Friday, October 29, 2010

ಸೂಫಿವಾದ

ಈ ಸೂಫಿ ಸಂತರ ಬಗ್ಗೆ ಪುಟಗಟ್ಟಲೆ ಗುಣಗಾನ ಮಾಡಲಾಗಿದೆ. ಅದರಲ್ಲಿ ಒಂದಿಷ್ಟು ಓದಿ ಆಮೇಲೆ ಅದನ್ನು “ನವ್ಯಾಂತ” ದೃಷ್ಟಿಕೋನದಿಂದ ಪರಿಶೀಲಿಸಿದ ನಂತರ ನನಗೆ ಸೂಫಿಗಳ ಬಗ್ಗೆ ಅನ್ನಿಸಿದ್ದನ್ನು ಒಂದೆರಡು ಲೈನಲ್ಲಿ ಬರೆಯಬೇಕು ಅನ್ನಿಸಿದೆ. ಭಾರತದಲ್ಲಿ ಬಿಟ್ಟರೆ ವಿಶ್ವದ ಇನ್ನ್ಯಾವುದೇ ಇಸ್ಲಾಮಿಕ್ ರಾಷ್ಟ್ರಗಳಲ್ಲಿ ಸೂಫಿಗಳಿಗೆ ಅಂತಹ ಗೌರವ ಇಲ್ಲ. ಕಟ್ಟಾ ಇಸ್ಲಾಮಿಕ್ ಆಚರಣೆಗಳಿಗೆ ಹೆಸರಾಗಿರುವ ದೇಶಗಳಲ್ಲಿ ಸೂಫಿ ಸಂತರಿಗೆ ನಾಲ್ಕಾಣೆ ಬೆಲೆ ಇಲ್ಲ. ಇವರ ಕಾರ್ಯಕ್ಷೇತ್ರವೇನಿದ್ದರೂ ಬಾರತ,ಉತ್ತರ ಆಫ್ರಿಕಾ ದಂತಹಾ ಬೆರಕೆ ಧಾರ್ಮಿಕ ನಂಬಿಕೆ ಹೊಂದಿರುವನ್ತಹಾ ದೇಶಗಳು. ಇದು(ಸೂಫಿವಾದ) ಕೂಡ ಬೆರಕೆ ವಿಚಾರಧಾರೆಯೇ. ಆದುದರಿಂದಲೇ ಇದನ್ನು ಚಿಂತಕರು ಹಾಡಿ ಹೊಗಳುವುದು.



ಆದರೆ ಇವರು ಇಸ್ಲಾಂನವರು ಎಂದು ಹೇಳಿಕೊಂಡು ಇಸ್ಲಾಮ್ಗೆ ಇಷ್ಟು ದೂರವಾದ ಬೆರಕೆ ಚಿಂತನೆಗಳನ್ನು ಏತಕ್ಕೆ ತಮ್ಮದಾಗಿಸಿಕೊಂಡರು?


ಸೂಫಿವಾದ ಎಂಬುದು ಭಾರತದಂತ ದೇಶಗಳಿಗೆ ಏಕೆ ಸೀಮಿತವಾಗಿದೆ? ಎಂಬ ಬಗ್ಗೆ ಚಿಂತಿಸುವ ಅನಿವಾರ್ಯತೆ ಇದೆ. ಸೂಫಿವಾದ ಇಸ್ಲಾಂಗಿಂತಾ ಹಿಂದಿನದು ಎಂದು ಕೆಲವರು ವಾಸಿಸುವುದುಂಟು.ಇಸ್ಲಾಂ ಹುಟ್ಟುವುದಕ್ಕೆ ಮುನ್ನ ಅರೇಬಿಯಾ,ಇರಾನ್ ಮುಂತಾದ ಕಡೆ ಬೌದ್ಧ,ಹಿಂದೂ,ಪಾರಸಿಕ ಮತ್ತಿತರ ಲೋಕಲ್ ನಂಬಿಕೆಗಳು ಪ್ರಚಲಿತವಾಗಿತ್ತು.ಇವುಗಳನ್ನು ಅನುಸರಿಸುವ ಸಾದು ಸಂತರು,ಬಿಕ್ಷುಗಳು,ಆರಾಧಕರು ಅಲ್ಲಿ ತಮ್ಮ ಸಾಧನೆ ಮಾಡಿಕೊಂಡಿದ್ದರು. ಇಸ್ಲಾಂ ಬಂದ ಮೇಲೆ ಎಲ್ಲರೂ ಮತಾಂತರ ಹೊಂದಿದಾಗ ಸಮಾಜದಿಂದ ಹೊರಗಿದ್ದ ಅವರು ಹೆಚ್ಚು ತಕರಾರು ಮಾಡದೆ ಮುಖ್ಯವಾಹಿನಿಯಲ್ಲಿ ಬೆರೆತು ತಮ್ಮ ಧಾರ್ಮಿಕ ಅಭ್ಯಾಸಗಳನ್ನು ಕೆಲವು ಬದಲಾವಣೆಗಳೊಂದಿಗೆ ಮುಂದುವರೆಸಿದರು. ನಂತರದ ದಿನಗಳಲ್ಲಿ ಅವರು ಸಂಪೂರ್ಣವಾಗಿ ಇಸ್ಲಾಂ ನ ಭಾಗವಾಗಿ ಹೋದರು. ಕ್ರಮೇಣ ಅದು ಅಲ್ಲಿ ಮಹತ್ವ ಕಳೆದುಕೊಳ್ಳುತ್ತಾ ಬಂತು. ಆ ನಂತರ ಭಾರತಕ್ಕೆ ದಾಳಿಕೋರರೊಂದಿಗೆ ಬಂದು ಇಲ್ಲೇ ಜಾಂಡ ಊರಿದ ಕೆಲವು ಮಂದಿ ಭಾರತದಲ್ಲಿ ಈ ನವ ಸೂಫಿವಾದದ ಪ್ರವರ್ತಕರಾದರು. ಇದರ ಮೂಲವನ್ನು ಅವರು ಅರೇಬಿಯಕ್ಕೆ,ಪ್ರವಾದಿಗೆ ಜೋಡಿಸುತ್ತಾರಾದರೂ ಅದು ಕಟ್ಟುಕತೆ ಎನಿಸುತ್ತದೆ. ಇದು ಭಾರತಕ್ಕಾಗೆ ತಯಾರಿಸಲಾದ ಸರಕು.ಅಲ್ಲಿ ಸಲ್ಲದ ಸೂಫಿಗಳು ಇಲ್ಲಿ ಸಂದರು.ಯಾಕೆಂದರೆ ಇಲ್ಲಿ ಅದರ ಪ್ರಚಾರಕ್ಕೆ ತಕ್ಕ ಪರಿಸರವಿತ್ತು. ಹನ್ನೊಂದನೇ ಶತಮಾನದಲ್ಲಿ ತುರ್ಕರು ಇಲ್ಲಿಗೆ ಬಂದಾಗ ಭಾರತೀಯ ಸಮಾಜ ಬಹಳ ಸಂಕೀರ್ಣವಾಗಿತು. ಈ ಸಮಾಜದೊಂದಿಗೆ ಸಂವಾದ ಬೆಳೆಸುವುದು ಅಷ್ಟು ಸುಲಭವಾಗಿರಲಿಲ್ಲ.ಅಲ್ಬೇರುನಿ ಹೇಳುವಂತೆ “ಭಾರತೀಯರು ಹೊರಗಿನವರೊಂದಿಗೆ ಸುಲಭವಾಗಿ ಯಾವುದೇ ವಿಚಾರವನ್ನು ಹಂಚಿಕೊಳ್ಳುವುದಿಲ್ಲ. ಇತರರನ್ನು ತಮ್ಮ ನಡುವೆ ಬರಗೊಡುವುದಿಲ್ಲ.”.....ಇತ್ಯಾದಿ.


ಆದರೆ ಬೈರಾಗಿಗಳು,ಸಾಧು ಸಂತರುಗಳಿಗೆ ಅವರು ಬಹಳ ಗೌರವ ನೀಡುತಿದ್ದರು. ಕೆಲವು ಬುದ್ದಿವಂತ ಮುಲ್ಲಾಗಳು ಇದನ್ನು ಅರಿತು ತಾವೂ ಕೂಡ ಇಸ್ಲಾಂ ಧರ್ಮಕ್ಕೆ ಸೇರಿದ್ದ ಬೈರಾಗಿಗಳು ಎಂಬ ಸೋಗು ಹಾಕಲಾರಮ್ಬಿಸಿದರು. ಲೋಕಲ್ ಸಂತರಂತೆ ನಕಲಿ ಪವಾಡಗಳನ್ನು ಮಾಡಿ ಜನರನ್ನು ಮರುಳುಗೊಳಿಸಲು ಆರಂಬಿಸಿದರು. ಇಲ್ಲಿನ ಲೋಕಲ್ ಸಂತರೊಂದಿಗೆ ಸೇರಿ ಅವರ ಟೆಕ್ನಿಕ್ ಗಳನ್ನು ಕರಗತ ಮಾಡಿಕೊಂಡರು. ಇವರುಗಳು ಭಕ್ತಿ ಸಂತರೊಂದಿಗೆ ಸಂವಾದಗಳನ್ನು ನಡೆಸಿದ್ದು, ಯೋಗಿಗಳೊಂದಿಗೆ ಸೇರಿ ಅವರ ಕೆಲವು ಅಭ್ಯಾಸಗಳನ್ನು ಜೀವನ ಶೈಲಿಯಲ್ಲಿ ಅಳವಡಿಸಿಕೊಂಡಿದ್ದು, ನಾಥಪಂಥದ ಸಂತರೊಂದಿಗೆ ಓಡಾಡಿದ್ದು...ಮುಂತಾದವು ನಮ್ಮ ಇತಿಹಾಸದಲ್ಲಿ ಬಹು ಚರ್ಚಿತವಾಗಿವೆ. ********ಎಂಬುವವನು ಕೃಷ್ಣನ ಆರಾಧಕನಂತೆ!.***೮***** ಪಂಥದವರು  ಪ್ರಾಣಾಯಾಮವನ್ನು ಹೋಲುವ ಉಸಿರಾಟದ ಕ್ರಿಯೆಗಳನ್ನು ತಮ್ಮ ಸಾಧನೆಯಲ್ಲಿ ಅಳವಡಿಸಿಕೊಂಡಿದ್ದರ೦ತೆ!. ಇನ್ನೊಬ್ಬ ಸೂಫಿ ಸಂತ ಹಲವು ದಿನ ತಲೆಕೆಳಗೆ ಕಾಲುಮೇಲೆ ಮಾಡಿ ಜಂತಿಗೆ ಕಟ್ಟಿಕೊಂಡು ಹಲವುದಿನ ತೂಗಾಡಿಸಿಕೊಂಡಿದ್ದನಂತೆ! (ಈ ವಿಧಾನವನ್ನು ಹಿಂದೂ ಅಧ್ಯಾತ್ಮಿಕ ಸಾಧನೆಯಲ್ಲಿ ಊರ್ಧ್ವಮುಖಿ ಯೋಗ ಎಂದು ಕರೆಯುತ್ತಾರೆ).ಇನ್ನೊಬ್ಬ ವೃತ್ತಿಯಿಂದ ಕಟುಕನಂತೆ. ಆದರೂ ಸಂತನಂತೆ ಜೀವನ ನಡೆಸುತಿದ್ದನಂತೆ!. ಚಿಸ್ತಿ ಪಂಥದವರು ಬಡತನವನ್ನು ಆಯ್ದು ಕೊಂಡರೆ ಸುಹಾರ್ವರ್ದಿ ಪಂಥದವರು ಬಹಳ ವೈಭವೋಪೇತ ಜೀವನ ಶೈಲಿಯನ್ನು ಆಯ್ದು ಕೊಂಡಿದ್ದರು. ಇವನೆಲ್ಲಾ  ಪಂಡಿತರು ಧಾರ್ಮಿಕ ಮಹಾಸಂಗಮವೆಂದು ವರ್ಣಿಸಿದ್ದಾರೆ. ವಾಸ್ತವವಾಗಿ ಇವರು ಸ್ಥಳೀಯ ಧಾರ್ಮಿಕ ಜಗತ್ತಿನೊಂದಿಗೆ ಸಂಬಂಧ ಬೆಳೆಸಿದ್ದು ಇವರ ವಂಚನೆಯ ವಿಧಾನಗಳನ್ನು ಕಲಿಯುವ ಉದ್ದೇಶಗಳಿಂದ. ಸಂತರ ಹಾವ ಭಾವಗಳು, ನಕಲಿ ಪವಾಡಗಳು, ಸ್ಥಳ ಮಹಾತ್ಮೆ ಗಳೆನ್ನುವ ಲೋಕಲ್ ಕಟ್ಟು ಕಥೆಗಳು, ಗಿಮಿಕ್ಕ್ ಗಳು, ದಾನ-ಧರ್ಮ ಮಾಡುವ ಶೈಲಿ,ಮೈ ಮೇಲೆ ದೇವರು ಬರಿಸಿಕೊಳ್ಳುವುದು, ಭಕ್ತಿ ಸಾಹಿತ್ಯದ ಮೂಲಕ ಮೌಡ್ಯ ಬಿತ್ತಿ ಬೆಳೆಸುವ ಕಲೆ ಇತ್ಯಾದಿಗಳನ್ನೆಲ್ಲಾ ಚೆನ್ನಾಗಿ ಅಧ್ಯಯನ ಮಾಡಿ ಅವನ್ನು ಅವರೂ ಶಕ್ಯಾನುಸಾರ ಉಪಯೋಗಿಸತೊಡಗಿದರು. ಇಸ್ಲಾಂನ ಖಡ್ಗ ಪ್ರವೇಶಿಸಲಾಗದ ಸ್ಥಳಗಳನ್ನು ಸೂಫಿಗಳು ಸುಲಭವಾಗಿ ತಲುಪಿದರು. ಇಲ್ಲಿನ ಮುಗ್ಧ ಗ್ರಾಮೀಣ ಜನತೆಯ ಮೇಲೆ ಬಹಳ ಗಾಡವಾಗಿ ಪ್ರಭಾವ ಬೀರಿದರು. ದುಡಿಯದೇ ಸುಲಭವಾಗಿ ಜೀವನ ನಡೆಸುವ ಉದ್ದೇಶದಿಂದ ಕೆಲವು ಬುದ್ದಿವಂತ ವಲಸಿಗರು ಈ ಕೆಲಸ ಆರಂಬಿಸಿದರೂ ರಾಜಾಶ್ರಯ ಪಡೆದನಂತರ “ಮತಾಂತರ” ಇವರ ಮುಖ್ಯ ಕೆಲಸ ವಾಯಿತು. “ದೇವರ ಸೈನ್ಯ” ಆ ಸ್ಥಳ ಪ್ರವೇಶಿಸುವ ಒಂದೆರಡು ವರುಷ ಮೊದಲು ಸೂಫಿಗಳು ಆ ಜಾಗದಲ್ಲಿ ಬಂದು ತಮ್ಮ “ಖಂಖಾ “ಗಳನ್ನು ತೆರೆಯುತಿದ್ದರು. ಉದಾಹರಣೆಗೆ ದಿಲ್ಲಿಯ ಸುತ್ತ ಮುತ್ತಲಿನ ಹಿಂದೂ ಸಾಂದ್ರತೆ ಇರುವ ಪ್ರದೇಶಗಳಲ್ಲಿ ಇವರುಗಳು ವಾಸಿಸತೊಡಗಿದರು. ನಂತರ ಮೆಲ್ಲನೆ ರಾಜಸ್ತಾನ್ ಪ್ರವೇಶಿಸಿದರು. (ರಾಜಸ್ತಾನವನ್ನು ತುರ್ಕರಿಗೆ ಪಶ್ಚಿಮದಿಂದ ಪ್ರವೇಶಿಸಲು ಸಾಧ್ಯವಾಗಿರಲಿಲ್ಲ. ಆದರೆ ದಿಲ್ಲಿ ಯಿಂದ ಪ್ರವೇಶಿಸಲು ಸುಲಭವಾದದ್ದು ಈ ಸಂತರ ಕರಾಮತ್ತಿನಿಂದಲೇ.) ಆ ನಂತರ ದಕ್ಷಿಣಕ್ಕೆ ಸೂಫಿವಾದವನ್ನ ತಂದವನು ಮೊಹಮ್ಮದ್ ಬಿನ್ ತೊಗಲಕ್. ಆತ ತನ್ನ ರಾಜಧಾನಿಯನ್ನು ದಕ್ಷಿಣಕ್ಕೆ ಸ್ಥಳಾಂತರಿಸುವ ಉದ್ದೇಶ ಇಟ್ಟುಕೊಂಡಿದ್ದರಿಂದ ದಿಲ್ಲಿಯಲ್ಲಿದ್ದ ಒಂದಿಷ್ಟು ಸೂಫಿಗಳನ್ನು ಹಿಡಿದುಕೊಂಡು ಬಂದು ಇಲ್ಲಿ ಬಿಟ್ಟ. ಇಲ್ಲಿ ಬಹುಮನಿ ಸಾಮ್ರಾಜ್ಯ ಸ್ಥಾಪನೆ ಯಾಗುವಲ್ಲಿ ಸೂಫಿಗಳ ಕೊಡುಗೆಯೂ ಇದೆ.


ಒಟ್ಟಾರೆ ಹೇಳುವುದಾದರೆ ಸೂಫಿವಾದದ ಮುಖ್ಯ ಉದ್ದೇಶ “ಮತಾಂತರ”. ಈ ಉದ್ದೇಶ ೧೦೦% ನೆರವೇರಿದ ಪ್ರದೇಶದಲ್ಲಿ ಸೂಫಿವಾದ ಮಾಯವಾಗುತ್ತದೆ ಎಂಬುದನ್ನು ನಾವು ಪಾಕಿಸ್ತಾನ್ ಮತ್ತು ಆಫ್ಘಾನಿಸ್ತಾನದ ಉದಾಹರಣೆಗಳಿಂದ ತಿಳಿಯಬಹುದು. ಒಟ್ಟಾರೆ ಈ ಪಂಥದ ಒಳ ಮರ್ಮವನ್ನು ಸರಿಯಾಗಿ ಗಮನಿಸದೆ ಮೇಲ್ಮುಖದಲ್ಲಿ ಕಂಡುಬರುವ ತತ್ವ ವಿಚಾರಗಳನ್ನೇ ಅಧ್ಯಯನ ಮಾಡಿ ಅವುಗಳನ್ನು ಉತ್ಪ್ರೇಕ್ಷೆ ಮಾಡಿ ಬರೆಯುವ ಮೂಲಕ ನಮ್ಮ ಚಿಂತಕರು ಮೂಡನಂಬಿಕೆಗಳ ಪ್ರಚಾರಕ್ಕೆ ಸಹಕಾರ ನೀಡುತ್ತಿರುವುದು ವಿಷಾದದ ಸಂಗತಿ.

Wednesday, October 20, 2010

SMS ನಗೆಹನಿ

ಗುಂಡ: ತಾತ ,ತಾತ, ಕಾಂಡೋಮ್ ಅಂದ್ರೆ ಏನು?
ತಾತ : (ಕಸಿವಿಸಿಗೊಂಡು) ಹೋಗೋ, ಹುಟ್ಸೂಳೆಮಗನೆ, ನನ್ಗೊತಿಲ್ಲ !.
ಗುಂಡ : ನನ್ಗೊತ್ತಲೇ ಮುದ್ಕಾ, ನಿನ್ಗೊತ್ತಿಲ್ಲಾ ಅಂತಾ, ನಿನ್ಗೊತ್ತಿದ್ದ್ರೆ ಆಸ್ತಿ 14 ಪಾಲಾಗ್ತಿರ್ಲಿಲ್ಲ.. 

ದೇವಾಲಯಗಳಿಂದ ದೂರವಿರಿ

ಇತ್ತೀಚಿನ ದಿನಗಳಲ್ಲಿ ದೇವರ ಸಾಕ್ಷಾತ್ಕಾರ (?) ಪಡೆದಿರುವ ಸಂತರಿಗೆಲ್ಲ ಒಂದು ಗೀಳು ಆರಂಭವಾಗಿದೆ. ಅದೇನೆಂದರೆ ದೇವಸ್ಥಾನ ಕಟ್ಟಿಸುವ ಗೀಳು!
ದೇವರು ಗುಡಿಯೊಳಗಿಲ್ಲ....
ದೇವರು ನಮ್ಮ ಒಳಗೇ ಇದ್ದಾನೆ...
ಸ್ತಾವರಕ್ಕಳಿವುಂಟು...ಜಂಗಮಕ್ಕಳಿವಿಲ್ಲ....
ಇತ್ಯಾದಿ ಪ್ರವಚನ ನೀಡಿದ ಮೇಲೆ "ಮಹಾಜನಗಳೇ, ನಾವು ದೇವಾಲಯವೊಂದನ್ನು ನಿರ್ಮಿಸುತಿದ್ದೇವೆ.ಅದಕ್ಕೆ ನಿಮ್ಮ ತನು ಮನ ಧನ ಸಹಕಾರ ಬೇಕು" ಎಂದೆನ್ನುತ್ತಾರೆ. "ಏನು ಕೇಶವಪ್ರಸಾದ್, ನಿಮ್ಮ ಫ್ರೆಂಡ್ಸ್ಗಳ ಹತ್ತಿರ ಕಲೆಕ್ಟ್ ಮಾಡಿ, ದೇವರ ಕೆಲಸ...ಸೇರಿ ಮಾಡೋಣ"...ಎನ್ನುತ್ತಾರೆ.
ಎಲಾ,ಇವನಾ....ಇಷ್ಟು ಹೊತ್ತು ಬೇರೆಯದನ್ನೇ ಹೇಳಿದ್ದನಲ್ಲ ಎಂಬ ಅನುಮಾನ ನಿಮಗೆ ಬಂದರೆ  ಅದಕ್ಕೆ ಇನ್ನೊಂದು ಸಮಜಾಯಿಷಿ ಕೂಡಾ ಅವರ ಬಳಿ ತಯಾರಿದೆ.ಅದು ಈ ಕೆಳಕಂಡಂತಿದೆ.
"ನಾವು ದೇವಾಲಯಕ್ಕೆ ಏಕೆ ಹೋಗಬೇಕು? ಏಕೆಂದರೆ ದೇವರು ಅಲ್ಲಿ ಮಾತ್ರ ಇದ್ದಾನೆ ಎಂಬ ಕಾರಣಕ್ಕಲ್ಲ. ಅಲ್ಲಿ ಹಲವಾರು ಜನ ಭಕ್ತಿಯ ಪವಿತ್ರ ಭಾವನೆಗಳನ್ನು ಹೊತ್ತು ಬರುತ್ತಾರೆ. ಅವರ ಪಾಸಿಟಿವ್ ವೈಬ್ರೇಶನ್ ನಿಂದ ಆ ಪರಿಸರ ಬಹಳ ಚೇತೋಹಾರಿ ತರಂಗಗಳಿಂದ ತುಂಬಿ ತುಳುಕುತ್ತಿರುತ್ತವೆ. ಆದುದರಿಂದ ದೇವಾಲಯಕ್ಕೆಹೋದರೆ ನಿಮ್ಮ ಮನಸ್ಸಿನ ದುಃಖ ದುಮ್ಮಾನಗಳು ಕಡಿಮೆಯಾಗಿ ಮನಸು ಗೆಲುವಾಗುತ್ತದೆ.ನೀವು ದೇವರನ್ನು ನಂಬದಿದ್ದರೂ ಪರವಾಗಿಲ್ಲ. ದೇವಸ್ಥಾನಕ್ಕೆ ಬೇಟಿಕೊಟ್ಟು ನೋಡಿ. ನಿಮ್ಮ ಮನಸ್ಸು ಪ್ರಶಾಂತವಾಗುತ್ತದೆ."
.
        ಆಹಾ, ಎಂತಹ ಸುಂದರ ಪರಿಕಲ್ಪನೆ. ಈಗ ಒಂದು ನಿಮಿಷ ವಾಸ್ತವ ಜಗತ್ತಿಗೆ ಬನ್ನಿ. ನಿಮ್ಮನ್ನೇ ತೆಗೆದುಕೊಳ್ಳಿ. ನೀವು ದೇವಸ್ತಾನಕ್ಕೆ ಏಕೆ ಹೋಗುತ್ತೀರಾ? ಎಂಥಹ ಸಮಯದಲ್ಲಿ ದೇವಾಲಯಗಳು ನಿಮ್ಮನ್ನು ಸೆಳೆಯುತ್ತದೆ?
ಹೆಚ್ಚಿನವರು ದೇವಾಲಯಕ್ಕೆ ಹೋಗುವುದು "ಸಂಕಟ ಬಂದಾಗ ವೆಂಕಟ ರಮಣ" ಎಂಬ ಕಾರಣಕ್ಕೆ.
ಚಿಂತೆ,ದುಃಖ,ಬೇಸರ, ಅಗಲಿಕೆ, ವಿರಹ, ನಷ್ಟ,ಸೋಲು ಮುಂತಾದ ಸಮಸ್ಯೆ ಎದುರಾದಾಗ ಅಥವಾ ಅವು ಮನಸ್ಸಿನ ಯಾವುದೋ ಒಂದು ಭಾಗದಲ್ಲಿ ಇಣುಕಿದಾಗ ನಾವು ದೇವರನ್ನ ನೆನೆಸಿಕೊಳ್ಳುತ್ತೇವೆ. ಮನೆಯಲ್ಲಿ ಪ್ರಾರ್ಥನೆ ಮಾಡುವುದು ಸಾಲದು,ಅಲ್ಲಿಂದ ದೇವರ 'ನೆಟ್ವರ್ಕ್' ಸಿಗುವುದಿಲ್ಲ ಎನ್ನಿಸಿದಾಗ ದೇವರ ಗುಡಿಗೆ ಹೋಗುತ್ತೇವೆ.ಲೋಕಲ್ ದೇವರು ವೀಕ್ ಎನಿಸಿದಾಗ ಸ್ಟ್ರಾಂಗ್ ಎಂದು ನಾವು ಭಾವಿಸಿರುವ ಪುರಾತನ ತೀರ್ಥಕ್ಷೇತ್ರಗಳಿಗೋ,ಪವಾಡಗಳು ನಡೆಯುತ್ತವೆ ಎಂದು ನಂಬಲಾಗಿರುವ ಸ್ಥಳಕ್ಕೋ ಹೋಗುತ್ತೇವೆ. ನಮ್ಮನ್ನು ರಕ್ಷಿಸುವ ಆ ಸರ್ವಶಕ್ತ  ದೇವರುಗಳು ನಮ್ಮ ಹತ್ತಿರ ಇರುತ್ತಾರೋ?...... ಅದು ಇಲ್ಲ!. ಸಾಬರುಗಳ ಭಯದಿಂದ ಬೆಟ್ಟ ಗುಡ್ದಗಳಲ್ಲಿ ಗಿರಿ ಕಂದರಗಳಲ್ಲಿ ಹೋಗಿ ನೆಲೆಸಿರುತ್ತಾರೆ. ಅಲ್ಲಿ ಹೋಗುವುದೇ ಒಂದು ಸಾಹಸ.
ಈಗ ಹೇಳಿ ದೇವಸ್ಥಾನಕ್ಕೆ ಹೋಗುವುದರಿಂದ ಪಾಸಿಟಿವ್ ಎನರ್ಜಿ ಸಿಗುತ್ತಾ? ....
ಭಕ್ತರು ದೇವಸ್ತಾನಕ್ಕೆ ತರುವುದು ದುಃಖ,ದಣಿವು,ವಿರಹ,ಭಯ,ಅಭದ್ರತೆ,ಪರಾವಲಂಬನೆ,ಕೋರಿಕೆ,ಬೇಡಿಕೆ,ದೈನ್ಯತೆ,ವ್ಯಾಕುಲತೆ,ಮಾನಸಿಕ ಪರಾವಲಂಬತೆ ಇತ್ಯಾದಿಗಳನ್ನು.
ಅಲ್ಲಿ ಯಾವ ತರಂಗ ಇರುತ್ತೆ ಸ್ವಾಮೀ?,ನೀವೇ ಗಾಳಿಯಲ್ಲಿ ಆಲಿಸಿ...ದೇವರೇ ಅದು ಕೊಡು,ಇದು ಕೊಡು,ಕಾಪಾಡು ಇತ್ಯಾದಿ ಇತ್ಯಾದಿ ಪ್ರಲಾಪಗಳು!. ದೇವರಿಗೆ ಧನ್ಯವಾದ ಹೇಳಲು ಬರುವವರು ಬಹಳ ಕಡಿಮೆ. ಹರಕೆ ತೀರಿಸಲು ಬರುವವರಿಗಿಂತ ಹರಕೆ ಹೋರಲು ಬರೋರೆ ಹೆಚ್ಚು. ಅಲ್ಲಿ ಹೆಚ್ಚಾಗಿ ಹೋಗುವವರ ಮನಸ್ಸಿನಲ್ಲಿ "ಕೊಡು}}}},ಕೊಡು}}}, ಬೇಕು}}, ಬೇಕು}}} ,ಕಾಪಾಡು}},ಕಾಪಾಡು}}} .. ಇತ್ಯಾದಿ ತರಂಗಗಳು ಸೇರಿಕೊಂಡು ಇನ್ನಷ್ಟು ಭಯಭೀತರನ್ನಾಗಿಯೋ, ಲೋಭಿಗಳನ್ನಾಗಿಯೋ ಮಾಡುತ್ತದೆ.ಮನಸ್ಸಿಗೆ ನೆಮ್ಮದಿ ಸಿಗುತ್ತೆ ಎನ್ನುವುದು ಒಂದು ರೀತಿಯ ತಾತ್ಕಾಲಿಕ ಅನುಭವ. ಆದರೆ ಮನಸ್ಸಿನಲ್ಲಿ ಸುಪ್ತವಾಗಿ ಉಳಿಯುವಂತಹ ಹಲವು ನೆಗೆಟಿವ್ ತರಂಗಗಳು ನಿಮ್ಮಲ್ಲಿ ಸೇರಿಕೊಳ್ಳುತ್ತವೆ.ಕೆಲವು ವಿದ್ವಂಸಕ ಕೋಮುಗಳು ವಾರದ ಪ್ರಾರ್ಥನೆಯ ನಂತರ ಗಲಭೆ ಆರಂಭಿಸುವುದು ಅದೇ ಕಾರಣದಿಂದ. ಈ ಪ್ರಾರ್ಥನೆ ಮುಂತಾದವು ಸುಪ್ತ ಮನಸ್ಸಿನಲ್ಲಿ ಕ್ಷೋಭೆಯನ್ನು,ಆತಂಕವನ್ನು ಹೆಚ್ಚಿಸುತ್ತವೆ.ಧರ್ಮಗಳು ಭಯೋತ್ಪಾದನೆಯನ್ನು ಸೃಷ್ಟಿ ಮಾಡುವುದಕ್ಕೆ ಅದೇ ಮುಖ್ಯ ಕಾರಣ.ಪ್ರಾರ್ಥನೆ ಮನುಷ್ಯನಲ್ಲಿ ಭಯ ಬಿತ್ತುತ್ತದೆ.ನಂತರ ಆ ಭಯ ಸಮಾಜದಲ್ಲಿ ಹೆಮ್ಮರವಾಗಿ ಬೆಳೆಯುತ್ತವೆ. ಆದುದರಿಂದ ಇನ್ನು ಮುಂದೆ ದೇವಸ್ಥಾನಕ್ಕೆ ಹೋಗುವ ಮೊದಲು ಸಾವಿರ ಬಾರಿ ಆಲೋಚಿಸಿ.ನೀವು ಆಸ್ತಿಕರೇ ಆಗಿರಬಹುದು ಅಥವಾ ನಾಸ್ತಿಕರಾಗಿರಬಹುದು ದೇವಾಲಯಗಳ ಬಳಿ ದಯವಿಟ್ಟು ಹೋಗಬೇಡಿ. ಗಟಾರಗಳು ದೇಹಕ್ಕೆ ಬಾಧೆ ತರುವಂತಹಾ ಸಂಕ್ರಾಮಿಕ ರೋಗಗಳಿಗೆ ಆಗರವಾಗಿರುವಂತೆ ಆರಾಧನೆಯ ಮತ್ತು ಪ್ರಾರ್ಥಿಸುವ ಸ್ಥಳಗಳು ಮಾನಸಿಕ ರೋಗಗಳ ಅಗರವಾಗಿರುತ್ತವೆ. ದೈಹಿಕವಾಗಿ ಕಾಡುವ ಖಾಯಿಲೆಗಳನ್ನ ಸುಲಭವಾಗಿ ಕಂಡುಹಿಡಿಯಬಹುದು.ಆದರೆ ಮಾನಸಿಕ ಖಾಯಿಲೆಯನ್ನು ಕಂಡು ಹಿಡಿಯುವುದೇ ಕಷ್ಟ.ಖಾಯಿಲೆ ಇದೆ ಎಂದು ಗೊತ್ತಾಗುವ ಮೊದಲೇ ಅದು ಇಡೀ ಸಮುದಾಯಕ್ಕೆ ಹಬ್ಬುತ್ತದೆ.
ನಮ್ಮ ದೇಶದಲ್ಲಿ ಬ್ರಷ್ಟಾಚಾರ ಹೆಚ್ಚಲು ಜನ ದೇವಸ್ಥಾನ,ಚರ್ಚು,ದರ್ಗಾಗಳಿಗೆ ಹೋಗುತ್ತಿರುವುದೇ ಒಂದು ಮುಖ್ಯ ಕಾರಣವಿರಬಹುದೇ ಎಂಬುದು ನನ್ನ ಇತ್ತೀಚಿನ ಗುಮಾನಿ! .

Sunday, October 17, 2010

ಬೆಳಕು

ನಮ್ಮಲ್ಲಿ ಕೆಲವರು ಎಷ್ಟು ವಿಚಿತ್ರ ವೆಂದರೆ ಮನೆಯ ಹೊರಗೆ ಇರುಳೆಲ್ಲಾ ವಿದ್ಯುತ್ ದೀಪ ಹಚ್ಚಿಡುತ್ತಾರೆ.(ಲಕ್ಷ್ಮಿ ಬರುತ್ತಾಳೆಂದು?)
ಆದರೆ ಮನೆಯೊಳಗೆ ಲೈಟು ಉರಿಸಬೇಕೆಂದರೆ "ಅಯ್ಯೋ ಕರೆಂಟು ಕರ್ಚಾಗುತ್ತಲ್ಲಪ್ಪ" ಎಂದು ಚಿಂತಿಸುತ್ತಾರೆ.