Saturday, August 22, 2009

ಕಾಲ ಕೆಟ್ಟು ಹೋಯ್ತು !!!..





ಒಬಾಮನ ಹೆಂಡತಿ ತುಂಡು ಚೆಡ್ಡಿ ದರಿಸಿರುವುದು ಕೆಲವರ ಕೆಂಗಣ್ಣಿಗೆ ಗುರಿಯಾಗಿದೆ. ಈ ವಿಷಯವನ್ನು ವಿವರವಾಗಿ ಅರಿಯಬೇಕೆಂದರೆ ಈ ಕೆಳಗಿನ ಲಿಂಕ್ ನೋಡಿ.
http://www.aol.in/news-story/CAPITAL-CULTURE-Michelle-Obamas-shorts-flap/557152
ಅಷ್ಟಕ್ಕೂ ಅಮೇರಿಕಾದಲ್ಲೂ(ಅಂತಹ ಹಳೆಯ ಪ್ರಜಾಪ್ರಬುತ್ವದಲ್ಲೂ) ಈ ರೀತಿಯ ಪೂರ್ವಾಗ್ರಹ ಇರುವುದು ಆಶ್ಚರ್ಯ ಹುಟ್ಟಿಸುತ್ತದೆ. ಆದರೆ ಇಲ್ಲಿನ ಕೆಲವು ಜನರು ಸನಾತನ ಬೊದನೆ ಮಾಡುವ ನೆಪದಲ್ಲಿ ಅಲ್ಲಿ ಬಿಕ್ಷೆ ಎತ್ತಲು ಹೋಗಿ ಅಲ್ಲೇ settle ಆಗಿದ್ದಾರಲ್ಲಾ . ಅವರುಗಳೇ ಅಮೇರಿಕಾದ ಮುಕ್ತ ಸಮಾಜದಲ್ಲಿ ಅಸಹನೆಯ ವಿಷ ಬಿತ್ತುತಿದ್ದರೆ ಎಂದು ನನಗೇಕೋ ಅನುಮಾನ.



ನಮ್ಮ ದೇಶದಲ್ಲಿ ಯಾರಿಗಾದರು ಜ್ಞಾನೋದಯ ಆದರೆ ಅಥವಾ ಮೈಮೇಲೆ ಖಾವಿ ಬಿದ್ದರೆ ಅಸಾಧ್ಯ ತುರಿಕೆ ಸುರುವಾಗುತ್ತದೆ.ಈ ತುರಿಕೆಗೆ ಅಮೆರಿಕ ಒಂದೇ ಪರಿಹಾರ ಎಂದು ಅವರು ತಿಳಿದುಕೊಂಡಂತಿದೆ. ಸರ್ವಸಂಗಪರಿತ್ಯಾಗಿಗಳಾದರು "doctorate' ಸಿಕ್ಕರೆ ಅದನ್ನು ತ್ಯಾಗ ಮಾಡುವುದಿಲ್ಲ. ಅಮೆರಿಕದಲ್ಲಿ ಮಠ ಸ್ತಾಪನೆಯಗದಿದ್ದರೆ ಜ್ಞಾನೋದಯವೇ ವ್ಯರ್ಥ ಎಂಬುದು ಇವರ ಭಾವನೆ.ಇವರುಗಳ ಭಾಷಣ ಕೇಳಲು ಜನ ಕಿಕ್ಕಿರಿದು ಸೇರಿದ್ದರು ಎಂದು ಇಲ್ಲಿ ಅವರ ಶಿಷ್ಯರ ಪ್ರಚಾರ .ಅಲ್ಲಿ ಮಡೊನ್ನ,ಮೈಖೇಲ್ ಜ್ಯಾಕ್ಸನ್ ಕುಣಿತಕ್ಕೆ ಇದಕ್ಕಿಂತ ಸಾವಿರಪಟ್ಟು ಜನಸೇರುತ್ತಾರೆ.ಗೇ ಪೆರೇಡ್ ಗೂ ಇನ್ನೂ ಹೆಚ್ಚು ಜನ ಸೇರುತ್ತಾರೆ. ಅವರೆಲ್ಲ ಹುಚ್ಚರು. ನಮ್ಮ ಭಾಷಣ ಕೆಲಳಲು ಬರುವವರೆಲ್ಲ ಸುಸಂಸ್ಕೃತರು ಎಂದು ಇವರ ಅಭಿಮತ.









ಇಲ್ಲಿಯೂ ಅಂತಹ ಬಹಳಷ್ಟು ಮಂದಿ ಸಕ್ರಿಯರಾಗಿದ್ದಾರೆ. ಜೇಡರ ದಾಸಿಮಯ್ಯ ಹೇಳಿರುವಂತೆ "ಗುಡಿಯ ಒಳಗಣ ಬೆಕ್ಕಿನಂತೆ ". ರಾಮನ ಫೋಟೋದ ಕೆಳಗೆ ಜಪಮಣಿ ಹಿಡಿದು ಕಣ್ಣು ಮುಚ್ಚಿ ಕುಳಿತ ಇವರ ಮನಸ್ಸಿನೊಳಗೆ ರಾಮನಿರುವುದಿಲ್ಲ . ಇವರ ಮನಸ್ಸಿನೊಳಗೆ ಕುಣಿಯುತ್ತಿರುವುದು ಪಬ್ ನಲ್ಲಿ ಕುಡಿದು ಕುಣಿಯು ತ್ತಿರುವ ಅರೆನಗ್ನ ಹುಡುಗಿಯರು, ಸ್ವಯಂವರದ ಮೂಲಕ ವರ ಹುಡುಕುತ್ತಿರುವ ನಟಿ, ವಿದೇಶೀ ಉಡುಗೆಯೊಳಗಿನ ಕಟಿ , lipstick ಬಳಿದುಕೊಂಡ ತುಟಿ. ಆ "ಧ್ಯಾನ " ದಿಂದ ಏಳುವಾಗ ಮಾತ್ರ ಒಮ್ಮೆ ನಿಮ್ಮೆಲ್ಲರಿಗೂ ಕೇಳುವಂತೆ ರಾಮರಾಮ ಎನ್ನುತ್ತಾರೆ. ಈ ವಿಷಯದಲ್ಲಿ ನೀವು ಮುದುಕರೊಂದಿಗೆ ಮತ್ತು shape ಕಳೆದುಕೊಂಡ ಮಹಿಳೆಯರೊಂದಿಗೆ ಮಾತನಾಡಿಸಲೆ ಬಾರದು . ಮುದುಕರಂತೂ ಹೊಡೆಯಕ್ಕೆ ಬರುತ್ತಾರೆ. ರಾಕಿ ಸಾವಂತ್ ,ಸಚ ಕ ಸಂನ ಇತ್ಯಾದಿ ವಿಷಯಗಳು ಕಿವಿಗೆ ಬಿದ್ದರೆ ಸ್ಪ್ರಿಂಗ್ನಂತೆ ನೆಗೆದು ಅವೆಲ್ಲವನ್ನೂ ಕಂಡಿಸುವ ನೆಪದಲ್ಲಿ ಎಲ್ಲವನ್ನು ಮನಸ್ಸಿನಲ್ಲಿ ಮತ್ತೊಮ್ಮೆ ಸವಿಯುತ್ತಾರೆ. "ವಯಸ್ಸಾದವರಿಗೆ ತೆವಲು ಹೆಚ್ಚು " ಎಂಬುದು ಇಲ್ಲೇ ಗೊತ್ತಾಗುತ್ತದೆ.ವೃದ್ಧ ನಾರಿ ಪತಿವ್ರತಾ " ಎಂಬ ಮಾತನ್ನು ನೀವು ಕೇಳೆ ಇರುತ್ತೀರಿ . ಮುದುಕಿಯರಿಗಂತೂ ತಾಳಲಾರದಷ್ಟು ಹೊಟ್ಟೆಕಿಚ್ಚು . ಹುಡುಗಿಯರೇ ಹೀಗಾದರೆ ಹುಡುಗರ ಕಥೆಯೇನಾಗಬೇಕು ಎಂದು ಲೊಚಗುಟ್ಟಿ ಜಪಮಾಲೆ ಹಿಡಿದು ಟಿವಿ ಮುಂದೆ ಕೂರುತ್ತಾರೆ.
ನಾನು ಹಿಂದೆ ಒಂದು ಕಥೆಯನ್ನು ಕೇಳಿದ್ದೆ. ಅದರ ಸಾರಾಂಶ ಹೀಗಿದೆ.-
ಗುರುಶಿಷ್ಯರ ಗುಂಪೊಂದು ದಾರಿಯಲ್ಲಿ ಹೋಗುವಾಗ ನದಿಯೊಂದು ಸಿಗುತ್ತದೆ.ಅಲ್ಲಿ ಯುವತಿ ಯೊಬ್ಬಳು ತನಗೆ ನದಿ ದಾಟಲು ಸಹಾಯ ಮಾಡಬೇಕೆಂದು ಗುರುಗಳನ್ನು ಬೇಡುತ್ತಾಳೆ. ಆಗ ಗುರುಗಳು ಆಕೆಯನ್ನು ಹೊತ್ತುಕೊಂಡು ಬಂದು ನದಿಯ ಈಚೆಕಡೆ ಬಿಡುತ್ತಾರೆ. ನಂತರ ಪ್ರಯಾಣ ಮುಂದುವರಿಸುತ್ತಾರೆ. ದಾರಿಯುದ್ದಕ್ಕೂ ಶಿಷ್ಯರು ಗುರುಗಳ ವರ್ತನೆಯ ಬಗ್ಗೆ ಗುಸುಗುಸು ಮಾತನಾಡುತ್ತಾ ಬರುತ್ತಿರುವುದನ್ನು ಗುರುಗಳು ಗಮನಿಸುತ್ತಾರೆ. ನಂತರ ಅವರು ಶಿಷ್ಯರ ಕಡೆ ತಿರುಗಿ ಹೀಗೆ ಹೇಳುತ್ತಾರೆ."ನಾನೇನೋ ಆಕೆಯನ್ನು ನದಿಯ ಈ ಬದಿಯವರೆಗಷ್ಟೇ ಹೊತ್ತುಕೊಂಡು ಬಂದೆ.ಆದರೆ ನೀವೆಲ್ಲ ಅವಳನ್ನು ಇಲ್ಲಿಯವರೆಗೂ ಹೊತ್ತುಕೊಂಡು ಬಂದಿದ್ದಿರಾ? ,ನಿಮ್ಮದೇನು ಕರ್ಮ ? ,.....,

No comments: