Friday, April 16, 2010

ಸದ್ಗುರುವಿಗೆ ಜೈ ಹೋ (Part-3)

ದಿನಾಂಕ: ೩-೩-೩೦೧೦ ,ಮೀಡಿಯಾಗಳ ಟಿ ಅರ್ ಪಿ ಸಡನ್ ಆಗಿ ಏರಿತು.ಎಲ್ಲರೂ ಟಿ.ವಿ ಚಾನಲ್ ಚೇಂಜ್ ಮಾಡಿ ಮಾಡಿ ಶ್ರೀ ಶ್ರೀ ಶ್ರೀ ಪರಮಹಂಸ ನಿತ್ಯಾನಂದನ ದರ್ಶನ ಮಾಡಲು ಉದ್ಯುಕ್ತರಾದವರೇ.ಟಿ.ವಿ ಯವರೂ ಸಹ ಈ ದೃಶ್ಯವನ್ನೂ ನಿರಂತರವಾಗಿ ಪ್ರಸಾರ ಮಾಡಿ ಶ್ರೀಗಳ ಧರಮಕಾರ್ಯಕ್ಕೆ ತಾವು ಒಂದಿಷ್ಟು ಅಳಿಲು ಸೇವೆ ಸಲ್ಲಿಸಿ ಕೃತಾರ್ಥರಾದರು. ಟಿ.ವಿ ಚಾನೆಲ್ ಗಳಿಗಿದು ಒಂದು ರೀತಿಯ ಜೀವದಾನ. ನೋಡುವವರು ಗತಿಯಿಲ್ಲದೇ,ಬಡವರು ಅವರ ಮನೆಯ ಸಮಸ್ಯೆಗಳನ್ನು ಜಗತ್ತಿನ ಮುಂದೆ ಚರ್ಚಿಸುತ್ತಾ,ಕಿತ್ತಾಡುವಂತೆ ಮಾಡುತ್ತಾ ಅದರಿಂದ ಹಣಗಳಿಸುವ ಸ್ತಿತಿಗೆ ಬಂದಿದ್ದವು ಈ ಟಿ.ವಿ.ಚಾನಲ್ಗಳು.ಇನ್ನುಳಿದಂತೆ ಯಾವುದೇ ಹಳ್ಳಿಗೆ ನುಗ್ಗಿ,ಅಲ್ಲಿನ ಜನರ ದಡ್ಡತನವನ್ನೇ ಒಂದು ನಿಗೂಡ ರಹಸ್ಯವೆಮ್ಬಂತೆ ಬಿಂಬಿಸಿ ಪ್ರೇಕ್ಷಕರನ್ನು ವಂಚಿಸುವುದು, ಜನರನ್ನು ಮಲಗಿಸಿ, ಅವರು ನಿದ್ದೆಯಲ್ಲಿ ಮಾತಾಡಿದ್ದನ್ನು ಅವರ ಪೂರ್ವಜನ್ಮದ ವೃತಾಂತವೆಂದು ನಂಬಿಸುವುದು, ದಿನಬೆಳಗಾದರೆ ಕವಡೆ ಜ್ಯೋತೀಷಿಗಳನ್ನು ಛೂ ಬಿಟ್ಟು ಜನರನ್ನು ಹೆದರಿಸುವುದು, ಬ್ಯೂಟಿ ಸಲಹೆ ಅಂತ ಕಪ್ಪಗಿರುವವರನ್ನು ಬೆಳ್ಳಗೆ ಮಾಡುವ ಪ್ರಯೋಗಗಳನ್ನು ತೋರಿಸುವುದು,ಕೊನೆಗೆ ಒಂದು ಕಣ್ಣಿರಿನ ಚಲನಚಿತ್ರ ಹಾಕಿ ಜನರನ್ನು ಅಳಿಸಲು ಪ್ರಯತ್ನಿಸುವುದು ಇವು ಟಿ ವಿ ಗಳ ದೈನಂದಿನ ಚಟುವಟಿಕೆ.ಹೀಗೆ ಜನರ ಮನಸ್ಸಿನ ಮೇಲೆ ಇವರು ದಿನಾ ಅತ್ಯಾಚಾರ ಮಾಡುತ್ತಲೇ ಇದ್ದರೂ ನೋಡುವವರ ಸಂಖ್ಯೆ ಕ್ಷೀಣಿಸುತ್ತಲೇ ಇತ್ತು. ಆಗ ನಡೆಯಿತು ನೋಡಿ ಶ್ರೀಗಳ ಪವಾಡ. ಶ್ರೀ ನಿತ್ಯಾನಂದ ರೂಮಿನ ಬಾಗಿಲು ಹಾಕಿ ಬಟ್ಟೆ ಬಿಚ್ಚಿದ್ದೆ,ಬಿಚ್ಚಿದ್ದು. ಟಿ ಆರ್.ಪಿ ರೇಟಿಂಗ್ ಊರ್ಧ್ವಮುಖವಾಯಿತು!. ಸ್ವಾಮಿಗಳನ್ನು ತೆಗಳುವ ನೆಪದಲ್ಲಿ ಜನ ಅದನ್ನು ಪದೇ,ಪದೇ ನೋಡಿ ಆನಂದಿಸಿದರು. ಸೊ ಕಾಲ್ಡ್ ಗೃಹಿಣಿಯರು ತಮಗೆ ಕಾಮದ ಬಗ್ಗೆ ಏನೂ ಗೊತ್ತಿಲ್ಲಾ ಎಂಬಂತೆ ನಿತ್ಯಾನಂದನನ್ನು ತೆಗಳಿದ್ದೆ ತೆಗಳಿದ್ದು.ತಾವು ಮಾಡಿದರೆ ಒಪ್ಪು,ಅವನು ಮಾಡಿದರೆ ತಪ್ಪು ಎನ್ನುವ ಅಭಿಪ್ರ್ರಾಯ ಅವರಲ್ಲಿ ಇದ್ದಂತಿತ್ತು. ಇವರ್ಯಾರಿಗೂ ಸಂಬೋಗದ ಅನುಭವ ಇಲ್ಲವೇ?.ಬೇಕಾದರೆ ಸರ್ವೆ ಮಾಡಿ ನೋಡಿ.ಯಾವುದೇ ನಿರ್ಧಿಷ್ಟ ಅವಧಿಯ ಅಂಕಿ-ಸಂಖ್ಯೆ ಕ್ರೋಡಿಕರಿಸೋಣ. ಆ ಅವಧಿಯಲ್ಲಿ ಸ್ವಾಮೀ ಹೆಚ್ಚು ಬಾರಿ ಮಾಡಿರುತ್ತಾನೋ,ಇವರುಗಳು ಹೆಚ್ಚು ಬಾರಿ ಸಂಭೋಗ ಮಾಡಿರುತಾರೋ?.ಈ ಬಗ್ಗೆ ಅವರ್ಯಾರೂ ಮಾತಾದುವುದಿಲ್ಲ.ಯಾಕೆಂದರೆ point ಅದಲ್ಲ. ಒಂದು ಮಾತ್ರ ಮೀಸಲಾದ ಹಕ್ಕನ್ನು ಕಾವಿ ಅಪಹರಿಸಿದ ಬಗ್ಗೆ ಅವರಿಗೆ ಅಪಾರ ವ್ಯಥೆ ಇದ್ದಂತೆ ಕಂಡುಬರುತ್ತಿತ್ತು. ಇವರು ಉಗಿದಿದ್ದು ಖಾವಿಯ ಮೇಲೆ ಬಹಳ ಚೆನ್ನಾಗಿ ಕಾಣುತಿತ್ತು. ಬೇಕಾಗಿತ್ತಾ,ಇವರಿಗೆ ಈ ಪಾಡು. ಅಸಲಿಗೆ ಕರೀಮಣಿ ಎಂಬುದನ್ನು ಕಂಡುಹಿದಿದಿದ್ದೆ ಈ ಮಠಗಳು.(ಇದು ವಿಶ್ವದಾದ್ಯಂತ ಇರುವ ಎಲ್ಲಾ ಧರ್ಮಗಳಿಗೆ ಅನ್ವಯಿಸುತ್ತದೆ).ಯಾವಾಗ ತಮ್ಮಲ್ಲಿರುವ ಜ್ಞಾನಬಂಡಾರ ನಿರುಪಯುಕ್ತ ಎಂದು ಕಂಡುಬಂದಾಗ ಅವರು ಆರಂಬಿಸಿದ ಕೆಲಸ ಎಂದರೆ,ಕಾಡಿನಿಂದ ನಾಡಿಗೆ ಬಂದು ಔಷಧಿ ಕೊಡುವುದು,ಪುಸ್ತಕ ಮಾರುವುದು,ಕರಿಮಣಿ ಹಂಚುವುದು ...,ಇತ್ಯಾದಿ. ಹೀಗೆ ಪರಮಾರ್ಥದಲ್ಲಿ ಅನ್ನ ಕಾಣದೇ ಮಾಮೂಲೀ ಜನರ ಕೆಲಸಕ್ಕೆ ಲಗ್ಗೆ ಇಟ್ಟ ಇವರು ತಮ್ಮ ಬಟ್ಟೆಯಿಂದಾಗಿ ಇತರರಿಂದ ಪ್ರತ್ಯೇಕವಾಗಿ ಕಂಡುಬರುತ್ತಾರೆ. ಪಾರಮಾರ್ಥಿಕ ಗುರಿಗಳಿಂದ ವಿಮುಖರಾಗಲು,ಮೆತ್ತಗೆ ಮುಖ್ಯವಾಹಿನಿಗೆ ಸೇರಿಕೊಳ್ಳಲು ಯಾವ ಯಾವ ಮಾರ್ಗಗಳನ್ನು ಹಿಡಿಯಬಹುದೋ ಅವೆಲ್ಲವನ್ನೂ ಅನ್ವೇಷಣೆ ಮಾಡಿದ್ದಾರೆ. ಇವರ ಎಷ್ಟು ಜನಕ್ಕೆ ದೇವರನ್ನು ತೋರಿಸಿದರು ಎಂಬುದಕ್ಕೆ ಇವರಬಳಿ statistics ಇಲ್ಲ.ಆದರೆ ಎಷ್ಟು ಜನಕ್ಕೆ ಮದುವೆ ಮಾಡಿಸಿದ್ದಾರೆ, ಡಿಗ್ರೀ ಮಾರಿದ್ದಾರೆ ಎಂಬ ಬಗ್ಗೆ satistics ಇದೆ. ಈ ಧರ್ಮಗಳನ್ನ ಮಾರುವ ಏಜೆನ್ಸಿ ಗಳಲ್ಲಿ ಧರ್ಮ ವಿಕ್ರಯವಾಗುತ್ತಿಲ್ಲ.ಅದೇನಿದ್ದರು ಕಾಮ್ಪ್ಲಿಮೆಂಟರಿ complimentary) needabahudaada ಸರಕು ಅಷ್ಟೇ. ಆದುದರಿಂದಲೇ ಅವರು ಸಂಭಂದಗಳನ್ನು ಮಾರುವ ಕೆಲಸವನ್ನು monopoly ಮಾಡಿಕೊಂಡಿದ್ದಾರೆ. ನಮ್ಮ ಏಜೆನ್ಸಿಯಿಂದ ಲೈಸೆನ್ಸ್ ಪಡೆಯದಿದ್ದರೆ ನಿಮ್ಮ ಸಂಭಂದವೇ ಅಸಿಂದು ಎಂದು ಪರೋಕ್ಷ ಕಾನೂನು ಮಾಡಿಕೊಂಡಿದ್ದಾರೆ!.



ನಾವು ಜ್ಞಾನಕ್ಕಾಗಿ ತಪಸ್ಸು ಮಾಡುತ್ತೇವೆ ಎನ್ನುವವರು ಜಗತ್ತಿನ ಸೊಂಟದ ಕೆಳಗಿನ ವಿಚಾರಗಳನ್ನೂ ನಾವೇ ನಿರ್ವಹಿಸುತ್ತೇವೆ,ನಾವು ಸಾಮೂಹಿಕ ಮದುವೆ ಮಾಡಿಸುತ್ತೇವೆ ಎಂದು ನಾಚಿಕೆ ಇಲ್ಲದೆ ಇಂತಹ ಸಮಾರಮ್ಬಗಳಲ್ಲಿ ಬಹಿರಂಗವಾಗಿ ಬಾಗವಹಿಸಿ ಆಶಿರ್ವಚನ ನೀಡುತ್ತಾರೆ. ಹಾಗೇ ಆಶಿರ್ವಚನ ನೀಡಲು ಸಂಸಾರದ ಬಗ್ಗೆ ನಿಮಗೆ ಯಾವ ಅನುಬವವಿದೆ?,ತಾವೇ ಸಂಸಾರ ನಡೆಸದೆ ಇನ್ನೊಬ್ಬನಿಗೆ ಉಪದೇಶ ಮಾಡುವದು ಎಷ್ಟು ಸರಿ ಎಂದು ಯಾರೂ ಕೇಳುವುದಿಲ್ಲ.ಅನುಭವ ಪಡೆಯುವುದು ಜ್ಞಾನನ್ವೇಷಿಯ ಪರಮ ಗುರಿ ಹಾಗು ಹಕ್ಕು.ಆದರೆ ಆ ಅನುಭವ ಪಡೆಯಲು ಹೋದರೆ ಗೂಸಾ ಗ್ಯಾರೆ೦ಟಿ!. ಸಂಸಾರದ ಬಗ್ಗೆ Practical ಜ್ಞಾನ ಇಲ್ಲದೆ ಇರುವುದರಿಂದಾಗಿ ಅವರು ನಮಗೆ ನೀಡುವ ಮಾಹಿತಿ/ಸಲಹೆಗಳು ಸಂಪೂರ್ಣವಾಗಿ ಸರಿಯಾಗಿರುವುದಿಲ್ಲಾ,ಆದುದರಿಂದ ಇಂತಹ ಸಮಾರಂಬದಲ್ಲಿ “ಶ್ರೀ“ ಮಾಡುವ ಭಾಷಣವನ್ನು timepass ಎಂದು ಪರಿಗಣಿಸಬಹುದೇ ವಿನಃ ಗಂಭೀರವಾಗಿ ಪರಿಗಣಿಸಬಾರದು. ಪರೀಕ್ಷೆಗೆ ಹೋಗುವ ಹುಡುಗ ಉತ್ತರ ಗೊತ್ತಿಲ್ಲದ ಪ್ರಶ್ನೆಗೆ ಒಟ್ಟಾರೆ ಯಾವುದೋ ಒಂದು ಕಾಗಕ್ಕ-ಗುಬ್ಬಕ್ಕನ ಕಥೆ ಬರೆಯುವಂತೆ ಈ ಸಂತರ ಅವರವರ ಮೂಗಿನ ನೇರಕ್ಕೆ ಏನೋ ಒಂದು ಹೇಳುತ್ತಾರೆ.ಎಲ್ಲರಿಗೂ ಶಿಕ್ಷಣ ಮುಖ್ಯ ಎನ್ನುತ್ತಾರೆ.ಏಕೆಂದರೆ ಅವರದೇ ಶಿಕ್ಷಣ ಸಂಸ್ತೆಗಳಿರುತ್ತವಲ್ಲಾ!.ಎಲ್ಲರೂ ಗುರು/ಹಿರಿಯರ ಮಾತು ಕೇಳಿ ಎನ್ನುತ್ತಾರೆ.ಏಕೆಂದರೆ ಅವರ tribe survive ಆಗಬೇಕಲ್ಲಾ!. ಮದುವೆಯಾದ ನಂತರ ಒಂದಿಬ್ಬರು ಮಕ್ಕಳು ಆದನಂತರ ಪತಿ ಪತ್ನಿಯರು ಸಂಪೂರ್ಣವಾಗಿ ಬ್ರಹ್ಮಚರ್ಯವನ್ನು ಪಾಲಿಸಬೇಕು,ಪರಸ್ಪರರನ್ನು ಸಹೋದರ –ಸಹೋದರಿಯರಂತೆ ಭಾವಿಸಬೇಕು ಎಂದು ಒಬ್ಬ ಬಹಳ ಹೆಸರು ಮಾಡಿರುವ ಒಬ್ಬ ಗುರುಗಳು ಅಪ್ಪಣೆ ಕೊಡಿಸಿದ್ದಾರೆ!.ಇವರ ಉಪದೇಶಗಳನ್ನು ಪಾಲಿಸುತ್ತಾ ಹೋದರೆ ಕಷ್ಟಪಟ್ಟು ಗಳಿಸಿದ ತುತ್ತೂ ಬಾಯಿಗೆ ಇಲ್ಲದಂತಾಗುತ್ತದೆ ಎಂಬುದು ಜನರ ಸುಪ್ತ ಮನಸ್ಸಿಗೆ ಗೊತ್ತಿದೆ.ಯಾಕೆಂದರೆ ಜನ್ಮ ಜನ್ಮಾತರದಿಂದಲೂ ಜನರು ಧಾರ್ಮಿಕ ಶೋಷಣೆಗೆ ಒಳಗಾಗುತ್ತಲೇ ಇದ್ದಾರೆ.ಆದುದರಿಂದ ಗೂಳಿ ಬಿದ್ದರೆ ಆಳಿಗೊಂದು ಕಲ್ಲು ಎಂದು ಗುರುಗಳನ್ನು ಹಣಿಯುತ್ತಾರೆ .ಒಟ್ಟಾರೆ ಎಲ್ಲಿ ಬೆಂಕಿ ಬಿದ್ದರೂ ಚಳಿ ಕಾಯಿಸಿಕೊಳ್ಳಲು ಜನ ಇದ್ದೆ ಇರುತ್ತಾರೆ.


ತಮ್ಮ ಸ್ವಾರ್ಥಕ್ಕಾಗಿ,ತಾವು ಸೃಷ್ಟಿಸಿದ ಕಳಪೆ ಸರಕುಗಳನ್ನು ಮಾರಲಿಕ್ಕಾಗಿ ಅಧ್ಯಾತ್ಮಿಕ ಜಗತ್ತು ಹಲವು ಪದ್ದತಿಗಳನ್ನು,ಮೂಢನ೦ಬಿಕೆಗಳನ್ನು ಸೃಷ್ಟಿಸಿ ಲಾಗಾಯ್ತಿನಿಂದಲೂ ಚಲಾವಣೆ ಮಾಡುತ್ತಾ ಬಂದಿವೆ. ಇಂದು ಇವರುಗಳೇ ಸಾಕಿದನಾಯಿಗಳು ಇವರನ್ನೇ ಕಚ್ಚಲು ಬಂದಿದೆ ಎಂದಾದರೆ ಅದಕ್ಕೆ ಇವರುಗಳೇ ಹೊಣೆಗಾರರು. ಅಧ್ಯಾತ್ಮಿಕ ಜಗತ್ತಿನ ಗಿಲೀಟಿನ ಬೋಧನೆಗಳ ಹಿಂದಿರುವ ದುರುದ್ದೇಶಗಳು, ಲಾಭಕೋರತನ,ಅಸತ್ಯ ಮುಂತಾದುವುಗಳ ಬಗ್ಗೆ ಜನರಲ್ಲಿ ತಿಳುವಳಿಕೆ ಮೂಡಿಸಬೇಕಾಗಿದೆ.ಧಾರ್ಮಿಕತೆಯ ವಿಷಾನಿಲಾದಿಂದ ಹೊರಬಂದು ಸ್ವಚ್ಚ ಗಾಳಿ ಸೇವಿಸುವ,ತನ್ಮೂಲಕ ಸ್ವತಂತ್ರ ಚಿಂತನೆಗಳನ್ನು ರೂಪಿಸಿಕೊಳ್ಳುವ ನಿಟ್ಟಿನಲ್ಲಿ ಪ್ರಯತ್ನ ಪಡುವುದು ಈ ಕಾಲಕ್ಕೆ ನಮ್ಮಿಂದ ಸಾಧ್ಯವೇ?


No comments: