Thursday, August 20, 2009

ಕೋಮುವಾದಿಗಳ ಜಿನ್ನಾಸ್ತುತಿ


ಅಡ್ವಾಣಿಯವರು ಪಾಕಿಸ್ತಾನಕ್ಕೆ ಹೋಗಿದ್ದಾಗ ಮಹಮ್ಮದ್ ಅಲಿ ಜಿನ್ನಾನನ್ನು ಹೊಗಳಿದ್ದಕ್ಕೆ,ಜಸ್ವಂತ್ ಸಿಂಗ್ ಅವರು ತಮ್ಮ ಪುಸ್ತಕದಲ್ಲಿ ಎಂ.ಏ.ಜಿನ್ನಾ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ್ದಕ್ಕೆ B.J.P,ಕಾಂಗೈ,ಪತ್ರಕರ್ತರಾದಿಯಾಗಿ ಎಲ್ಲರು ಆಕ್ರೋಶ ವ್ಯಕ್ತಪಡಿಸಿ ಮೈಪರಚಿಕೊಂಡರು. ಇವರಿಬ್ಬರೂ ಜಿನ್ನಾ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಬಗ್ಗೆ ಯಾವುದೇ ಅಚ್ಚರಿಪಡಬೇಕಾಗಿಲ್ಲ.ಒಬ್ಬ ಕೋಮುವಾದಿ ಇನ್ನೊಬ್ಬ ಕೋಮುವಾದಿಯ ಬಗ್ಗೆ ಪ್ರಶಂಸೆ ಮಾಡುವುದು ಸಹಜ. ಇವರಿಗೆ ಜಿನ್ನಾ ಮಾದರಿ.


ಆರಂಭದಲ್ಲಿ ಜಸ್ವಂತ್ ಸಿಂಹ ಕೂಡ ಸಾಬರನ್ನು ಕನ್ದೆಮ್ ಮಾಡುವ ಉದ್ದೇಶದಿಂದ ಜಿನ್ನಾನನ್ನು ಉಗಿದು ಪುಸ್ತಕ ಬರೆಯಲಿಚ್ಚಿಸಿರಬೇಕು. ಆದರೆ ಬರೆಯುತ್ತಾ,ಬರೆಯುತ್ತಾ ,ತನಗೆ ತಾನೇ ಅರಿವಿಲ್ಲದಂತೆ ಗೌರವ ಉಕ್ಕಲಾರಮ್ಬಿಸಿದೆ. ಎಷ್ಟೋ ವಿಧಾನಗಳನ್ನು ಅವರು ಜಿನ್ನಾ ರಿಂದ ಎರವಲು ಪಡೆದಿರಬಹುದು. ಬರೆಯುತ್ತಾ ,ಬರೆಯುತ್ತಾ ಇವರಿಗೆ ಜಿನ್ನಾಬಗ್ಗೆ ಗೌರವ ಹುಟ್ಟುತ್ತದೆಯೇ ವಿನಃ ತನ್ನನ್ನು ತಾನು ಹಿಂದೂ ಧರ್ಮದ ನಾಯಕ ಎಂದು ತಿಳಿದು ಕೊಂಡಿದ್ದ ಮಹಾತ್ಮ ಗಾಂಧಿಯ ಬಗ್ಗೆ ಅಲ್ಲ!.ಯಾಕೆಂದರೆ ಅವರಲ್ಲಿ ಇವರಿಗೆ ಒಬ್ಬ ಪ್ರತಿಸ್ಪರ್ಧಿಕಾಣುತ್ತಾನೆ!
ಸಮಾನ ಮನಸ್ಕರ ಬಗ್ಗೆ,ಸಮಾನ ಕೆಲಸ ಮಾಡುವವರ ಬಗ್ಗೆ ಗೌರವ ತಾಳುವುದು ಒಳ್ಳೆಯ ಗುಣವೇ.

ಒಬ್ಬ ಯೋಧ ಇನ್ನೊಬ್ಬ ಯೋಧನ ಬಗ್ಗೆ ಗೌರವದಿಂದ ನಡೆದು ಕೊಳ್ಳಬೇಕು ಎನ್ನುತ್ತದೆ ವಿಶ್ವಸಂಸ್ತೆಯ ಚಾರ್ಟರ್. ಪಾಕಿಸ್ತಾನಿ ಸೈನಿಕರೂ ಇದೆ ದೋರಣೆ ಹೊಂದಿದ್ದರೆ ಕ್ಯಾಪ್ಟನ್ ಸೌರವ್ ಕಾಲಿಯನ ಹೆಣ ಅಷ್ಟು ವಿರೂಪಗೊಳಿಸಲ್ಪಡುತ್ತಿರಲಿಲ್ಲ. ತಮಾಷೆಎಂದರೆ ಕಾರ್ಗಿಲ್ ಆಕ್ರಮಣದ ಕರ್ತೃ ಮುಷರಫ್ ದೆಹಲಿಯಲ್ಲಿ ಹಲವುಸಾರಿ ರಾಜ ಮರ್ಯಾದೆ ಸ್ವೀಕರಿಸಿದ, ಅದೂ ಪಾಕಿಸ್ತಾನದ ಬಗ್ಗೆ ಅಪಾರ ಆಕ್ರೋಶ ವ್ಯಕ್ತಪಡಿಸುತಿದ್ದ ಕೇಸರಿ ಸರ್ಕಾರ ಆಳುತಿದ್ದ ಸಮಯದಲ್ಲಿ!.ಇದೂ ಅಷ್ಟೇ, ಕೋಮುವಾದಿ ದೊರಣೆಯೇ.

ಇಷ್ಟಾದರೂ ಬಾರತೀಯ ಮಾಧ್ಯಮಗಳು ಪಾಕಿಸ್ತಾನಿಯರಿಗೆ ಮಣೆಹಾಕುತ್ತಿದೆ. ಬಾಕಿಸ್ತಾನಿ ಕ್ರಿಕೆಟಿಗರು,ಜೋಕರ್ ಗಳು,ಹಾಡುಗಾರರು ಇಲ್ಲಿ ಹೊಗಳಿಕೆಗೆ ಪಾತ್ರರಾಗುತಿದ್ದರೆ.ಅವರೆಲ್ಲರೂ ದುಷ್ಟರು ಎಂದು ನನ್ನ ಅಭಿಪ್ರಾಯವಲ್ಲ.ಆದರೆ ಸುಮ್ಮನೆ ಅವರಿಗೆ ಮಣೆಹಾಕಿ ಪಾಕಿಸ್ತಾನದಿಂದ ಇಲ್ಲಿಗೆ ರಸ್ತೆ ಸೃಷ್ಟಿಸುವುದಕ್ಕಿಂತ ಅವರನ್ನು ಅವರ ದೇಶದಲ್ಲಿ ಅವರ ಪಾಡಿಗೆ ಇರುವುದಕ್ಕೆ ಬಿಟ್ಟು ನಮ್ಮ ದೇಶದ ಗೋಡೆಯನ್ನು ಬಲಪಡಿಸಲು ಪ್ರಯತ್ನಿಸಬಹುದಲ್ಲ.ಆದರೆ ಈ ಪೇಪರ್(Time of India)ನವರ “ಅಮನ್ ಕೆ ಆಶಾ “ ದಂತಹಾ ಮಂಗಾಟಗಳು ಇನ್ನಸ್ಟು ಕಸಬ್ ಗಳಿಗೆ ದಾರಿಮಾಡಿಕೊಡುತ್ತಿವೆ. ಪಕ್ಕದ ಮನೆಯವರ ಮೇಲೆ ಅನುಮಾನ ವಿದ್ದರೆ ಅವರಿಗೆ ನಿಮ್ಮ ಮನೆ ಬೀಗದ ಕೈ ಕೊಡಬಾರದು. ಹಾಗೇ ಕೊಟ್ಟು ಅಯ್ಯೋ ನನ್ನ ಮನೆ ಯಿಂದ ಅದು ಹೋಯಿತು,ಇದು ಹೋಯಿತು ಎಂದರೆ ಅದರಿಂದ ಏನು ಪ್ರಯೋಜನ ?

No comments: