Thursday, September 16, 2010

ಬ್ರಷ್ಟಾಚಾರದ ಆಚರಣೆಗಳು

ಈಗ ಗಣಪತಿ ಹಬ್ಬದ ಸಂಬ್ರಮ. ಬೀದಿ ಬೀದಿಗಳಲ್ಲಿ ಗಣಪತಿ ಕೂರಿಸುವವರದೇ ಭರಾಟೆ.ರಾತ್ರಿ ಬಹಳ ಹೊತ್ತಿನವರೆಗೆ ಗಣಪತಿ ಪೆಂಡಾಲಿನ ಮೈಕ್ ಸೆಟ್ ಗಳು ಪ್ರಾಣಹಿಂಡುತ್ತವೆ.ಪರೀಕ್ಷೆ ಬರೆಯುವ  ಬಹುಷಃ ಇದಕ್ಕೆ ಇರಬೇಕು ತನ್ನ ಧರ್ಮದವರಿಂದ  ಪ್ರವಾದಿಯೆಂದು ಕರೆಸಿಕೊಳ್ಳುವ ಮಹಮ್ಮದ್ ಖಡ್ಡಾಯವಾಗಿ ಮೂರ್ತಿ ಪೂಜೆಯನ್ನು ನಿಷೇದಿಸಿದ್ದು. 
ಹೆಚ್ಚಿನ ಕಡೆ ಸಾಮೂಹಿಕವಾಗಿ ಗಣಪತಿ ಕೂರಿಸುವವರು ಹೆಸರಾಂತ ರೌಡಿಗಳೇ.ರೌಡಿಗಳಿಗೆ ಸಮಾಜ ಸೇವಕ ಎಂಬ ಬಿರುದು ಕೊಡುವುದು ಈ ಗಣಪತಿ ಹಬ್ಬದ ಸಮಾರಂಭಗಳಲ್ಲೇ. ಇದೊಂದು ರೀತಿಯ ಅಕ್ರಮ-ಸಕ್ರಮ ವಹಿವಾಟು. ಇಂತಹ ಸಾಮೂಹಿಕ ಉತ್ಸವಗಳಿಗೆ ಲಕ್ಷಾಂತರ ರುಪಾಯಿಗಳನ್ನು ವ್ಯಯಿಸಲಾಗುತ್ತದೆ. ಒಂದೊಂದು ಆರ್ಕೆಷ್ಟ್ರಾಗಳು ದಿನಕೆ ಐವತ್ತು ಸಾವಿರದವರೆಗೂ ಚಾರ್ಜ್ ಮಾಡುತ್ತವೆ.
ಇದಕ್ಕೆ ಹಣ ಎಲ್ಲಿಂದ ಬರುತ್ತವೆ? ಇತ್ತೀಚಿಗೆ ಗಣಪತಿ ಗ್ಯಾಂಗ್ ಗಳು ಸಾರ್ವಜನಿಕರಿಂದ ರೋಲ್ ಕಾಲ್ ಮಾಡುವುದನ್ನು ಕಡಿಮೆ ಮಾಡಿವೆ.ಹೆಚ್ಚಿನಂಶ ಹಣವನ್ನು ಆ ಪ್ರದೇಶದ ರಾಜಕಾರಣಿಯಿಂದ ಮತ್ತು ಖ್ಯಾತ ವರ್ತಕರಿಂದ ಕೀಳುತ್ತವೆ. ಇವರ್ಯಾರು ಹಣವನ್ನು ಮುದ್ರಿಸುವುದಿಲ್ಲ. ಇಲ್ಲಿ ವಂತಿಗೆ ಕೊಡುವ ಹಣವನ್ನು ಬಡ್ಡಿಸಮೇತ ಗ್ರಾಹಕರಿಂದ ಮತ್ತು ಸಾರ್ವಜನಿಕರಿಂದ ಬೇರೆ ರೀತಿಯಿಂದ ವಸೂಲಿ ಮಾಡುತ್ತಾರೆ. ಒಬ್ಬ ರಾಜಕಾರಣಿ ಬಡವ ಅಥವಾ ನಿಷ್ಟಾವಂತಆದರೂ ಸಹ ಆತ ಒಂದು ಲಕ್ಷ ಕೊಡಬೇಕು ಎಂದು ಈ "ಸಾರ್ವಜನಿಕರು" ಅಪೇಕ್ಷಿಸುತ್ತಾರೆ. ರಾಜಕಾರಣಿಗೆ ಹಣವನ್ನು ದೋಚಲೇ ಬೇಕಾದ ಪರಿಸ್ತಿತಿ ಎದುರಾಗುತ್ತದೆ.ಆಗ  ಆತ ಅಧಿಕಾರಿಗಳಗೆ ಪರ್ಸೆಂಟೇಜ್ ಫಿಕ್ಸ್ ಮಾಡುತ್ತಾನೆ. ತನ್ಮೂಲಕ ಅವರು ನಿಯತ್ತಾಗಿ ಕೆಲಸ ಮಾಡಬೇಕು ಎಂದು ಆದೇಶಿಸುವ ನೈತಿಕತೆಯನ್ನು ಕಳೆದುಕೊಳ್ಳುತ್ತಾನೆ.ಇತ್ತ ವ್ಯಾಪಾರಿ ಸರ್ಕಾರಕ್ಕೆ ತೆರಿಗೆ ವಂಚಿಸುತ್ತಾನೆ. ಈ ಬಗ್ಗೆ ಅವನು ದೇವರಿಗೂ/ಅತ್ಮಸಾಕ್ಷಿಗೂ ಹೆದರುವ ಅಗತ್ಯ ಇರುವುದಿಲ್ಲ. ದೇವರನ್ನು ಸಾಕಲು ತಾನೇ ಆತ ಹಣ ನೀಡಿರುವುದು.ಈ ಎಲ್ಲಾ ಗಲಾಟೆಗಳ ಮಧ್ಯ ಮೂಡನಂಬಿಕೆ ಹಬ್ಬುವ ಶಕ್ತಿಗಳು ತಮ್ಮ ಸ್ವಾರ್ಥಸಾದನೆಗೆ ಇಂತಹ ಉತ್ಸವಗಳನ್ನು ಬಳಸಿಕೊಳ್ಳುತ್ತವೆ.ತನ್ಮೂಲಕ ಆ ಮೌಡ್ಯ ಸಮಾಜದಲ್ಲಿ ಇನ್ನಷ್ಟು ವರ್ಷ ಉಳಿದು ಬೆಳೆಯುವ೦ತಾಗುತ್ತದೆ.ಈ ಹಬ್ಬಗಳ ಭರಾಟೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಾ ಇದೆ. ಮೊಬೈಲು,ಇಂಟರ್ನೆಟ್ ,ಚಲನ ಚಿತ್ರ ,ಟಿ.ವಿ ಮನೋರಂಜನೆಗೆ ಅಷ್ಟೊಂದು ಮಾರ್ಗಗಳಿದ್ದರೂ   ಈ ಗಣಪತಿ ಹಬ್ಬದ ಸಂಧರ್ಭದಲ್ಲಿ ಆರ್ಕೆಷ್ಟ್ರಾ ಕೂಗಿಸುವುದನ್ನು ನಿಲ್ಲಿಸುವುದಿಲ್ಲ.ಪ್ರತಿವರ್ಷವೂ  ಮೂಡನಂಬಿಕೆಗಳು ನಮ್ಮಲ್ಲಿ ಆಳ ಆಳಕ್ಕೆ ಬೇರೂರುತ್ತದೆ. ಈ ಕಾರಣದಿಂದಲೇ ೭೦ ಮತ್ತು ೮೦ರ ದಶಕದಲ್ಲಿ ಆರಂಭವಾದ ಸರಳ ವಿವಾಹದಂತಹ ವೈಚಾರಿಕ ಆಂದೋಲನಗಳು ಇಂದು ಹಳ್ಳ ಹಿಡಿದಿರುವುದು. ಇಂದಿನ ಸಾಮೂಹಿಕ  ವಿವಾಹಗಳಲ್ಲಿ ಖಾವಿ/ಖಾದಿದಾರಿಗಳು ಬಾಗವಹಿಸಿ ಅವನ್ನು ಅವರ "hidden agenda"ಗಳನ್ನು ಪೂರೈಸಿ ಕೊಳ್ಳುವ ಒಂದು ಮಾಧ್ಯಮವನ್ನಗಿಸಿಬಿಟ್ಟಿದ್ದಾರೆ.  ೮೦ ನೇ ದಶಕದಲ್ಲಿ ಇದ್ದಿದ್ದಕ್ಕಿಂತಲೂ ಹೆಚ್ಚಿನ ಸಂಖ್ಯೆಯ ಸ್ವಾಮೀಜಿಗಳು,ಮಠಗಳು ,ಜ್ಯೋತೀಷಿಗಳು ಇಂದು ದಂಧೆಮಾಡುತಿದ್ದಾರೆ.
ನಾವು ನಡೆಸುವ ಉತ್ಸವಗಳು,ಸಾಮೂಹಿಕ ಪೂಜೆಗಳು,ಉರುಸ್ ಗಳು  ಈ ನಾಡಿನ ಬ್ರಷ್ಟಾಚಾರದ ಮೈಲಿಗಲ್ಲಾಗಿವೆ.

No comments: