Friday, January 14, 2011

ಸಂಕ್ರಾಂತಿಯ ಶುಭಾಶಯಗಳು

ಸಂಕ್ರಾಂತಿಯ ಶುಭಾಶಯಗಳು . ನಮ್ಮಲ್ಲಿ ಎಳ್ಳು ಬೆಲ್ಲ ಹಂಚುವ ಸಂಪ್ರದಾಯವಿದೆ.ಇದರಲ್ಲಿ ಮೂಡನಂಬಿಕೆಇಲ್ಲವೆಂದೂ, ಇವೆಲ್ಲವೂ ಬಹಳ ವೈಜ್ಞಾನಿಕವಾದ ಪದ್ಧತಿಗಳೆಂದೂ ನಮ್ಮ ಶಿಕ್ಷಕರು ನಮಗೆ ಹೇಳುತ್ತಾ ಬಂದಿದ್ದಾರೆ.ಆಯಾ ಋತುಗಳಲ್ಲಿ ದೇಹಕ್ಕೆ ಆಯಾ ಪದಾರ್ಥಗಳ (ಉದಾ: ಎಳ್ಳು) ಅವಶ್ಯಕತೆ ಇರುತ್ತದೆಂದೂ ಅದನ್ನು ನಾವು ತೆಗೆದು ಕೊಳ್ಳುವಂತೆ ಮಾಡಲು ನಮ್ಮ ಹಿರಿಯರು ಹೀಗೆ ಬುದ್ದಿವಂತಿಕೆ ಉಪಯೂಗಿಸಿದ್ದಾರೆಂದೂ ಹೇಳುತ್ತಾರೆ
ಬರೇ ಸುಳ್ಳು .ಈ ಮೂರ್ಖರ ಮಾತು ಕೇಳಿ ನಾನು  ಹಲವಾರು ವರ್ಷ ಚಳಿಗಾಲದಲ್ಲಿ ಎಳ್ಳು ಉಪಯೋಗಿಸಿ ನೋಡಿದ್ದೇನೆ,ಬೇರೆಯವರಿಗೂ ತಿನ್ನಿಸಿ ನೋಡಿದ್ದೇನೆ .ಇದರಿಂದ ಅಂತಹ ಪ್ರಯೋಜನವೇನೂ ಆಗಿಲ್ಲ. ಬೇಕಾದರೆ ನೀವು ಹಾಗೆ ಮಾಡಿ ನೋಡಿ.ನಂತರ ಮಾತಾಡಿ. ಇನ್ನೊಬ್ಬರು ಬುದ್ದಿವಂತರು ಸಿಕ್ಕಿದರು,ಅವರ ಪ್ರಕಾರ ಬರೀ ಎಳ್ಳು ತಿಂದರೆ ಪ್ರಯೋಜನವಿಲ್ಲವಂತೆ! ಕೊಬ್ಬರಿ ,ಶೇಂಗಾ,ಬೆಲ್ಲ ಇತ್ಯಾದಿ ಬೆರೆಸಿದ ಕಾಂಬಿನೇಶನ್ನೇ ತಿನ್ನಬೇಕಂತೆ!, ಸರಿ,ಹಬ್ಬ ಆಚರಿಸುವವರು ಒಂದು ದಿನ ತಿನ್ನಿ, ನಾನು ತಿಂಗಳಿಡೀ ತಿಂದು ಪರಿಣಾಮ ತಿಳಿಸುತ್ತೇನೆ.ಯಾಕೆಂದರೆ ಯಾವುದನ್ನು ಸಹಾ ಪರಾಂಬರಿಸಿ ನೋಡದೆ ಮಾತನಾಡಬಾರದಲ್ಲ. ಸ್ವಲ್ಪ ಕರ್ಚಾಗಬಹುದು. ಪರವಾಗಿಲ್ಲ,ಬಿಡಿ,ಅಷ್ಟಕ್ಕೂ  ಈ ಹಬ್ಬ ಗಳಲ್ಲಿ ತಿನ್ನುವ ಪದಾರ್ಥದ ಮೇಲೆ ಮಾಡುವ ಖರ್ಚುಗಳಲ್ಲದೆ  ಕೆಲವು hidden cost ಗಳಿವೆ.ಒಬ್ಬ ರೈತ ತಾನು ವ್ಯವಸಾಯಕ್ಕೆಂದು ಎತ್ತುವ ಸಾಲದಲ್ಲಿ ಮುಕ್ಕಾಲು ಬಾಗ ಈ ಹಬ್ಬ,ಹರಿದಿನ,ಮದುವೆ,ಮುಂಜಿಗಳಿಗೇ ಖರ್ಚಾಗುತ್ತದೆ.ಕೊನೆಗೆ ಉಳ್ದದ್ದು ನೇಣು ಹಗ್ಗಕೋ,ವಿಷಕ್ಕೋ ಸಾಕಾಗುತ್ತದೆ.ಕೊನೆಗೆ 'ಅವನು (ಹೆಂಡ)ಕುಡಿದು,ಕುಡಿದು ಸತ್ತ ಎಂದು ಗುಲ್ಲೆಬ್ಬಿಸುತ್ತಾರೆ.ನಿಜವಾಗಲು ನಮ್ಮ ಸಂಪ್ರದಾಯಗಳ ಪಾಲನೆಯಿಂದ ಆಗುವ ಖರ್ಚಿಗಿಂತಾ ಹೆಂಡದ ಖರ್ಚು ತುಂಬಾ ಕಡಿಮೆ!. ಇದು ಕೊಯ್ಲು ಮುಗಿದು ದುಡಿಯುವ ಜನಕ್ಕೆ ಒಂದಿಷ್ಟು ವಿರಾಮ ಸಿಗುವ ಕಾಲ. ಈ ಸಮಯದಲ್ಲಿ ಅವರ ಬಳಿ ಒಂದಿಷ್ಟು ದುಡ್ಡು ಓಡಾಡುತ್ತದೆ, ಸಾಮಾನ್ಯವಾಗಿ ಬಡವನ ಕೈಲಿ ದುಡ್ಡು ಕಂಡರೆ ಅವನಿಗೆ "ಚರ್ಬಿ"ಬಂದಿದೆ ಎಂದು ಉಳ್ಳವರು ಮಾತಾಡಿಕೊಳ್ಳುತ್ತಾರೆ. ಇದನ್ನು ಸಹಿಸಿ ಕೊಳ್ಳಲು ಅವರಿಂದ ಹೇಗೆ ತಾನೇ ಸಾಧ್ಯ. ಅವರ ಚರ್ಬಿ ಅಥವಾ ಕೊಬ್ಬು ಇಳಿಸಲು ಏನಾದರೂ ಮಾಡಬೇಕಲ್ಲ.ಅದಕ್ಕೆ ಒಂದು ಪ್ಲಾನ್ ಮಾಡಿದರು. ಋತುಮಾನ ಬದಲಾಯಿತೆಂದೂ, ಸೂರ್ಯ ಆಕಾಶದಲ್ಲಿ ದಿಕ್ಕು ಬದಾಲಾಯಿಸಿದ್ದನ್ನೇ ನೆಪ ಮಾಡಿಕೊಂಡು ಒಂದು ಕಥೆ ಕಟ್ಟಿದರು. ರೈತನ ಕೊಬ್ಬು ಇಳಿಸಲು ಇಷ್ಟು ಸಾಕಿತ್ತು. ಆತ ಕೈನಲ್ಲಿದ್ದುದ್ದನ್ನೆಲ್ಲಾ ಹಬ್ಬ,ಹರಿದಿನ ಗಳಿಗೆ ಖರ್ಚುಮಾಡಿ ಮರುದಿನ ಜಮೀನುದಾರನ ಜೀತಕ್ಕೆ ಸೇರಿಕೊಂಡ. ಇದು ನಮ್ಮ ಸನಾತನ ಹಿರಿಯರ ಬುದ್ದಿವಂತಿಕೆ.Bastards ..... ಇನ್ನು ಎಳ್ಳು ಬೆಲ್ಲ ಬೀರುವುದನ್ನು ಒಂದು ಸೌಹಾರ್ದತೆ ಹೆಚ್ಚಿಸುವ ಪ್ರಕ್ರಿಯೆ ಎಂದು ಕೆಲವರು ಹಾಡಿ ಹೊಗಳುತ್ತಾರೆ. ಸೌಹಾರ್ಧ,ಸಂಪರ್ಕ ,ಸಂಭಂದ ...ಯಾವ ಸುಡುಗಾಡೂ ಇಲ್ಲ. ಹಬ್ಬಗಳಲ್ಲಿ ಎಳ್ಳು,ಬೇವು ಇತ್ಯಾದಿಗಳನ್ನು  ಬೀರುವ ನೆಪದಲ್ಲಿ ಅಕ್ಕ ಪಕ್ಕದವರ ಮನೆಗೆ ನುಗ್ಗಿ ಅವರಮನೆಯಲ್ಲಿ ಏನೇನು ಸಾಮಾನು ಇದೆ ಎಂದು ನೋಡಲೂ, ತಮ್ಮ ಬಲಿ ಇರುವ ವಸ್ತುಗಳೊಂದಿಗೆ ಕಂಪೇರ್ ಮಾಡಲು, ತಮ್ಮ ಹೊಸ ಬಟ್ಟೆ,ಆಭರಣಗಳನ್ನೂ  ಅಕ್ಕಪಕ್ಕದವರಿಗೆ ಪ್ರದರ್ಶಿಸಿ ಎಲ್ಲರ ಹೊಟ್ಟೆಉರಿಸಲು ಹೆಂಗಸರಿಗೆ ಈ ಹಬ್ಬಗಳು ಸುವರ್ಣಾವಕಾಶ ಒದಗಿಸುತ್ತವೆ.  ಅಕ್ಕ-ಪಕ್ಕದ ಜನರ ಖಾಸಗಿ ಜೀವನದಲ್ಲಿ ತಲೆತೂರಿಸಲು ಇದು ಒಳ್ಳೆಯ ನೆಪ ಒದಗಿಸುತ್ತದೆ. ಜೊತೆಗೆ ಎಳ್ಳು ಕೊಟ್ಟರೆ "ಋಣ",ಆದುದರಿಂದ ಅವನ್ನು ವಾಪಾಸು ಕೊಡಬೇಕು ಎಂಬ ಪ್ರತೀತಿ ಹಬ್ಬಿಸಲಾಗಿದೆ. ನಾವು ತಟಸ್ಥರಾಗಿದ್ದುಕೊಂಡು'ಎಳ್ಳು ತಂದ್ಯ,ಥ್ಯಾಂಕ್ಸ್ ,ಅಲ್ಲಿಟ್ಟು ಹೋಗು' ಅನ್ನಂಗಿಲ್ಲ. ಮತ್ತೆ ನಾವು ಎಳ್ಳು ಹಿಡಕೊಂಡು ಈ ಬೋಳಿಮಕ್ಕಳನ್ನು ಹುಡುಕಿಕೊಂಡು ಹೋಗಬೇಕು! ಇದು ತಟಸ್ಥರಾಗಿರುವವರನ್ನು ಈ ಮೂಡ ಆಚರಣೆಗಳ ಸುಳಿಯಲ್ಲಿ ಸಿಕ್ಕಿಸುವ ಹುನ್ನಾರ!.


ಸಂಕ್ರಾಂತಿಗೆ ದಿಕ್ಕಾರ

1 comment:

ಮಹೇಶ ಭಟ್ಟ said...

ಕಟು ವಾಸ್ತವಿಕತೆ. ನಿಮ್ಮ ವಿಚಾರ ತರ್ಕಬದ್ಧವಾಗಿದೆ. ಇಂದಿನ ಬಹುರಾಷ್ಷ್ಱೀಯ ಕಂಪನಿಗಳೂ ಸಹ ದಿನಾಚರಣೆಗಳ ಮೂಲಕ ಜನರನ್ನು ಸಾಲಗಾರರನ್ನಾಗಿ ಮಾಡಲು ಪ್ರಯತ್ನಿಸುತ್ತಿವೆಯಷ್ಟೇ. ಇದೇ ಜಗತ್ತಿನ ವಾಸ್ತವಿಕತೆ. ಒಂದಲ್ಲ ಒಂದು ರೂಪದಲ್ಲಿ ಇವು ಯಾವಾಗಲೂ ಇರುತ್ತವೆ.