬರಲಿ ಎಂದು ಆಶಿಸೋಣ.


"Mosakke Vastu,Vasakke Mane".
A detailed look at a fraud called "Vastu shaastra"along with some general hints to homebuilding by Shantarama Somayaji.
Published by Sadhana Prakashana, Bangalore. Ph.9480088960.
168 pages, Price Rs 80, 1st Publication 2009

Friday, January 21, 2011

‘ಸರ್ವರಿಗೆ ಸಮಬಾಳು,ಸರ್ವರಿಗೆ ಸಮಪಾಲು???

ನಾವು ಈಗ 21 ನೇ ಶತಮಾನದಲ್ಲಿದ್ದೇವೆ. ಈ ಭೂಮಿಯ ಮೇಲೆ ಆಗಿಹೋದ ಹಲವು ರೀತಿಯ ವ್ಯವಸ್ಥೆಗಳನ್ನು ಇತಿಹಾಸದಲ್ಲಿ ಓದಿದ್ದೇವೆ. ಅಶೋಕನ ಕಾಲಕ್ಕಿಂತಲೂ ಪ್ರಾಚೀನ ಕಾಲದ ಆಡಳಿತದಿಂದ ಹಿಡಿದು ಇಂದಿನ ಮನಮೋಹನ್ ಸಿಂಗ್ ರ ಆಡಳಿತದವರೆಗೆ ಎಲ್ಲವನ್ನೂ ನೋಡಿದ್ದೇವೆ. ಅನುಭವಿಸಿದ್ದೇವೆ. ಆದರೆ ಕೆಲವರು ಈಗಲೂ ‘ಕಟ್ಟೇವು ನಾವು ಹೊಸ ನಾಡೊಂದನು ಸುಖದ ಬೀಡೊಂದನು’ ಎಂದು ಹಾಡುತ್ತಾ ಜನರ ಕಿವಿಗೆ ಹೂ ಇಡಲು ಪ್ರಯತ್ನಿಸುತಿದ್ದಾರೆ.


ಒಮ್ಮೆ ಇತಿಹಾಸದತ್ತ ತಿರುಗಿ ನೋಡಿ, ನಾವು ಎಲ್ಲಾ ರೀತಿಯ ಆಡಳಿತಗಳನ್ನು ಕಂಡಿದ್ದೇವೆ. ಸಾಕ್ರೆಟಿಸ್, ಬುದ್ಧ, ಮಹಾವೀರ,ಕ್ರಿಸ್ತ,ಮಹಮ್ಮದ್,ಬಸವಣ್ಣ,ಮಾರ್ಟಿನ್ ಲೂಥರ್ ಕಿಂಗ್,ಕಾರ್ಲ್ ಮಾರ್ಕ್ಸ್,ಎಂಗೆಲ್ಸ್,ಲೆನಿನ್,ಮಾವೋ,ನೆಹರು ಇವರಿಂದ ಹಿಡಿದು ಮಹಾತ್ಮ ಗಾಂಧಿಜೀಯವರೆಗೆ ಅವರುಗಳು ಹೇಳಿದ್ದನ್ನೆಲಾ ಮಾಡಿದ್ದೇವೆ. ಅವರುಗಳು ಬದುಕಿದ್ದಾಗ ಮಾಡಿದ್ದನ್ನು ಓದಿದ್ದೇವೆ. ಹೆಚ್ಚುಕಡಿಮೆ ಎಲ್ಲಾ ಧರ್ಮಾಧಾರಿತ ,ಚಿಂತನಾಧಾರಿತ ಸಮಾಜಗಳೂ/ವ್ಯವಸ್ಥೆಗಳೂ ಬಂದಿದೆ ಅಥವಾ ಬಂದು ಹೋಗಿವೆ. ಆದರೂ ಇತಿಹಾಸದ ಯಾವುದೇ ಹಂತದಲ್ಲಾದರೂ‘ಸರ್ವರಿಗೆ ಸಮಬಾಳು,ಸರ್ವರಿಗೆ ಸಮಪಾಲು’ ಎಂಬ ವಾಕ್ಯ ನಿಜವಾಗಿದೆಯೇ?,ಅಶೋಕ,ಮಾವೋ,ಮೊಹಮ್ಮದ್..ಯಾರ ಕಾಲದಲ್ಲಿಯೂ ಇರಲಿಲ್ಲ. ಪ್ರಯೋಗ ಮಾಡಲು ಇನ್ನೂ ಯಾವ ಸಿದ್ದಾಂತ ಉಳಿದಿದೆ?...

ಎಲ್ಲರೂ ಹೇಳುವುದು “ಸಿಸ್ಟಮ್ ಬದಲಾಗಬೇಕು” ಎಂದು . ನಿಜ, ಸಿಸ್ಟಮ್ ಒಂದೊಂದು ರೀತಿ ಬದಲಾದಾಗಲೂ ಅದರಿಂದ ಕೆಲವರಿಗೆ ಲಾಭವಾಗಿದೆ.ತಮಾಷೆಯೆಂದರೆ ಇದರಿಂದ ಎಷ್ಟು ಜನಕ್ಕೆ ಲಾಭ ಆಗಿದೆಯೋ ಅಷ್ಟೇ ಸಂಖ್ಯೆಯ ಜನಕ್ಕೆ ನಷ್ಟ ಆಗಿದೆ!. ಈ ವ್ಯವಸ್ಥೆ/ಸಿಸ್ಟಮ್ ಎನ್ನುವುದು ಒಂದು ಬೆಡ್ ಶೀಟ್ ನಂತೆ. ಸಮಸ್ಯೆಗಳು ಒಬ್ಬ ಎತ್ತರದ ಮನುಷ್ಯನಂತೆ. ಬೆಡ್ ಶೀಟ್ ಕಾಲಿಗೆ ಎಳೆದುಕೊಂಡರೆ ತಲೆ ಹೊರಬರುತ್ತೆ. ತಲೆಗೆಳೆದು ಕೊಂಡರೆ ಕಾಲು ಹೊರಬರುತ್ತೆ!. ತುಂಬಾ ಹೊತ್ತು ಚಳಿ ಅನುಭವಿಸಿದ್ದ ಅಂಗಕ್ಕೆ ಒಡನೆಯೇ ಬೆಡ್ ಶೀಟು ಸಿಕ್ಕಾಗ ಮನಸ್ಸಿಗೆ ಹಾಯ್ ಎನಿಸುತ್ತದೆ & ಹೊರಬಿದ್ದ ಅಂಗಕ್ಕೆ ತಾಕುವ ಛಳಿಯ ಬಗ್ಗೆ ಅಷ್ಟೇನೂ ವ್ಯಥೆ ಆಗುವುದಿಲ್ಲ. ಆದರೆ ಇದು ಕ್ಷಣಿಕ. ಮತ್ತೆ ಆ ಅಂಗ ಬಂಡೇಳುತ್ತದೆ. ಬಿಸಿ ಬಯಸುತ್ತದೆ. ಮತ್ತೆ ಎಳೆದಾಟ,ಅಸಹನೆ...

ಈ ಸಿಸ್ಟಮ್ ನಿಂದಾಗಲಿ ,ಸಿಸ್ಟಮ್ ಬದಲಾಯಿಸುವುದರಿಂದಾಗಲಿ ಯಾವುದೇ ಉಪಯೋಗ ಇಲ್ಲ.
ಇದು ನಮ್ಮ ಸಿಸ್ಟಮ್ ನ ರಕ್ಷಕರಿಗೂ ಗೊತ್ತು. ಅದಕ್ಕೆಂದೇ ಅವರು ಪ್ರತಿ ಹಂತದಲ್ಲೂ ಜನಸಂಖ್ಯೆಯ ಒಂದು ಭಾಗವನ್ನು ತುಳಿದಿಡುವ ಪ್ರಯತ್ನ ಮಾಡುತ್ತಲೇ ಬಂದಿದ್ದಾರೆ. ಅದು ಹೇಗೆ?

( ಮನಸ್ಸುಬಂದಾಗ ಮುಂದುವರೆಸುತ್ತೇನೆ)

Thursday, January 20, 2011

ಲೋ, ಮೇಯರ್ ನಟ್ರಾಜ.....ನಾಯಿಗಳಿಂದ ಕಾಪಾಡೋ



ಬೀದಿನಾಯಿಗಳು ಮತ್ತೊಮ್ಮೆ ಮಗುವೊಂದನ್ನು ಕಚ್ಚಿ ಕಚ್ಚಿ ಸಾಯಿಸಿದೆ. ಈ ಬಗ್ಗೆ ಏನು ಕ್ರಮ ಕೈಗೊಳ್ಳಬೇಕು ಎನ್ನುವ ಬಗ್ಗೆ ಸರ್ಕಾರದ ಬೇರೆ ಬೇರೆ ಅಂಗಗಳಲ್ಲಿ ಗೊಂದಲ ಇದೆ. ನಾಯಿಗಳ ಸಂತಾನ ಹರಣ ಆಪರೇಶನ್ ಕೆಲಸ ತ್ವರಿತ ಗೊಳಿಸುವುದಾಗಿ ಬೀ.ಬೀ.ಎಂ ಪಿ ಆಯುಕ್ತ ಉಡಾಫೆ ಹೇಳಿಕೆ ಕೊಟ್ಟಿದ್ದಾನೆ. ಇಷ್ಟುವರ್ಷ ನಡೆದ ಸಂತಾನ ಹರಣ ಶಸ್ತ್ರ ಚಿಕಿತ್ತ್ಸೆಯಿಂದ ನಾವು ಸಾದಿಸಿರುವುದೇನು? ಮೊದಲಾದರೆ ವರ್ಷ ವರ್ಷ ಒಂದಷ್ಟು ನಾಯಿಗಳನ್ನು ಸಾಯಿಸುತಿದ್ದರು.ಈಗ ನಾಯಿ ಆಪರೇಶನ್ ಹೆಸರಲ್ಲಿ ಕೋಟ್ಯಾಂತರ ದರೋಡೆ ನಡೆದಿದೆ ಎಂಬುದಕ್ಕೆ ಬೀದಿಯಲ್ಲಿ ಓಡಾಡುತ್ತಿರುವ ನಾಯಿಗಳೇ ಸಾಕ್ಷಿ!. ನಾವು ಈಗ ಆಲೋಚಿಸಬೇಕಾದ್ದು ಎರಡು ಕಾಲಿನ ನಾಯಿಗಳ ಪ್ರಭೇದಗಳ ಬಗ್ಗೆ. ಇವು ನಾಯಿ ದಯಾ ಸಂಘಗಳು. ಇದರ ಸದಸ್ಯರು ಎರಡುಕಾಲಿನ ನರ ಭಕ್ಷಕ ನಾಯಿಗಳು ಎಂದರೆ ತಪ್ಪಾಗಲಾರದು.. ಯಾಕೆಂದರೆ ನಾಯಿಗಳನ್ನು  ಬಿಟ್ಟು ಇವರಿಗೆ ಬೇರೆ ಯಾವುದೇ ಪ್ರಾಣಿಗಳ ಬಗ್ಗೆ ಕಾಳಜಿ ಇಲ್ಲ.ನಾಯಿಗಳು ನಾನ್ ವೆಜ್ ಹೋಟೆಲ್ ಮಾಂಸ ತಿಂದು ಹುಲಿಗಳನ್ತಾಗಿವೆ. ಯಾವುದಾದರೂ ಒಂದು ಅಳಿಲು ಮರದಿಂದ ಕೆಳಗಿಳಿದರೆ ಬಿಟ್ಟ ಬಾಣದಂತೆ ನುಗ್ಗುವ ಈ ಬೀದಿ ನಾಯಿಗಳು ಅವನ್ನು ಹಿಡಿದು ಕೊಲ್ಲುತ್ತವೆ. ಇನ್ನು ಹಕ್ಕಿಮರಿಗಳು ಮರದಲ್ಲಿ ಕಟ್ಟಿದ ಗೂಡಿಂದ ಕೆಳಗೆ ಬಿತ್ತೋ ಅವು ನೇರವಾಗಿ  ಬೀದಿನಾಯಿಗಳ ಹೊಟ್ಟೆ ಸೇರುತ್ತವೆ. ಇನ್ನು ಬೆಕ್ಕಿನ ಮರಿಗಳ ಪಾಡಂತೂ ಹೇಳತೀರದು.ಇನ್ನು ಚಿಕ್ಕ ಮಕ್ಕಳ ಬಗ್ಗೆ ನಾವು ಮೊನ್ನೆ ಪೇಪರ್ನಲ್ಲಿ ಓದಿದ್ದೆವಲ್ಲ.
ಅವಕ್ಕೂ ಆಪರೇಶನ್ ಕಮಲ ಮಾಡಿ ,ಪ್ಲೀಸ್, ಅನ್ನಬಹುದು.ಆದರೆ ಇವರಿರುವ ವಿಧಾನ ಸೌದದ ಒಳಗೆಯೂ ಬೀದಿ ನಾಯಿಗಳ ಹಿಂಡೇ ಇದೆ. ಅಂದಮೇಲೆ ಈ ನಾಯಿಗಳಿಗೂ ಇವರಿಗೋ ಏನೋ ರಕ್ತ ಸಂಭಂದ ಇದೆ ಅಂತಾಯಿತಲ್ಲ!.ಈ ಬಗ್ಗೆ ಪಕ್ಷದ (ಏಕೈಕ?) ಸಂಭಾವಿತ ನಾಯಕ ಮತ್ತು ನಗಾರಾಭಿವೃದ್ದಿ ಸಚಿವ ಸುರೇಶಕುಮಾರ್ ಏನಂತಾರೂ ಗೊತ್ತಿಲ್ಲ.(ನಗರದಲ್ಲೇ ತಾನೇ ನಾಯಿ ಕಾಟ!). ಆಪರೇಶನ್ ಹೆಸರಲ್ಲಿ ನಾಯಿಗಳನ್ನು ಹೊತ್ತೊಯ್ಯುವ ಬೀ ಬೀ ಎಂ ಪಿ ಯವರು ಅದನ್ನು ಇನ್ನೊಂದು ಏರಿಯಾಗೆ ಬಿಡುತ್ತಾರೆ. ಸಂತಾನ ಹರಣ ಆಪರೇಶನ್ ಗಳು ಮನುಷ್ಯರಿಗೆ ಯಶಸ್ವಿಯಾಗಿ ಮಾಡಲು ಸರ್ಕಾರಕ್ಕೆ ಸಾಧ್ಯವಾಗಿಲ್ಲ ಅಂದಮೇಲೆ ನಾಯಿಗಳ ಮೇಲೆ ಮಾಡಲು ಸಾಧ್ಯ ಆಗುತ್ತಾ ? ಈ ಚಿಕಿತ್ಸೆ ಭಾರತದಲ್ಲಿ ಯಶಸ್ವಿಯಾಗಿಲ್ಲಾ ಅಂತಾ ಬೆಂಗಳೊರಿನಲ್ಲಿ ತಿರುಗಾಡೋ ಯು.ಪಿ/ಬಿಹಾರಿ ಜನರನ್ನು ನೋಡಿದರೆ ಗೊತ್ತಾಗುತ್ತೆ.ಅದಕ್ಕಾಗಿಯೇ, ರೈಲ್ವೆ ಮಂತ್ರಿಯಾಗುವ ಉತ್ತರ ಭಾರತದ ಮಂದಿ ವರ್ಷಕ್ಕೆ ಹತ್ತು ರೈಲುಗಳನ್ನು ಆ ರಾಜ್ಯದ ಹಳ್ಳಿ,ಹಳ್ಳಿಗಳಿಂದ ದಕ್ಷಿಣ ಭಾರತದ ನಗರಗಳಿಗೆ ಹಾಕುತ್ತಾರೆ.  ಬೀ.ಬೀ ಎಂ ಪಿ ಕೂಡ ಅವರನ್ನೇ ನೋಡಿ ಕಲಿತಿರಬೇಕು.ಅವರು ಮನುಷ್ಯರಿಗೆ ಮಾಡುವುದನ್ನು ಇವರು ನಾಯಿಗಳಿಗೆ ಮಾಡುತ್ತಾರೆ!. ಸಧ್ಯ ,ನಾಯಿಗಳಿಗೆ ಮತದಾನದ ಹಕ್ಕನ್ನು ಕೊಡುವ೦ತೆ ಯಾರೂ ಆಗ್ರಹಿಸಿಲ್ಲ. ಅಂತ ಆಲೋಚನೆ ಮನೇಕಾ ಗಾಂಧೀ ತಲೆಯಲ್ಲಿ ಇರಬಹುದು.
 ಮನುಷ್ಯರ ಜನಸಂಖ್ಯೆ ಬೇಕಾದಷ್ಟಿದೆ ಹಾಳಾಗಿ ಹೋಗಲಿ ಅಂತಾ ಪ್ರಾಣಿಪ್ರಿಯರು ಉಲಿಯಬಹುದು.ಆದರೆ ಪ್ರಾಣಿಸಂಕುಲದ ಬಗ್ಗೆಯಾದರೂ ಈ  ‘ದಯಾಸಂಘ’ಗಳಿಗೆ ಕೊಂಚ ಕಾಳಜಿ ಬೇಡವೇ?.
ಈ ದೇಶದ  ಹಕ್ಕಿ, ಬೆಕ್ಕು,ಅಳಿಲುಗಳು ಪ್ರಾಣಿದಯಾ ಸಂಘದ ಕರುಣಾಮಯ ದೃಷ್ಟಿಗೆ ಬೀಳಲು ಏನು ಮಾಡಬೇಕು?  . ....

Monday, January 17, 2011

ಅಕಾಡೆಮಿಗಳ "ಒಳಗು ಹೊರಗು"

ಹಲವಾರು ಅಕಾಡೆಮಿಗಳ ರೆಜಿಸ್ಟ್ರಾರ್ ಆಗಿ ಕೆಲಸ ಮಾಡಿರುವ ಟಿ ಎಸ್ ದಕ್ಷಿಣಾಮೂರ್ತಿ ಬರೆದಿರುವ ಅಕಾಡೆಮಿಗಳ "ಒಳಗು ಹೊರಗು" (ಚಿರಂತನ ಪ್ರಕಾಶನ,ಬೆಂಗಳೂರು )ಎಂಬ ಕೃತಿಯಲ್ಲಿ ಸರ್ಕಾರ ರಚಿಸಿರುವ ವಿವಿಧ ಅಕಾಡೆಮಿಗಳ ಸಾಧಕ ಬಾಧಕ ಗಳನ್ನು ಚರ್ಚಿಸಲಾಗಿದೆ. ಇದನ್ನು ಓದಿದರೆ ಈ ನಾಡಿಗೆ ವಿವಿಧ ಅಕಾಡೆಮಿಗಳು ವ್ಯರ್ಥ ಎಂದು ನಮಗೆ ಅರ್ಥವಾಗುತ್ತದೆ. ಅಕಾಡೆಮಿಗಳು ಯಾವುದೇ ಉಪಯುಕ್ತ ಕಾರ್ಯಕ್ರಮಗಳನ್ನು ನಡೆಸದೆ ಕೇವಲ ಅಧ್ಯಕ್ಷರು ಮತ್ತು ಸದಸ್ಯರುಗಳಿಗೆ "ಅರ್ಥ"ಪೂರ್ಣವಾದ ಕಾರ್ಯಕ್ರಮಗಳನ್ನು ಮಾತ್ರ ನಡೆಸುತ್ತಿರುವಂತೆ ಕಂಡು ಬರುತ್ತದೆ. ಆಕಾಡೆಮಿಗಳು ವೇಸ್ಟ್ ಅದಕ್ಕೆ ಒಂದು ರೆಜಿಸ್ಟ್ರಾರ್ ಹುದ್ದೆ ಕೂಡ ವೇಸ್ಟ್ ಎಂದು ಈ ಬುಕ್ಕನ್ನು ಓದಿದರೆ ತಿಳಿದುಬರುತ್ತೆ. ಪುಸ್ತಕ ಕೊಂಚ ನೀರಸ ಅನಿಸುತ್ತದೆ. ಕೆಲವು ಪ್ರಮುಖ ವ್ಯಕ್ತಿಗಳ ಹೆಸರನ್ನು ಪೂರ್ತಿ ನೀಡದೆ ಬರಿ ಅಬ್ರಿವೇಶನ್ ನೀಡಲಾಗಿದೆ. ಇದು ಕೆಲವರಿಗೆ ಮಾತ್ರಾ ಅರ್ಥವಾಗಲು ಸಾಧ್ಯ. ಪಾತ್ರಪರಿಚಯದ ರೀತಿ ಸರಿಯಿಲ್ಲ. ಇಲ್ಲಿ ಕೆಲವರ ವಿಚಾರವನ್ನು ಲೇಖಕ ಸೂಚ್ಯವಾಗಿ ಬರೆದಿರುವರಾದರೂ ಆ ವ್ಯಕ್ತಿಗಳು ಯಾರು ಎಂದು ಊಹಿಸಬಹುದು. ಉದಾಹರಣೆಗೆ ಪಿ ಹೆಚ್ ಡಿ ವಿಧ್ಯಾರ್ಥಿನಿಯೊಂದಿಗೆ ರಾಸಲೀಲೆ ಹೋಗಿ ಗೂಸಾತಿಂದ ಹಾಸನ ಜಿಲ್ಲೆಯ ಪ್ರಾದ್ಯಾಪಕ "ಮ(ವ?)ಕು" ಮತ್ತು  ಒಂದಲ್ಲ ಒಂದು ಕಡೆ ಉಪಕುಲಪತಿ ಆಗಬೇಕೆಂದು ಅಥವಾ ಯಾವುದಾದರೂ ಅಕಾಡೆಮಿಯ ಅಧ್ಯಕ್ಷ ನಾಗಬೇಕೆಂದೂ ಆಸೆ ಹೊಂದಿರುವ ಹಾಗೂ ಶ್ರೀ  ರಾಮಮೋಹನ ಲೋಹಿಯಾ ಚಿಂತನೆಯಿಂದ ಪ್ರಬಾವಿತರಾಗಿರುವ(ಮೈಸೂರಿನ) "ಹೆಂಗರುಳಿನ ಜಾನಪದ ಚಿಂತಕ" ಯಾರು ಎಂಬುದನ್ನು ಊಹಿಸುವುದು ಸುಲಭ. ಆದರೆ ಈ codings ಕೆಲವರಿಗೆ ಮಾತ್ರ ಅರ್ಥವಾಗಬಲ್ಲದು.
ಈ ಪುಸ್ತಕ ಅರ್ಧ ಓದಿದ್ದಿನಷ್ಟೇ .ಓದಿಸಿಕೊಂಡು ಹೋಗುವ ಸೆಳೆತ ಈ ಪುಸ್ತಕದಲ್ಲಿಲ್ಲ. ಒಟ್ಟಾರೆ ಪುಸ್ತಕ ಬಹಳ ನೀರಸವಾಗಿದೆ. ಆದರೆ ಒಬ್ಬ ಸರ್ಕಾರಿ ಅಧಿಕಾರಿಯ ಮಟ್ಟಕ್ಕೆ ಈ ಪುಸ್ತಕ ಪರವಾಗಿಲ್ಲ ಎನ್ನಬಹುದು.

Friday, January 14, 2011

ಸಂಕ್ರಾಂತಿಯ ಶುಭಾಶಯಗಳು

ಸಂಕ್ರಾಂತಿಯ ಶುಭಾಶಯಗಳು . ನಮ್ಮಲ್ಲಿ ಎಳ್ಳು ಬೆಲ್ಲ ಹಂಚುವ ಸಂಪ್ರದಾಯವಿದೆ.ಇದರಲ್ಲಿ ಮೂಡನಂಬಿಕೆಇಲ್ಲವೆಂದೂ, ಇವೆಲ್ಲವೂ ಬಹಳ ವೈಜ್ಞಾನಿಕವಾದ ಪದ್ಧತಿಗಳೆಂದೂ ನಮ್ಮ ಶಿಕ್ಷಕರು ನಮಗೆ ಹೇಳುತ್ತಾ ಬಂದಿದ್ದಾರೆ.ಆಯಾ ಋತುಗಳಲ್ಲಿ ದೇಹಕ್ಕೆ ಆಯಾ ಪದಾರ್ಥಗಳ (ಉದಾ: ಎಳ್ಳು) ಅವಶ್ಯಕತೆ ಇರುತ್ತದೆಂದೂ ಅದನ್ನು ನಾವು ತೆಗೆದು ಕೊಳ್ಳುವಂತೆ ಮಾಡಲು ನಮ್ಮ ಹಿರಿಯರು ಹೀಗೆ ಬುದ್ದಿವಂತಿಕೆ ಉಪಯೂಗಿಸಿದ್ದಾರೆಂದೂ ಹೇಳುತ್ತಾರೆ
ಬರೇ ಸುಳ್ಳು .ಈ ಮೂರ್ಖರ ಮಾತು ಕೇಳಿ ನಾನು  ಹಲವಾರು ವರ್ಷ ಚಳಿಗಾಲದಲ್ಲಿ ಎಳ್ಳು ಉಪಯೋಗಿಸಿ ನೋಡಿದ್ದೇನೆ,ಬೇರೆಯವರಿಗೂ ತಿನ್ನಿಸಿ ನೋಡಿದ್ದೇನೆ .ಇದರಿಂದ ಅಂತಹ ಪ್ರಯೋಜನವೇನೂ ಆಗಿಲ್ಲ. ಬೇಕಾದರೆ ನೀವು ಹಾಗೆ ಮಾಡಿ ನೋಡಿ.ನಂತರ ಮಾತಾಡಿ. ಇನ್ನೊಬ್ಬರು ಬುದ್ದಿವಂತರು ಸಿಕ್ಕಿದರು,ಅವರ ಪ್ರಕಾರ ಬರೀ ಎಳ್ಳು ತಿಂದರೆ ಪ್ರಯೋಜನವಿಲ್ಲವಂತೆ! ಕೊಬ್ಬರಿ ,ಶೇಂಗಾ,ಬೆಲ್ಲ ಇತ್ಯಾದಿ ಬೆರೆಸಿದ ಕಾಂಬಿನೇಶನ್ನೇ ತಿನ್ನಬೇಕಂತೆ!, ಸರಿ,ಹಬ್ಬ ಆಚರಿಸುವವರು ಒಂದು ದಿನ ತಿನ್ನಿ, ನಾನು ತಿಂಗಳಿಡೀ ತಿಂದು ಪರಿಣಾಮ ತಿಳಿಸುತ್ತೇನೆ.ಯಾಕೆಂದರೆ ಯಾವುದನ್ನು ಸಹಾ ಪರಾಂಬರಿಸಿ ನೋಡದೆ ಮಾತನಾಡಬಾರದಲ್ಲ. ಸ್ವಲ್ಪ ಕರ್ಚಾಗಬಹುದು. ಪರವಾಗಿಲ್ಲ,ಬಿಡಿ,ಅಷ್ಟಕ್ಕೂ  ಈ ಹಬ್ಬ ಗಳಲ್ಲಿ ತಿನ್ನುವ ಪದಾರ್ಥದ ಮೇಲೆ ಮಾಡುವ ಖರ್ಚುಗಳಲ್ಲದೆ  ಕೆಲವು hidden cost ಗಳಿವೆ.ಒಬ್ಬ ರೈತ ತಾನು ವ್ಯವಸಾಯಕ್ಕೆಂದು ಎತ್ತುವ ಸಾಲದಲ್ಲಿ ಮುಕ್ಕಾಲು ಬಾಗ ಈ ಹಬ್ಬ,ಹರಿದಿನ,ಮದುವೆ,ಮುಂಜಿಗಳಿಗೇ ಖರ್ಚಾಗುತ್ತದೆ.ಕೊನೆಗೆ ಉಳ್ದದ್ದು ನೇಣು ಹಗ್ಗಕೋ,ವಿಷಕ್ಕೋ ಸಾಕಾಗುತ್ತದೆ.ಕೊನೆಗೆ 'ಅವನು (ಹೆಂಡ)ಕುಡಿದು,ಕುಡಿದು ಸತ್ತ ಎಂದು ಗುಲ್ಲೆಬ್ಬಿಸುತ್ತಾರೆ.ನಿಜವಾಗಲು ನಮ್ಮ ಸಂಪ್ರದಾಯಗಳ ಪಾಲನೆಯಿಂದ ಆಗುವ ಖರ್ಚಿಗಿಂತಾ ಹೆಂಡದ ಖರ್ಚು ತುಂಬಾ ಕಡಿಮೆ!. ಇದು ಕೊಯ್ಲು ಮುಗಿದು ದುಡಿಯುವ ಜನಕ್ಕೆ ಒಂದಿಷ್ಟು ವಿರಾಮ ಸಿಗುವ ಕಾಲ. ಈ ಸಮಯದಲ್ಲಿ ಅವರ ಬಳಿ ಒಂದಿಷ್ಟು ದುಡ್ಡು ಓಡಾಡುತ್ತದೆ, ಸಾಮಾನ್ಯವಾಗಿ ಬಡವನ ಕೈಲಿ ದುಡ್ಡು ಕಂಡರೆ ಅವನಿಗೆ "ಚರ್ಬಿ"ಬಂದಿದೆ ಎಂದು ಉಳ್ಳವರು ಮಾತಾಡಿಕೊಳ್ಳುತ್ತಾರೆ. ಇದನ್ನು ಸಹಿಸಿ ಕೊಳ್ಳಲು ಅವರಿಂದ ಹೇಗೆ ತಾನೇ ಸಾಧ್ಯ. ಅವರ ಚರ್ಬಿ ಅಥವಾ ಕೊಬ್ಬು ಇಳಿಸಲು ಏನಾದರೂ ಮಾಡಬೇಕಲ್ಲ.ಅದಕ್ಕೆ ಒಂದು ಪ್ಲಾನ್ ಮಾಡಿದರು. ಋತುಮಾನ ಬದಲಾಯಿತೆಂದೂ, ಸೂರ್ಯ ಆಕಾಶದಲ್ಲಿ ದಿಕ್ಕು ಬದಾಲಾಯಿಸಿದ್ದನ್ನೇ ನೆಪ ಮಾಡಿಕೊಂಡು ಒಂದು ಕಥೆ ಕಟ್ಟಿದರು. ರೈತನ ಕೊಬ್ಬು ಇಳಿಸಲು ಇಷ್ಟು ಸಾಕಿತ್ತು. ಆತ ಕೈನಲ್ಲಿದ್ದುದ್ದನ್ನೆಲ್ಲಾ ಹಬ್ಬ,ಹರಿದಿನ ಗಳಿಗೆ ಖರ್ಚುಮಾಡಿ ಮರುದಿನ ಜಮೀನುದಾರನ ಜೀತಕ್ಕೆ ಸೇರಿಕೊಂಡ. ಇದು ನಮ್ಮ ಸನಾತನ ಹಿರಿಯರ ಬುದ್ದಿವಂತಿಕೆ.Bastards ..... ಇನ್ನು ಎಳ್ಳು ಬೆಲ್ಲ ಬೀರುವುದನ್ನು ಒಂದು ಸೌಹಾರ್ದತೆ ಹೆಚ್ಚಿಸುವ ಪ್ರಕ್ರಿಯೆ ಎಂದು ಕೆಲವರು ಹಾಡಿ ಹೊಗಳುತ್ತಾರೆ. ಸೌಹಾರ್ಧ,ಸಂಪರ್ಕ ,ಸಂಭಂದ ...ಯಾವ ಸುಡುಗಾಡೂ ಇಲ್ಲ. ಹಬ್ಬಗಳಲ್ಲಿ ಎಳ್ಳು,ಬೇವು ಇತ್ಯಾದಿಗಳನ್ನು  ಬೀರುವ ನೆಪದಲ್ಲಿ ಅಕ್ಕ ಪಕ್ಕದವರ ಮನೆಗೆ ನುಗ್ಗಿ ಅವರಮನೆಯಲ್ಲಿ ಏನೇನು ಸಾಮಾನು ಇದೆ ಎಂದು ನೋಡಲೂ, ತಮ್ಮ ಬಲಿ ಇರುವ ವಸ್ತುಗಳೊಂದಿಗೆ ಕಂಪೇರ್ ಮಾಡಲು, ತಮ್ಮ ಹೊಸ ಬಟ್ಟೆ,ಆಭರಣಗಳನ್ನೂ  ಅಕ್ಕಪಕ್ಕದವರಿಗೆ ಪ್ರದರ್ಶಿಸಿ ಎಲ್ಲರ ಹೊಟ್ಟೆಉರಿಸಲು ಹೆಂಗಸರಿಗೆ ಈ ಹಬ್ಬಗಳು ಸುವರ್ಣಾವಕಾಶ ಒದಗಿಸುತ್ತವೆ.  ಅಕ್ಕ-ಪಕ್ಕದ ಜನರ ಖಾಸಗಿ ಜೀವನದಲ್ಲಿ ತಲೆತೂರಿಸಲು ಇದು ಒಳ್ಳೆಯ ನೆಪ ಒದಗಿಸುತ್ತದೆ. ಜೊತೆಗೆ ಎಳ್ಳು ಕೊಟ್ಟರೆ "ಋಣ",ಆದುದರಿಂದ ಅವನ್ನು ವಾಪಾಸು ಕೊಡಬೇಕು ಎಂಬ ಪ್ರತೀತಿ ಹಬ್ಬಿಸಲಾಗಿದೆ. ನಾವು ತಟಸ್ಥರಾಗಿದ್ದುಕೊಂಡು'ಎಳ್ಳು ತಂದ್ಯ,ಥ್ಯಾಂಕ್ಸ್ ,ಅಲ್ಲಿಟ್ಟು ಹೋಗು' ಅನ್ನಂಗಿಲ್ಲ. ಮತ್ತೆ ನಾವು ಎಳ್ಳು ಹಿಡಕೊಂಡು ಈ ಬೋಳಿಮಕ್ಕಳನ್ನು ಹುಡುಕಿಕೊಂಡು ಹೋಗಬೇಕು! ಇದು ತಟಸ್ಥರಾಗಿರುವವರನ್ನು ಈ ಮೂಡ ಆಚರಣೆಗಳ ಸುಳಿಯಲ್ಲಿ ಸಿಕ್ಕಿಸುವ ಹುನ್ನಾರ!.


ಸಂಕ್ರಾಂತಿಗೆ ದಿಕ್ಕಾರ

Wednesday, January 12, 2011

Tulu Song from the Movie 'Koti Chennayya'





Ekka saka ekka sakaa

Ekka sakkalaa ….



Akka pand’dh leppunakulu

Batterittelaa ,



O raamaa…oo dhoomaa ,

Raama dhooma choma avlu er_ ulleriya

Malla malla bonda gett’dh ketth’dh korleyaa…..



Ekka saka ekka sakaa

Ekka sakkalaa ….



Mande nilike neer mutudu bendr kaaypodu

Koti chennaye enne pad’dh porlu meeyodu



Ekka saka ekka sakaa

Ekka sakkalaa ….


Oogange….oo gauri….

Gange gauri kaali bolli inchi balede,

Chombu mutta manda per_ korodu shaarade

Ooloo itti nelli kaayi uppu serlekoo,

Baduki panpi uchchaaled_ namma kullileko…



Ekka … sakaa…

 

Tuesday, January 11, 2011

The art of Governence





The art of Public administration is like the game of Volleyball. In volleyball you keep the ball on air without allowing it to it to touch the ground. In administration we keep on sending file from one department to another without any results. Very funny, but true.

-keshavaprasad





искусство Государственное управление, как игра в волейбол. В волейболе вы держите мяч на воздухе, не допуская его к ней прикоснуться к земле. В администрации мы продолжаем отправки файлов из одного департамента в другой без каких-либо результатов. Очень смешно, но это так.

-кешавапрасад





公共管理の技術はバレーボールのゲームのようなものです。バレーボールで地面を触るようにしてそれにそれを許可せずに空気のボールをキープ。管理では、任意の結果なしで別の部署からファイルを送信し続ける。非常に面白いですが本当です。

-けしゃゔぁpらさd



French traslation



L'art de l'administration publique, c'est comme le jeu de volley-ball. En volley-ball vous garder la balle sur l'air sans lui permettant de le toucher le sol. Dans l'administration nous continuons à l'envoi de fichier d'un département à l'autre sans aucun résultat. Très drôle, mais vrai





German



Die Kunst der öffentlichen Verwaltung ist wie das Spiel des Volleyball. Im Volleyball halten Sie den Ball auf Luft, ohne dass es, um es auf den Boden zu berühren. In der Verwaltung arbeiten wir an den Senden-Datei von einer Abteilung zur anderen ohne Ergebnis. Sehr lustig, aber wahr.

-keshavaprasad







Spanish



El arte de la administración pública es como el juego del voleibol. En el voleibol que mantener la bola en el aire sin permitir que ésta toque el suelo. En la administración se mantenga en el envío de archivo de un departamento a otro sin ningún resultado. Muy gracioso, pero cierto.

-keshavaprasad





Dutch



De kunst van het openbaar bestuur is als het spel van Volleybal. In volleybal jij de bal in de lucht zonder dat zij hem op de grond te raken. In de administratie houden we over het verzenden van bestanden van de ene afdeling naar de andere zonder enig resultaat. Erg grappig, maar waar.

-keshavaprasad





公共行政的藝術就像是排球比賽。在排球你讓球在空中沒有允許它向它接觸地面。在管理我們不斷發送文件從一個部門到另一個沒有任何結果。很可笑,但卻是事實。

-可杀譬如阿萨德




Afrikaans



Die kuns van openbare administrasie is soos die spel van die Volleyball. In vlugbal jy hou die bal op die lug sonder dat dit dit die grond te raak nie. In administrasie hou ons op die stuur lêer van een departement na 'n ander sonder enige resultate. Baie snaaks, maar waar.

-keshavaprasad



Sweedish



Konsten att Offentlig förvaltning är som volleyboll. I volleyboll du hålla bollen i luften utan att den börjar att röra marken. I förvaltningen har vi hålla på att skicka filer från en avdelning till en annan utan resultat. Väldigt roligt, men sant.

-keshavaprasad





Indonesian



Seni administrasi umum adalah seperti permainan Voli. Dalam voli Anda tetap menjaga bola di udara tanpa memungkinkan untuk itu menyentuh tanah. Dalam administrasi kami terus mengirimkan file dari satu departemen yang lain tanpa hasil apapun. Sangat lucu, tapi benar.

-keshavaprasad







Arabic



فن الإدارة العامة مثل لعبة الكرة الطائرة. في الكرة الطائرة كنت ابقاء الكرة في الهواء من دون السماح لها أن تلمس الأرض. في مجال الإدارة ونحافظ على ارسال ملف من قسم الى آخر من دون أي نتائج. مضحك جدا، لكنه صحيح.

كيشافابراساد

Saturday, January 8, 2011

ಗೊತ್ತಾನಗ ಪೊರ್ತಾoಡ್

ಗೊತ್ತಾನಗ ಪೊರ್ತಾoಡ್ ಎಂಬ ತುಳು ಧಾರವಾಹಿ ಸುವರ್ಣ ಟಿ ವಿ ಯಲ್ಲಿ ಭಾನುವಾರ & ಶನಿವಾರ ಮಧ್ಯಾನ 1-30 ಕ್ಕೆ ಪ್ರಸಾರ ಆಗುತ್ತೆ. ಈ ವಿಷಯ ಕೇಳಿ ಬಹಳ ಖುಷಿ ಆಯ್ತು. ಆದರೆ ಅದನ್ನು ನೋಡಿದ ಮೇಲೆ ತಲೆಚಿಟ್ಟು ಹಿಡಿಯಿತು.
ಎಂತಹ ದರಿದ್ರ ಸೀರಿಯಲ್ ಮಾರಾಯ್ರೇ.. ಅದರಲ್ಲಿ ಬರೋ ಒಂದೊಂದೂ ಪಾತ್ರದ್ದೂ ಒಂದೊಂತರ ಕಪಿ ಚೇಷ್ಟೆ. ಎಲ್ಲಾ ಎಪಿಸೋಡಿನಲ್ಲೂ ಒಬ್ಬನೇ ಹೀರೋ. ಅವನ ಹಾವಭಾವ, ಅಂಗಚೇಷ್ಟೆಗಳು ವಿಪರೀತ ಅನ್ನಿಸುತ್ತೆ. ಡಬ್ಬಾ ಕಥೆ. ಸಾಲದ್ದಕ್ಕೆ ಕೊನೆಯಲ್ಲಿ ಅದಕ್ಕೊಂದು ನೀತಿ ಬೇರೆ. ....ಎನ್ಚಿನಾ ತಿಗಲ್ದಕಟ್ಟಾ ಸೀರಿಯಲ್ ಮಾರಾಯ್ರೆ ..


ಬರೆಪುನಿ ಇಂಚಿನ ನುನ್ಗೆಲ್ ಕಥೆ . ಐತ್ಹ ಮಿತ್ತ್ ಮುಕ್ಲೆಗ್ ಬಿರುದು ಬೇತೆ ...ತೆಲಿಕೆದ ಬೊಳ್ಳಿ ,ತೆಲಿಕೆದ ಅರಸೆ....ಥೂ  

Monday, January 3, 2011

ಹಾಟ್,ಫ್ಲಾಟ್ ಅಂಡ್ ಕ್ರೌಡೆಡ್ (Part-2)

ಥಾಮಸ್ ಫ್ರೈಡ್ಮ್ಯಾನ್ ಎಂಬುವರು ಬರೆದಿರುವ "ಹಾಟ್,ಫ್ಲಾಟ್ ಅಂಡ್ ಕ್ರೌಡೆಡ್" ಈ ಪುಸ್ತಕವು ಪರಿಸರವಾದಕ್ಕೆ ಸಂಭಂಧಿಸಿದೆ. ಮಾಲಿನ್ಯ ಮುಂತಾದ ಸಮಸ್ಯೆಗಳಿಂದಾಗಿ ಭೂಮಿ ತೀವ್ರಗತಿಯಲ್ಲಿ ವಿನಾಶದ ಅಂಚಿಗೆ ಸಾಗುತ್ತಿದೆ ಎನ್ನುತ್ತಾರೆ ಲೇಖಕ ಫ್ರೈಡ್ಮ್ಯಾನ್. ನಮ್ಮ ಇಂಧನದ ಅಗತ್ಯಗಳು ಹೇಗೆ ನಮ್ಮ ಭೂಮಿಯನ್ನು ನಿಧಾನವಾಗಿ ಬಲಿತೆಗೆದುಕೊಳ್ಳುತ್ತಿವೆ,ಏಕೆ ಸರ್ಕಾರಗಳು ಪೆಟ್ರೋಲ್ನಂತಹ ಇಂಧನಗಳ ಉಪಯೋಗವನ್ನು ಕಡಿಮೆಮಾಡುವ ಬಗ್ಗೆ ಕ್ರಮ ಕೈಗೊಳ್ಳುತಿಲ್ಲ ಎಂಬ ವಿಷಯವನ್ನು ಕೂಲಂಕಷವಾಗಿ ಚರ್ಚಿಸುವ ಪುಸ್ತಕ ಪರಿಸರ ಸ್ನೇಹಿ ತಂತ್ರಜ್ಞಾನಗಳ ಅಭಿವೃದ್ದಿಯಲ್ಲಿ ಹಣ ತೊಡಗಿಸುವ ಅಗತ್ಯಗಳನ್ನು ಎತ್ತಿತೋರಿಸುತ್ತವೆ. ಆದರೆ ಈ ಪುಸ್ತಕ ಪದೇ ಪದೇ ಭೂಮಿ ನಾಶದ ಅಂಚಿನಲ್ಲಿದೆ ಎಂದು ಹುಯಿಲೆಬ್ಬಿಸಿರುವುದು ನನಗಂತೂ ಕಿರಿಕಿರಿ ಎನ್ನಿಸುತ್ತದೆ.ಏಕೆಂದರೆ ಭೂಮಿ ನಾಶ ಆಗುತ್ತದೆ, ಮನುಕುಲ ನಾಶ ಆಗುತ್ತದೆ ,ಪ್ರಳಯ ಆಗುತ್ತದೆ ಎಂದು ವರ್ಷವರ್ಷ ನಮ್ಮ ಲೋಕಲ್ ಜ್ಯೋತಿಷಿಗಳು ಹಾಗು ಪರಿಸರವಾದಿಗಳು ಬೊಬ್ಬೆ ಹಾಕುತ್ತಲೇ ಇರುವುದನ್ನು ಕೇಳಿ ಕೇಳಿ ತಲೆ ಚಿಟ್ಟು ಹಿಡಿದಿದೆ.ಭೂಮಿಯ ತಾಪಮಾನ ಏರಿಕೆಯಿಂದ,ಮಾಲಿನ್ಯದಿಂದ ಜನರು ಸಾಯುತ್ತಾರೆ ಎಂಬುದು ಇವರ ವಾದ. ಈಗೇನು ಯಾರೂ ಸಾಯುತಿಲ್ಲವೇ ? ವರ್ಷ ವರ್ಷ ಶೀತ ಗಾಳಿಯ ಬೀಸುವಿಕೆಯಿಂದ 200 -300 ಜನ ಸಾಯುತ್ತಲೇ ಇದ್ದಾರೆ. ವಿಶ್ವದಾದ್ಯಂತ ಈ ಸಂಖ್ಯೆ ಇನ್ನು ಹೆಚ್ಚು. ಇನ್ನು ಬರ,ನೆರೆ ,ಭೂಕಂಪ, ಅತಿವೃಷ್ಟಿ, ಅನಾವುಷ್ಟಿ ಇತ್ಯಾದಿಗಳಿಗೆ ಸಿಕ್ಕು ಇಲ್ಲಿಯವರೆಗೆ ವರ್ಶಾವರ್ಷ ಹಲವಾರು ಜನ ಸಾಯುತ್ತಲೇ ಇದ್ದಾರೆ, ಮುಂದೆಯೂ ಸಾಯುತ್ತಲೇ ಇದ್ದಾರೆ. ಇವುಗಳನ್ನು ತಡೆಯುತ್ತೆವೆಂದು ಸರ್ಕಾರಗಳು,ಸಂಘ ಸಂಸ್ಥೆಗಳು ಮಾಡುತ್ತಿರುವ ಬೂಟಾಟಿಕೆಯ ಪ್ರಯತ್ನಗಳು ಯಶಸ್ವಿಯಾಗಿರುವುದು ಅವರು ನೀಡುವ ಖೊಟ್ಟಿ ಅಂಕಿ ಅಂಶಗಳಲ್ಲಿ ಮಾತ್ರ!. ವಿಶ್ವದ ಜನಸಂಖ್ಯೆಯ ಶೇಕಡಾ ಎಂಬತ್ತು ಭಾಗ ಬಡಜನರಿಂದ ಕೂಡಿದೆ.'ಯುನಿಸೆಫ್' ಅಂಕಿ ಅಂಶದ ಪ್ರಕಾರ ಈ ಭೂಮಿಯ ಮೇಲೆ ಪ್ರತಿದಿನ 22,000 ಹಸುಳೆಗಳು ಹಸಿವಿನಿಂದ ಮರಣಹೊಂದುತ್ತವೆ.ಇಂತಹ ಸಾವುಗಳು ಗ್ರಾಮೀಣ ಪ್ರದೇಶಗಳಲ್ಲೇ ಹೆಚ್ಚು.ನಾವುಗಳು ಚಿಕ್ಕ ಮಕ್ಕಳನ್ನು ಸಾವು ಮುಟ್ಟುವುದಿಲ್ಲ,ದೇವರು ಕಾಪಾಡುತ್ತಾನೆ ಎಂದೆಲ್ಲ ಬುರುಡೆ ಬಿಡುತ್ತಾ ಜನಗಳಲ್ಲಿ ಮೂಡನಂಬಿಕೆ ಬಿತ್ತುತೇವೆ!,ಹೆಚ್ಚು ಹೆಚ್ಚು ಮಕ್ಕಳು ಹೆರಲು ಪ್ರೇರೆಪಿಸುತ್ತೇವೆ.(ಎಲ್ಲಾ ಧರ್ಮಕ್ಕೆ ಸೇರಿದ )ಖದೀಮ ಧರ್ಮಗುರುಗಳು ಸಾಮೂಹಿಕ ವಿವಾಹಗಳನ್ನು ಮಾಡಿಸುತ್ತಾರೆ. ಅಭಿವೃದ್ದಿ ಹೊಂದುತ್ತಿರುವ ರಾಷ್ಟ್ರಗಳ ಮಕ್ಕಳುಗಳಲ್ಲಿ ಸುಮಾರು ಶೇಕಡಾ 27-28% ರಷ್ಟು ಮಂದಿಗೆ ಸರಿಯಾದ ಆಹಾರ ಇಲ್ಲ. ಈ ಸಂಖ್ಯೆ ದಕ್ಷಿಣ ಏಶಿಯ ಮತ್ತು ಆಫ್ರಿಕಾದ ರಾಷ್ಟ್ರಗಲ್ಲಿ ಹೆಚ್ಚು. ಅಂಗೈ ಹುಣ್ಣಿಗೆ ಕನ್ನಡಿ ಬೇಕೇ?
ಜನರು ಹೇಗೆ ನರಳುತಿದ್ದಾರೆ,ಕಷ್ಟಪಡುತಿದ್ದಾರೆ ಎಂಬುದನ್ನು ನಾವು ಕಣ್ಣು ಬಿಟ್ಟು ಸುತ್ತ ಮುತ್ತ ನೋಡಿದರೆ ತಿಳಿಯುತ್ತದೆ. ಈ ಚಳಿ ಶೀತಗಾಳಿಯಲ್ಲಿ ಎಷ್ಟುಜನಕ್ಕೆ ಬಟ್ಟೆಯಿಲ್ಲ,ಚರ್ಮ ಒಡೆಯುತ್ತದೆ,ಅದಕ್ಕೆ ಶೂರ್ಶುಷೆಯಿಲ್ಲ. ಚಳಿ ತಡೆಯಲು ಆಗದೆ ಅವನೇನಾದರೂ ಒಂದಿಷ್ಟು ಹೆಂಡ ಕುಡಿದನೋ ,ನಮ್ಮ ಧರ್ಮಗುರುಗಳಿಗೆ,ಸಾಮಾಜಿಕ ಕಳಕಳಿಯ ನಾಟಕವಾಡುವ ಸಜ್ಜನರಿಗೆ ಹೊಟ್ಟೆಯೆಲ್ಲಾ ಉರಿ ಆರಂಭವಾಗುತ್ತದೆ ಮನುಕುಲಕ್ಕೆ ಇಷ್ಟು ಸಮಸ್ಯೆಗಳು ಸಾಲದು ಎಂಬಂತೆ ಸಂಕ್ರಾಮಿಕ ರೋಗಗಳು ತಮ್ಮ ಕಬಂಧ ಬಾಹುಗಳನ್ನು ಚಾಚಿ ಜನರನ್ನು ಬಲಿತೆಗೆದುಕೊಳ್ಳುತ್ತಿದೆ.ಪ್ರಸ್ತುತ, ಅಂದಾಜು ನಾಲ್ಕು ಕೋಟಿ ಜನ AIDS ನಿಂದ ಬಲಳುತಿದ್ದಾರೆ.2004 ರಲ್ಲಿ 30 ಲಕ್ಷ ಜನರು AIDS ನಿಂದ ಸತ್ತೆ ಹೋಗಿದ್ದಾರೆ. ನಂತರದ ವರ್ಷಗಳಲ್ಲಿ ಈ ಸಂಖ್ಯೆ ಇನ್ನೂ ಹೆಚ್ಚಿರಬಹುದು. ಆದರೆ ಎಡ್ಸ್ ನಿರ್ಮೂಲನೆಗೆಂದು ಬಂದ ವಿದೇಶಿ ಹಣವನ್ನು ತೃತೀಯ ರಾಷ್ಟ್ರಗಳ ಅಧಿಕಾರಶಾಹಿಗಳು ನುಂಗಿ ನೀರುಕುಡಿದಿರುವುದರಿಂದ ನಮ್ಮಲ್ಲಿ AIDS ಸಂಬಂದಿ ಸಾವುಗಳು ಕಡಿಮೆಯಾಗಿವೆ ಎಂದು ಖೊಟ್ಟಿ ಅಂಕಿ-ಅಂಶಗಳನ್ನು ನೀಡುವುದರಲ್ಲಿ ಸಂದೇಹವಿಲ್ಲ.ಇನ್ನು ವಾರ್ಷಿಕ ಹತ್ತು ಲಕ್ಷ ಜನ ಮಲೇರಿಯಾದಿಂದ ಸಾಯುತ್ತಾರೆ.ಇದರಲ್ಲಿ ಶೇಕಡಾ 80% ರಷ್ಟು ಜನ ಆಫ್ರಿಕನ್ನರು. 64 ಕೋಟಿ ಜನಕ್ಕೆ ಸೂರು ಇಲ್ಲ.40 ಕೋಟಿ ಜನ ಶುದ್ದನೀರಿಗಾಗಿ ಪರದಾಡುತಿದ್ದಾರೆ.2003 ರಲ್ಲಿ ಹದಿನಾರು ಲಕ್ಷ ಮಕ್ಕಳು ಐದು ವರ್ಷ ವಯಸ್ಸು ತುಂಬುವ ಮೊದಲೇ ಸತ್ತುಹೋಗಿವೆ. ಇದೇ ವರ್ಷ 14 ಲಕ್ಷ ಜನರು ಕುಡಿಯಲು ಶುದ್ದ ನೀರು ಸಿಗದೇ ಕಲುಷಿತ ನೀರನ್ನು ಸೇವಿಸಿ ಅದರಿಂದ ಬಂದ ಖಾಯಿಲೆಗಳಿಂದ ಅಸುನೀಗಿದ್ದಾರೆ...ಹೀಗೆ ಬರೆಯುತ್ತಾ ಹೋದರೆ ಪೇಜ್ ಗಟ್ಟಲೆ ಬರೆಯಬಹುದು. ಒಟ್ಟಾರೆ ಈಗಾಗಲೇ ಜನರು ಭೂಮಿಯಲ್ಲಿ ಸಮಸ್ಯೆಗಳಿಂದ 'ಸಫರ್' ಆಗುತಿದ್ದಾರೆ ಎಂದಾಯಿತು. ಅಂದಮೇಲೆ ಥಾಮಸ್ ಫ್ರೈಡ್ಮ್ಯಾನ್ ತನ್ನ ಪುಸ್ತಕದಲ್ಲಿ ವರ್ಣಿಸಿರುವ ಮಾಲಿನ್ಯ ಸಂಭಂದಿ ಅಪಾಯಗಳಿಗೆ ಗುರಿಯಾಗುವವರು ಎಷ್ಟು ಜನ?, ಈ ಭೂಮಿಯ ಶೇಕಡಾ 20 % ಜನ!. ಇಷ್ಟು ಜನಕ್ಕಾಗಿ ಎಲ್ಲರೂ ೧೦೦% ಜನರೂ ಪರಿಸರ ಸ್ನೇಹಿ ಇಂಧನಗಳ ಉತ್ಪಾಧನೆಗೆ ಅಹೋರಾತ್ರಿ ಶ್ರಮಿಸಬೇಕೆ?,


ಅಷ್ಟಕ್ಕೂ ಈ ಪರಿಸರ ಸ್ನೇಹಿ ಇಂಧನ ಗಳೆಂದರೆ ಏನು ?

ಈ ಭೂಮಿಯ ಬಡ ಜನರ ರಕ್ತ ,ಬೆವರು ಹಾಗು ಕಣ್ಣೀರು?,

ಇಂದು ಪ್ಲಾಸ್ಟಿಕ್ ಚೀಲಗಳ ಬಳಕೆ ನಿಲ್ಲಿಸಲು ಸರ್ಕಾರ ಕ್ರಮ ಕೈಗೊಳ್ಳುತ್ತಿದೆ. ಆದರೆ ಬೆಲೆಯಲ್ಲಿ,ಉಪಯೋಗದಲ್ಲಿ ಅದಕ್ಕೆ ಸಮಾನವಾದ ವಸ್ತುವನ್ನು ಉತ್ಪಾದಿಸಲು ಕ್ರಮ ಕೈಗೊಂಡಿಲ್ಲ. ಇಂದಿನ ಮಾಸ್ ಮಾರ್ಕೆಟಿಂಗ್ ಆರ್ಥಿಕತೆಯ ಯುಗದಲ್ಲಿ ಪ್ಲಾಸ್ಟಿಕ್ ಬಳಕೆ ನಿಲ್ಲಿಸಿದರೆ ವಸ್ತುವಿನ ಕ್ರಯ ಹೆಚ್ಚುತ್ತದೆ.ಉದಾಹರಣೆಗೆ" ಫ್ಯಾಬ್ ಇಂಡಿಯಾ" (Fab India) ಸಂಸ್ಥೆಯಲ್ಲಿ ಶಾಪಿಂಗ್ ಮಾಡಿ ನೋಡಿ. ಅದು ಸಾಂಪ್ರದಾಯಿಕ ,ಪರಿಸರ ಸ್ನೇಹಿ ವಸ್ತುಗಳ ವಿಕ್ರಯಕ್ಕೆಂದೇ ಮೀಸಲಿಟ್ಟ ಮಳಿಗೆ. ಅಲ್ಲಿನ ವಸ್ತುಗಳ ಬೆಲೆ ನೋಡಿದರೆ ತಲೆ ಸುತ್ತುಬರುತ್ತೆ. ಯಾಕೆಂದರೆ ಅದೇ ಪದಾರ್ಥ ಹೊರಗೆ ಕಡಿಮೆ ಬೆಲೆಗೆ ಸಿಗುತ್ತೆ.

ಇನ್ನು, ನಮ್ಮ ಇಂಧನ ಮಂತ್ರಿ ಬಲ್ಬುಗಳನ್ನು ಬ್ಯಾನ್ ಮಾಡಿ ಬರೀ ಸಿ.ಎಫ್.ಎಲ್ ಟ್ಯೂಬ್ ಗಳ ಬಳಕೆ ಕಡ್ಡಾಯ ಮಾಡುತ್ತಾಳಂತೆ. ನಿಮ್ಮ ಮನೆ ಬಲ್ಬ್ ಹೋದರೆ ಸಾಯಂಕಾಲ ಮನೆಗೆ ಹೋಗುವಾಗ ಹತ್ತು ರೊಪಾಯಿ ಕೊಟ್ಟು ಒಂದು ಬಲ್ಬ್ ತಗೊಂಡು ಮನೆಗೆ ಹೋಗಬಹುದು.ಆದರೆ ನೀವು ಸಿ.ಎಫ್.ಎಲ್ ಟ್ಯೂಬ್ ಬೇಕೆಂದರೆ 150 -300 ರೂಪಾಯಿ ಕಕ್ಕಬೇಕು.ಹೇಗಿದೆ ಬಡವರನ್ನು ಉದ್ಧಾರ ಮಾಡಲೆಂದೇ ಇರುವ ಸರ್ಕಾರದ ಸ್ಕೀಮ್!, ಗುಜರಾತಿನ ಯಾವ ವರ್ತಕನನ್ನು ಉದ್ಧಾರ ಮಾಡುವ ಹುನ್ನಾರ?. ಇಂತಹುದೇ ಬೇರೆ ಬೇರೆ ಐಡಿಯಾಗಳು ಸರ್ಕಾರದ ತಲೆಯಲ್ಲಿದೆ. ನಾಳೆ ನಮ್ಮ ಸರ್ಕಾರ ಥಾಮಸ್ ಫ್ರೈಡ್ಮ್ಯಾನ್ ನನ್ನು ಪರಿಸರ ಸಲಹೆಗಾರನನ್ನಗಿ ನೇಮಿಸಿಕೊಂಡರೂ ಅಚ್ಚರಿಯಿಲ್ಲ. ಏಕೆಂದರೆ ಇದು ಭೂಮಿಯನ್ನು ,ಮನುಕುಲವನ್ನು ಕಾಪಾಡುವ ಪ್ರಶ್ನೆಯಲ್ಲವೇ... ಹಾಗಾಗಿ ಇಂತಹ ಒಳ್ಳೆ ಉದ್ದೇಶಗಳಿಗೆ ನಮ್ಮ ಜನರ ರಕ್ತ ,ಕಣ್ಣೀರು,ಬೆವರನ್ನು ನೀಡಲು ನಮ್ಮ ನಾಯಕರು ಸದಾ ಸಿದ್ದ. ಹಿಂದೆ ಸಹಾ 'ನಾಜಿ' ಗಳಿಂದ ಮನುಕುಲಕ್ಕೆ ಆಗಬಹುದಾದ ಅಪಾಯಗಳಿಂದ ಜಗತ್ತನ್ನು ರಕ್ಷಿಸಲು ನಮ್ಮ ಸೈನಿಕರನ್ನು ಸಹಾ ಬಳಸಿಕೊಳ್ಳಲಿ ಎಂದು ನಮ್ಮ ಯಾರೋ ಮಹಾನಾಯಕರು ಬ್ರಿಟಿಶ್ ಸರ್ಕಾರಕ್ಕೆ ಹೇಳಿದ್ದರು!

(ಮುಂದುವರೆಯುತ್ತದೆ)