Tuesday, September 7, 2010

ಕೊಟ್ಟ ಕುದುರೆಯ ಏರಲು ಅರಿಯ...

ಕೊಟ್ಟ ಕುದುರೆಯ ಏರಲು ಅರಿಯ... ಧೀರನೂ ಅಲ್ಲ ಶೂರನೂ ಅಲ್ಲ...  ಅಲ್ಲಮ ಪ್ರಭು ವಚನವನ್ನು ಅವಾಗಾವಾಗ ಖದೀಮ ರಾಜಕಾರಣಿಗಳು, ವ್ಯಾಪಾರಿ ಮನೋವ್ರುತ್ತಿಯವರು ಉದ್ಗರಿಸುತ್ತಾ ಇರುತ್ತಾರೆ. ಕುಂಟ ಕುದುರೆಯನು ನೀಡಿ ಅದನ್ನೇ ಅಡ್ಜಸ್ಟ್ ಮಾಡಿಕೊ ಎನ್ನುವ ಪ್ರವೃತ್ತಿ ನೋಡಿದರೆ ಅಲ್ಲಮ ಅಂಗಡಿ ಇಟ್ಟುಕೊಂಡು ವ್ಯಾಪಾರ ಮಾಡುತಿದ್ದನೇ  ಎಂಬ ಅನುಮಾನ ಮೂಡುತ್ತದೆ. ನೀಡಲು ಮನಸಿಲ್ಲದೇ ಜಾರಿಕೊಳ್ಳುವ ಬುದ್ದಿ ಇರುವ ಜನಕ್ಕೆ ಈ ವಚನ ಕರ್ಣಾಮೃತ.
ಹಾಗೆ ನೋಡಿದರೆ ಅಲ್ಲಮ ಒಳ್ಳೆಯ ವಚನಗಳನ್ನು ಬರೆದಂತೆ ಕಂಡು ಬರುವುದಿಲ್ಲ. ಅವನ ವಚನಕ್ಕೆ ಅರ್ಥವನ್ನು ನಾವೇ ಕಲ್ಪಿಸಿಕೊಳ್ಳಬೇಕಾಗುತ್ತದೆ. ಪ್ರಾಸ ಮೊದಲೇ ಇರುವುದಿಲ್ಲ. ರಾಗ ನಾಸ್ತಿ.ಆದರೂ "ಗುಹೇಶ್ವರ ಲಿಂಗ " ಎನ್ನುವ ಅಂಕಿತ ಒಬ್ಬೊಬ್ಬರಿಗೋ ಒಂದೊಂದು ಕಲ್ಪನೆ ನೀಡುತ್ತದೆ. ಇದು ಹಲವು ಜೋಕ್ ಗಳ  ಹುಟ್ಟಿಗೆಕಾರಣವಾಗಿದೆ.

No comments: