Saturday, December 25, 2010

ಗಣಪತಿ ಸಚ್ಚಿದಾನಂದನ ಕಿಲಾಡಿತನ.



ಮೈಸೂರಿನ ನಂಜನಗೂಡು ರಸ್ತೆಯಲ್ಲಿ ಗಣಪತಿ ಸಚ್ಚಿದಾನಂದ ಎಂಬಾತ ವೆಂಕಟೇಶನ ಗುಡಿ ಕಟ್ಟಿಸಿದ್ದಾರೆ. ನಾನು ಹೋದಾಗ ನೋಡುತ್ತೇನೆ. ಪೂಜಾರಿಗಳು ಖಾಲಿ ಆರತಿ ತಟ್ಟೆಯ ಮುಂದೆ ಹ್ಯಾಪು ಮೋರೆ ಹಾಕಿ ಕುಂತಿದ್ದಾರೆ!. ಜನರನ್ನು ನೋಡಿದ ಕೂಡಲೇ ಕಿರೀಟದಂತಹ ವಸ್ತುವನ್ನು ಹಿಡಿದುಕೊಂಡು ಅದನ್ನು ತಲೆಗೆ ತಾಗಿಸಲು ಉತ್ಸಾಹದಿಂದ ಪುಟಿದುನಿಲ್ಲುವ ಪೂಜಾರಿಗಳು ಪಾಪ, ಹೀಗೇಕಾದರು? ಎಂದು ಆಲೋಚಿಸುತ್ತ ತೀರ್ಥ ತಗೊಳ್ಳಲು ಹತ್ತಿರ ಹೋದಾಗ ಅದರ ರಹಸ್ಯ ತಿಳಿಯಿತು. ಆ ದೇವಾಲಯದ ಹುಂಡಿಯನ್ನು ಆರತಿ ತಟ್ಟೆಯಂತೆ ಡಿಸೈನ್ ಮಾಡಲಾಗಿದೆ. ಪಕ್ಕದ್ದಲ್ಲಿ ಪೂಜಾರಿಗಳು ಕೂರುವ ಜಾಗ. ತೀರ್ಥ ತಗೊಳ್ಳೋ ಆತುರದಲ್ಲಿ ಅಬ್ಯಾಸಬಲದಿಂದ ಸಡನ್ ಆಗಿ ನೀವು ಚಿಲ್ಲರೆ ಹಾಕಿಬಿಟ್ಟರೆ ಅದು ಜಾರಿ ಸೀದಾ ಸಚ್ಚಿದಾನಂದನ ಹುಂಡಿ ಸೇರುತ್ತದೆ ! ಎಲಾ ನನ ಮಗನೇ...ಇಷ್ತಿಲ್ಲದೆ ಜಗದ್ಗುರು ಆಗುತ್ತಿದ್ದೇಯಾ... ಅಂದ್ಕೊಂಡೆ ...
ಸಚ್ಚಿದಾನಂದ ನನ್ನ ನೆಲ ಕದ್ದಿದ್ದಾನೆ ಅಂತಾ ಪಕ್ಕದ ಜಮೀನಿನ ಅನಿಲ್ ಕುಮಾರ್ ಎಂಬಾತ ಈ ಸ್ವಾಮೀಜಿಯನ್ನು ಜೈಲಿಗೆ ಕಳಿಸಿದ್ದಾಗ ಇಲ್ಲಿನ ಪೂಜಾರಿಗಳಿಗಂತೂ ಹಾಲು ಕುಡಿದಷ್ಟು ಖುಷಿಯಾಗಿರಬೇಕು!

1 comment:

sudhakarvidyasandra said...

swamy topina kireeta antha karithara