Sunday, September 19, 2010

ಸಮಾಜ ಮತ್ತು ಬೇಲಿ


ಗಾಂಧೀಜಿಯವರ ಗ್ರಾಮಸ್ವರಾಜ್ಯದ ಚಿತ್ರಣವನ್ನು ಜನರ ಮನಸ್ಸಿಗೆ ತಂದು ಆಡಳಿತವನ್ನು ಹಳ್ಳಿಗೆ ತೆಗೆದುಕೊಂಡು ಹೋಗಬಹುದು, ಬರಿ ಆಲದಮರದ ಕೆಳಗಿನ ಪಂಚಾಯತಿಯಿಂದ ಜನರ ಸಮಸ್ಯೆ ಬಗೆಹರಿಸಬಹುದು ಎಂದೆಲ್ಲಾ ಬೊಗಳೆ ಹೊಡೆದು ಸ್ವತಂತ್ರ ಹೋರಾಟಕ್ಕೆ ಜನರನ್ನು ಸೆಳೆದು ಅವರನ್ನ ಬ್ರಿಟಿಷರ ಬೂಟುಗಾಲುಗಳ ಕೆಳಗೆ ಹಾಕಿ ಒದೆಸಿದ್ದ ಧೀಮಂತ ನಾಯಕರಗಳೆಲ್ಲಾ ಸ್ವತಂತ್ರ ಬಂದ ಕೂಡಲೇ ಬದಲಾದರು. ಸಾಮಾನ್ಯ ಜನರಿಗೂ ಆಳುವವರಿಗೂ ವ್ಯತ್ಯಾಸ ಬೇಡವೇ ಎನಿಸಿತು. ಈ ಅಸೆ ಮನಸ್ಸಿಗೆ ಬಂದೊಡನೆ ಎದ್ದು ನಿಂತದ್ದು ವಿಧಾನಸೌಧ. ನೀಚಾತಿನೀಚ ಬ್ರಿಟಿಷ್ ಅಧಿಕಾರಿಗೂ ಇಂತಹ ತಾರತಮ್ಯದ ಆಲೋಚನೆ ಬಂದಿರಲು ಸಾಧ್ಯವಿಲ್ಲ. ಅತ್ತ ಸ್ವಾತಂತ್ರ ಬರುತ್ತಲೇ ಬಹಳ ದಿನಗಳಿಂದ ಹತ್ತಿಕ್ಕಿದ್ದ "ಮೇಲು-ಕೀಳು" ಉಚ್ಚ ನೀಚ" ಒಡೆಯ-ಸೇವಕ ಮುಂತಾದ ಭಾವನೆಗಳು ರೆಕ್ಕೆ ಪುಕ್ಕ ಕಟ್ಟಿ ಹಾರತೊಡಗಿದವು. ಸಬರಮತಿ ಆಶ್ರಮದ ಗುಡಿಸಲಿಂದ ರಾಮರಾಜ್ಯ ಕಟ್ಟುತ್ತೇವೆ ಎಂದು ಘೋಷಣೆ ಕೂಗುತ್ತಿದ್ದವರು ಸ್ವತಂತ್ರ ಬಂದ ಕೊಡಲೇ ಬ್ರಿಟಿಷರು ಬಿಟ್ಟು ಹೋದ ಬಂಗಲೆಗಳನ್ನು ಆಕ್ರಮಿಸಿಕೊಂಡರು. ನಾವು ಸ್ವತಂತ್ರ ಹೋರಾಟದ ಕಲಿಗಳು ಎಂದು ಯಾರನ್ನು ಹೊಗಳುತ್ತೆವೆಯೋ ಅವರುಗಳ್ಯಾರೂ ಬಾಷಾವಾರು ಪ್ರಾಂತ್ಯದ ರಚನೆಗೆ ಬೆಂಬಲ ನೀಡಲಿಲ್ಲ. ಬಾಷಾವಾರು ಪ್ರಾಂತ್ಯದ ಕೂಗು ಮುಗಿಲು ಮುಟ್ಟಿದಾಗ ತಾವೂ ಕೂಡ ಎಲ್ಲಿ ಬ್ರಿಟಿಷರ೦ತೆ ಅಧಿಕಾರ ಕಳೆದುಕೊಳ್ಳುತ್ತೆವೋ ಎಂಬ ಭಯಕ್ಕೆ ಬಿದ್ದು ಬಾಷಾವಾರು ಪ್ರಾಂತ್ಯ ರಚನೆಗೆ ಒಪ್ಪಿಗೆ ನೀಡಿದರು. ಇದು ನೇರ ಒಪ್ಪಿಗೆ ಆಗಿರಲಿಲ್ಲ. ಜನರ ಕಣ್ಣೊರೆಸುವ ನಾಟಕವಾಡಿ ಬೀಸುವ ದೊಣ್ಣೆಯಿಂದ ತಪ್ಪಿಸಿಕೊಳ್ಳುವ  ಹುನ್ನಾರವಾಗಿತ್ತು. ಬಾಷಾವಾರು ಪ್ರಾಂತ್ಯದ ಬಗ್ಗೆ ಕೇಂದ್ರದ ಯಾವ ನಾಯಕನಿಗೋ ಸ್ಪಷ್ಟ ಅಭಿಪ್ರಾಯ ಇರಲಿಲ್ಲ. ಅಧಿಕಾರ ಉಳಿಸಿಕೊಳ್ಳುವುದಷ್ಟೇ ಅವರ ಗುರಿಯಾಗಿತ್ತು. ಇಂತಹಾ ಎಡಬಿಡಂಗಿ ನಾಯಕರುಗಳ ಕೈಗೆ ೧೯೨೨ ರಲ್ಲೆನಾದರೂ ಅಧಿಕಾರ ಸಿಕ್ಕಿದ್ದರೆ ಭಾರತದ ಇಂದಿನ ಪರಿಸ್ತಿತಿ ಇನ್ನೂ ಭೀಕರವಾಗಿರುತಿತ್ತು. ಅದಕ್ಕಾಗಿಯೇ ಮಹಾತ್ಮಾ ಗಾಂಧೀ ಸ್ವಾತಂತ್ರ ಚಳುವಳಿಯಿಂದ ಹೊರಬಂದು ಸಮಾಜ ಸುದಾರಣೆಯತ್ತ ಗಮನಹರಿಸಿದರು.
ಆದರೆ ಬಾರತೀಯ ಸಂಸ್ಕ್ರತಿಯ ಮೂಲಭೂತ ಅಂಶವಾದ "ತಾರತಮ್ಯ " ಎಂಬುದು ಎಲ್ಲರಲ್ಲಿಯೂ ಎಲ್ಲೋ ಒಂದೊಂದು ಕಡೆ ಇಣುಕುತ್ತದೆ.  ಜನ ಪರಸ್ಪರರ ಸ್ವಾತಂತ್ರವನ್ನು ಮೊಟಕು ಗೊಳಿಸುವುದರಲ್ಲೇ ತಲ್ಲಿನರಾಗಿರುತ್ತಾರೆ. ಸಂಸ್ಕ್ರತಿಯ ಹೆಸರಿನಲ್ಲಿ ನಾವು ನಮ್ಮ ಪುರಾತನ ವಿಕೃತಿಗಳಿನ್ನು ಪುನರುಜ್ಜೀವನ ಗೊಳಿಸಲು ಪ್ರಯತ್ನಿಸುತಿದ್ದೇವೆ.

ರಾಜಕೀಯ ಮಾಡಲು ಸಮಾಜ ಮತ್ತು ಸಮುದಾಯದ ಹಿರಿಮೆಯ ಬಗ್ಗೆ ಮಾತಾಡುತ್ತೇವೆ. ಸಮುದಾಯ ಹೇಗೆ ಒಟ್ಟಾಗಬೇಕು ಎಂದು ಭಾಷಣ ಮಾಡುತ್ತೇವೆ. ಆದರೆ ಈ ಸಮಾಜದಲ್ಲಿ ಮೇಲ್ಪದರಕ್ಕೆ ಬರುವವನು ಪಡೆಯುವ ಮೊದಲ ಸೌಲಭ್ಯವೆಂದರೆ ".ಬೇಲಿ".
ಬೇಲಿ?
ಹೌದು. ಅವನಿಗೂ ಸಮಾಜಕ್ಕೂ ನಡುವೆ ಒಂದು ಬೇಲಿ. ಉದಾಹರಣೆಗೆ ಅಧಿಕಾರಿಯಾಗುವವನು ಒಂದು ಖಾಸಗಿ ಕೊಠಡಿ ಪಡೆಯುತ್ತಾನೆ. ನಂತರ ಒಬ್ಬ ಗಾರ್ಡು ಇರುವ ಒಂದು ಬಂಗಲೆ ಹೊಂದುತ್ತಾನೆ. ಅದು ಅವನಿಗೇ ಒಂದು ರೀತಿಯ ಘನತೆ ತಂದು ಕೊಡುತ್ತದೆ ಎಂದು ಭಾವಿಸಲಾಗುತ್ತೆ.
ಇದರಿಂದಲೇ ನಮ್ಮ ನಾಯಕರು ಆಶ್ರಮಗಳನ್ನು ಬಿಟ್ಟು ರಾಷ್ಟ್ರಪತಿ ಭಾವನದಂತಹಾ ವೈಭವೋಪೇತ ಬಂಗಲೆ ಹಿಡಿದು ಕೊಳ್ಳುತ್ತಾರೆ. ಮನುಷ್ಯ ಸಾಧ್ಯವಾದಾಗಲೆಲ್ಲ ಸಮುದಾಯದ ಮತ್ತು ತನ್ನ ನಡುವೆ ಬೇಲಿ ಕಟ್ಟಿಕೊಳ್ಳಲು ಪ್ರಯತ್ನಿಸುತ್ತಾನೆ. ಆದರೆ ಈ ಬೇಲಿಗೆ ಬೇಕಾಗುವ ಸಾಮಾನಿಗಾಗಿ ಅವನು ಸಮುದಾಯವನ್ನೇ ಅಶ್ರಯಿಸಿಕೊಂಡಿರುತ್ತಾನಾದರಿಂದ ಆತ ಸಮಾಜವನ್ನು ಬಲವಾಗಿರಲು ಉತ್ತೇಜಿಸುತ್ತಾನೆ.
ಅವನಿಗೆ  ಸಮಾಜ ಬೇಕು ಆದರೆ ಅವನಿಗೆ ಸಮಾಜ ಬೇಕಾಗಿಲ್ಲ. ಸಮಾಜವನ್ನು,ಸಮಾಜವಾದವನ್ನು ಸೃಷ್ಟಿ ಮಾಡುವವರೂ ಇವರೇ. ತಾರತಮ್ಯ ಮಾಡುವವರೂ ಇವರೇ. ಅಂತೆಯೇ ಸಮಾಜಮುಖಿ ಎಂದು ಕರೆಯಲ್ಪಡುವ ಅಂದೊಲನಗಳು ಸಾಮಾನ್ಯ ಜನರಿಗೆ ಯಾವುದೇ ರೀತಿಯಲ್ಲಿ ಸಹಾಯವಾಗದಿದ್ದರೂ ಅದು ನಾಯಕರಿಗೆ ಬಹಳ ಅನುಕೂಲ ಕರವಾಗಿಪರಿಣಮಿಸಿದೆ. ಆದುದರಿಂದ ಸಾಮಾನ್ಯ ಮನುಷ್ಯ ರಾಜನಿಗಿಂತಲೂ ಹೆಚ್ಚು ರಕ್ತ ಬೆವರು ಸುರಿಸಿದರೂ ಅವನು  ಇತಿಹಾಸದ ಪುಟಗಳನ್ನು ಸೇರುವುದಿಲ್ಲ. ನೇರವಾಗಿ ಗೋರಿಸೇರುತ್ತಾನೆ. ಅವನ ಗೋರಿ ಮೇಲೆ ನಿಲ್ಲಿಸಲಾದ ಕಲ್ಲು ಅವನ ಒಡೆಯನ ಹೆಸರನ್ನು ಹೇಳುತ್ತದೆಯೇ ಹೊರತು ಅವನ ಹೆಸರನ್ನು ಹೇಳುವುದಿಲ್ಲ.(ವಿರಳ). ಸಾಮಾನ್ಯ ಮನುಷ್ಯನು ದುಡಿಯಲು ಕೈಗಳನ್ನು ತಯಾರಿಸುವ ಕಾರ್ಖಾನೆಯಷ್ಟೇ. ಅದಕ್ಕಾಗಿಯೇ ರಾಜಕಾರಣಿಗಳು ಸಾಮೂಹಿಕ ವಿವಾಹವನ್ನು ಮಾಡಿಸುವುದು ಮತ್ತು ಸ್ವತಃ ಸ್ವಾತಂತ್ರರಾಗಿರುವ   ಧಾರ್ಮಿಕ ನಾಯಕರು ವೈವಾಹಿಕ ಮೌಲ್ಯಗಳ ಬಗ್ಗೆ ಭಾಷಣ ಬಿಗಿದು ಅವುಗಳಿಗೆ ಇಲ್ಲದ ಪಾವಿತ್ರತೆಯನ್ನು ಆರೋಪಿಸುವುದು.
(ಸಶೇಷ)

No comments: