Thursday, April 15, 2010

ಹುಚ್ಚು!

ಇತ್ತೀಚಿಗೆ ಮಾಜಿ ಉಪ ಮುಖ್ಯಮಂತ್ರಿ ಎಂ.ಪಿ ಪ್ರಕಾಶ್ರವರು ಬರೆದ ಒಂದು ಪುಸ್ತಕ ಲೈಬ್ರೆರಿಯಲ್ಲಿ ಓದಲು ಸಿಕ್ಕಿತು. ಹೀಗೆ ಕಣ್ಣಾಡಿಸಿದೆ.ಅದರಲ್ಲಿ ಅವರು ಕುಮಾರಗಂಧರ್ವ ಎಂಬುವ ಪ್ರಸಿದ್ದ ಹಿಂದೂಸ್ತಾನಿ ಹಾಡುಗಾರರ ಮಗನ ಬಗ್ಗೆ ಒಂದು ಕಿರು ಲೇಖನ ಬರೆದಿದ್ದರು. ಆತ ಬಹಳ talented ಹಾದುಗಾರನೆಂದೂ,ಈಗ ಮತಿಬ್ರಮಣೆಯಾಗಿ ತಿರುಗುತ್ತಾ ಇದ್ದಾನೆಂದೂ ಬರೆದಿದ್ದರು. ಒಬ್ಬ ಬುದ್ದಿಶಾಲಿ ವ್ಯಕ್ತಿ ಅಥವಾ ಪ್ರತಿಭಾನ್ವಿತ ವ್ಯಕ್ತಿ ಯಾಕೆ ಇಂತಹಾ ಮಾನಸಿಕ ಖಾಯಿಲೆಗೆ ತುತ್ತಾಗುತ್ತಾನೆ?ಎಂಬ ಪ್ರಶ್ನೆ ಚಿಂತನಾ ಯೋಗ್ಯ ಎನ್ನಿಸುತ್ತಿದೆ.ಏಕೆಂದರೆ ತಪ್ಪು ಸರಿ ಗಳಬಗ್ಗೆ ವಿವೇಚಿಸುವ, ತನಗೆ ಸರಿ ಎಂಬುದನ್ನು ಆಯ್ಕೆ ಮಾಡುವ ಶಕ್ತಿಯನ್ನ್ನು ಆರೋಗ್ಯವಂತ ಮನಸ್ಸು ಹೊಂದಿರುತ್ತದೆ.ಇದರ ಹೊರತಾಗಿಯೂ ಅವರಿಗೆ ಹುಚ್ಚೇಕೆ ಹಿಡಿಯುತ್ತದೆ?.


ಇದಕ್ಕೆ ಮುನ್ನ ‘ಹುಚ್ಚು’ಎಂಬುದರ ಮಾನದಂಡಗಳೇನು? ಎಂಬುದನ್ನು ನಾವು ಯೋಚಿಸಬೇಕು.


ಹಿಟ್ಲರ್ ನಮ್ಮ ಸಮಾಜದಲ್ಲಿ ಮಿನ್ಚುತಿದ್ದಾಗ ಸುಮ್ಮನಿದ್ದ ಜನ ಅವನ ಸತ್ತ ಮೇಲಷ್ಟೇ ‘ಅವನೊಬ್ಬ ಹುಚ್ಚ್ ಎನ್ನುವಷ್ಟು ದೈರ್ಯ ತೋರಿದರು. ಹುಚ್ಚು ಯಾರಿಗಿಲ್ಲ. ನಮ್ಮ ಮೇಲಿನ ಅಧಿಕಾರಿಗಳಿಗಿಲ್ಲವೇ? ನಮ್ಮ ಮಾಸ್ತರುಗಳು /proffessor ಗಳಿಗಿಲ್ಲವೇ? ಆದರೆ ಅವರುಗಳು ಹುಚ್ಚು ಎಂಬುದರ ಪರಿಭಾಷೆಯಿಂದ ತಮ್ಮನ್ನು ತಾವು ಹೊರತುಪಡಿಸಿಕೊಂಡಿದ್ದಾರಷ್ಟೇ. ಶ್ರೀ ರಾಮಕೃಷ್ಣ ಪರಮಹಂಸರು ಹೇಳುತ್ತಿದ್ದರು”ಈ ಪ್ರಪಂಚದಲ್ಲಿ ಎಲ್ಲರೂ ಹುಚ್ಚರೆ.ಕೆಲವರು ದೇವರ ಬಗ್ಗೆ,ಕೆಲವರು ಹಣದ ಬಗ್ಗೆ,ಕೆಲವರು ಹೆಣ್ಣಿನ ಬಗ್ಗೆ ಹುಚ್ಚರಾಗಿದ್ದರಷ್ಟೇ”.


ಕುಮಾರಗಂಧರ್ವರವರ ಪುತ್ರನ ಬಗ್ಗೆ ಹಿಂದೆ Times of India ಯಲ್ಲಿಯೂ ಓದಿದ ನೆನಪು. http://timesofindia.indiatimes.com/india/Kumar-Gandharvas-son-found-begging/articleshow/4537328.cms
ಹಲವು ಪ್ರತಿಭಾನ್ವಿತರು ಕೂಡ ಹೀಗೆ ಹುಚ್ಚಿನ ಸ್ತಿತಿಯಲ್ಲಿ ಪತ್ತೆಯಾಗುವ ಘಟನೆಗಳು ಪತ್ರಿಕೆಯಲ್ಲಿ ಆಗಾಗ ಬರುತ್ತಲೇ ಇರುತ್ತವೆ.


ಆತ ಅಧ್ಭುತ ಹಾದುಗಾರನಾಗಿದ್ದನಂತೆ. ಆದರೆ ಅವನಿಗೆ ಕುಡಿತದಂತಹ ಕೆಲವು ಹವ್ಯಾಸಗಳಿದ್ದವಂತೆ. ಬೀದಿಗೆ ಬಿದ್ದ ದಿನಗಳಲ್ಲಿ ಅವನಿಗೆ ಒಂದಿಷ್ಟು ಕುಡಿಸಿ ಬಿಟ್ಟರೆ ಸಾಕು. ಜನ ಅಚ್ಚರಿಪಡುವಷ್ಟು ಚೆನ್ನಾಗಿ ಹಾಡುತಿದ್ದನಂತೆ!. ಇತ್ಯಾದಿ..ಇತ್ಯಾದಿ..


ಬಹಳಷ್ಟು ಹಾಡುಗಾರರು/ಕಲಾವಿದರು/ಪ್ರತಿಬಾನ್ವಿತರು ಕುಡಿಯುತ್ತಾರೆ.ಹಲವು ಆಸಕ್ತಿಯನ್ನು ಹೊಂದಿರುತ್ತಾರೆ. ಈ ಹವ್ಯಾಸಗಳೇ ಅವರನ್ನು ಸದಾ ಒಳಗಿಂದ ಉತ್ತೇಜಿಸುತ್ತಾ,ಆತನನ್ನು ಒಳ್ಳೆಯ ಸಾಧನೆ ಮಾಡುವಂತೆ ಪ್ರೇರೆಪಿಸುವುತ್ತವೆಯೇ ಹೊರತು,ಅವರು ಗೋಡೆ ಮೇಲೆ ತೂಗುಹಾಕಿರುವ motivating ಚಿತ್ರಗಳು,ಪೂರವ ಜನಮದ ಪುಣ್ಯ,ಆಶೀರ್ವಾದ ಯಾವುದೂ ಅಲ್ಲ.


ತನ್ನ ಹವ್ಯಾಸಗಳನ್ನು ಮೆಲ್ಲಗೆ ಪೂರೈಸಿಕೊಂಡು,ಸಮಾಜದ ಮಾನದಂಡಗಳನ್ನೂ ಈಡೇರಿಸುವಂತೆ ನಟಿಸುತ್ತಾ balanced ಜೀವನ ಸಾಗಿಸುವವರು ಸಮಾಜದಲ್ಲಿ ಯಶಸ್ವೀ ವ್ಯಕ್ತಿ ಎನಿಸಿಕೊಳ್ಳುತ್ತಾರೆ ಕೆಲವೊಮ್ಮೆ.ಅವರ ಅಭ್ಯಾಸಗಳು ಬಹಿರಂಗವಾಗಿ ಸಮಾಜದ ಮರ್ಯಾದಸ್ತ(?) ಜನ (ಹೊಟ್ಟೆಯುರಿಯಿಂದ) ಚೀರಾಡತೊಡಗಿದಾಗ ,ಒಂದು ಕ್ಷಮಾಪಣೆ ಬಿಸಾಕಿಯೋ,ಸ್ವಲ್ಪ ದಿನ low profile ಇದ್ದೋ ಮತ್ತೆ ಜನರು ಎಲ್ಲವನ್ನೂ ಮರೆತಮೇಲೆ ಮರಳಿ ವೇದಿಕೆಗೆ ಬರುತ್ತಾರೆ.


ಆದರೆ ಹಾಗೆ ಬದುಕಲು ಸಾಧ್ಯವಿಲ್ಲದವರಿಗೆ,idea ಇಲ್ಲದವರರಿಗೆ,ಸಾಮಾಜಿಕ ಕಟ್ಟುಪಾಡುಗಳಿಂದ ಬಂದಿಯಾಗಿರುವವರಿಗೆ ಹುಚ್ಚು ಹಿಡಿಯುತ್ತದೆ. ಅಥವ ಅವರು ಹುಚ್ಚರು ಎಂಬ ಪರಿಭಾಷೆ ಯೊಳಗೆ ಬರುತ್ತಾರೆ.


ಪ್ರತಿಬಾವಂತರಿಗೆ ಹಿಡಿಯುವ ಹುಚ್ಚು ಸಮಾಜದ ರೋಗಗ್ರಸ್ತ ಮನಸ್ತಿತಿಯ ಕೈಗನ್ನಡಿಯಷ್ಟೇ.
ಸಮಾಜದಲ್ಲಿ ಮಾನದಂಡಗಳನ್ನು ನಿಗದಿಪಡಿಸಲು ಪ್ರಯತ್ನಿಸುವ ಹೇಡಿಗಳೇ ನಿಜವಾದ ಹುಚ್ಚರು!.


ನಾನು ಗಮನಿಸಿದ ಇನ್ನೂ ಒಂದು ಅಂಶ ಇದೆ. ಯಾವುದೇ ಒರಿಜಿನಲ್ ಪ್ರತಿಭೆಇರುವವನನ್ನು observe ಮಾಡಿ.ಅವನ ವ್ಯಕ್ತಿತ್ವದಲ್ಲಿ ಒಂದಿಷ್ಟು ಹುಚ್ಚು ಇದ್ದೆ ಇರುತ್ತದೆ. ಅದೇ ಹಿಂದಿನದನ್ನು ಬಾಯಿಪಾಟ ಮಾಡಿ ಪಾಠ ಮಾಡುವವರಲ್ಲಿ, ನನ್ನಂತರಹದವರಲ್ಲಿ,ಹಿಂದಿನದನ್ನು ಉಳಿಸಬೇಕು ಎಂದು ಚೀರಾಡುವವರಲ್ಲಿ,ಸಮಾಜ ಹೀಗೇ ಇರಬೇಕು ಎಂದು ಬೋದಿಸುತ್ತಾ ಓದಾಡುವವರಲ್ಲಿ ಯಾವುದೇ ರೀತಿಯ original talent ಇರುವುದಿಲ್ಲ. ಅವರಲ್ಲಿ ‘ಔಟ್ ಒಫ್ ಬಾಕ್ಸ್’ಯೋಚನೆಗಳನ್ನು ,ಮಾಡುವ ಶಕ್ತಿ ಇರುವುದಿಲ್ಲ. ಅವ್ರಿಗೆ ಒಂದು ಟ್ರಾಕ್ ಹಾಕಿಕೊಟ್ಟಾಗ ಮಾತ್ರ ತಲೆ ಜೋರಾಗಿ ಓಡುತ್ತದೆ. ಇದೊಂದು ರೀತಿಯ “ಹೌಸ್ ವೈಫ್”ಮೆಂಟಾಲಿಟಿ. ಒಂತರಾ “ಕೂಪ ಮಂಡೂಕ ನ್ಯಾಯ”ದಂತೆ!...




No comments: