Saturday, November 27, 2010

ಆಯ್ದ ಕನ್ನಡ ಕವನಗಳು(ಭಾಗ -3)

ಆಯ್ದ ಕನ್ನಡ ಕವನಗಳು(ಭಾಗ -3)
 
ಕನ್ನಡ ರಾಜ್ಯೋತ್ಸವದ ಹಿನ್ನೆಲೆಯಲ್ಲಿ ನನ್ನಲ್ಲಿರುವ ಕೆಲವು ಆಯ್ದ ಕವನಗಳನ್ನು ನನ್ನ ಬ್ಲಾಗ್ನಲ್ಲಿ ಹಾಕುವ ಪ್ರಯತ್ನ ಮಾಡುತಿದ್ದೇನೆ.
ಇದು ನಾನು ರಾಜ್ಯೋತ್ಸವವನ್ನು ಆಚರಿಸಿಕೊಳ್ಳುತ್ತಿರುವ ವಿಧಾನ.
ಈ ಕವನವನ್ನು 'ಕೆ.ವಿ.ತಿರುಮಲೇಶ್' ಬರೆದಿರುವ ಕವನ ಸಂಕಲನ "ಮುಖಾಮುಖಿ" (1978) ಯಿಂದ ಆಯ್ದು ಕೊಳ್ಳಲಾಗಿದೆ.

ಆಯ್ದ ಕನ್ನಡ ಕವನಗಳು-ಭಾಗ 4

 ಕನ್ನಡ ರಾಜ್ಯೋತ್ಸವದ ಹಿನ್ನೆಲೆಯಲ್ಲಿ ನನ್ನಲ್ಲಿರುವ ಕೆಲವು ಆಯ್ದ ಕವನಗಳನ್ನು ನನ್ನ ಬ್ಲಾಗ್ನಲ್ಲಿ ಹಾಕುವ ಪ್ರಯತ್ನ ಮಾಡುತಿದ್ದೇನೆ.
ಇದು ನಾನು ರಾಜ್ಯೋತ್ಸವವನ್ನು ಆಚರಿಸಿಕೊಳ್ಳುತ್ತಿರುವ ವಿಧಾನ.
ಈ ಕವನವನ್ನು'ಹಾಲೇಶ.ಮ.ಪಾಟೀಲ' ಇವರು ಬರೆದಿರುವ ಕವನ ಸಂಕಲನ  'ಶೂದ್ರ'(1972) ರಿಂದ ಆಯ್ದುಕೊಳ್ಳಲಾಗಿದೆ.

ಆಯ್ದ ಕನ್ನಡ ಕವನಗಳು(ಭಾಗ 3) ಹುಲಿ ಮತ್ತು ದನ"

ಆಯ್ದ ಕನ್ನಡ ಕವನಗಳು(ಭಾಗ ೩)
ಈ ಕವನವನ್ನು ರಾಮಚಂದ್ರದೇವ ಅವರು ರಚಿಸಿದ ಕವನ ಸಂಕಲನ 'ಬೊಮ್ಮನ ಸತಿಗೆ ಮೂಗಿಲ್ಲ'(1978) ರಿಂದ ಆಯ್ದು ಕೊಳ್ಳಲಾಗಿದೆ.

Friday, November 26, 2010

ಸಣ್ಣ ಗುರುಗಳ ದೊಡ್ಡ ಶಿಷ್ಯರು

ಸಣ್ಣ ಗುರುಗಳ ದೊಡ್ಡ ಶಿಷ್ಯರು

ಕನ್ನಡ ರಾಜ್ಯೋತ್ಸವದ ಹಿನ್ನೆಲೆಯಲ್ಲಿ ನನ್ನಲ್ಲಿರುವ ಕೆಲವು ಆಯ್ದ ಲೇಖನಗಳನ್ನು ನನ್ನ ಬ್ಲಾಗ್ನಲ್ಲಿ ಹಾಕುವ ಪ್ರಯತ್ನ ಮಾಡುತಿದ್ದೇನೆ.


ಇದು ನಾನು ರಾಜ್ಯೋತ್ಸವವನ್ನು ಆಚರಿಸಿಕೊಳ್ಳುತ್ತಿರುವ ವಿಧಾನ.

ಈ ಲೇಖನವನ್ನು 'ಬಿ.ವಿ .ವೀರಭದ್ರಪ್ಪ ನವರ  'ವೇದಾಂತ ರೆಜಿಮೆಂಟ್ " ನಿಂದ ಆಯ್ದು ಕೊಳ್ಳಲಾಗಿದೆ.

Wednesday, November 24, 2010

ಕನಕ ಜಯಂತಿಯ ಹಿನ್ನೆಲೆಯಲ್ಲಿ

ಕನಕ ಜಯಂತಿಯನ್ನು ದಿ :24-11-1010 ರಂದು ರಾಜ್ಯಾದ್ಯಂತ ಆಚರಿಸಲಾಯಿತು. ಇದರ ಆಚರಣೆಯ ಸಂಭಂದವಾಗಿ ಹಾಕಲಾದ ಬಿತ್ತಿ ಫಲಕಗಳಲ್ಲಿ ಹಾಗು cut out ಗಳಲ್ಲಿ ಕುರುಬ ಜನಾಂಗದ ಹಿರಿ -ಕಿರಿ ನಾಯಕರುಗಳೇ ರಾರಾಜಿಸುತ್ತಿರುವುದನ್ನು ನಾವೆಲ್ಲರೂ ನೋಡಿದೆವು. ಯಾರಿಗೂ ಆಶ್ಚರ್ಯ ಆಗಲಿಲ್ಲ. ಕಾರಣ ಕನಕದಾಸ ಕೂಡ ಕುರುಬ ಜನಾಂಗದಲ್ಲಿ ಹುಟ್ಟಿದವನು. ಆದರೆ ಇಂದು ಕನಕದಾಸ ಕುರುಬ ಜನಾಗಕ್ಕೆ ಅಪ್ರಸ್ತುತ. ಆತನ ಹಿರಿಮೆ ಏನು? ಒಬ್ಬ ಕವಿ ಎಂದೆ?. ಹಾಡುಗಾರ ಎಂದೆ?.
ಶ್ರೀ ಕನಕದಾಸರು (೧೫೦೯-೧೬೦೯) ೧೫-೧೬ ನೆಯ ಶತಮಾನಗಳಲ್ಲಿ ಜನಪ್ರಿಯವಾದ ಭಕ್ತಿ ಪ೦ಥದ ಮುಖ್ಯ ಹರಿದಾಸರಲ್ಲಿ ಒಬ್ಬರು. ಹಾಗೆಯೇ ಕನ್ನಡ ಭಾಷೆಯ ಪ್ರಸಿದ್ಧ ಕವಿಗಳು.
ಕನಕದಾಸರು ಸುಮಾರು ೨೦೦ ಕೀರ್ತನೆಗಳನ್ನು ರಚಿಸಿ ಹಾಡಿದ್ದಾರೆ. ಅವರ ಐದು ಮುಖ್ಯ ಕಾವ್ಯಕೃತಿಗಳು ಇಂತಿವೆ:
ಮೋಹನತರ೦ಗಿಣಿ (ಕೃಷ್ಣ ಚರಿತೆ)
ನಳಚರಿತ್ರೆ
ರಾಮಧಾನ್ಯಚರಿತೆ
ಹರಿಭಕ್ತಿಸಾರ
ನೃಸಿ೦ಹಸ್ತವ (ಉಪಲಬ್ದವಿಲ್ಲ)
ಇವರಿಗೆ ಮಾದ್ವಾಚಾರ್ಯರ ಭೋಧನೆಯ ಯಾವ ಅಂಶ ಇಷ್ಟವಾಯಿತು ಗೊತ್ತಿಲ್ಲ. ಆದರೆ ಇವರು ಮಧ್ವ ಪರಂಪರೆಯ ಶ್ರೀ ವ್ಯಾಸರಾಯರನ್ನು ಗುರುವಾಗಿ ಸ್ವೀಕರಿಸಿದರೆಂದು ಚರಿತ್ರೆಯಲ್ಲಿ ಹೇಳಲಾಗಿದೆ.
ಕನಕದಾಸರು ಇಂದು ಪ್ರಚಾರಕ್ಕೆ ಬಂದಿರುವುದು ಆತ ಒಬ್ಬ ಸಂತ ಎಂಬ ಕಾರಣಕ್ಕೆ. ಇನ್ನೊಂದು ಅರ್ಥದಲ್ಲಿ ಹೇಳಬೇಕೆಂದರೆ ಆತ ಎಲ್ಲಾ ಕುರುಬರಂತೆ ಇರಲಿಲ್ಲ ಎಂಬ ಕಾರಣಕ್ಕಾಗಿ. ಇಂದು ಅವನ ಜಯಂತಿಯ ಆಚರಣೆಯ cut out ನಲ್ಲಿ ಮಿಂಚುತ್ತಿರುವ ಜನಗಳ್ಯಾರೂ ಅವನಂತೆ "ದಾಸ"ನಾಗಿಲ್ಲ. ಹಾಗಾಗಿ ಒಂದರ್ಥದಲ್ಲಿ ಆತ converted ಕುರುಬ. ಆತನ ಬದುಕನ್ನು ಮತ್ತೆ ಮತ್ತೆ ಹೈ ಲೈಟ್ ಮಾಡುವ ಮೂಲಕ ಎಲ್ಲರೂ ಕನಕದಾಸ ನಂತಾಗಿ ಎಂಬ ಮೆಸೇಜ್ ನೀಡಲು ಸರ್ಕಾರ ಪ್ರಯತ್ನಿಸುತ್ತಿದೆ.
ಕನ್ನಡ ಸಾಹಿತ್ಯಕ್ಕೆ ಒಳ್ಳೆಯ ಕೊಡುಗೆ ನೀಡಿರುವ ಕನಕದಾಸ ಆದರಣೀಯರು ಎಂಬುದು ಸತ್ಯವಾದರೂ ಅವರು ಅನುಕರಣೀಯರಲ್ಲ ಎಂಬುದನ್ನು ನಾವು ಅರಿಯಬೇಕಾಗಿದೆ. ಆದರೆ ಈ ಸಮಾರಂಭದ ಅಧ್ಯಕ್ಷತೆ ವಹಿಸುವ ಪ್ರತಿಯೊಬ್ಬ ಗಣ್ಯರು ಕುರುಬರೆಲ್ಲಾ ಕನಕರನ್ನು ಅನುಕರಿಸುವಂತೆ ಕರೆ ನೀಡುತ್ತಾರೆ.!

"ಕುರುಬರೇ,ನಿಮ್ಮ ಲೈಫ್ ಸ್ಟೈಲ್ ಸರಿ ಇಲ್ಲ.ನಿಮ್ಮ ಆಹಾರ ಪದ್ಧತಿ ಸರಿ ಇಲ್ಲ. ನೀವೆಲ್ಲರೂ "ದಾಸ" ರಾಗಿ ಉದ್ದಾರವಾಗಿ"ಎಂಬರ್ಥದಲ್ಲಿ ಮಾತಾಡುವ ಸರ್ಕಾರದ ಹೆಡ್ ಎಡ್ಡಿ ಯೇ (ಯೆಡಿಯೂರಪ್ಪನೆ) ಕನಕ ಜಯಂತಿಯಂದು ದೆಹಲಿಯ ಪಾರ್ಟಿ ಮುಖ್ಯಸ್ತರ ಮುಂದೆ ಅಧಿಕಾರ ಉಳಿಸಿಕೊಳ್ಳಲು ತಿಪ್ಪರಲಾಗ ಹಾಕುತಿದ್ದ. ಗುರುಗಳ ಗುಲಾಮನಾಗುವ ತನಕ ದೊರೆಯದಲ್ಲ ಮುಕುತಿ ಎಂದು ಯಾರೋ ಹೇಳಿದ್ದಾರೆ,ಅದು ಕನಕರೋ,ಪುರಂದರರೋ,ಇನ್ನ್ಯಾರೋ ನನಗೆ ಗೊತ್ತಿಲ್ಲ.ಆದರೆ ಮಾಧ್ವರ ಮಠಕ್ಕೆ ಅಡ್ಡ ಬೀಳುವುದರಿಂದ ನಿತ್ಯನಾರಕಿಗಳ ಪಂಗಡಕ್ಕೆ ಯಾವ ರೀತಿ ಮುಕ್ತಿ ಸಿಗುತ್ತದೋ ಆ ಕಾಗಿನೆಲೆ ಆದಿಕೇಶವರಾಯನಿಗೇ ಗೊತ್ತು!.

ಇದ್ದುಬದ್ದುದನ್ನೆಲ್ಲ ಬಿಟ್ಟು ಉಡುಪಿ ಮಠಕ್ಕೆ ಅಡ್ಡ ಬಿದ್ದ ಕನಕದಾಸರ ಮಾದರಿಯನ್ನು ಯೆಡಿಯೂರಪ್ಪನೆ ಏಕೆ ಪಾಲಿಸಬಾರದಿತ್ತು?.

ಕನಕದಾಸರು ತನ್ನ ಶ್ರೀಮಂತಿಕೆಯನ್ನು ಬಿಟ್ಟು ದಾಸರಾದರು.ಆದರೆ ಯೆಡಿಯೂರಪ್ಪನವರು ಏನೇ ಆದರೂ ಅಧಿಕಾರ ತ್ಯಾಗಮಾಡುವುದಿಲ್ಲ ಎಂದು ಹೇಳಿದ್ದಾರೆ.ಇರಲಿ ,ಇವರದೊಂಥರಾ  ಸೂ ಸೂ ....ಸೂ..ಸೂಯೋಧನನ ಛಲ!. very good.

ಹೀಗಂದಮಾತ್ರಕ್ಕೆ ಅವರು ಯಾವುದೇ ತ್ಯಾಗ ಮಾಡಿಲ್ಲ ಎಂದರ್ಥವಲ್ಲ. ಆತ ಬೇಕಾದಷ್ಟು ತ್ಯಾಗ ಮಾಡಿದ್ದಾರೆ. ಅಧಿಕಾರ ಕಿತ್ತುಕೊಳ್ಳಬೇಡಿ.ಬೇಕಾದರೆ ನನ್ನ ಮಕ್ಕಳನ್ನು,ಬಂಧು ಬಳಗವನ್ನು ದೂರ ಇಡುತ್ತೇನೆ ಎಂದು ಹೇಳಿದ್ದಾರೆ.ಇದೂ ಒಂದು ರೀತಿಯ ತ್ಯಾಗವೇ ತಾನೇ?. ಒಂದು ರೀತಿಯಲ್ಲಿ ಎಡ್ಡಿ ಕನಕದಾಸರನ್ತೆಯೇ ಎಂದಾಯಿತು. ಅಷ್ಟು ಅಧಿಕಾರ ಇದ್ದರೂ,ಲಿನ್ಗಾಯಿತರಾದರೂ ಎಡ್ಡಿ ಉಡುಪಿ ಮಠದ ಗುಲಾಮರಂತೆ ವರ್ತಿಸುತಿದ್ದಾರೆ. ಕನಕದಾಸರು ಕೂಡ ಅಷ್ಟೆಲ್ಲ ಜ್ಞಾನ ಸಂಪಾದಿಸಿದ್ದರೂ, ಸಾಕ್ಷಾತ್ಕಾರ(?) ಪಡೆದಿದ್ದರೂ ಉಡುಪಿ ಮಠಕ್ಕೆ ನಿಷ್ಠೆಯಿಂದ ನಡೆದು ಕೊಳ್ಳುತಿದ್ದರು. ಹುಟ್ಟಿನಿಂದ ಬ್ರಾಹ್ಮಣರಾಗಿರದ ಕನಕರು ನಿತ್ಯನಾರಕಿಗಳ ಕೆಟಗರಿಗೆ ಸೇರುತ್ತಾರಾ ಎಂಬುದು ಚರ್ಚಾರ್ಹ. ಒಟ್ಟಾರೆ ಇಬರಿಬ್ಬರ ನಡುವೆ ಇಷ್ಟು ವ್ಯತ್ಯಾಸ ಇದ್ದರೂ ಸಾಮ್ಯತೆಯ ಕೊ0ಡಿಯೊಂದು ಗೋಚರವಾಗುತ್ತದೆ.ಶ್ರೀ ರಾಮಕೃಷ್ಣರು ಹೇಳುವಂತೆ ಎಲ್ಲರೂ ಹುಚ್ಚರೆ. ಕೆಲವರಿಗೆ ಅಧಿಕಾರದ ಹುಚ್ಚು.ಕೆಲವರಿಗೆ ಹೆಣ್ಣಿನ ಹುಚ್ಚು.ಕೆಲವರಿಗೆ ಮಣ್ಣಿನ ಹುಚ್ಚು,ಕೆಲವರಿಗೆ ದೇವರ ಹುಚ್ಚು.". ಒಟ್ಟಾರೆ ಜಗತ್ತು ಹುಚ್ಚರ ಸಂತೆ. ಕನಕದಾಸರ ಹುಚ್ಚು ಸ್ವಲ್ಪ ಕಡಿಮೆ ಅಪಾಯಕಾರಿ.ಆ ಕಾರಣಕ್ಕಾಗಿಯೇ  ಕನಕ ವಂದ್ಯಾರ್ಹ.ಎಡ್ಡಿ ನಿಂದ್ಯಾರ್ಹ!.

Friday, November 19, 2010

'ಮಾಧ್ಯಮ'ಎಂಬ 'ಮಧ್ಯ'

ಇಂದು 'ಮಾದ್ಯಮ' ತನ್ನ ಉಚ್ಚ್ರಾಯ ಸ್ತಿತಿಯಲ್ಲಿದೆ. ತನಗೆ ಬೇಕೆನಿಸಿದನ್ನು ಬೇಕುಬೇಕಾದಂತೆ ನೀಡಲು ಸಶಕ್ತವಾಗಿದೆ.ಆದರೆ ಮಾಧ್ಯಮಗಳಿಂದ ಸಾಧ್ಯ ಎಂದು ನಾವು ಆನಾದಿಕಾಲದಿಂದಲೂ ಹೊಂದಿದ್ದ ನಂಬಿಕೆಯನ್ನು ನಾವು ಬದಲಿಸಿಕೊಳ್ಳಬೇಕಾಗಿದೆ. ಮಾಧ್ಯಮಗಳು ಸಮಾಜವನ್ನೇ ಬದಲಿಸಬಹುದು ಎಂಬ ಪರಿಕಲ್ಪನೆ ಸುಳ್ಳಾಗಿದೆ. ಬದಲಿಸಬಹುದೇನೋ ,ಆದರೆ ನಕಾರಾತ್ಮಕವಾಗಿ. ಸಕಾರತ್ಮಕವಾಗಿ ಬದಲಿಸುವ ಪ್ರಯತ್ನ ಬೇಕಾದಷ್ಟು ನಡೆದಿದೆ.ಆದರೆ ಸಕಾರಾತ್ಮಕ ತರಂಗಗಳನ್ನು ಸ್ವೀಕರಿಸಲು ನಾವು ಸಿದ್ದರಿಲ್ಲ!. ಆದುದರಿಂದ ಕಲೆ,ಸಂಸ್ಕೃತಿ, ವಿಜ್ಞಾನಕ್ಕೆ ಮೀಸಲಿಟ್ಟ ಚಾನಲ್ ಗಳು ಇಂದು ಟಿ.ಅರ್.ಪಿ.ರೇಟಿಂಗ್ ನಲ್ಲಿ ಮನೋರಂಜನೆಗೆ ಮೀಸಲಾದ ಚಾನಲ್ ಗಳಿಗಿಂತ ಹಿಂದಿದೆ. ಆ ಚಾನಲ್ ಗಳು ತಾವೂ ಸಹಾ ಶುದ್ಧ ಮನೋರಂಜನೆಯನ್ನು ನೀಡಲು,ಮೌಲ್ಯಗಳನ್ನು ಸಾರಲು ಶ್ರಮಿಸುತ್ತಿರುವುದಾಗಿ ಹೇಳಿಕೊಳ್ಳುತ್ತವೆ. ಅವುಗಳ ಮೌಲ್ಯಗಳು ಯಾವುದು?, ಬೆಳಗಾದ ಕೂಡಲೇ ದೇವರ ಹೆಸರು ಹಿಡಿದು ಅರಚುವುದು,ನಂತರ ಕೆಲವು ಪುಣ್ಯ ಕ್ಷೇತ್ರಗಳ ಪ್ರಚಾರ,ನಂತರ ಜ್ಯೋತಿಷಿಗಳಿಂದ ದಿನದ ಬವಿಷ್ಯ ಮತ್ತು ಹಿತವಚನ!.

ಆ ನಂತರ ಅಡಿಗೆ,ಹೊಸರುಚಿ,ಆಮೇಲೆ ಮಧ್ಯಾನದ ನಂತರ ಅತ್ತೆ ,ಸೊಸೆ,ಗಂಡ ಹೆಂಡ್ತಿಯರ ಜಗಳ ಪಿತೂರಿ ಇರುವ ಸಿರಿಯಲ್ ಸರಣಿ. ಇವೆಲ್ಲಾ ನಮ್ಮ ಮೌಲ್ಯಗಳನ್ನು ಪ್ರತಿನಿಧಿಸುತ್ತವೆ ಎಂಬುದು ಕೆಲವು ಶ್ರದ್ಧಾವಂತ ಪ್ರೇಕ್ಷಕರ ವಾದ.

ಹೇಗೆ?,

 ಹೇಗೆಂದರೆ ಇಲ್ಲಿ  ನಮ್ಮ ಸಮಾಜ ಒಪ್ಪುವಂಥಹ ಸಂಬಂಧಗಳು ಮತ್ತು ಡ್ರೆಸ್ ಕೋಡ್ ಗಳಿವೆ. ಗಂಡ,ಹೆಂಡ್ತಿ,ಮಾವ,ಅತ್ತೆ,ಅಪ್ಪ,ಅಮ್ಮ,ಅಣ್ಣ,ತಮ್ಮ ಇರುವ ಈ ಚೌಕಟ್ಟಿನಲ್ಲಿ ಜಗಳ,ಹೊಡೆದಾಟ,ಹಿಂಸೆ,ವಿಷಪ್ರಾಶನ,ಮೋಸ,ವಂಚನೆ,ಕೊಲೆ ಯಾವುದು ನಡೆದರೂ ಅದು ಸರ್ವ ಸಮ್ಮತ. ಎಲ್ಲಾ ಆದ ನಂತರ ಧಾರಾವಾಹಿಯಲ್ಲಿ ಅಳಿದುಳಿದ ಮಂದಿ ಪರಸ್ಪರ ಎಲ್ಲವನ್ನೂ ಕ್ಷಮಿಸಿ ಎಲ್ಲರೂ ಒಂದಾಗುವುದು ಕಥೆಯ ತಿರುಳು. ಈ ಸಂಬಂಧಗಳ ಚೌಕಟ್ಟಿನ ಹೊರಗೆ ದಾನ,ಧರ್ಮ ನಡೆದರೂ ಭೂಮಿಯ ಆಪೂರ್ವ ವಸ್ತುಗಳನ್ನು ತೋರಿಸಿದರೂ ಯಾವುದೇ ಉಪಯುಕ್ತ ವಿಷಯದ ಬಗ್ಗೆ ಹೇಳುತಿದ್ದರೋ ನಮಗೆ ಅದು ಹಾದರದಂತೆ ಕಾಣಿಸುತ್ತದೆ!. ನಮ್ಮದೆಂದು ನಮಗನ್ನಿಸದ ಯಾವುದೇ ವಿಷಯವನ್ನು ಖ೦ಡಿಸುವುದರಲ್ಲೂ ನಾವು ಹಿಂದೆಬೀಳುವುದಿಲ್ಲ.ಆದರೆ ಯಾರಾದರೂ ನಮಗೆ ಒದ್ದು ಇದು ನಿಮ್ಮದೇ ಎಂದು ನಮಗೆ ಹೇಳಿದರೆ ನಾವದನ್ನು ಸ್ವೀಕರಿಸುತ್ತೇವೆ. ಉದಾಹರಣೆಗೆ ವೇಶ ಭೂಷಣಗಳು. ನಮ್ಮ ಸಾಂಸ್ಕೃತಿಕ ಉಡುಗೆ ಅಂತಾ ಇಂದು ಶಾಲೆಗೆ,ಆಫೀಸಿಗೆ ಯಾರಾದ್ರೂ ಪಂಚೆ ಉಟ್ಕೊಂಡು,ಮೈಸೂರು ಪೇಟ ಹಾಕ್ಕೊಂಡು ಬರ್ತಾರಾ? ಆಟವ ಶ್ರೀ ರಾಮಚಂದ್ರನ ಹೇರ್ ಸ್ಟೈಲ್ ಅಂತಾ ಯಾರಾದರೂ ಜಟಾಜೂಟಧಾರಿಯಾಗಿ ಓಡಾಡಿದರೆ (ಬುದ್ದಿವಾದ)ಸುಮ್ಮನೆ ಅವನಷ್ಟಕ್ಕೆ ಅವನನ್ನು ಬಿಡ್ತಾರ?,ವಾಡಿಕೆಗಿನ್ತಾ ಒಂದಿಂಚು ಕೂದಲು ಬಿಟ್ಟರೂ ಅದನ್ನು ಆಕ್ಷೆಪಿಸುವಂತಹ ಕಂತ್ರಿಜನಗಳು ನಮ್ಮ ಸಮಾಜದಲ್ಲಿ ಜಾಸ್ತಿ. ಬ್ರಿಟಿಷರು ಒದ್ದದಕ್ಕೆ ನಾವು ಕ್ರಾಪ್ ಕಟ್ ಮಾಡಿಸುತ್ತೇವೆ. ಪ್ರಚಲಿತ ಫ್ಯಾಶನ್ ಗಳು ಭಾರತೀಯ ಸಮಾಜದ ಮೇಲೆ ಹಿಂದಿಂದಲೂ ಎಷ್ಟು ಪ್ರಭಾವ ಬೀರುತ್ತಾ ಬಂದಿದೆ ಎಂದರೆ ಭಾರತೀಯ ಸಂಸ್ಕೃತಿಯ ಪುನರುತ್ಥಾನಕ್ಕೆ ಟೊಂಕಕಟ್ಟಿದ್ದ ಶಿವಾಜಿ ಮಹಾರಾಜ ಕೂಡ ಮುಘಲ್ ರಂತೆ ಡ್ರೆಸ್ ಮಾಡಿಕೊಳ್ಳುತಿದ್ದ.

 

 ಹಲವು ಮನೆಗಳಲ್ಲಿ ರಾತ್ರಿಯಾದೊಡನೆ ಅಪರಾಧಕ್ಕೆ ಸಂಭದಿಸಿದ ಕ್ರೈ೦ ನ್ಯೂಸ್  ಮುಂತಾದವನ್ನು ನೋಡುವುದು ನಿತ್ಯಕರ್ಮವಾಗಿದೆ. ಇವರ ರಾತ್ರಿಯ ಎಚ್ಚರದ ಕ್ಷಣಗಳು ಹಿಂಸೆ,ಚೀತ್ಕಾರ,ಆಕ್ರಂದನಗಳಿಂದ ಕೂಡಿರುತ್ತವೆ.(ಇದು ನನ್ನ ಅಭಿಪ್ರಾಯವಷ್ಟೇ).ಇದರಿಂದಾಗುವ ಇತರ ಉಪಯೋಗಗಳನ್ನು ದಯವಿಟ್ಟು ಕಮೆಂಟ್ ಬಾಕ್ಸ್ ನಲ್ಲಿ ಬರೆಯಿರಿ.

ದಿ: 16-11-2010 &17-11-10 ರ TV9 ಯಾವುದೋ ಪಾರ್ಕಿನಲ್ಲಿ ವಿಹಾರಕ್ಕೆ ಬರುವ ಜೋಡಿಗಳನ್ನು ಮಹಿಳೆಯರನ್ನು ಯಾವ ರೀತಿ ಕೆಲವು ಗುಂಪುಗಳು ಅತ್ಯಾಚಾರ ಮಾಡುತ್ತವೆ ಎಂಬುದನ್ನು ತೋರಿಸಿದ್ದರು.  ಇಂತಹವು ದಿನವೂ ಟಿ.ವಿ.ಯಲ್ಲಿ ಪ್ರಕಟವಾಗುತ್ತವೆ. ಆದರೆ ಅವುಗಳ ಬಗ್ಗೆ ಪ್ರತಿಭಟಿಸುವುದಿರಲಿ,ಆಕ್ರೋಶ ವ್ಯಕ್ತಪಡಿಸುವ ಸಂವೇದನಾಶೀಲತೆಯನ್ನು ಕಳೆದುಕೊಂಡಿರುವುದು ಒಂದು ರಾಷ್ಟ್ರೀಯ  ದುರಂತ . ನಮ್ಮ ಮೌಲ್ಯ ಸಂಸ್ಕೃತಿಗಳು ನಮ್ಮನ್ನು ಯಾವ ಮಟ್ಟದಲ್ಲಿ ಇರಿಸಿದೆ ಅಂದರೆ ಅವಿವಾಹಿತ ಜೋಡಿಗಳು ಒಂದು ನಿರ್ಜನ ಪ್ರದೇಶದಲ್ಲಿ ಸರಸ ಸಲ್ಲಾಪದಲ್ಲಿ ತೊಡಗುವುದು ನಮಗೆ ಎಷ್ಟು ದೊಡ್ಡ ಅಪರಾಧವಾಗಿ ಕಾಣುತ್ತದೆ ಎಂದರೆ ಅಲ್ಲಿ ಅವರನ್ನು ಹಿಡಿದು ಅತ್ಯಾಚಾರಕ್ಕೆ ಪ್ರಯತ್ನಿಸುವವರೇ ನಮ್ಮ ಈ ಶ್ರೇಷ್ಠ ಸಂಸ್ಕೃತಿ,ಮೌಲ್ಯಗಳ ಪ್ರತಿಪಾದಕರಂತೆ ಕಾಣುತ್ತಾರೆ!. ಹೀಗೆ ಕೆಲವೊಮ್ಮೆ ಶೋಷಣೆಯ ಮೂಲಕ ಮೊಬೈಲ್ನಿಂದ ತೆಗೆಯಲಾಗುವ ಚಿತ್ರಗಳು ಎಂ.ಎಂ.ಎಸ್.ಮೂಲಕ ಹರಿದಾಡುತಿದ್ದರೆ ಅವನ್ನ ನೋಡಿ ಆನಂದಿಸುವ ಒಂದು ವರ್ಗವನ್ನು ನಮ್ಮ ಸುತ್ತ ಮುತ್ತಲೇ ನಾವು ನೋಡಿರುತ್ತೇವೆ. ಈ ವರ್ಗಕ್ಕೆ ಸೇರಿದ ಒಬ್ಬ "ಮಹಾತ್ಮ"ನಿಗೆ ವಿದೇಶಗಳಿಂದ ಬರುವ ಬ್ಲೂ ಫಿಲಂ ಗಳು ಇಷ್ಟವಾಗುವುದಿಲ್ಲವಂತೆ.  ಹೀಗೆ ಕದ್ದು,ಮುಚ್ಚಿ ತೆಗೆಯುವ ತುಣುಕುಗಳೇ ಇಷ್ಟವಂತೆ,ಅಂತಹವು ಸಿಗುತಿಲ್ಲಾ ಅಂತಾ ಅವನಿಗೆ ದುಕ್ಖವಂತೆ!.

ಇದರಲ್ಲಿರುವ ವ್ಯತ್ಯಾಸವನ್ನು ಸೂಕ್ಷ್ಮವಾಗಿ ಗಮನಿಸಿ. ಪರಸ್ಪರ ಸಮ್ಮತಿಯಿಂದ ವೃತ್ತಿಪರರಾದ ಪ್ರಾಪ್ತವಯಸ್ಕರು ಸಾರ್ವಜನಿಕ ಮನೋರಂಜನೆಗಾಗಿ ನಡೆಸುವ ಒಂದು ಕ್ರಿಯೆ ಒಂದೆಡೆ.

ಹಿಂಸೆಯ ಮೂಲಕ ಬಲವಂತವಾಗಿ ಅವರ ಒಪ್ಪಿಗೆ ಇಲ್ಲದೆ ತೆಗೆದ ದೃಶ್ಯಗಳು ಒಂದೆಡೆ.

ಇವೆರಡನ್ನೂ ಎದುರು ಇಟ್ಟರೆ ಯಾವುದನ್ನುಆಯ್ಕೆ ಮಾಡಿಕೊಳ್ಳುತ್ತೀರಿ ಎಂಬುದು ನಿಮ್ಮ  ಸಂವೆದನಾಶೀಲತೆಯ ಅಳತೆಗೋಲಾಗುತ್ತದೆ. "ನಾನು ಎರಡನ್ನೂ ನೋಡುವುದಿಲ್ಲ, ಶಾಂತಂ,ಪಾಪಂ" ಎನ್ನಬಹುದು ನೀವು. ಆದರೆ ಇದು ನಿಮ್ಮೊಳಗಿನ ಹಸಿವಿಗೊಂದು ಸವಾಲು. ನಾವು ಯಾವುದೇ ವಸ್ತುವನ್ನು ಆಯ್ಕೆ ಮಾಡಿಕೊಳ್ಳುವಾಗ ಸಾಧಾರಣವಾಗಿ ಅವು ನಮ್ಮ ಅಗತ್ಯಗಳನ್ನು ಪೂರೈಸುತ್ತವೆಯೇ? ಎಂಬುದನ್ನು ಗಮನಿಸುತ್ತೇವೆ. ಬೌತಿಕ ವಸ್ತುಗಳ ಅಗತ್ಯಗಳನ್ನು ತುಲನಾತ್ಮಕವಾಗಿ ವಿಶ್ಲೇಷಿಸುವುದು ತುಂಬಾ ಸುಲಭ.ಆದರೆ ಮಾನಸಿಕ ಅಗತ್ಯಗಳ ವಿಶ್ಲೇಷಣೆ ಕೊಂಚ ಕಷ್ಟ. ಆದರೂ ಪ್ರಯತ್ನಿಸೋಣ.ಅಂತಹ ಅಗತ್ಯಗಳು ನಮಗಿರುವುದಕ್ಕೆ ಕಾರಣವೇನು ಎಂದು ನಾವು ಆಲೋಚಿಸಬೇಕಾಗುತ್ತದೆ.ಇದೊಂದು ಸಂಕೀರ್ಣ ವಿಷಯ.ಇದರ ಬಗ್ಗೆ ನಾವು ಮಾಡುವ ವಿಶ್ಲೇಷಣೆಗಳು ವ್ಯಕ್ತಿಯಿಂದ ವ್ಯಕ್ತಿಗೆ ವಿಬಿನ್ನವಾಗಿರುತ್ತದೆ. ನಮ್ಮ ಮನಸ್ಸಿನಲ್ಲಿ ಬೇರು ಬಿಟ್ಟಿರುವ ಹಲವು ಅಂಶಗಳು ನಮ್ಮ ಮನಸ್ತಿತಿಯನ್ನು ನಿರ್ಧರಿಸುತ್ತವೆ. ಈ ಅಂಶಗಳು ಯಾವುವು ಎಂದು ನೀವು ಕಂಡು ಹಿಡಿದರೆ ಅವನ್ನು ನನಗೆ ಹೇಳಿ. ಕಮೆಂಟ್ ಕಾಲಂ ನಲ್ಲಿ ನಿಮಗೆ ಸದಾ ಸ್ವಾಗತವಿದೆ.

ಮತ್ತೆ ಮಾಧ್ಯಮಗಳ ವಿಷಯಕ್ಕೆ ಬರೋಣ. TV 9 ನಲ್ಲಿ ಪ್ರತಿದಿನವೂ ಒಂದು ದೃಶ ತುಣುಕು ಪ್ರಸಾರವಾಗುತ್ತೆ. ಒಬ್ಬ ತಪ್ಪಿತಸ್ತನನ್ನು ಸಾರ್ವಜನಿಕರು ಹಿಡಿದು ಥಳಿಸುತ್ತಿರುವ ದೃಶ್ಯ. ಉದಾಹರಣೆಗೆ ಒಬ್ಬನನ್ನು ಕಳ್ಳತನದ ಆರೋಪದ ಮೇಲೆ ಹಳ್ಳಿಗರು ಕಟ್ಟಿಹಾಕಿ ವಿವಿಧ ರೀತಿಯಲ್ಲಿ ಥಳಿಸುವ,ಹಿಂಸಿಸುವ  ದೃಶ್ಯ. ವ್ಯಭಿಚಾರದ ಆರೋಪದ ಮೇಲೆ ಒಬ್ಬ ಮಹಿಳೆಯನ್ನು ಒಂದು ಗುಂಪು ಥಳಿಸುವ ದೃಶ್ಯ. ಹೀಗೆ ಹಿಂಸೆಯ ನಿರಂತರ ವೈಭವೀಕರಣದಿಂದ ನೋಡುಗರ ಮನಸ್ತಿತಿಯ ಮೇಲೆ ಏನು ಪರಿಣಾಮವಾಗಬಹುದು.

ತಪ್ಪಿತಸ್ತರಿಗೆ ತಕ್ಕ ಶಾಸ್ತಿಯಾಗುತ್ತಿದೆ ಎಂದು ಕೆಲವರು ಹೇಳಬಹುದು. ಆದರೆ ಈ ತಪ್ಪು ಎನ್ನುವುದರ ಪರಿಭಾಷೆ ಏನು?,ಇದನ್ನು ನಿರ್ಧರಿಸುವ ಮಾನದಂಡಗಳೇನು?. ಎಷ್ಟೋ ಸಾರಿ ತಪ್ಪು ಗ್ರಹಿಕೆಯಿಂದ ಕೆಲವರನ್ನು ಥಳಿಸಿದ ಉದಾಹರಣೆಗಳಿವೆ. ಎಷ್ಟೋ ಕಡೆ ಊರಿನ ಪ್ರಮುಖರೆಲ್ಲಾ ಪಂಚಾಯತ್ ಸೇರಿ ಓಡಿ ಹೋದ ಪ್ರೇಮಿಗಳನ್ನು ಹೊಡೆದು ಸಾಯಿಸಿದ್ದಾರೆ. ಹೆಂಗಸರನ್ನು ಮಾಟಗಾತಿಯರೆಂಬ ಆರೋಪದ ಮೇಲೆ  ಹೊಡೆದು ಸಾಯಿಸಲಾಗಿದೆ. ಬೆತ್ತಲೆ ಮೆರವಣಿಗೆ ಮಾಡಲಾಗಿದೆ. ಹರಿಜನರಿಗೆ ಬಹಿಷ್ಕಾರ ಹಾಕಿದ್ದಾರೆ.ವೇದ ಕೇಳಿದ ಕಿವಿಗೆ  ಸೀಸ ಸುರಿದಿದ್ದಾರೆ. ಹೀಗಿರುವಾಗ ಇಂತಹಾ ಹಿಂಡು ಪ್ರವೃತ್ತಿಯನ್ನು ಬೆಳೆಸುವುದರಿಂದ ನಮಗೆ ನಿಮಗೆ ಏನು ಲಾಭ?.


Thursday, November 18, 2010

ಆಯ್ದ ಕನ್ನಡ ಕವನಗಳು -ಭಾಗ-1

ಕನ್ನಡ ರಾಜ್ಯೋತ್ಸವದ ಹಿನ್ನೆಲೆಯಲ್ಲಿ ನನ್ನಲ್ಲಿರುವ ಕೆಲವು ಆಯ್ದ ಕವನಗಳನ್ನು ನನ್ನ ಬ್ಲಾಗ್ನಲ್ಲಿ ಹಾಕುವ ಪ್ರಯತ್ನ ಮಾಡುತಿದ್ದೇನೆ.
ಇದು ನಾನು ರಾಜ್ಯೋತ್ಸವವನ್ನು ಆಚರಿಸಿಕೊಳ್ಳುತ್ತಿರುವ ವಿಧಾನ.
ಇದು ಶ್ರೀ ಶಂಕರ ಮೊಕಾಶಿ ಪುಣೇಕರ ಅವರ ಪದ್ಯ. ಇದು 1970 ರಲ್ಲಿ ಪ್ರಕಟವಾದ ಮಾಯಿಯ ಮೂರು ಮುಖಗಳು ಕವನ ಸಂಕಲನದಿಂದ ಆಯ್ದು ಕೊಳ್ಳಲಾಗಿದೆ.

Sunday, November 14, 2010

ಕುಂಬಾರ ಮತ್ತು ಕಾಲಚಕ್ರ

ಯಾರು ಈ ಕುಂಬಾರ ?,



ಮಡಕೆ ಮಾಡುವವನೇ?


ಮಡಕೆ ಮಾಡುವುದನ್ನು ಬಿಟ್ಟು ಬೇರೇನನ್ನೂ ಮಾಡಲು ಬರದವನೇ?


ಮಡಕೆ ಮಾಡಲು ಬರದೆ ಬರಿದೇ ಕುಂಬಾರ ಎಂದು ಕರೆದುಕೊಳ್ಳುವವನೆ?


ಅಥವಾ ಮಣ್ಣಿನ ಕೆಲಸವನ್ನು ಬಿಟ್ಟು ಬೇರೇನನ್ನು ಮಾಡಬೇಡ ಎಂದು ನಿರ್ಭಂದಿಸಲ್ಪಟ್ಟವನೇ?


ಯಾರು ಈ ಕುಂಬಾರ?


ರೈತನಿಗಿಂತ ಹೆಚ್ಚಾಗಿ ಮಣ್ಣಲ್ಲಿ ಮಣ್ಣಾಗಿ ಬೆರೆವಾತ ಕುಂಬಾರ.ಇಂದಿನ ಪರಿಸ್ತಿತಿ ಆತನನ್ನು ಮಣ್ಣಿಂದ ದೂರ ಮಾಡಿದೆ.ರೈತನಿಗೆ ಮಣ್ಣೊಂದಿಗೆ ಬೆರೆತಷ್ಟೂ ಹೊನ್ನು. ಬೆಳೆದರೂ ಹೊನ್ನು.ಜಮೀನು ಮಾರಿದರೂ ಹೊನ್ನು.


ಕುಂಬಾರನಿಗೆ? ಮಣ್ಣನ್ನು ಮುಟ್ಟಿದಷ್ಟೂ ಮಣ್ಣು....ಬಾಯಿಗೆ!


ಕುಂಬಾರ ಮಣ್ಣಿನ ಮಗ ಎಂದು ಯಾವ ರಾಜಕಾರಣಿಯೂ ಹೇಳುವುದಿಲ್ಲ. ಏಕೆಂದರೆ ಕುಂಬಾರ ಮಣ್ಣಿನ ಮಲಮಗ. ಇಂದಿವನು ಭೂಮಿಗೂ ಬೇಡವಾದವನು,ಭೂಪಾಲನಿಗೂ ಬೇಡವಾದವನು.






ಹಿಂದೆ ಮಡಕೆಗೆ ಬೇಡಿಕೆ ಇತ್ತು.ಪೂರೈಸಿ ಪೂರೈಸಿ ಕುಂಬಾರನ ಕೈ ದಣಿಯಿತು.ಧನ ಸೇರಿತು. ಕುಂಭಾರರ ಮಧ್ಯ ಶೆಟ್ಟಿಗಳು ಉದ್ಹ್ಬವಿಸಿದರು. ಶೂದ್ರ ವೈಶ್ಯನಾದ. ಕಾಲಚಕ್ರ ತಿರುಗುತಿತ್ತು. ನಾನಿಲ್ಲದಿದ್ದರೆ ಇವರ್ಯಾರಿಗೋ ಶಿಸ್ತಾಗಿ ಉಣಲು ಸಾಧ್ಯವಿಲ್ಲ ,ನಾನೇ ಜಗದೊಡೆಯ ಎಂದು ತನ್ನ ಬೆನ್ನು ತಾನೇ ತಟ್ಟಿಕೊಂಡ. ನಾನೇ ಎಲ್ಲದರ ಸೃಷ್ಟಿಕರ್ತ ಎಂದು ಬೀಗಿದ.ಜಗದೊಡೆಯ ಎಂದರೆ ಆ ಜಗದ ರಾಜ. ಪುರಾತನ ದೊರೆ ಶಾಲಿವಾಹನ!.


ಕಾಲಚಕ್ರ ತಿರುಗುತಿತ್ತು. ಚಕ್ರದ ಗಾಲಿಗಳು ಬೇರೆಬೇರೆ ರೀತಿಯಲ್ಲಿ ಉಪಯೋಗಕ್ಕೆ ಬಂತು. ಭಂಡಿಗಳು ಬಂದವು. ಆ ಭಂಡಿಗಳಲ್ಲಿ ಪಿಂಗಾಣಿ ಪಾತ್ರೆಗಳು ಬಂದವು. ಅಂದುಸಹ ಅವು ಬಂದದ್ದು ಚೀನಾದಿಂದ. ಇಂದಿನಂತೆಯೇ!.


ಚಕ್ರ ತಿರುಗುತಿತ್ತು. ಜೊತೆಗೆ ತಲೆ ಕೂಡ.....


ಶಾಲಿವಾಹನರ ಕಾಲ ಮುಗಿದೇ ಹೋಯಿತು. ಕದಂಬರು...ಚಾಲುಕ್ಯರು,ರಾಷ್ಟ್ರಕೂಟ ಹೊಯ್ಸಳರು.....,


ಸರ್ವಜ್ಞ ಒಂದಿಷ್ಟು ಸದ್ದು ಮಾಡಿದ್ದು ಬಿಟ್ಟರೆ ಕುಂಬಾರರ ಹಟ್ಟಿಯಲ್ಲಿ ಕರಾಳ ಮೌನ.


ಕಮಕ್,ಕಿಮಕ್ ಎನ್ನಲಿಲ್ಲ ಕುಂಬಾರ ಶೆಟ್ಟಿ!


ಪಿಂಗಾಣಿ ಆಯಿತು,ಕಂಚಿನ,ಹಿತ್ತಾಳೆಯ...ತಾಮ್ರದ....ಸ್ಟೀಲಿನ ಪಾತ್ರೆಗಳು ಓಡಾಡತೊಡಗಿದವು .ಶೆಟ್ಟಿಯ ಮನೆಗೆ ಧನದ ಹರಿವು ಕಮ್ಮಿಯಾಯಿತು.


ಕಾಲನ ಈನಿರಂತರ ಪ್ರವಾಹದಲ್ಲಿ ತನ್ನ ಚಕ್ರದೊಡನೆ ಯಾಂತ್ರಿಕವಾಗಿ ಸುತ್ತುತಿದ್ದ ಕುಂಬಾರನಿಗೆ ಹಣ ಬಂದದ್ದು ಗೊತ್ತಾಗಲಿಲ್ಲ. ಹೋದದ್ದೂ ಗೊತ್ತಾಗಲಿಲ್ಲ.ನಿಂತದ್ದೂ ಗೊತ್ತಾಗಲಿಲ್ಲ.


ಶೂದ್ರ ವೈಶ್ಯನಾದ. ಮತ್ತೆ ಶೂದ್ರನಾದ. ಬ್ರಿಟಿಷರು ಬರದಿದ್ದರೆ ಅಸ್ಪ್ರಶ್ಯನೇ ಆಗಿಬಿಡುತಿದ್ದನೇನೋ!


ಆತನ ಚಕ್ರ ತಿರುಗುತ್ತಲೇ ಇತ್ತು. ನಿಧಾನವಾಗಿ. .ಈಗ ಅದರ ಮೇಲೆ ಮಡಕೆ ಇಲ್ಲ. ಬರೀ ಮಣ್ಣು. ಚಕ್ರದಿಂದ ಆತ ವಿದ್ಯುತ್ ತಯಾರಿಸಬಹುದಿತ್ತೇನೋ,ಆದರೆ ಅಲ್ಲಿ ಈಗ ಏಳುತ್ತಿರುವುದು ಮಡಿಕೆಯೂ ಅಲ್ಲ.ವಿದ್ಯತ್ ಸಹಾ ಅಲ್ಲ. ಗುಡಿ ಗೋಪುರಗಳು. ತಿರುಗುತ್ತಿರುವ ನೀರು ಸುಳಿಯನ್ನು ಸೃಷ್ಟಿಸುತ್ತದೆ. ಕುಂಬಾರನ ಮುಂದೆ ತಿರುಗುತಿರುವ ಚಕ್ರ ಕೂಡ ಸುಳಿಯನ್ನು ಸೃಷ್ಟಿಸುತ್ತಿರುವಂತೆ ಬಾಸವಾಗುತ್ತಿದೆ. ಈ ಸುಳಿ...ಮೌಡ್ಯದ ಸುಳಿ!.


ಕುಂಬಾರರನ್ನುಉದ್ದರಿಸಲು ,ಸಮುದಾಯದ ನಾಯಕತ್ವ ವಹಿಸಲು ಇತ್ತೀಚೆಗೆ ಕೆಲವರು ಧರೆಗಿಳಿದಿದ್ದಾರೆ.


ಸಮೂದಾಯವನ್ನು ಕಾಡುತ್ತಿರುವ ಕಾಯಿಲೆಗಳಿಗೆ ಚಿಕಿತ್ಸೆ ನೀಡಿ ಸಮುದಾಯವನ್ನು ಮುನ್ನಡೆಸುವುದೇ ಇವರ ಗುರಿಯಂತೆ!. ಕುಂಬಾರರನ್ನು ಸಾಲಾಗಿ ಕೂಡಿಸಿ ಮೌಡ್ಯದ ಮಣ್ಣು ಮೆತ್ತುವ ಪ್ರಾಕೃತಿಕ ಚಿಕಿತ್ಸಾ ಸಮಾವೇಶಗಳು ಜನಾಂಗವನ್ನು ಆರೋಗ್ಯವಂತವನ್ನಾಗಿಸುತ್ತದೆಯೋ? ಅಥವಾ ಪ್ರಗತಿಯತ್ತ ಕೊಂಡೊಯ್ಯುತ್ತದೆಯೂ?


ಕುಂಬಾರನ ಹಸಿಮಣ್ಣಿನ ಮಡಕೆ ಮುಂದೆಂದೂ ಮುರಿಯದಷ್ಟು ಗಟ್ಟಿಗೊಳಿಸುತ್ತದೆಯೋ ಈ ಕಾವಿಯ ಕಾರ್ಮೋಡ?,ಕಾದು ನೋಡೋಣವೇ ಅಥವಾ ನಾವೂ ಈ ಮಣ್ಣಿನ ಉತ್ಸವಕ್ಕೆ ಜಿಗಿಯೋಣವೇ?.