Showing posts with label ಗುರುಸ್ತುತಿ. Show all posts
Showing posts with label ಗುರುಸ್ತುತಿ. Show all posts

Saturday, December 18, 2010

ಶಂಗರಾಜಾರ್ಯರ ಮಂದ್ರಶಾಸ್ತ್ರಂ !

 ಬೆಂಗಳೂರಿನಲ್ಲಿ ಅಥವಾ ಮೈಸೂರಿನಲ್ಲಿ ಒಂದು ಸುತ್ತು ಓಡಾಡಿ ನೋಡಿದರೆ ಅಚ್ಚರಿ ಆಗುತ್ತದೆ,ಅಲ್ಲಿ ಬೇರು ಬಿಟ್ಟಿರುವ ಮಲಿಯಾಳಿಗಳನ್ನು ನೋಡಿ. ಮೊದಲು ಬೇಕರಿ ಉದ್ಯಮ ಅಯ್ಯಂಗಾರರ ಹಿಡಿತದಲ್ಲಿತ್ತು. ಈಗ ಎಲ್ಲಿ ನೋಡಿದರೂ ಮಲಿಯಾಳಿಗಳದ್ದೇ ಬೇಕರಿ!. ಮೊದಲು ದಿನಸಿ ಅಂಗಡಿಗಳು ತೆಲುಗರ ಒಡೆತನದಲ್ಲಿತ್ತು. ಈಗ ಮಲಿಯಾಳಿಗಳು ಇವರನ್ನು ಹಿಂದೆಹಾಕಿದ್ದಾರೆ.ಈಗ “ಮತ್ತೋಟ್ ಫೈನಾನ್ಸ್” ಎಂಬ ಕಂಪನಿಎಲ್ಲೆಲ್ಲೂ ರಾರಾಜಿಸುತ್ತಿದೆ. ಅದೂ ಮಲ್ಲುಗಳದ್ದೇ. ಪುನೀತ್ ರಾಜ್ ಕುಮಾರ್ ಪ್ರಚಾರ ಮಾಡುವ ಮಲ್ಲಾಪುರಂ ಗೋಲ್ಡ್, ಅಲುಕಾಸ್ ಗೋಲ್ಡ್ ಇವೂ ಅವರದ್ದೇ.ನಮ್ಮಲ್ಲಿ ಮೀನು ಮಾರುವವರೂ ಮಲಿಯಾಳಿಗಳೇ !, ನಮ್ಮ ಕೆರೆಯ ಮೀನು ನಮಗೆ ಮಾರಿ ಲಾಭಗಳಿಸುವ ಜನರ ಕಲಾತ್ಮಕತೆ ನಿಜಕ್ಕೂ ಅಧ್ಭುತ. ಮೀನಿನಿಂದ ಹಿಡಿದು ಅಧ್ಯಾತ್ಮದ ವರೆಗೆ ಎಲ್ಲವೂ ಮಲಿಯಾಲಿಗಳದ್ದೆ ದರ್ಬಾರು. ಉದಾ: ಶ್ರೀ ಶಂಕರಾಚಾರ್ಯರು. ಇಂದಿಗೂ ಸಹಾ ಅಧ್ಯಾತ್ಮಿಕ ಮಾರುಕಟ್ಟೆಯಲ್ಲಿ ಭರಾಟೆಯಿಂದ ಮಾರಾಟವಾಗುವಂತಹ ಶಂಕರರಿಗೆ ಅವರ ಕಾಲದ ಒಬ್ಬನೇ ಒಬ್ಬ ಲೇಖಕ ಮಾತ್ರ ಒಂದಿಷ್ಟು ಸ್ಪರ್ದೆ ನೀಡುತ್ತಾನೆ !. ಯಾರವನು? ವಾತ್ಸಾಯನ. ಅಂತಹುದು ಮಾರಾಟ ಆಗುವುದು ದೊಡ್ಡ ವಿಷಯ ಅಲ್ಲ ಬಿಡಿ.. ಶಂಕರರ ಸರಕು ಮಾರಟವಾಗುವುದೇ ದೊಡ್ಡ ಪವಾಡ!.

ಅವರು ಮಂತ್ರ ಶಾಸ್ತ್ರದ ಬಗ್ಗೆ ಪುಸ್ತಕ ಬರೆದಿದ್ದಾರಂತೆ. ಮಂತ್ರಗಳು ಒಂತರಾ ವೈಬ್ರೆಶನ್ ಸೃಷ್ಟಿಮಾಡುತ್ತದಂತೆ. ಅದರಿಂದ ವಿವಿಧ ಫಲಗಳು ಸಿಗುತ್ತವಂತೆ. ಒಂದು ವೇಳೆ ತಪ್ಪು ಉಚ್ಚಾರಣೆ ಮಾಡಿದರೆ ಫಲ ಸಿಗೊದಿಲ್ಲವಂತೆ.ಹಾಗಂತ ಬೆಳಗೆ ಟಿ ವಿ ನಲ್ಲಿ ಬರುವ ಬುರುಡೆ ಜ್ಯೋತಿಷಿಗಳು ಹೇಳುತ್ತಾರೆ. ಶಂಕರರೇನೋ ಮಂತ್ರವಿದ್ಯೆ ಪುಸ್ತಕ ಬರೆದರು...

ಆದ್ರೆ ಇಲ್ಲಿ ನನಗೊಂದು ಡೌಟ್ ಇದೆ.

ನಮ್ಮ ಮಂತ್ರೋಚ್ಚಾರಣೆ ಯಶಸ್ವಿಯಾಗಬೇಕೆಂದರೆ ನಾವು ಅವರು ಬರೆದಿದ್ದನ್ನು ಫಾಲ್ಲೋ ಮಾಡಬೇಕೋ? ಅಥವಾ ಅವರು ಹೇಳಿದ್ದನ್ನು ಫಾಲ್ಲೋ ಮಾಡಬೇಕೋ ? ,

ನಾನು ಯಾಕೆ ಹೀಗೆ ಕೇಳ್ತಾ ಇದ್ದೀನಿ ಅಂದ್ರೆ ಶಂಕಾರಾಚಾರ್ಯ ಮಲೆಯಾಳಿ ನೋಡಿ. ಅವರು ಮಂತ್ರಗಳನ್ನು ಹೀಗೆ ಉಚ್ಚರಿಸುತಿದ್ದಿರಬಹುದು?....ಹಾ...ಹಾ...ಹಾ... ಸೊ ನಿಮ್ಮ ಸಾಧನೆಗೆ ತಕ್ಕ ಫಲ ಸಿಕ್ಕಿಲ್ಲಾ ಅಂದ್ರೆ ಅವರ ಕೃತಿಗಳನ್ನ ಮಲೆಯಾಳಿ ಆಕ್ಸೆಂಟ್ ನಲ್ಲಿ ಓದಿ ನೋಡಿ... ವೈಬ್ರೆಶನ್ ಕರೆಕ್ಟ್ ಆಗಿ ಬರಬಹುದು !.

ಮಲೆಯಾಳಿಗಳ ಬಾಯಲ್ಲಿ ಅದು ಮಂತ್ರ ಶಾಸ್ತ್ರ ಅಲ್ಲ . ಅದು ಮಂದ್ರಶಾಸ್ತ್ರಂ!....ಗೊತ್ತಾಯ್ತಾ?

Monday, December 13, 2010

ಶ್ರೀ ಅರೋಬಿಂದೋ ಎಂಬ ಅದ್ಯಾತ್ಮಿಕ ದುರಂತ

a ಅರವಿಂದ ಘೋಷ್ ಭಾರತದ ಇತಿಹಾಸದಲ್ಲಿ ಬಹಳ ದೊಡ್ಡ ಹೆಸರು.ಶ್ರೀ ಅರವಿಂದರು ಕೃಷ್ಣಧನ ಘೋಷ್ ಮತ್ತು ಸ್ವರ್ಣಲತಾ ದೇವಿಯರಿಗೆ ತೃತೀಯ ಪುತ್ರನಾಗಿ ಕಲ್ಕತ್ತಾದಲ್ಲಿ ಜನಿಸಿದರು. ಆಂಗ್ಲೇಯರಿಂದ ಪ್ರಭಾವಿತರಾದ ಅವರ ತಂದೆಯು ಅವರಿಗೆ "ಒರೊಬಿಂದೋ ಅಕ್ರಾಯ್ಡ್ ಘೋಷ್" ಎಂಬ ಜನ್ಮನಾಮವನ್ನು ಕೊಟ್ಟರು. ಚಿಕ್ಕವಯಸ್ಸಿನಲ್ಲಿಯೇ ವಿದ್ಯಾಬ್ಯಾಸಕ್ಕಾಗಿ ಅವರನ್ನು ಇಂಗ್ಲೆಂಡಿಗೆ ಕಳುಹಿಸಿದರು . ಇಂಗ್ಲೆಂಡಿನಲ್ಲಿಯೇ ೧೩ ವರ್ಷ ಕಳೆದ ಅರವಿಂದರು, ಪಾಶ್ಚಾತ್ಯ ಸಂಸ್ಕೃತಿ, ಚರಿತ್ರೆ, ಸಾಹಿತ್ಯಗಳನ್ನು ಅಭ್ಯಸಿಸಿ ಪಾಂಡಿತ್ಯವನ್ನು ಪಡೆದು ಕೊಂಡರು. ಹಾಗೆಯೇ, ಅನೇಕ ಯೂರೋಪೀಯ ಭಾಷೆಗಳಲ್ಲಿಯೂ ಪ್ರವೀಣರಾದರು: ಇಂಗ್ಲಿಷ್, ಫ್ರೆಂಚ್, ಲ್ಯಾಟಿನ್, ಗ್ರೀಕ್, ಇಟಾಲಿಯನ್, ಜರ್ಮನ್ ಅವರಿಗೆ ತಿಳಿದಿದ್ದ ಕೆಲವು ಭಾಷೆಗಳು. ಅವರು ಐ.ಸಿ.ಎಸ್ ಪರೀಕ್ಷೆಯಲ್ಲಿ ಉತ್ತೀರ್ಣರಾದರೂ, ಕುದುರೆ ಸವಾರಿಯನ್ನು ತೆಗೆದು ಕೊಳ್ಳದೆ ತಮ್ಮನ್ನು ಅನರ್ಹಗೊಳಿಸಿಕೊಂಡರು. ೧೮೯೩ರಲ್ಲಿ ಅವರು ಭಾರತಕ್ಕೆ ವಾಪಸು ಬಂದು ಬರೋಡದ ಮಹಾರಾಜರ ಆಸ್ಥಾನದಲ್ಲಿ ಕೆಲಸವನ್ನು ಪಡೆದು ಕೊಂಡರು. ಬರೋಡದಲ್ಲಿದ್ದ ಅವಧಿಯಲ್ಲಿ ಅವರು ಭಾರತದ ಸಂಸ್ಕೃತಿ, ಚರಿತ್ರೆ, ಮತ್ತು ಸಾಹಿತ್ಯಗಳನ್ನು ಅಧ್ಯಯನ ಮಾಡಿದರು ಮತ್ತು ಭಾರತೀಯ ಭಾಷೆಗಳಲ್ಲಿಯೂ (ಬಂಗಾಳಿ, ಸಂಸ್ಕೃತ, ಹಿಂದಿ, ಮರಾಠಿ, ಗುಜರಾತಿ, ತಮಿಳು) ಪ್ರಭುತ್ವವನ್ನು ಸಂಪಾದಿಸಿದರು. ಈ ಸಮಯದಲ್ಲಿಯೇ ಅವರು ಕ್ರಾಂತಿಕಾರಿ ಚಟುವಟಿಕೆಗಳನ್ನು ಪ್ರಾರಂಭಿಸಿ ೧೯೦೬ರಲ್ಲಿ (ಬಂಗಾಳದ ವಿಭಜನೆಯ ನಂತರ) ರಾಜಕೀಯದಲ್ಲಿ ಸಕ್ರಿಯ ಪಾತ್ರವಹಿಸಲು ಬರೋಡದಲ್ಲಿನ ತಮ್ಮ ಪದಕ್ಕೆ ರಾಜೀನಾಮೆಯಿತ್ತು ಕಲಕತ್ತೆಗೆ ಬಂದು ನೆಲೆಸಿದರು. ಅಲ್ಲಿ ಅವರು ಸಕ್ರಿಯವಾಗಿ ರಾಜಕೀಯದಲ್ಲಿ ಕಾಲಿಟ್ಟು ಬಂದೇ ಮಾತರಂ ಎಂಬ ಪತ್ರಿಕೆಯ ಸಂಪಾದಕತ್ವವನ್ನು ವಹಿಸಿಕೊಂಡರು. ಈ ನಡುವೆಯೇ, ೧೯೦೬ರಲ್ಲಿ, ಯೋಗವೂ ಕೂಡ ಭಾರತದ ಸ್ವಾತಂತ್ರ್ಯ ಸಾಧನೆಗೆ ಶಕ್ತಿಶಾಲಿ ಸಹಾಯಕವಾಗ ಬಹುದೆಂದು ಚಿಂತಿಸಿ ವಿಷ್ಣು ಭಾಸ್ಕರ ಲೇಲೆ ಎಂಬ ಯೋಗಿಯನ್ನು ಸಂಧಿಸಿದರು: ಈ ಯೋಗಿಯು ತಿಳಿಸಿಕೊಟ್ಟ ಕೆಲವು ವಿಧಾನಗಳನ್ನು ಅನುಸರಿಸಿ ನಿರ್ಗುಣ ಬ್ರಹ್ಮದ ಸಾಕ್ಷಾತ್ಕಾರವನ್ನು ಪಡೆದುಕೊಂಡರೆಂದು ಶ್ರೀ ಅರವಿಂದರು ಹೇಳಿದರು. ಅದೇ ವರ್ಷ, ಅವರು ಅಲೀಪುರದ ವಿಸ್ಫೋಟದ ಪ್ರಕರಣದಲ್ಲಿ ಬಂಧಿತರಾಗಿ, ಒಂದು ವರ್ಷದ ನಡೆದ ವಿಚಾರಣೆಯ ಕಾಲವನ್ನು ಅಲೀಪುರದ ಸೆರೆಯಲ್ಲಿ ಕಳೆದರು: ಈ ಕಾಲದಲ್ಲಿಯೇ ಅವರು ಸಗುಣ ಬ್ರಹ್ಮದ ಸಾಕ್ಷಾತ್ಕಾರವನ್ನು ಪಡೆದುಕೊಂಡರೆಂದು ಹೇಳಿರುವರು. ೧೯೦೯ರಲ್ಲಿ ಖುಲಾಸೆಯಾಗಿ ಇವರ ಬಿಡುಗಡೆಯಾಯಿತು. ಆನಂತರ, ತಮ್ಮ ಅಂತರಾತ್ಮದ ಆದೇಶವನ್ನು ಅನುಸರಿಸಿ ೧೯೧೦ರಲ್ಲಿ ಪುದುಚೇರಿಗೆ ಬಂದು ನೆಲೆಸಿದರು ಮತ್ತು ತಮ್ಮ ಉಳಿದದಿನಗಳನ್ನು ಅಲ್ಲಿಯೇ ಕಳೆದರು.lಸ್ವಾತಂತ್ರ ಸಂಗ್ರಾಮದಲ್ಲಿ ದೊಡ್ಡ ಹೆಸರು ಮಾಡಿದ್ದ ಇವರು ನಂತರ ಭಾರತದ ಅಧ್ಯಾತ್ಮಿಕ ಭೂಪಟದಲ್ಲಿ ಸಹಾ ಅತ್ಯಂತ ದೊಡ್ಡ ಹೆಸರು ಮಾಡಿದ್ದರು. ಆದರೆ ಅವರು ಆರಂಬಿಸಿದ ಅಧ್ಯಾತ್ಮಿಕ ಕ್ರಾಂತಿ ಬಹಳ ದಿನ ಉಳಿಯಲಿಲ್ಲ.ಪಾಂಡಿಚೆರಿಯಲ್ಲಿ ಅವರು ಹಲವು ಕೃತಿಗಳನ್ನು ರಚಿಸಿದರು .
ಅವರ ಕೆಲವು ಕೃತಿಗಳೆಂದರೆ:
ದಿವ್ಯ ಜೀವನ(Life Divine) : ಶ್ರೀ ಅರವಿಂದರ ಪ್ರಮುಖ ತತ್ತ್ವಶಾಸ್ತ್ರ ಕೃತಿ. ಈ ಗ್ರಂಥವು ವಿಶ್ಲೇಷಿಸುವ ಕೆಲವು ವಿಷಯಗಳನ್ನು ಮುಂದೆ ಕೊಟ್ಟಿದೆ: ವಿಕಸನ, ವಿಶ್ವ ಅಭಿವ್ಯಕ್ತಿಯ ಹಲವು ಸ್ತರಗಳು, ಅತೀತ ಮಾನಸ ವಿಕಸನದ ಸಾಧ್ಯತೆಗಳು, ಸನ್ನಿವೇಶಗಳು, ಸೃಷ್ಟಿ-ಸ್ಥಿತಿ-ಲಯ, ಇತ್ಯಾದಿ
ಯೋಗ ಸಮನ್ವಯ(Integral Yoga) - ತಮ್ಮ ಮತ್ತು ಇತರ ಯೋಗಗಳ ವಿಷಯವಾಗಿ ಬರೆದ ಕೃತಿ. ಇತರ ಯೋಗಗಳು ತಮ್ಮ ಯೋಗಕ್ಕೆ ಹೇಗೆ ಪೂರಕ-ಸಾಧಕಗಳಾಗ ಬಹುದೆಂಬುದರ ಮೇಲೆ ಒತ್ತು ಕೊಟ್ಟಿರುವರು.
ಮಾನವ ಚಕ್ರ (Human Cycle)- ಶ್ರೀ ಅರವಿಂದರ ಸಾಮಾಜಿಕ ಮತ್ತು ರಾಜನೀತಿ ವಿಷಯಕ ವಿಶ್ಲೇಷಣೆಗಳು
ವೇದ ರಹಸ್ಯ, ಅಗ್ನಿ ಸೂತ್ರಗಳು - ಶ್ರೀ ಅರವಿಂದರ ವೇದಾರ್ಥ ನಿರೂಪಣೆಯ ಪ್ರಯತ್ನ. ಇವರು ವೇದಗಳನ್ನು ತಮ್ಮ ಅನುಭವಗಳ ಬೆಳಕಿನಲ್ಲಿ ಈ ಗ್ರಂಥಗಳನ್ನು ಹೇಗೆ ಅರ್ಥೈಸಬಹುದೆಂದು ಚರ್ಚಿಸುವರು. ಅಗ್ನಿ ಸೂತ್ರಗಳು ಎಂಬ ಗ್ರಂಥ ಅವರ ಈ ವಿಧಾನದ ನಿದರ್ಶನಗಳು
ಸಾವಿತ್ರಿ - ಶ್ರೀ ಅರವಿಂದರ ಮಹಾಕಾವ್ಯ.
ಯೋಗ ದಾಖಲೆಗಳು - ಶ್ರೀ ಅರವಿಂದರು ೧೯೦೯ರಿಂದ ೧೯೨೭ರ ವರೆಗೆ ದಾಖಲಿಸಿದ್ದ ತಮ್ಮ ಯೋಗ ಸಾಧನಾ ವಿಷಯಕ ಟಿಪ್ಪಣಿಗಳು
ಯೋಗ ಪತ್ರಗಳು (Letters on Yoga)- ಶ್ರೀ ಅರವಿಂದರು ಬರೆದ ಪತ್ರಗಳನ್ನು ಹಲವು ಸಂಪುಟಗಳಲ್ಲಿ ಬೇರೆ ಬೇರೆ ಶೀರ್ಷಿಕೆಗಳಡೆ ವಿಂಗಡಿಸಲಾಗಿದೆ.
ಅವರು ರಚಿಸಿದ ಸಾಹಿತ್ಯರಾಶಿ ಅಗಾದವಾದರೂ ಅವರು ಶಿಷ್ಯರು ಹೇಳುವಂತೆ ಅದರ ರಚನೆಗೆ ಅವರ ಅತಿಮಾನುಷ ಶಕ್ತಿ ಕಾರಣವಿರಲಾರದು.ಯಾಕೆಂದರೆ ಅವರು ಯೋಗವನ್ನು ಕಲಿಯುವ ಮುಂಚೆಯೇ ಹಲವು ವಿಷಯಗಳ ಬಗ್ಗೆ ಹಲವು ಭಾಷೆಗಳಲ್ಲಿ ಅತ್ಯತ್ತಮ ಲೇಖನ ಬರೆಯುವ ಪಾಂಡಿತ್ಯ ಗಳಿಸಿದ್ದರು.
ಅವರು ಅಧ್ಯಾತ್ಮದ ಬಗ್ಗೆ ಬರೆದ ಪುಸ್ತಕಗಳು ಅಷ್ಟೇನೂ "ಬೆಸ್ಟ್ ಸೆಲ್ಲರ್" ಆಗಲಿಲ್ಲ. ಅವರ "ಇಂಟೆಗ್ರಲ್ ಯೋಗ" ಮಾರ್ಗದಲ್ಲಿ ಅಧ್ಯಾತ್ಮಿಕ ಸಾಧನೆ ಮಾಡುತ್ತಿರುವವರ ಸಂಖ್ಯೆ ಸಹಾ ಬಹಳ ಚಿಕ್ಕದು. ಶ್ರೀ ಆರೋಬಿಂದೋ "ದಿ ಲೈಫ್ ಡಿವೈನ್" ಎಂಬ ಪುಸ್ತಕ ಬರೆದರು. ಡಿವೈನ್ ಲೈಫ್ ಎಂದರೆ ಅದು ಅರವಿಂದ ಘೋಶರಿಗೆ ಸಂಬಂದಿಸಿದ ವಿಷಯ ಎಂದು ಹಲವಾರು ಅಂದುಕೊಂಡಿದ್ದಾರೆ.ವಾಸ್ತವವಾಗಿ "ಡಿವೈನ್ ಲೈಫ್ ಸೊಸೈಟಿ" ಎಂಬುದು ಸ್ವಾಮಿ ಶಿವಾನಂದರಿಗೆ ಸಂಬಂದಿಸಿದ ಸಂಸ್ಥೆ. ಭಾರತದ ಅಧ್ಯಾತ್ಮಿಕ ಜಗತ್ತಿನ ಮೊತ್ತಮೊದಲ ಪ್ರಮುಖ ವ್ಯಕ್ತಿತ್ವಗಳಲ್ಲಿ ಒಬ್ಬರಾಗಿದ್ದ ಸ್ವಾಮೀ ಶಿವಾನಂದರು ಸಹಾ ಶ್ರೀ ಅರವಿಂದರ ಸಮಕಾಲೀನರು. ಆಗ ಇವರ ಆಶ್ರಮ ರಿಷಿಕೇಶದಲ್ಲಿತ್ತು. ಅರವಿಂದರಿಗಿಂತ ಇವರು ಹಿಂದು ಧರ್ಮ ಪ್ರಚಾರದಲ್ಲಿ ಸಕ್ರಿಯರಾಗಿದ್ದರು.ಇವರು ಒಂದುರೀತಿ ಪ್ರಚಾರಪ್ರಿಯ. ಎಲೆಮರೆಯ ಕಾಯಿಯಂತಿದ್ದ ಅರವಿಂದರು ಪಾಂಡಿಚೇರಿಯ ಮನೆಯಲ್ಲಿ ಸಾಧನೆ,ಬರವಣಿಗೆಯಲ್ಲಿ ಮಗ್ನರಾಗಿದ್ದರು. ಹೊರಗಿನ ಜಗತ್ತಿನೊಂದಿಗೆ ಬರಿಯ ಪತ್ರ ವ್ಯವಹಾರ ಮಾತ್ರ. ಅವರ ಅನುಯಾಯಿ "ಮಾತಾಶ್ರಿ"ಯವರ ಸಾವಿನ ನಂತರ ಶ್ರೀ ಆರೋಬಿಂದೋ ರ ಹೆಸರು ಅದ್ಯಾತ್ಮಿಕ ಜಗತ್ತಿನಿಂದ ಕ್ರಮೇಣ ಮಾಯವಾಗತೊಡಗಿತು. ನಾವು ಇಲ್ಲಿ ಯೋಚಿಸಬೇಕಾದದ್ದು ಇಷ್ಟೇ, ಅಷ್ಟೆಲ್ಲಾ ಕೃತಿಗಳನ್ನು ರಚಿಸಿದ,ಅಷ್ಟೆಲ್ಲಾ ಸಾಧನೆಗೈದ ಈ ಮಹಾನ್ ಚೇತನ ಇಂದು ಅಧ್ಯಾತ್ಮಿಕ ಜಗತ್ತಿನಿಂದ ಮಾಯವಾಗಿರುವುದಕ್ಕೆ ಕಾರಣ ಏನು?, ಇಂದು ಅಧ್ಯಾತ್ಮ ಎಂಬುದು ಒಂದು ಬಹುಕೋಟಿ ಉದ್ಯಮ. ಅಕ್ಷರಾಭ್ಯಸವೇ ಇಲ್ಲದವರು, ಕಳ್ಳರು, ಸುಳ್ಳರು,ವಂಚಕರು,ಅತ್ಯಾಚಾರಿಗಳು,ಅಲ್ಪಜ್ಞಾನಿಗಳು ಇಂತವರೆಲ್ಲರೂ ಕೋಟಿಗಟ್ಟಲೆ ಭಕ್ತರನ್ನು ಆಕರ್ಷಿಸುತ್ತಿರುವಾಗ "ಆರೋವಿಲ್ಲೇ" (ಅರವಿಂದರ ಆಶ್ರಮ) ಯಾಕೆ ಲಾಟರಿ ಹೊಡೀತಿದೆ ಎಂಬ ಯಕ್ಷಪ್ರಶ್ನೆ ನನ್ನನ್ನು ಕಾಡಹತ್ತಿತು.ನಾನು ಪಾಂಡಿಚೆರಿಗೆ ಹೋದದ್ದು 1995 ರಲ್ಲಿ. ಆಗ ಆ ಅಶ್ರಮ ಖಾಲಿ ಹೊಡೆಯುತಿತ್ತು. ಈಗ ಸ್ವಲ್ಪ ಜನಜಂಗುಳಿ ಹೆಚ್ಚಾಗಿರಬಹುದು. ಒಟ್ಟಾರೆ ಕಲ್ಕಿ ಭಗವಾನರ,ನಿತ್ಯಾನಂದರ,ಅಥವಾ ಗಣಪತಿ ಸಚ್ಚಿದಾನಂದರ ಆಶ್ರಮದಲ್ಲಿ ಇರುವಷ್ಟು ಜನಜಂಗುಳಿ ಇರಲಾರದು.
ಯಾಕೆ? ಯಾಕೆ? ಯಾಕೆ?.......
ಆಧ್ಯಾತ್ಮ ಎಂಬುದು ಚೀನಾದ ಸರಕುಗಳಿದ್ದಂತೆ. ಇದು ಅಧಿಕೃತ ಮಾರಾಟಗಾರರಿಂತ ರಸ್ತೆ ಬದಿಯ ವ್ಯಾಪಾರಿಗಳ ಕೈಯಲ್ಲಿ ಚೆನ್ನಾಗಿ ಮಾರಾಟ ಆಗುತ್ತದೆ. ಕಳ್ಳರು ಬಣ್ಣಬಣ್ಣದ ಮಾತನ್ನಾಡಿ ಇಂತಹ ಸರಕುಗಳನ್ನು ಗಿರಾಕಿಗಳಿಗೆ ತಾಗಿಸಬಲ್ಲರು.ಇಂತಹಾ ವಸ್ತುಗಳನ್ನು ಕೊಳ್ಳುವವರಿಗೆ ಶೋ ರೂಮ್ ಗಳೆಂದರೆ ಅಪಥ್ಯ. ಇಂತಹ ಮಾಲನ್ನು ತಯಾರಿಸಲು ಶ್ರೀ ಆರೋಬಿಂದರು ಅವರ ಜೀವಿತಾವಧಿಯ ಅಷ್ಟು ಕಾಲವನ್ನು ವ್ಯಯಿಸಿದ್ದು ಎಂತಹ ದುರಂತ! ಅವರು ಬರೆದದ್ದು ಮಣಗಟ್ಟಲೆ!. ಆದರೆ ಅಧ್ಯಾತ್ಮ ಅರಸಿ ಹೊರಟವರಿಗೆ ಅದು ರುಚಿಸಿದಂತೆ ಕಾಣುತ್ತಿಲ್ಲ.ಅವರಿಂದ ಆಮೇಲೆ ಬಂದವರು ಅರೆಬರೆ ಜ್ಞಾನದಲೇ ಮಿಂಚುತಿದ್ದಾರೆ. ಹಿಂದಿನ ಯಾವುದೊ ಒಂದು ಪೋಸ್ಟ್ ನಲ್ಲಿ ಶ್ರೀ ಅರವಿಂದರ ಬಗ್ಗೆ ಒಂದಿಷ್ಟು ಬರೆದಿದ್ದೆ. ಅದಕ್ಕೆ ಈ ಪೋಸ್ಟ್ ಬರೆಯಬೇಕೆನಿಸಿತು. ಇಂದು ಸಮಾಜ ಬೇಡುವುದು ಅದರ ದುರಾಸೆಗಳನ್ನು ಪೂರೈಸಬಲ್ಲ ಹೊಸ ಹೊಸ ಮಾರ್ಗಗಳನ್ನು. ಅಧ್ಯಾತ್ಮವನ್ನು ಸಹಾ ಒಂದು ಮಾರ್ಗ ಎಂದು ಸಮಾಜ ಪರಿಗಣಿಸಿದರೆ ಅದು ಧರ್ಮಗುರುಗಳ ತಪ್ಪಲ್ಲ!.ವಿಶ್ವಶಾಂತಿಯ ನೆಪದಲ್ಲಿ ನಡೆಸಲಾಗುವ ಎಲ್ಲಾ ಪಠಣ, ಹೋಮ ,ಹವನದ ಹಿಂದೆ ಇರುವುದು ವೈಯುಕ್ತಿಕ ದುರಾಸೆಗಳೇ ಹೊರತು ವಿಶ್ವಶಾಂತಿಯಲ್ಲ. ಅರವಿಂದರು ತನ್ನ ಕಾಣ್ಕೆಗಳನ್ನು ಬರೆದಿಟ್ಟದ್ದೆ ದೊಡ್ಡ ತಪ್ಪಾಯಿತು. ಅವರು ಸುಮ್ಮನೆ ತಪಸ್ಸುಮಾಡಿ,ಸತ್ತುಹೋಗಿದ್ದರೆ ಅವರ ಸಮಾದಿಗೆ ಜನರನ್ನು ಆಕರ್ಷಿಸಿ ಕೋಟಿಕೋಟಿ ಗಳಿಸಬಹುದಿತ್ತೇನೋ? ನಾವು ನಮ್ಮನ್ನ ಕೇಳಿಕೊಳ್ಳಬೇಕಾದ ವಿಷಯ ಏನೆಂದರೆ ನಮಗೆ ಅಧ್ಯಾತ್ಮದಂತಹ ವಸ್ತುವಿನ ಅವಶ್ಯಕತೆ ಇದೆಯೇ?,

Friday, November 26, 2010

ಸಣ್ಣ ಗುರುಗಳ ದೊಡ್ಡ ಶಿಷ್ಯರು

ಸಣ್ಣ ಗುರುಗಳ ದೊಡ್ಡ ಶಿಷ್ಯರು

ಕನ್ನಡ ರಾಜ್ಯೋತ್ಸವದ ಹಿನ್ನೆಲೆಯಲ್ಲಿ ನನ್ನಲ್ಲಿರುವ ಕೆಲವು ಆಯ್ದ ಲೇಖನಗಳನ್ನು ನನ್ನ ಬ್ಲಾಗ್ನಲ್ಲಿ ಹಾಕುವ ಪ್ರಯತ್ನ ಮಾಡುತಿದ್ದೇನೆ.


ಇದು ನಾನು ರಾಜ್ಯೋತ್ಸವವನ್ನು ಆಚರಿಸಿಕೊಳ್ಳುತ್ತಿರುವ ವಿಧಾನ.

ಈ ಲೇಖನವನ್ನು 'ಬಿ.ವಿ .ವೀರಭದ್ರಪ್ಪ ನವರ  'ವೇದಾಂತ ರೆಜಿಮೆಂಟ್ " ನಿಂದ ಆಯ್ದು ಕೊಳ್ಳಲಾಗಿದೆ.

Thursday, November 18, 2010

ಆಯ್ದ ಕನ್ನಡ ಕವನಗಳು -ಭಾಗ-1

ಕನ್ನಡ ರಾಜ್ಯೋತ್ಸವದ ಹಿನ್ನೆಲೆಯಲ್ಲಿ ನನ್ನಲ್ಲಿರುವ ಕೆಲವು ಆಯ್ದ ಕವನಗಳನ್ನು ನನ್ನ ಬ್ಲಾಗ್ನಲ್ಲಿ ಹಾಕುವ ಪ್ರಯತ್ನ ಮಾಡುತಿದ್ದೇನೆ.
ಇದು ನಾನು ರಾಜ್ಯೋತ್ಸವವನ್ನು ಆಚರಿಸಿಕೊಳ್ಳುತ್ತಿರುವ ವಿಧಾನ.
ಇದು ಶ್ರೀ ಶಂಕರ ಮೊಕಾಶಿ ಪುಣೇಕರ ಅವರ ಪದ್ಯ. ಇದು 1970 ರಲ್ಲಿ ಪ್ರಕಟವಾದ ಮಾಯಿಯ ಮೂರು ಮುಖಗಳು ಕವನ ಸಂಕಲನದಿಂದ ಆಯ್ದು ಕೊಳ್ಳಲಾಗಿದೆ.

Monday, July 19, 2010

ಗುರುಗೀತ (Revised)

ಗುರು ಬ್ರಹ್ಮ ಗುರು ವಿಷ್ಣು ಗುರು ದೇವೋ ಮಹೇಶ್ವರಃ
ಗುರು ಸಾಕ್ಷಾತ್ ಪರಬ್ರಹ್ಮ ತಸ್ಮೈ ಶ್ರೀ ಗುರುವೇ ನಮಃ:
ಗುರು ಸಾಕ್ಷಾತ್ ಪರಬ್ರಹ್ಮ ತಸ್ಮೈ ಶ್ರೀ ಗುರುವೇ ನಮಃ:


ಗುರುವಿನ ಚರಣಾರವಿಂದಕ್ಕೆ ಎರಗುತ್ತಾ ಈ ಲೇಖನ ಬರೆಯಲು ಆರಂಬಿಸುತ್ತೇನೆ!!! ಯಾಕೆಂದರೆ ಗುರುವೇ ಎಲ್ಲವೂ ಆಗಿದ್ದಾನೆ!, ನಾವೆಲ್ಲರೂ ಅವನ ಗುಲಾಮ ರಾಗಬೇಕು .

ಗುಲಾಮರಾಗಬೇಕು!.

ಗುಲಾಮರಾಗಬೇಕು?

ಗುಲಾಮರಾಗಲೇ ಬೇಕೇ?

ಹೌದು ಬೇರೆ ದಾರಿಯೇ ಇಲ್ಲ. ಗುರು ಇಲ್ಲದೆ ಮುಕುತಿ ಇಲ್ಲ!

ಗುರು ಇಲ್ಲದೆ ಮುಕ್ತಿ ಇಲ್ಲವೇ ಇಲ್ಲ....ಉ..ಹೂಂ

ಹಾಗಾದರೆ ಗುಲಾಮಗಿರಿಗೂ ಗುರುತ್ವಕ್ಕೂ ಅವಿನಾಭಾವ ಸಂಬಂಧವಿದೆಯೇ?.

ನಮ್ಮ ಸಮಾಜದಲ್ಲಿ ಈ "ಗುರು" ಎಂಬ ಪಾತ್ರ ದರೆಗಿಳಿದು ನಮ್ಮ ಭೂಮಿಯನ್ನು ಪಾವನಗೊಳಿಸಿ ಎರಡು ಸಾವಿರ ವರ್ಷಗಳು ಸಂದರೂ,

ನಮ್ಮ ಚರ್ಮವನ್ನೇ ಸುಲಿದು ಚಪ್ಪಲಿ ಮಾಡಿಕೊಂಡರೂ,

ನಮ್ಮ ಮೇಲೆ ತಾಂಡವ ನೃತ್ಯ ಮಾಡಿದರೂ,

ನಮ್ಮ ಶ್ರಮದಿಂದಲೇ ಅವರ ದೇವಾಲಯಗಳನ್ನು, ಗುರುಕುಲಗಳನ್ನು,ಮದಾರಸಗಳನ್ನು,ಚೈತ್ಯಗಳನ್ನು,ಇಗರ್ಜಿಗಳನ್ನು,ಶಾಲೆಗಳನ್ನು ಕಟ್ಟಿದರೂ,

ವಿದ್ಯೆ ಹೇಳಿಕೊಡುವ ನೆಪದಲ್ಲಿ ಶಿಶುಗಳನ್ನು ಅವುಗಳ ತಾಯ್ತಂದೆಯರಿಂದ ಬೇರ್ಪಡಿಸಿ ಆಶ್ರಮದಲ್ಲಿ/ಗುರುಕುಲದಲ್ಲಿ ದನ ಕಾಯಲು ನೇಮಿಸಿದರೂ......

ನಮಗೆ "ಮುಕ್ತಿ" ಸಿಗಲೊಲ್ಲದು.

ಅಂದರೆ ಎಲ್ಲೋ ತಪ್ಪಾಗಿದೆ ಎಂದು ಅನ್ನಿಸುವುದಿಲ್ಲವೇ?.

ಸದ್ಯದ ಪರಿಸ್ತಿತಿಯಲ್ಲಿ ನಮಗೆ ಮುಕ್ತಿ ಬೇಕು ಎಂಬುದು ಪ್ರಶ್ನಾತೀತ.

ಅಂದರೆ ಈ " ಮುಕ್ತಿ"ಯನ್ನು ಹೇಗೆ ಗಳಿಸಬಹುದು.

ತಜ್ಞರು ಹೇಳುವಂತೆ ಗುರುವಿನ ಗುಲಾಮನಾಗುವ ಮೂಲಕ?

ಅಲ್ಲವೇ?,

ಹಾಗಾದರೆ ಎಲ್ಲಕ್ಕಿಂತಲೂ ಮೊದಲು ನಮಗೆ ಬೇಕಾಗಿರುವುದು ಈ "ಗುರು"ವಿನಿಂದಲೇ ಮುಕ್ತಿ !.

ಈ ಕೂಡಲೇ ನಾವು ನಮ್ಮ ಬೆನ್ನ ಮೇಲೆ ಹೊತ್ತು ಬಂದಿರುವ ಗುರುವೆಂಬ ಮೂಟೆಯನ್ನು ಕೆಳಗೆಸಿಯಬೇಕು.

ಸತ್ಯಾಕಾಮ ಒಂದೆಡೆ ಹೇಳಿದ್ದಾರೆ "ಗುರು ಹೆಗಲ ಮೇಲಿನ ಹೆಣ,ಅದನ್ನು ಇಳಿಸಿ ಮುಂದೆ ಸಾಗು".

ಅವರೂ ಸಹ ಕೆಲವರಿಗೆ ಗುರು ಅನ್ನಿಸಿಕೊಂಡವರೇ, ನನ್ನನ್ನು ಗುರು ಎಂದು ಮೆರೆಸಿ ಎಂದು ಅವರೇನೂ ಹೇಳಲಿಲ್ಲ. ಆದರೆ ಗುರು ಎಂಬ "ಊರುಗೋಲು" ಇಲ್ಲದೆ ನಡೆಯುವಷ್ಟು ದೈರ್ಯ ನಮ್ಮಲ್ಲಿ ಉಳಿದಿರಲಿಲ್ಲ. ದುರ್ಗಮವಾದ ಸಂಸಾರಸಾಗರವನ್ನು ದಾಟುವ ದಾರಿತೋರಿಸಲು ನಮಗೆ ಯಾರಾದರೂ ಬೇಕು ಎಂಬ ನಂಬಿಕೆಯನ್ನು ನಮ್ಮಲ್ಲಿ ಬಿತ್ತಲಾಗಿದೆ. ಅದೀಗ ನಮ್ಮ ಸುಪ್ತ ಮನಸ್ಸಿನಲ್ಲಿ ಹೆಮ್ಮರವಾಗಿ ಬೆಳೆದಿದೆ.

'ಅಯ್ಯೋ ,ಗುರು ಎಂಬುವವನು ಬೇಕಲ್ಲವೇ? ನಮಗೆ ವಿದ್ಯೆ ಹೇಳಿಕೊಡಲು, ನಮಗೆ ಮಾರ್ಗದರ್ಶನ ಮಾಡಲು.... ಮೇಲೆ ಹೇಳಿರುವ ಗುರು ಮಂತ್ರ ...ಆಹಾ ..ಇದು ಎಂತಾ ಅರ್ಥಗರ್ಬಿತವಾದದ್ದು' ಎಂದು ಸುಮಾರು ಮಂದಿ ಭಾವೀ ಗುರುಗಳು ಹಪಹಪಿಸುತ್ತಾರೆ.

ನಾನು "ಹೌದೇನೋ...ಇರಬಹುದೇನೋ" ಅಂದುಕೊಂಡಿದ್ದೆ!. ಹಾಡಲಿಕ್ಕೆ,ಕುಣಿಯಲಿಕ್ಕೆ,ಆಟಕ್ಕೆ,ಪಾಠಕ್ಕೆ ಎಲ್ಲದಕ್ಕೂ ಗುರು ಬೇಕೇ ಬೇಕೆನ್ನುವ ಪರಾವಲಂಬಿತನವನ್ನು ನಮ್ಮಲ್ಲಿ ಮೂಡಿಸಲಾಗಿದೆ. ಎಲ್ಲದಕ್ಕೂ ಶಾಸ್ತ್ರಗಳಿವೆ. ಗುರುವೆಂಬ ಅಹಂ ಹೊಂದಿರುವವರಿಗೆ ಜನರ ಜೀವನದಲ್ಲಿ ಮೂಗುತೂರಿಸುವ ತೆವಲು ಎಷ್ಟೆಂದರೆ ಅವರು "ಕಾಮ" ವನ್ನು ಕೂಡ ಬಿಡಲಿಲ್ಲ.ವಾತ್ಸಾಯನ ನೆಂಬ ಋಷಿ ಅದರ ಬಗ್ಗೆ ಒಂದು ಶಾಸ್ತ್ರವನ್ನೇ ಸೃಷ್ಟಿಸಿದ. ಅದರ ಪಠಣೆಯನ್ನು ಕಡ್ಡಾಯ ಮಾಡಿಲ್ಲ ಸಧ್ಯ!

ಆಮೇಲೆ,ಯಾರೇನೇ ಮಾಡಲಿ,ಅದನ್ನು ಶಾಸ್ತ್ರದ ಹಿನ್ನೆಲೆಯಲ್ಲಿ ಒರೆಹಚ್ಚಿ ಇದು ಸರಿ,ಇದು ತಪ್ಪು ಎಂದು ನಿರ್ಧರಿಸುವ ಅಧಿಕಾರಗಳನ್ನು ಗುರುಗಳು ತಮಗೆ ತಾನೇ ಕೊಟ್ಟುಕೊಂಡಿದ್ದಾರೆ.. ಸಾವಿರಾರು ಜನರ ಆತ್ಮಗಳನ್ನು ತಣಿಸಬಲ್ಲ ಗಾಯಕ ಇವರ ಕಣ್ಣಿಗೆ ಅಯೋಗ್ಯನಂತೆ ಕಾಣುತ್ತಾನೆ. ಪ್ರೇಕ್ಷಕರನ್ನು ಕ್ಷಣಾರ್ಧದಲ್ಲೇ ನಿದ್ರೆಗೆ ತಳ್ಳುವವನು ಇವರ ಪ್ರಕಾರ ಒಳ್ಳೇ ಗಾಯಕ ಎನ್ನಿಸಿಕೊಳ್ಳುತ್ತಾನೆ. ಈ ಶಾಸ್ತ್ರಗಳ ಆಚರಣೆಗಳಲ್ಲಿ ಪ್ರತ್ಯಕ್ಷ ಉಪಯೋಗಗಳ್ಯಾವುವೂ ಸಿಗುತಿಲ್ಲವೆಂದು ಜನ ಖ್ಯಾತೆ ತೆಗೆಯಲು ಶುರು ಮಾಡಿದಕೂಡಲೇ ಆ ಆಚರಣೆಗಳಿಂದ ಪರೋಕ್ಷ ಉಪಯೋಗಗಳಿವೆಯೆಂದು ಗುಲ್ಲೆಬ್ಬಿಸಿದರು.ಪ್ರಾಚೀನ ನಾನ್ಸೆನ್ಸ್ ಗಳ ಪ್ರಚಾರಕ್ಕಾಗಿ ನವೀನ ತಂತ್ರಜ್ಞಾನಗಳ ಉಪಯೋಗ ಬಹಳ ವ್ಯವಸ್ತಿತವಾಗಿ ನಡೆಯುತ್ತಿದೆ.

ಭಾರತದ ದುರಂತವೆಂದರೆ ಹಳೆಯದು ನಾಶವಾದ ಕೂಡಲೇ ಅದರಜಾಗವನ್ನು ಇನ್ನೊಂದು ಹೊಸ ಕೊಳೆ ಅಕ್ರಮಿಸಿಕೊಳ್ಳುತ್ತವೆ.ಉದಾಹರಣೆಗೆ ಗುರುಕುಲಹೋಗಿ ವಿಶ್ವವಿದ್ಯಾನಿಲಯ ಬಂದವು. ಮೂಲಭೂತವಾಗಿ ಅದರ ಮೂಲ ಆಶಯಗಳು ಬೇರೆ ಬೇರೆ ಇದ್ದರೂ ಈಗ ಅವೂ ಗುರುಕುಲಗಳ ಲೆವೆಲ್ಲಿಗೆ ಇಳಿದುಬಿಟ್ಟಿವೆ. ಅವಕ್ಕಿಂತ ನೀಚ ಮಟ್ಟಕ್ಕಿಳಿದಿವೆ ಅಂದರೂ ಉತ್ಪ್ರೇಕ್ಷೆಯಾಗಲಾರದು.

ಅವುಗಳ ಉಗಮ,ಉದ್ದೇಶ,ಸ್ಥಿತಿ/ಗತಿ ಗಳನ್ನೊಮ್ಮೆ ಅವಲೋಕಿಸೋಣ.ಮೊದಲಿಗೆ ಗುರುಸ್ತುತಿಯಿಂದಲೇ ಆರಂಭಿಸೋಣ.

ಗುರು ಬ್ರಹ್ಮ ಗುರು ವಿಷ್ಣು ಗುರು ದೇವೋ ಮಹೇಶ್ವರಃ

ಗುರು ಸಾಕ್ಷಾತ್ ಪರಬ್ರಹ್ಮ ತಸ್ಮೈ ಶ್ರೀ ಗುರುವೇ ನಮಃ


ನನ್ನ ಪ್ರಕಾರ ಈ ಶ್ಲೋಕ ಸಂಸ್ಕೃತದಲ್ಲೇ ಅತ್ಯಂತ ಅಸಹ್ಯವಾದ ಶ್ಲೋಕ. ಇದನ್ನು ಯಾವುದೇ ಕೆಲಸದ ಪ್ರಾರಂಭದಲ್ಲೇ ಹೇಳಬೇಕಂತೆ. ಏಕೆ?

ಯಾಕೆಂದರೆ ಇದು ಭಯವನ್ನು ಬಿತ್ತುವ ಸಾಧನ. ಏನಾದರು ಕೆಲಸ ಅಯಶಸ್ವಿ ಆದರೆ ಅದು ಗುರುನಿಂದೆಯ ಕಾರಣ ಆರೋಪಿಸಬಹುದಲ್ಲಾ. ನಮ್ಮಲ್ಲಿ ಗುಲಾಮಗಿರಿಯ ಮನಸ್ತಿತಿಯನ್ನು ಬಿತ್ತಲು ಈ ಶ್ಲೋಕವನ್ನು ಅತ್ಯಂತ ವ್ಯವಸ್ತಿತವಾಗಿ ಬಳಸಲಾಗುತ್ತದೆ.

ಗುರುವನ್ನು ಸಾಕ್ಷಾತ್ ದೇವರಿಗೆ ಹೋಲಿಸಿ ಹಾಡಲಾಗುತ್ತದೆ. ನಮ್ಮ ನಾಡಿನಲ್ಲಿ ಹಿಂದಿನ ಹಲವು ಆಚರಣೆಗಳು ಈಗಲೂ ಉಳಿದುಬಂದಿದೆ. ಬಲಿಕೊಡುವುದು, ದೇವದಾಸಿ ಪದ್ಧತಿ ಇತ್ಯಾದಿ. ಅದರಲ್ಲಿ ಗುರು ಶಿಷ್ಯ ಪರಂಪರೆಯೂ ಒಂದು.

ಗುರು-ಶಿಷ್ಯ ಪರಂಪರೆ ನಮ್ಮ ಸಮಾಜ ದಲ್ಲಿರುವ ಮೇಲು ಕೀಳು ಪದ್ದತಿಯ ಪ್ರಥಮ ಪ್ರವರ್ತಕ.

ಇಲ್ಲಿ ಗುರುವೇ ದೇವರು, ಶಿಷ್ಯನೇ ಭಕ್ತ.

ಮುಂದುವರಿದು ಇನ್ನೊದು ಶುಭಾಷಿತ ಅವಲೋಕಿಸೋಣ.

"ವಿದ್ಯೆ ಇಲ್ಲದವ ಪಶುವಿಗೆ ಸಮಾನ" (ವಿದ್ಯಾ ವಿಹಿನಂ ,ಪಶು ಸಮಾನಮ್)ಎಂಬ ಸಂಸ್ಕೃತ ನಾಣ್ನುಡಿ ಇದೆ.

ಅಂದರೆ ಇಲ್ಲಿ ಶಿಷ್ಯ ಎಂಬುವವನು ಗುರುವಿನ ಪಾಲಿಗೆ ಒಂದು ಪಶು ಇದ್ದಂತೆ!.ಯಾಕೆಂದರೆ ಅವನಿಗೆ ವಿದ್ಯೆ ಗೊತಿಲ್ಲವಲ್ಲ. ಹಿಂದಿನ ಯಾವ ಗುರುವೂ ಹೊಸದಾಗಿ ಸೇರಿದ ಶಿಷ್ಯನಿಗೆ ಬಂದ ಕೂಡಲೇ ವಿದ್ಯೆ ಹೇಳಿಕೊಡಲು ಆರಂಬಿಸುತ್ತಿರಲಿಲ್ಲ. ಅವನಿಗೇ ದನ ಕಾಯುವುದಕ್ಕೋ, ಕಸಗುಡಿಸುವುದಕ್ಕೋ ,ಒಟ್ಟಾರೆ ಗುರುವಿನ ಚಾಕರಿಗೆ ನೇಮಿಸುತಿದ್ದರು. ಆ ಗುರು ಇವನ ಸೇವೆ ಯಿಂದ ಸಂತೃಪ್ತನಾದರೆ ಮಾತ್ರ ವಿದ್ಯೆ ಹೇಳಿಕೊಡುತಿದ್ದ. (ಇಂದು ಇಂತಹ ಪದ್ಧತಿ ಹಳ್ಳಿಯ ಗರಡಿ ಮನೆಯಲ್ಲಿ ಕೂಡ ನೋಡಬಹುದು. ಶಿಷ್ಯ ಮೊದಲು ಉಸ್ತಾದ್ ನಿಗೆ ಮಾಲೀಶು ಮಾಡಬೇಕಾಗಿರುತ್ತದೆ. ಆಮೇಲೆ ಸುಮಾರು ದಿನ ಅವನು ಅವರಿಗೆ ತೂಕದ ವಸ್ತು ಮುಟ್ಟಲು ಬಿಡುವುದಿಲ್ಲ. ಚಿಕ್ಕ ಪುಟ್ಟ ವ್ಯಾಯಾಮ ಬಸ್ಕಿ ಹೊಡೆಯುವುದು ಇತ್ಯಾದಿ ಮಾಡಿಸುತ್ತಾನೆ ಆದರೆ ತನ್ನ ಕೆಲಸ ಮಾತ್ರ ಚೆನ್ನಾಗಿ ಮಾಡಿಸಿಕೊಳ್ಳುತ್ತಾನೆ.ಇದು ಬಹಳ ಸೈಂಟಿಫಿಕ್ ಕ್ರಮ ಎನ್ನುವವರು ಸಹ ಇದ್ದಾರೆ. ಆದರೆ ನಾವು ಇಲ್ಲಿ ಗಮನಿಸಬೇಕಾದ್ದು ಈ ಉಸ್ತಾದ್ ಗಳ ಮನೋಭಾವ.

ಅಂದರೆ ,ಈ ಚಾಕರಿ ಮಾಡಿ ವಿದ್ಯೆ ಕಲಿಯಬೇಕಾದರೆ ,ಅಂದರೆ ಬರೀ ಅಕ್ಷರ ಅಭ್ಯಾಸವನ್ನು ಮಾಡಬೇಕಾದರೆ ಹತ್ತಾರು ವರುಷಗಳೇ ಆಗಿ ಹೋಗುತಿತ್ತು. ಆದರೆ ಗುರುವಿನ ಮಗ ಮಾತ್ರ ಬಹಳ ವೇಗವಾಗಿ ಎಲ್ಲವನ್ನೂ ಕಲಿತು ರಾಜನ ಅಸ್ಥಾನ ಸೇರಿಬಿಡುತಿದ್ದ.

ಸರಿ, ಈಗ ಇನ್ನೊದು ಹಿತವಚನವನ್ನು ಅವಲೋಕಿಸೋಣ.

"ಗುರು ಪತ್ನ್ಯಾಗಮನ ಮಹಾಪಾಪ " ಎಂಬ ವಾಕ್ಯವನ್ನು ಯಾವುದೂ ಸಂಸ್ಕೃತ ಶ್ಲೋಕದಲ್ಲಿ ಒತ್ತಿ ಒತ್ತಿ ಹೇಳಲಾಗಿದೆ.

ಅಂದರೆ ಗುರುಗಳು ತಮ್ಮ ಶಿಷ್ಯರಿಂದ ಎಲ್ಲಾ ಖಾಸಗಿ ಕೆಲಸ ಮಾಡಿಸಿಕೊಳ್ಳುತಿದ್ದರು. ಆಗ ಬೇಸತ್ತ ಶಿಷ್ಯರುಗಳ ಕೆಲವು ದುಸ್ಸಹಾಸಗಳು ಇಂತಹ ಶ್ಲೋಕಗಳ ರಚನೆಗೆ ಕಾರಣವಾಗಿದ್ದವು ಎಂದು ನಾವು ನಿಸ್ಸಂದೇಹವಾಗಿ ಭಾವಿಸಬಹುದು.

ಇಷ್ಟಲ್ಲದೆ ಗುರುವು ದಕ್ಷಿಣೆಯನ್ನೂ ಕೂಡ ಚೆನ್ನಾಗಿಯೇ ಸುಲಿಯುತಿದ್ದ. ಆದರೆ 'ಜೀವಮಾನವಿಡೀ ನನಗೆ ಋಣಿಯಾಗಿರು' ಎಂಬುದನ್ನು ಶಿಷ್ಯನ ತಲೆಗೆ ತುಂಬುತಿದ್ದ. ಜೀವಮಾನವಿಡೀ ಶಿಷ್ಯನನ್ನು ಸುಲಿಯುವ ಐಡಿಯಾ ಇದು. ನಾವು ದಕ್ಷಿಣೆ /ಫೀ ಕೊಡುವುದರಿಂದ ನಾವು ಅವನ ಗಿರಾಕಿಗಳು. ಕಷ್ಟಮರ್ಸ್ .ನಾವು ಕಲಿತಮೇಲೂ ಅವನಿಗೇ ಗೌರವ ಕೊಡುವುದರಲ್ಲಿ ತಪ್ಪೇನಿಲ್ಲ . ಆದರೆ ಕಪ್ಪವನ್ನೇಕೆ ಕೊಡಬೇಕು ಎಂದು ಕೆಲವರು ಅವಿಧೇಯರು ಪ್ರಶ್ನಿಸಲಾರಂಭಿಸಿದರು.

ಅದಕ್ಕೆ ಕೆಲವರು ಹೀಗೆ ಹೇಳುತ್ತಾರೆ,"ಎಲ್ಲಾ ಗುರುಗಳು ಕೆಟ್ಟವರಲ್ಲ.ಕೆಲವರು ಬಹಳ ಪ್ರೀತಿಯಿಂದ,ಅಚ್ಚುಕಟ್ಟಾಗಿ ವಿದ್ಯೆ ಹೇಳಿಕೊಡುತ್ತಾರೆ.ಅದಕ್ಕೆ ನಾವು ಅವರನ್ನು ಅಷ್ಟಾಗಿ ಹಚ್ಕೊಂಡಿರುವುದು".

ಹೌದೆ?,ನಿಮ್ಮ ಮನೆ ಕಟ್ಟಿದ ಮೇಸ್ತ್ರಿ ಅಚ್ಚುಕಟ್ಟಾಗಿ ಮನೆಕಟ್ಟಿಕೊಟ್ಟಿಲ್ಲವೇ(ಕೊಟ್ಟಿಲ್ಲದಿದ್ದರೆ ಮುಂದಿನ ಉದಾಹರಣೆಗೆ ಹೋಗಿ),ನಿಮ್ಮ ಮನೆ ಕೆಲಸದಾಕೆ ಚನ್ನಾಗಿ ದೂಳು ಹೊಡೆದು ನಿಮ್ಮನ್ನು ರೋಗಗಳಿಂದ ರಕ್ಷಿಸುವುದಿಲ್ಲವೇ, ಇಸ್ತ್ರಿಹಾಕುವವನು ನಿಮ್ಮ ಅಮೂಲ್ಯ ಸಮಯ ಉಳಿಸುವುದಿಲ್ಲವೇ?, ಆದರೂ ಇವರ್ಯಾರಿಗೂ ಮರ್ಯಾದೆ ಕೊಡಬೇಕೆಂದಿಲ್ಲ!. "ದುಡ್ಡು ಕೊಟ್ಟಿಲ್ಲವೇ? ಸೇವೆ ಮಾಡುವುದು ಅವರ ಧರ್ಮ" ಎನ್ನುತ್ತೀರಿ . ಆದರೆ ಗುರು ಮಾತ್ರ ಆ ಧರ್ಮದಿಂದ ಬಂಧಿತನಾಗಿಲ್ಲ.ಅವನು ದಕ್ಷಿಣೆ ತೆಗೆದುಕೊಳ್ಳಬಹುದು.ಆದರೆ ಅದಕ್ಕೆ ತಕ್ಕ ಸೇವೆ ನೀಡುವುದು ಕಂಪಲ್ಸರಿಯಲ್ಲ.ಸ್ವಲ್ಪ ಸೂಕ್ಷ್ಮವಾಗಿ ನೋಡಿದರೆ ಇಲ್ಲಿ ನಮ್ಮ ಜಾತಿ ಪದ್ದತಿಯ ವಾಸನೆ ಹೊಡೆಯುತ್ತದೆ. ಈ ಜಾತಿ ಪದ್ಧತಿ ಎಂದರೆ ಬರಿ ಬ್ರಾಹ್ಮಣ ಎಂದಲ್ಲ. ಬೌಧಿಕ ಸಂಪತ್ತನ್ನು ಶೇಕರಿಸಿ ಇಟ್ಟು ಕೊಂಡಿರುವ ಜನ ಎಂದು.ಈಗಿನ ಶಿಕ್ಷಣತಜ್ನರನ್ನು ಸಹ ಈ ಜಾತಿಗೇ ಸೇರಿಸಬಹುದು.ಅಂದರೆ ಉಳ್ಳವರದ್ದೇ ಒಂದು ಜಾತಿ. (ಇದನ್ನು ನೀವು "ಯು.ಜಿ.ಸಿ. ಶ್ರೇಣಿ ವೇತನ ಪಡೆಯುವರದ್ದು" ಎಂದು ಓದಿಕೊಂಡರೆ ಅದು ನನ್ನ ತಪ್ಪಲ್ಲ).

ಗುರುಗಳೆಂಬುವರ ಈ ಗಲೀಜು ಮನಸ್ತಿತಿ ಹಿಂದೂ ಧರ್ಮಕ್ಕೆ ಮಾತ್ರ ಸೀಮಿತವಾಗಿಲ್ಲ. ಅದು ಇಸ್ಲಾಂನಲ್ಲೂ ಇದೆ.( ಪೀರ್-ಮುರೀದ್ ಸಂಪ್ರದಾಯ ಎನ್ನುತ್ತಾರೆ.) ಮಹಮದ್ ಗವಾನ್ ಗುಲಬರ್ಗಾದಲ್ಲಿ ಮದಾರಸ ಮಾಡಿದ್ದು ಯಾಕೆಗೊತ್ತೆ?, ಅದಕ್ಕೆ ಆಗಿನ ಇರಾನಿ/ತುರಾನಿ/ಧಖನ್ನಿ ಮುಸ್ಲಿಮರಲಿದ್ದ ಜಾತಿ ಜಗಳವೂ ಒಂದು ಕಾರಣ. ಇರಾನಿ ಪಕ್ಷವು ಮದಾರಸಾದ ಮೂಲಕ ಆದಷ್ಟು ಇರಾನಿಗಳಿಗೆ ಬೆಂಬಲ ನೀಡಿ ಬಹುಮನಿ ರಾಜ್ಯವನ್ನು ನಿಯಂತ್ರಿಸುವ ಹುನ್ನಾರವು ಇದರಲ್ಲಿತ್ತು.

ಇನ್ನು ಇಂದಿನ ಡಿಗ್ರೀ ಕಾಲೇಜುಗಳ ಗುರುಮಹಾಶಯನೋ ,ಅವನು ದಿನಕ್ಕೆರಡು ಕ್ಲಾಸ್ ತೆಗೆದುಕೊಂಡರೆ ಅವನ ಜವಾಬ್ದಾರಿ ಮುಗಿಯಿತು.ದಿನವೆಲ್ಲಾ ಓತ್ಲಾ ಹೊಡೆಯಬಹುದು. ವಿಶ್ಯವಿಧ್ಯಾಲಯದ ಈ ಆಧುನಿಕ ಗುರುಗಳನ್ನು ಮಾತಾಡಿಸುವಂತೆಯೇ ಇಲ್ಲ. ಸೆನ್ಸಸ್, ಎಲೆಕ್ಷನ್ ಡ್ಯೂಟಿ ಇವುಗಳಿಗೆ ಅವರನ್ನು ಹಾಕುವಂತಿಲ್ಲ. ಸಮಾಜದ/ಸರ್ಕಾರದ ವೇತನ ಪಡೆಯುವ ಈ ಪುಣ್ಯಾತ್ಮರನ್ನು ಸಾರ್ವಜನಿಕ ಕೆಲಸಕ್ಕೆ ಬಳಸುವಂತಿಲ್ಲ. ಮೇಲಾಗಿ ಸರ್ಕಾರದ ಶಿಸ್ತಿನ ನಿಯಮಗಳು ಅವರಿಗೆ ಅನ್ವಯವಾಗುವುದಿಲ್ಲ. ಒಟ್ಟಾರೆ ಈ ಗುರುಗಳು ಅಂದು,ಇಂದು,ಎಂದೆಂದೂ ಸಾಮಾಜಿಕ ಹೊರೆಗಳೇ.

ಸತ್ಯಕಾಮ ಹೇಳಿದಂತೆ ಈ ಹೆಗಲ ಮೇಲಿನ ಈ ಹೆಣಗಳನ್ನು ಎಸೆದು ಮುಂದೆ ಸಾಗುವುದು ಸಾಧ್ಯವೇ?

ಈ ಜಾತೀಯತೆ ಎಂಬುದು ಹುಲುಸಾಗಿ ಬೆಳೆಯುವುದು ಸ್ಲಂ ನಲ್ಲಿ ಅಲ್ಲ. ಫೂಟ್ ಪಾತ್ ಗಳಲ್ಲಿ ಅಲ್ಲ.ಬದಲಾಗಿ ಸರ್ಕಾರಿ ಕಚೇರಿಗಳ,ವಿಶ್ವವಿದ್ಯಾಲಯಗಳ ಮೊಗಸಾಲೆಗಳಲ್ಲಿ!. ಇಲ್ಲಿ ಯಾರು ಮೆರೆಯುತ್ತರೋ ಅವರದೇ ಮೇಲ್ಜಾತಿ. ಉಳಿದವರು ಕೆಳಜಾತಿ. ಕೆಲವರು ಇಲ್ಲಿಗೆ ಬರುವಾಗ ಕೆಳಜಾತಿ, ಹೋಗುವಾಗ ಮೇಲ್ಜಾತಿ!.

ಇತ್ತೀಚಿಗೆ ಒಂದು ವಿಶ್ವವಿಧ್ಯಾಲಯದ ಮಾಜಿ ಕುಲಪತಿಯೊಬ್ಬ ಅವನ ಅಪ್ಪನಂತೆಯೇ ವಿಪರೀತ ಜಾತಿ ರಾಜಕಾರಣ ಮಾಡಿದ ಕಾರಣ ಅವನ ಮೇಲೆ ಕ್ರಿಮಿನಲ್ ಮೊಕದ್ದಮೆ ಹಾಕಬೇಕೆಂದು ಸರ್ಕಾರವು ವಿಶ್ವವಿದ್ಯಾಲಯಕ್ಕೆ ಸೂಚಿಸಿದ ಘಟನೆ ನೀವು ಓದಿರಬಹುದು.ಅಪ್ಪ ಮಕ್ಕಳಿಬ್ಬರೂ ವಿಧಾನಸೌಧಕ್ಕೆ ಬಂದು ಮುಖ್ಯಮಂತ್ರಿಯ ಕಾಲು ಹಿಡಿದು ಬಚಾವಾದರು) .ಹೀಗೆಯೇ ಸಾಗುತ್ತದೆ ಗುರುಕುಲ/ವಿ.ವಿ ಗಳ ಗಲೀಜು ಪ್ರವರ. ಇಲ್ಲಿ ಪರಂಪರೆ ಎಂದರೆ ಜಾತೀಯತೆ, ಗುಂಪುಗಾರಿಕೆ.

ಗುರು-ಶಿಷ್ಯ ಪರಂಪರೆ ಒಂದು ವಿಧದ ಜೀತಪದ್ದತಿ. ಶೂದ್ರ/ಕ್ಷತ್ರಿಯರು ದೈಹಿಕ ಬಲದಿಂದ ಜನರನ್ನು ಗುಲಾಮಗಿರಿಗೆ ತಳ್ಳಿದರೆ ಗುರು ಬುದ್ದಿಬಲದಿಂದ ಶಿಷ್ಯರನ್ನು ನಿಯಂತ್ರಿಸುತಿದ್ದ. ಯಂತ್ರಗಳು ಬಂದಮೇಲೆ ಜೀತದಾಳುಗಳ ಅಗತ್ಯ ಕಡಿಮೆಯಾಯಿತು. ಅಧಿಕಾರದಲ್ಲಿದ್ದ ಮೇಲ್ವರ್ಗದ ಜನ ಜೀತಪದ್ದತಿ ನಿರ್ಮೂಲನೆ ಕಾಯ್ದೆ ಜಾರಿಗೊಳಿಸಿ ಜೀತದಾಳುಗಳನ್ನು ಸಾಕುವ ಜವಾಬ್ದಾರಿಯಿಂದ ತಪ್ಪಿಸಿಕೊಂಡರು.

ಆದರೆ ಗುರುಗಳ ಸಂಖ್ಯೆ ಕಡಿಮೆಯಾದ ಕೂಡಲೇ ಆ ಜಾಗವನ್ನು ಶಿಕ್ಷಕರು ಆಕ್ರಮಿಸಿಕೊಂಡು "ಗುರು ಬ್ರಹ್ಮ ..ಗುರು ವಿಷ್ಣು.....ಮುಂದುವರಿಸಿದರು. ಈಗಲು ಕೆಲವು ಕಡೆ internal marks ನೀಡಲು ಬಹಳ ಸತಾಯಿಸಲಾಗುತ್ತದೆ. ಇನ್ನು ಸಂಶೋದನಾ ವಿಧ್ಯಾರ್ಥಿಗಳನ್ನು ಗೈಡ್ಸ್ಗಳು ಯಾವ ರೀತಿ ಹಿಂಸಿಸುತ್ತಾರೆ ಎಂಬುದನ್ನು ಅನುಭವಿಸಿಯೇ ತಿಳಿಯಬೇಕು. ಇಂತಹ ಪರಿಸ್ತಿತಿಯಲ್ಲಿ ಮನಸಿಲ್ಲದಿದ್ದರೂ 'ಗುರು'ಗಳಿಗೆ ಗೂಸ ನೀಡಲೇ ಬೇಕಾದ ಅನಿವಾರ್ಯತೆಯನ್ನು ಶಿಷ್ಯರು ಆಗಾಗ ಎದುರಿಸುತಿದ್ದಾರೆ.


ಇನ್ನೊಂದು ಶಾಸ್ತ್ರದಲ್ಲಿ ಹೇಳಿದೆ. ಶಿಷ್ಯನು ಮೊದಲು ಗುರುವನ್ನು ಸಮೀಪಿಸಬೇಕು. ನಂತರ ಹಿತವಾದ ಮಾತುಗಳಿಂದ ದೈನ್ಯವಾಗಿ ಅವನ ಮನಸ್ಸಂತೋಷಪಡಿಸಬೇಕು.ಅವನ ಬಗ್ಗೆ ಶ್ರದ್ದೆಯನ್ನು ತಾಳಬೇಕು.

ಸೂಕ್ಷ್ಮವಾಗಿ ಗಮನಿಸಿ.ಇಲ್ಲಿ ಶ್ರದ್ದೆ ಇರಬೇಕಾದ್ದು ಗುರುವಾಕ್ಯದ ಮೇಲೆ. ಜ್ಞಾನದ ಮೇಲಲ್ಲ !.

ತಪ್ಪೇನು?, ವಿದ್ಯಾರ್ಚನೆಯಲ್ಲಿ ಶ್ರದ್ದೆ ಅತಿ ಮುಖ್ಯ ....ಹೀಗೆ ಸಾಗುತ್ತದೆ ಹಳಬರ ತರ್ಕ.

ಹಳಬರು ಹಾಳಾಗಿ ಹೋಗಲಿ. ಈಗಿನ ಸೆಕ್ಯುಲಾರ್ ಗುರುಗಳು ಅವರಿಗಿಂತಲೂ ಕೀಳು.ಬೇರೆಯವರಿಂದ ಮರ್ಯಾದಿ ಬೇಡುವ ವಿಷಯದಲ್ಲಿ ಇವರು ಹಳಬರಿಗಿಂತ ಒಂದು ಹೆಜ್ಜೆ ಮುಂದೆ. ನ್ಯಾಯವಾದ ಕಾರಣಕ್ಕೆ ಗೂಸಾ ನೀಡಿದರೆ 'ಇಂದಿನ ವಿದ್ಯಾರ್ಥಿಗಳಲ್ಲಿ ಮೌಲ್ಯವೇ ಇಲ್ಲ" ಎಂದು ಆರೋಪಿಸುತ್ತಾ ಓಡಾಡುತ್ತಾರೆ.

ಕೆಲವರು ಹೇಳಬಹುದು. ನಿಮಗೆ ಸೈಕಲ್ಹೇಳಿಕೊಡಲು ಗುರು ಬೇಕಾಗಲಿಲ್ಲವೇ?,ಈಜನ್ನು ಕಲಿಸಿದವನು ಗುರು ಅಲ್ಲವೇ?, ಎಷ್ಟೊಂದು ವಿಷಯವನ್ನು ನಾವು ಆಟವಾಡುತ್ತಾ ಕಲಿತುಬಿಟ್ಟಿದ್ದೇವೆ. ಅಲ್ಯಾರು ನಾನು ನಿನ್ನ ಗುರು,ನೀನು ನನ್ನ ಕಾಲು ಹಿಡಿ ಎಂದು ಅಂಗಲಾಚಲಿಲ್ಲ. ಕೆಲವೊಮ್ಮೆ ಗುರುಗಳೇ ಶಿಷ್ಯರ ಬೆನ್ನು ಹತ್ತಿ ಬರುತ್ತಾರೆ.

ಹಿಂದಿನ ಎಲ್ಲಾ ಗುರುಗಳು ಅಷ್ಟೇ, ಕಾಡಿಗೆ ಹೋದಂತೆನಟಿಸಿ ನಂತರ ಶಿಷ್ಯರನ್ನು ನಾಯಿಯಂತೆ ಬೆನ್ನಟ್ಟುವವರೇ. ಇತಿಹಾಸದಲ್ಲಿ ಬಂದು ಹೋದ ಎಲ್ಲಾ ಬೋದಕರನ್ನು ತೆಗೆದುಕೊಳ್ಳಿ. ಏನಾದರೂ ದೊಂಬರಾಟ ಮಾಡಿ ಗುಂಪು ಸೇರಿಸುವುದು.ಆಮೇಲೆ ಭಾಷಣ ಕೊರೆಯುವುದು. ಇತಿಹಾಸ ವನ್ನೊಮ್ಮೆ ಅವಲೋಕಿಸಿ.ಈ ಕೊರೆತದಿಂದ ಏನಾದರೂ ಉಪಯೋಗವಾಗಿದೆಯೇ?.ಈ ಜ್ಞಾನಿಗಳು ಬಂದು ಹೋದ ಸಾವಿರಾರು ವರುಷ ಆದಮೇಲೂ ಅಜ್ಞಾನದ ಬೆಳಕು ಹಾಗೇ ಇದೆ.

ಈ ಭಜನೆ,ಧ್ಯಾನ,ನಾಮ ಸಂಕೀರ್ತನೆ,ಪ್ರಾರ್ಥನೆ,ನಮಾಜು,ಕಲ್ಮಾ ಇತ್ಯಾದಿಗಳು ನಮ್ಮ ಧರ್ಮ ಪ್ರವರ್ತಕರು ಹೇಳಿಕೊಟ್ಟದ್ದು ಅಂಥಹ ದುರುದ್ದೇಶದಿಂದಲೇ. ಯಾವ ಸಂತನೂ ಕಾಡಲ್ಲಿ ಹೋಗಿ ದ್ಯಾನ ಮಾಡುತ್ತಾ ತಾನು ಕಂಡ ದೇವರೊಂದಿಗೆ ಅರಾಮವಾಗಿರಲಿಲ್ಲ. ಅವರಿಗೆ ಸತ್ಯದ ದರ್ಶನವಾಯಿತೋ,ಇಲ್ಲವೋ ಆದರೆ ಅವರು ನಾಡಿಗೆ ನುಗ್ಗಿ ಜನರನ್ನು ಬೆನ್ನತ್ತುವ ಚಟವನ್ನು ಮಾತ್ರ ಬಿಡಲಿಲ್ಲ. ಹೌದು,ಇವುಗಳಲ್ಲಿ ಕೆಲವು ಅರ್ಥಗರ್ಬಿತವಾದ ವಸ್ತುಗಳು ಇದ್ದಿರಬಹುದು. ಆದರೆ ಇವು ಈಗ ಉಳಿದಿರುವ ಪೂಜನೀಯವೆನ್ನಿಸಿಕೊಂಡಿರುವ ಧರ್ಮಗಳ,ಗುರುಗಳ ಅವಿಷ್ಕಾರಗಳಲ್ಲವೇನೋ ಎಂದು ನನಗೆ ಸಂಶಯಬರುತ್ತಿದೆ. ಬಾಹ್ಯ ಪ್ರಚಾರಕ್ಕೆಂದೇ ಟೊಂಕ ಕಟ್ಟಿ ನಿಂತ ಈ ಸಮಾಜಮುಖಿ ಧರ್ಮಗುರುಗಳು ಅಂತರಿಕ ಜ್ಞಾನದ ಬಗ್ಗೆ, ವ್ಯಕ್ತಿಗತ ಚಿಂತನೆಯ ವಿಕಸನದ ಬಗ್ಗೆ ಹೆಚ್ಚು ಗಮನ ಕೊಟ್ಟು ಈ ಕ್ಷೇತ್ರಗಳಲ್ಲಿ ಮಣ್ಣು ಹೊತ್ತಂತೆ ಕಂಡುಬರುತ್ತಿಲ್ಲ. ಬಹುಷಃ ಹೆಚ್ಚಾಗಿ ಜನಗಳ ಸಂಪರ್ಕಕ್ಕೆ ಬರದೆ ಸಮಾಜದಿಂದ ದೂರವಾಗಿ ಸಾಧನೆಯಲ್ಲಿ(?) ನಿರತರಾಗಿದ್ದ,ಇಂದು ಅಳಿದು ಹೋಗಿರುವ ಅಜೀವಿಕರಂತಹ ಪಂಥಗಳ ವಿಚಾರಗಳನ್ನೇ ಕದ್ದು ಕೆಲವು ಸಣ್ಣಪುಟ್ಟ ಬದಲಾವಣೆಯೊಂದಿಗೆ ಪ್ರಯೋಗಿಸುವ ಮೂಲಕ ಸಮಾಜವನ್ನು ತನ್ನ ಸುಪರ್ದಿಗೆ ತರುವ ಪಯತ್ನವನ್ನು ಈ ಎಲ್ಲಾ ಧರ್ಮಗಳೂ(ಈಗ ಉಳಿದಿರುವ) ಮಾಡಿರಬಹುದು.



ಇಲ್ಲಿಯವರೆಗೆ ವ್ಯವಸ್ಥೆಯ ಹೊರಗಿಂದ ಗುರುಕುಲ ಪದ್ದತಿಯನ್ನು ನೋಡಿದ್ದಾಯಿತು.ಈಗ ಒಳಗಿಂದ ನೋಡೋಣ.

ಏಕೆ ಗುರು ತನ್ನ ಶಿಷ್ಯನ ಬೆನ್ನು ಹತ್ತುತ್ತಾನೆ?.

ಏಕೆ ಶಿಷ್ಯನನ್ನು ಯಾವಾಗಲು ತನ್ನ ಕಣ್ಗಾವಲಿನಲ್ಲಿ ಇಟ್ಟುಕೊಳ್ಳಬಯಸುತ್ತಾನೆ?,

ಏಕೆ ಸುಧೀರ್ಘವಾದ ಭಾಷಣಗಳನ್ನು /ಪ್ರವಚನಗಳನ್ನು ಮಾಡುತ್ತಾನೆ?.

ಅದು ನಿಮ್ಮ ಒಳ್ಳೆಯದಕ್ಕೆ ಎಂದು ಅವನು ಹೇಳಿದ್ದನ್ನು ನಂಬಿದರೆ ನಿಮ್ಮ ಊಹೆ ತಪ್ಪು.ಈ ಸುಧೀರ್ಘ ಬೋಧನೆಗಳ ಮೂಲ ಉದ್ದೇಶಗಳು ಐದು.

೧)ನಿಮ್ಮ ಅಮೂಲ್ಯವಾದ ಸಮಯವನ್ನ ಕಿತ್ತುಕೊಳ್ಳುವುದು.

೨)ನಿಮ್ಮ ಸುತ್ತಲು ಇರುವ ಮೌನವನ್ನು ನಾಶಗೊಳಿಸುವುದು.

೩)ನಿಮ್ಮ ಏಕಾಂತಕ್ಕೆ ಭಂಗ ತರುವುದು.

೪) ನಿಮ್ಮ ಕೂತೂಹಲವನ್ನು/ಆಸಕ್ತಿಯನ್ನು ನಾಶಮಾಡುವುದು.

೫) ನಿಮ್ಮಿಂದ ಬಿಟ್ಟಿ ಕೆಲಸ ಮಾಡಿಸಿಕೊಳ್ಳುವುದು.

ದ್ರೋಣ,ಪರಶುರಾಮರನ್ನೇ ತೆಗೆದುಕೊಳ್ಳಿ. ಒಂದು ಬಿದಿರನ್ನು ಬೆಂಡ್ ಮಾಡಿ ಹಗ್ಗ/ತಂತಿ ಕಟ್ಟಿ ಬಾಣ ಹೂಡುವುದನ್ನು ಕಲಿಸಲು ಎಷ್ಟೆಲ್ಲಾ ನಖರಾ ಮಾಡುತಿದ್ದರು.ಇವರು ವರುಷಾನುಗಟ್ಟಲೆ ಕಲಿಸುತಿದ್ದುದ್ದನ್ನು ಏಕಲವ್ಯ ಕೆಲವೇ ದಿನಗಳಲ್ಲಿ ಕಲಿತ. ಗುರು ಯಾವಾಗಲು ಏನನ್ನೂ ಸ್ಪುಟವಾಗಿ ಹೇಳುವುದಿಲ್ಲ. ಎಲ್ಲಾ ಉದ್ದುದ್ದಾ ಕಥೆಗಳೇ.ಇದರ ಉದ್ದೇಶ, ಅವರ ಉಪದೇಶ ನಿಮಗೆ ಚೆನ್ನಾಗಿ ಅರ್ಥ ಆಗಲಿ ಎಂದಲ್ಲ. ಬದಲಿಗೆ ನಿಮ್ಮ ಸಮಯ ಪೋಲಾಗಲಿ ಎಂದು. ಯಾಕೆಂದರೆ ನಿಮಗೆ ಸಮಯಾವಕಾಶ ನೀಡಿದರೆ ನೀವೇ ಕಲಿತು ಬಿಡುತ್ತೀರಿ. ಆಗ ಗುರುವಿಗೆ ಎಲ್ಲಿದೆ ಅವಕಾಶ?.

ಮಾನವನ ಮಿದುಳು ಚಟುವಟಿಕೆಯ ಯಂತ್ರ. ಅದೆಂದೂ ನಿಲ್ಲುವುದಿಲ್ಲ.ಆದರೆ ಅದು ತಮಗೆ ಬೇಕಾದ ದಾರಿಯಲ್ಲೇ ನಡೆಯಬೇಕು ಎಂಬುದು ಈ ಗುರುಗಳ ವಿಕೃತ ಮನಸ್ಸಿನ ಹುನ್ನಾರ. ಅದುದರಿಂದಲೇ ಮನುಷ್ಯನ ಏಕಾಂತವನ್ನು ಕಸಿಯಲು ಎಲ್ಲಿಲ್ಲದ ಪ್ರಯತ್ನ. ಧರ್ಮಗಳ ಮುಖ್ಯ ಉದ್ದೇಶವೇ ಮನುಷ್ಯನ ಸ್ವತಂತ್ರ ಅಸ್ತಿತ್ವವನ್ನು ನಾಶಮಾಡುವುದು.

ಯಾವುದೇ ಗುರುವನ್ನು ತೆಗೆದುಕೊಳ್ಳಿ, ಅವರು ಮನುಷ್ಯನನ್ನು ಸಮಾಜದ ಒಂದು ಭಾಗವಾಗಿ ನೋಡಿದರೇ ಹೊರತು ಪ್ರತಿಯೊಬ್ಬ ಶಿಷ್ಯನನ್ನು ಒಬ್ಬ ವ್ಯಕ್ತಿಯಾಗಿ ನೋಡಲಿಲ್ಲ. ಆದುದರಿಂದಲೇ ಎಲ್ಲಧರ್ಮಗಳ ಗುರುಗಳು ಬೋಧಿಸುವ ಬೋದನೆಗಳು ಸಾಮಾನ್ಯತೆರನವಾಗಿದೆ. ಜನರನ್ನೆಲ್ಲಾ ಒಟ್ಟುಗೂಡಿಸಿ ಒಂದು ಗುಂಪು ಮಾಡಿ ಸದೆಬಡಿವ ಪ್ರವೃತ್ತಿಯನ್ನು ನಾವು ಅವುಗಳಲ್ಲಿ ಕಾಣಬಹುದು.

ಇಂತಹ ಸಂಸ್ಕೃತಿ ನಮ್ಮಲ್ಲಿ ಶತಮಾನಗಳಿಂದ ಸೃಷ್ಟಿಯಾದದ್ದರಿಂದಲೇ ನಮ್ಮ ದೇಶವು ಜಾತಿಯತೆಯ ವಿಷವರ್ತುಲದಿಂದ ಹೊರಬರಲು ಸಾಧ್ಯವಾಗಿಲ್ಲ. ಬದಲಾಗಿ ಅದೇ ಹಳೆಯ ಅನಿಷ್ಟಗಳು ಹೊಸ ರೂಪದಲ್ಲಿ ಮರುಕಳಿಸುತ್ತಿವೆ. ಹಿಂದೆ ಬ್ರಾಹ್ಮಣರಿದ್ದ ಜಾಗವನ್ನು ಒಕ್ಕಲಿಗರು,ಲಿಂಗಾಯಿತರು ಅಕ್ರಮಿಸಿಕೊಂಡರೇ ಹೊರತು ಸಮಾನತೆ ಬರಲಿಲ್ಲ.

ಯುರೋಪಿನಲ್ಲಿ ಗುರು:-

ಬೌದ್ಧ/ಜೈನಧರ್ಮಗಳು ಅಶೋಕನ ಕಾಲದಲ್ಲಿ ಏಶಿಯಾ ಖಂಡದಾದ್ಯಂತ ಹಬ್ಬಿತ್ತೆಂದು ನಾವು ಓದಿದ್ದೇವೆ. ಆದರೆ ಅದು ಯುರೋಪ್ ಖಂಡದಲ್ಲಿ ಏಕೆ ಹಬ್ಬಲಿಲ್ಲ? ಎಂದು ನೀವು ಹಲವು ಬಾರಿ ಸೋಜಿಗಪಟ್ಟಿರಬೇಕು. ಕಾರಣವೇನಿರಬಹುದು ಎಂದು ಊಹಿಸಲು ಪ್ರಯತ್ನಿಸೋಣ.ಅಲ್ಲಿನ ಖ್ಯಾತ ತತ್ವಶಾಸ್ತ್ರಜ್ಞರಾದ ಪ್ಲಾಟೋ,ಸೋಕ್ರೆಟಿಸ್ ,ಅರಿಸ್ಟಾಟಲ್ ಮುಂತಾದವರು ಯಾರು ತಮ್ಮನ್ನು ತಾವು ಗುರುಗಳು ಎಂದು ಕರೆದುಕೊಳ್ಳಲೂ ಇಲ್ಲ.ಅವರ ಮರಣಾನಂತರ ಅವರನ್ನು ಅವರ ಜನ ದೇವರೆಂದು ಪೂಜೆಮಾಡಲೂ ಇಲ್ಲ. ಅಂತಹ ಒಂದು ಪರಂಪರೆ ಅನಾದಿ ಕಾಲದಿಂದಲೂ ಯುರೋಪಿನಲ್ಲಿ ಬೆಳೆದುಬಂದಂತೆ ಕಾಣುವುದಿಲ್ಲ. ಬಹುಷಃ ಯುರೋಪಿಯನ್ ದೇಶಗಳ ಏಳಿಗೆಗೆ ಗುರು ಪರಂಪರೆ ಅಲ್ಲಿ ಬೆಳಯದಿದ್ದುದೇ ಕಾರಣವಿರಬಹುದು. ಅಲ್ಲಿನ ಖ್ಯಾತ ವಿಜ್ಞಾನಿಗಳಿಗೂ ಯಾವುದೇ ಗುರು ಇರಲಿಲ್ಲ. ಆದರೂ ಸಹ ಇತ್ತೀಚಿಗೆ ಅಲ್ಲಿನ ಗುರು ಶಿಷ್ಯರ ಬಗ್ಗೆ ಕೆಲವು ಕಥೆಗಳು ಕೇಳಿ ಬರುತ್ತಿದೆ ಕೆಲವು ಮಕ್ಕಳ ಮ್ಯಾಗಸೀನ್ ಗಳಲ್ಲಿ .ಇವು ಎಲ್ಲಿಂದ ಬಂದವು ಎಂದು ಸೋಜಿಗ ಪಟ್ಟೆ. ಈ ಪ್ರಶ್ನೆಗೆ ಇತ್ತೀಚಿಗೆ ಉತ್ತರ ಸಿಕ್ಕಿತು. ನನ್ನ ಬಿ.ಎಡ್ ಮಾಡುತ್ತಿರುವ ಮಿತ್ರನೊಬ್ಬ ಒಂದು ಪ್ರಾಜೆಕ್ಟ್ ರಿಪೋರ್ಟ್ ಬರೆಯುತಿದ್ದ. ಶೀರ್ಷಿಕೆ ಖ್ಯಾತ ವಿಜ್ಞಾನಿಗಳು ಮತ್ತವರ ಶಿಕ್ಷಕರು. ಆತ ಆ ವಿಜ್ಞಾನಿಗಳ ಜೀವನಚರಿತ್ರೆ ಓದಿ ಅದರಲ್ಲಿ ಅದರಲ್ಲಿ ಅವನ ಮೇಸ್ಟ್ರುಗಳ ಉಲ್ಲೇಖ ಸಿಕ್ಕಹಾಗೆಲ್ಲ ಅದನ್ನೇ ಉತ್ಪ್ರೇಕ್ಷಿಸಿ ಬರೆಯುತಿದ್ದ. ಅವನೊಬ್ಬ ಮಾತ್ರ ಅಲ್ಲ. ಹೆಚ್ಚಿನ ಎಲ್ಲಾ ಭಾರತೀಯ ಬರಹಗಾರರು ಅಂತಹ ತಪ್ಪನ್ನು (ಬೇಕೆಂದಲೇ)ಮಾಡುತ್ತಾರೆ. ಯಾಕೆಂದರೆ 'ಅವರು ಸಹ ನಮ್ಮ೦ತೆಯೇ' ಎಂದು ಸಮೀಕರಿಸುವ ಪ್ರಯತ್ನವನ್ನು(ಅವರಿಗೆ ಅರಿವಿಲ್ಲದೆ)ಮಾಡುತ್ತಾರೆ.

ನಮ್ಮಲ್ಲಿ ಸ್ವಯಂ ಘೋಷಿತ ಗುರುಗಳ/ಮಾರ್ಗ ದರ್ಶಕರ ಕಾಟ ಹೆಚ್ಚುತ್ತಾ ಇದೆ. ಗೈಡ್ ಮಾಡುವ ನೆಪದಲ್ಲಿ ಇವರು ಬೇರೆಬೇರೆ ವಿಷಯದ ಬಗ್ಗೆ ಗಂಟೆಗಟ್ಟಲೆ ಉಪದೇಶ ಮಾಡುವುದನ್ನೇ ಚಟವಾಗಿಸಿಕೊಂಡು ಬಿಟ್ಟಿದ್ದಾರೆ.ಬಸ್,ಬಸ್ಸ್ ಸ್ಟಾಂಡ್, ಕಛೇರಿ,ಟ್ರೈನ್ ಯಾವುದೂ ಇವರ ಕಾಟದಿಂದ ಮುಕ್ತವಾಗಿಲ್ಲ. ಕೇಳುವವರು ಸಿಕ್ಕರೆ ಮುಗಿಯಿತು. ಉಪದೇಶ ಆರಂಭ. ಇವರ ಉದ್ದೇಶ ಎರಡೇ. ಒಂದು ನಿಮ್ಮ ಸಮಯ ನಷ್ಟ ಮಾಡುವುದು. ಎರಡು ನಿಮ್ಮ ಸುತ್ತಲು ಕವಿದಿರುವ ಮೌನವನ್ನು ನಾಶಮಾಡಿ ನಿಮ್ಮ ವಿಚಾರಲಹರಿಗೆ ತಡೆಯೊಡ್ಡುವುದು..

ಈ ಆಧುನಿಕ "ಗುರುಪ್ರಜ್ಞೆ"ಯಿಂದ ನಮಗೆ ತುಂಬಾ ಹಾನಿಯಾಗುತ್ತಿದೆ.ಇವು ನಮಗರಿವಿಲ್ಲದಂತೆ ನಮ್ಮ ಸ್ವಂತ ಪ್ರಜ್ಞೆಯ ಬೆಳವಣಿಗೆಯನ್ನು ವಿಕೃತಗೊಳಿಸುತ್ತವೆ. ಇದು ಸ್ವತಂತ್ರ ದೇಶವಾದರೂ ,ಸಂವಿಧಾನ ನಮಗೆ ಕೆಲವು ಹಕ್ಕುಗಳನ್ನು ನೀಡಿದ್ದರೂ ನಾವು ಮುಕ್ತವಾಗಿ ಆಲೋಚಿಸದಂತೆ ಮಾಡಲು ಕೆಲವು ಶಕ್ತಿಗಳು ಪಣತೊಟ್ಟಿವೆ. ನಮ್ಮ ದೃಷ್ಟಿ ಯಾವಾಗಲೂ ಹಳೆಯ ತಲೆಮಾರು ಹಾಕಿಕೊಟ್ಟ ಗಾಜಿನ ಒಳಗಿಂದಲೇ ಹಾದು ಹೋಗಬೇಕೆಂದೂ,ನಮ್ಮ ಚಿಂತನೆಗಳಿಗೆ ಹಳಬರ ಚಿಂತನೆಗಳು,ಆಚಾರ,ವಿಚಾರಗಳು ಅಡಿಪಾಯ ವಾಗಬೇಕೆಂದೂ, ಅದನ್ನು ಬಿಟ್ಟು ನಮ್ಮ ಮನಸ್ಸು ಅತ್ತಿತ್ತ ಸುಳಿಯಬಾರದೆಂಬ ಒಂದು ಸಾರ್ವತ್ರಿಕ ಅಭಿಪ್ರಾಯ ಸೃಷ್ಟಿಸಲಾಗಿದೆ.

ಗುರುಕುಲದ ದ್ಯೇಯೋದ್ದೇಶಗಳಿಗೆ ವ್ಯತಿರಿಕ್ತವಾಗಿ ಜನರಲ್ಲಿ ಜ್ಞಾನ ಹರಡುವ ಉದ್ದೇಶಗಳಿಂದ ಸ್ಥಾಪಿಸಲ್ಪಟ್ಟ ವಿಶ್ವವಿದ್ಯಾಲಯಗಳು ಸಹ ಮತ್ತೆ ಗುರುಕುಲಗಳಂತೆ ಜ್ಞಾನದ ಮೇಲೆ ಏಕಸ್ವಾಮ್ಯ ಸಾಧಿಸುವ ಪ್ರಯತ್ನಕ್ಕೆ ಕೈ ಇಟ್ಟಿರುವುದನ್ನು ನಾವು ಕಾಣುತ್ತೇವೆ.

ದೇಶಕ್ಕೆ ಸ್ವಾತಂತ್ರ ಬಂದ ನಂತರ ಸರ್ಕಾರದ ಕೃಪಾಕಟಾಕ್ಷದಿಂದ ಆರಂಭವಾದ ಶೈಕ್ಷಣಿಕ ಕ್ರಾಂತಿ ಇಂದು ಬಂದು ಮುಟ್ಟಿರುವ ಸ್ಥಿತಿಯನ್ನು ಅವಲೋಕಿಸಿದರೆ ಶೈಕ್ಷಣಿಕ ಜಗತ್ತಿನ ಅಧಪತನ ಕಂಡುಬರುತ್ತದೆ. ಹಿಂದೆ ದೇಶದಲ್ಲಿ ಹೆಚ್ಚು ಹೆಚ್ಚು ಜನ ವಿಧ್ಯಾವಂತರಾಗಲಿ ಎಂದು ಹಿಂದೆ ಸಂಜೆ ಕಾಲೇಜುಗಳನ್ನು ತೆರೆಯಲಾಯಿತು.ಸಾರ್ವಜನಿಕ ಗ್ರಂಥಾಲಯಗಳನ್ನು ತೆರೆಯಲಾಯಿತು.ಅದು ಸಾಲದು ಎನ್ನಿಸಿ ಅಂಚೆ ತೆರಪಿನ ಶಿಕ್ಷಣ ಆರಂಭವಾಯಿತು.ಈಗ ಜ್ಞಾನ ಪ್ರಸರಣಕ್ಕೆ ಅಂಚೆ ಅಲ್ಲದೆ ಇನ್ನೂ ಹೆಚ್ಚು ಮಾಧ್ಯಮಗಳು ಲಭ್ಯವಿದೆ.ಆದರೆ ಜ್ಞಾನ ಪಸರಿಸುವ ಮನಸ್ಸು ನಮ್ಮ ಶಿಕ್ಷಣತಜ್ಞರಲ್ಲಿ ಇದ್ದಂತಿಲ್ಲ. ಸೂಕ್ಷ್ಮವಾಗಿ ನೋಡಿದರೆ "ಗುರುಶಾಹಿಗಳ" ಕೈವಾಡವನ್ನಿಲ್ಲಿ ನೋಡಬಹುದು.

ಶಿಕ್ಷಣ ಸಂಸ್ಥೆ ಗಳು ಗಣನೀಯ ಸಂಖ್ಯೆಯಲ್ಲಿ ಹೆಚ್ಚಿದರೂ ಅಲ್ಲಿ ವಿಧ್ಯೆ ಪಡೆಯಲು ಕೆಲವರಿಗೆ ಮಾತ್ರ ಸಾಧ್ಯವಾಗುತ್ತಿದೆ.ಉನ್ನತ ಶಿಕ್ಷಣ ಸಂಸ್ಥೆಗಳ ಹತ್ತಿರ ಸಾವಿರಾರು ಏಕರೆಗಳು ಕೊಳೆಯುತಿದ್ದರೆ ಇತ್ತ ಸಾರ್ವಜನಿಕ ಗ್ರಂಥಾಲಯ ಗಳನ್ನು ತೆರೆಯಲು ಸ್ಥಳದ ಅಭಾವ!. ಮೊದಲು ರಾತ್ರಿ ಶಾಲೆಗಳಲ್ಲಿ ಕಾನೂನು ಕಲಿಸಲಾಗುತ್ತಿತ್ತು. ಈಗ ಅದನ್ನು ತೆಗೆದು ಹಾಕಲಾಯಿತು. ನ್ಯಾಷನಲ್ ಲಾ ಸ್ಕೂಲ್ ನಂತಹಾ ಸಂಸ್ಥೆಗಳಲ್ಲಿ ಕಲಿಯಲು ವಯಸ್ಸಿನ ಮಿತಿ ಹೇರಲಾಯಿತು. ಇಂಥಹ ಹಲವು ಸಂಸ್ಥೆಗಳು ನಡೆಯುತ್ತಿರುವುದು ಸಾರ್ವಜನಿಕ (ತೆರಿಗೆದಾರನ)ಹಣದಿಂದ.ಆದರೂ ಸಹ ಈ ದೇಶದ ಸಾರ್ವಜನಿಕರನ್ನು ಹೊರಗಿಡಲು ಇವು ಸಾಧ್ಯವಾದಷ್ಟು ಪ್ರಯತ್ನಿಸುತ್ತಿವೆ. ಸಂಸ್ಥೆಗಳು ನೇರವಾಗಿ ಸರ್ಕಾರದ ಅಧೀನದಲ್ಲಿದ್ದರೆ ಜನರ ಮುಂದೆ ಉತ್ತರಿಸುವ ಜವಾಬ್ದಾರಿಯಿರುತ್ತದೆ ಎಂಬ ಕಾರಣಕ್ಕೆ "ಸ್ವಾಯುತ್ತತೆ" ಎಂಬ ಅನೈತಿಕ ಪರಿಕಲ್ಪನೆ ಸೃಷ್ಟಿಸಲಾಯಿತು.

ಅಲ್ಲಿ 'ಗುರು'ಗಳು ಆಡಿದ್ದೆ ಆಟ!.ಆಟ ಗುರುಗಳದ್ದು,ದುಡ್ಡು ಸರ್ಕಾರದ್ದು.

ಲಾರ್ಡ್ ಕರ್ಜನ್ ಸಿವಿಲ್ ಸರ್ವಿಸ್ ಪರೀಕ್ಷೆಗೆ ಹಾಜರಾಗಲು ಇರುವ ವಯೋಮಿತಿಯನ್ನು ಇಳಿಸಿದ. ಆಗ ನಮ್ಮ ರಾಷ್ಟ್ರ ನಾಯಕರು ಕೂಗಾಡಿದರು.ರಾಷ್ಟ್ರಾದ್ಯಂತ ಚಳವಳಿಗಳು ಅದಕ್ಕಿಂತ ನೀಚ ಕ್ರಮಗಳನ್ನು ಶಿಕ್ಷಣತಜ್ಞರು ಇಂದು ತೆಗೆದುಕೊಂಡರೂ ನಾವು ಕಮಕ್-ಕಿಮಕ್ ಅನ್ನದೆ ಒಪ್ಪಿಕೊಳುತಿದ್ದೆ. ಏಕೆಂದರೆ ಅವು ಸ್ವಯುತ್ತ ಸಂಸ್ಥೆಗಳು. ಸಾಲದಕ್ಕೆ ಅವುಗಳಲ್ಲಿ ಕೆಲವು ಪ್ರಮುಖ ವರ್ಗಗಳ ಮುಖಂಡರ,ಧಾರ್ಮಿಕ ನಾಯಕರ ಕೈ ಇರುತ್ತವೆ. ಭಯಕ್ಕೋ,ಧಾಕ್ಷಿಣ್ಯಕ್ಕೋ ಕಟ್ಟು ಬಿದ್ದು ಯಾರೂ ಅವುಗಳ ಬಗ್ಗೆ ಜೋರಾಗಿ ಮಾತಾಡದೆ ಸಾಧ್ಯವಾದಲೆಲ್ಲಾ ವಶೀಲಿಯಿಂದಲೋ,ಹಣದಿಂದಲೋ ನಮ್ಮ ಕಾರ್ಯಸಿದ್ದಿಮಾಡಿಕೊಂಡು ಅಡ್ಜಸ್ಟ್ ಮಾಡಿಕೊಂಡು ಬದುಕುಸಾಗಿಸುತ್ತೇವೆ. ಹಳ್ಳಿಗಳಲ್ಲಿ ಒಳ್ಳೆಯ ಪ್ರಾಥಮಿಕ ಶಾಲೆಯನ್ನು ಕಟ್ಟಲು ಸರ್ಕಾರದ ಬಳಿ ಹಣವಿರುವುದಿಲ್ಲ. ಆದರೆ ಉನ್ನತ ಶಿಕ್ಷಣದ ತಿಮಿಂಗಿಲಗಳನ್ನು ಸ್ಥಾಪಿಸಲು ಸರ್ಕಾರದ ಬಳಿ ಹಣದ ಕೊರತೆಯಿಲ್ಲ. ಸಂಸತ್ತು "ಕಡ್ಡಾಯ ಶಿಕ್ಷಣ ಕಾಯ್ದೆ"ಯನ್ನು ರೂಪಿಸಿದಾಗ ಅದನ್ನು ಕಾರ್ಯ ರೂಪಕ್ಕೆ ತರುವುದಕ್ಕೆ ನಮ್ಮಲ್ಲಿ ಹಣ ಕಾಸಿನ ಕೊರತೆ ಇದೆ ಎಂದು ರಾಜ್ಯ ಸರ್ಕಾರ ಹೇಳಿತು.ಆದರೆ ಈ ಕಾಯ್ದೆಯ ಬಗ್ಗೆ ಕರ್ನಾಟಕದಲ್ಲಿ ಒಂದಿಷ್ಟು ಅಪಸ್ವರ ವ್ಯಕ್ತವಾಯಿತು. ಸೂಕ್ಷ್ಮವಾಗಿ ನೋಡಿ,ಈ ಅಪಸ್ವರದ ರೂವಾರಿಗಳೆಲ್ಲರೂ ಉನ್ನತ ಶಿಕ್ಷಣ ಮಾಫಿಯಾದೊಂದಿಗೆ ಶಿಕ್ಷಣ ತಜ್ಞರೆಂದು ಗುರುತಿಸಿಕೊಂಡಿರುವವರೇ!. "ಹುಚ್ಚು ಮುಂಡೆಯ ಮದುವೆಯಲ್ಲಿ ಉಂಡವನೇ ಜಾಣ ಎನ್ನುವಂತೆ ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸಲು ಹಣದ ಥೈಲಿ ಇರುವವರು,ಧರ್ಮಗುರುಗಳು, ವಿವಿಧ ಜಾತಿಯ ನಾಯಿಗಳು ,ಕ್ಷಮಿಸಿ,ನಾಯಕರು ನಾಮುಂದು ತಾಮುಂದು ಎನ್ನುತಾ ಮುಗಿಬೀಳುತ್ತಾರೆ."ಓಡಾಡುವ ದೇವರುಗಳು"ಓಡೋಡಿ ಬರುತ್ತಾರೆ. ಇಲ್ಲಿ ಸ್ವಜನಪಕ್ಷಪಾತ ಹಾಗೂ ಜಾತೀವಾದಕ್ಕೆ ಆಫಿಶಿಯಲ್ ಸ್ಟೇಟಸ್ ಇದೆ.ತನ್ಮೂಲಕ ಸಮಾಜದಲ್ಲಿ ಇವು ಜನಜೀವನದ ಒಂದು ಭಾಗವಾಗಿ ಸಕ್ರಮಗೊಳ್ಳುತ್ತವೆ.

ಹೀಗೆ ವಿಶ್ವವಿದ್ಯಾಲಯಗಳು ಜ್ಞಾನ ಕೊಡುವುದಕ್ಕಿಂತಲೂ ಜ್ಞಾನವನ್ನು ನಿಯಂತ್ರಿಸುವ ತೆವಲನ್ನು ಮೈಗೂಡಿಸಿಕೊಳ್ಳುತ್ತಿರುವುದನ್ನು ನಾವಿಲ್ಲಿ ಕಾಣುತ್ತೇವೆ. ಯಾರು ಯಾರು ಯಾವ ಕೋರ್ಸ್ ಮಾಡಲು ಅರ್ಹರು/ಅರ್ಹರಲ್ಲ ,ಯಾರು ಯಾವ ವಯಸ್ಸಿನ ವರೆಗೆ ಕಲಿಯಬಹುದು/ಕಲಿಯಬಾರದು ಇತ್ಯಾದಿಗಳನ್ನು ನಿರ್ಧರಿಸುವ ಹಕ್ಕಿನ ಏಕಸ್ವಾಮ್ಯವನ್ನು ಹೊಂದಲು ಕೆಲವರು ಪ್ರಯತ್ನ ಪಡುತಿದ್ದಾರೆ.

ಇಂದು ಭಾರತದಲ್ಲಿ ಗುರುಪೀಠಗಳು ಸಾಮಾಜಿಕ ಮೌಲ್ಯಗಳ ಬಲಿಪೀಠವಾಗಿ ಪರಿಣಮಿಸಿವೆ. ಹಿಂದೆ ಗುರು ಏನು ಮಾಡುತಿದ್ದನೋ ಇಂದು ಕೂಡ ಗುರು ಅದನ್ನೇ ಮಾಡುತಿದ್ದಾನೆ.ಜಾತೀಯತೆ,ಬಲಪಂಥೀಯ ಕೋಮುವಾದ,ಎಡಪಂಥೀಯ ಉಗ್ರಾವಾದ,ಬ್ರಷ್ಟಾಚಾರ,ಲಂಚಗುಳಿತನ, ಶಿಕ್ಷಣದಲ್ಲಿ ದಾರ್ಮಿಕ ನಾಯಕರ ಹಸ್ತಕ್ಷೇಪ, ಜಾತಿಗಳ ನಡುವೆ ಕಲಹ,ಸ್ವಜನಪಕ್ಷಪಾತ, ಅಜ್ಞಾನ,ಹೀಗೆ ದೇಶದ ಎಲ್ಲಾ ಸಮಸ್ಯೆಗಳು ಉನ್ನತ ಶಿಕ್ಷಣ ಸಂಸ್ಥೆಗಳಿಂದಲೇ ಉಗಮವಾಗುತ್ತಿರುವಂತೆ ಕಂಡು ಬರುತ್ತಿದೆ.

ಈ "ಗುರುಗಿರಿ"ಯನ್ನು ಹೋಗಲಾಡಿಸದಿದ್ದರೆ ದೇಶಕ್ಕೆ ಗಂಡಾಂತರ ಕಾದಿದೆ.

ಆದುದರಿಂದ ನಾವು ಈ ಹಾಡನ್ನು ಹಾಡಬೇಕಾಗಿದೆ,

ಗುರುವಿನ ಮುಸುಕನು ಕಳಚುವವರೆಗೆ ದೊರೆಯದಣ್ಣ ಮುಕುತಿ!  

Friday, April 16, 2010

ಸದ್ಗುರುವಿಗೆ ಜೈ ಹೋ (Part-3)

ದಿನಾಂಕ: ೩-೩-೩೦೧೦ ,ಮೀಡಿಯಾಗಳ ಟಿ ಅರ್ ಪಿ ಸಡನ್ ಆಗಿ ಏರಿತು.ಎಲ್ಲರೂ ಟಿ.ವಿ ಚಾನಲ್ ಚೇಂಜ್ ಮಾಡಿ ಮಾಡಿ ಶ್ರೀ ಶ್ರೀ ಶ್ರೀ ಪರಮಹಂಸ ನಿತ್ಯಾನಂದನ ದರ್ಶನ ಮಾಡಲು ಉದ್ಯುಕ್ತರಾದವರೇ.ಟಿ.ವಿ ಯವರೂ ಸಹ ಈ ದೃಶ್ಯವನ್ನೂ ನಿರಂತರವಾಗಿ ಪ್ರಸಾರ ಮಾಡಿ ಶ್ರೀಗಳ ಧರಮಕಾರ್ಯಕ್ಕೆ ತಾವು ಒಂದಿಷ್ಟು ಅಳಿಲು ಸೇವೆ ಸಲ್ಲಿಸಿ ಕೃತಾರ್ಥರಾದರು. ಟಿ.ವಿ ಚಾನೆಲ್ ಗಳಿಗಿದು ಒಂದು ರೀತಿಯ ಜೀವದಾನ. ನೋಡುವವರು ಗತಿಯಿಲ್ಲದೇ,ಬಡವರು ಅವರ ಮನೆಯ ಸಮಸ್ಯೆಗಳನ್ನು ಜಗತ್ತಿನ ಮುಂದೆ ಚರ್ಚಿಸುತ್ತಾ,ಕಿತ್ತಾಡುವಂತೆ ಮಾಡುತ್ತಾ ಅದರಿಂದ ಹಣಗಳಿಸುವ ಸ್ತಿತಿಗೆ ಬಂದಿದ್ದವು ಈ ಟಿ.ವಿ.ಚಾನಲ್ಗಳು.ಇನ್ನುಳಿದಂತೆ ಯಾವುದೇ ಹಳ್ಳಿಗೆ ನುಗ್ಗಿ,ಅಲ್ಲಿನ ಜನರ ದಡ್ಡತನವನ್ನೇ ಒಂದು ನಿಗೂಡ ರಹಸ್ಯವೆಮ್ಬಂತೆ ಬಿಂಬಿಸಿ ಪ್ರೇಕ್ಷಕರನ್ನು ವಂಚಿಸುವುದು, ಜನರನ್ನು ಮಲಗಿಸಿ, ಅವರು ನಿದ್ದೆಯಲ್ಲಿ ಮಾತಾಡಿದ್ದನ್ನು ಅವರ ಪೂರ್ವಜನ್ಮದ ವೃತಾಂತವೆಂದು ನಂಬಿಸುವುದು, ದಿನಬೆಳಗಾದರೆ ಕವಡೆ ಜ್ಯೋತೀಷಿಗಳನ್ನು ಛೂ ಬಿಟ್ಟು ಜನರನ್ನು ಹೆದರಿಸುವುದು, ಬ್ಯೂಟಿ ಸಲಹೆ ಅಂತ ಕಪ್ಪಗಿರುವವರನ್ನು ಬೆಳ್ಳಗೆ ಮಾಡುವ ಪ್ರಯೋಗಗಳನ್ನು ತೋರಿಸುವುದು,ಕೊನೆಗೆ ಒಂದು ಕಣ್ಣಿರಿನ ಚಲನಚಿತ್ರ ಹಾಕಿ ಜನರನ್ನು ಅಳಿಸಲು ಪ್ರಯತ್ನಿಸುವುದು ಇವು ಟಿ ವಿ ಗಳ ದೈನಂದಿನ ಚಟುವಟಿಕೆ.ಹೀಗೆ ಜನರ ಮನಸ್ಸಿನ ಮೇಲೆ ಇವರು ದಿನಾ ಅತ್ಯಾಚಾರ ಮಾಡುತ್ತಲೇ ಇದ್ದರೂ ನೋಡುವವರ ಸಂಖ್ಯೆ ಕ್ಷೀಣಿಸುತ್ತಲೇ ಇತ್ತು. ಆಗ ನಡೆಯಿತು ನೋಡಿ ಶ್ರೀಗಳ ಪವಾಡ. ಶ್ರೀ ನಿತ್ಯಾನಂದ ರೂಮಿನ ಬಾಗಿಲು ಹಾಕಿ ಬಟ್ಟೆ ಬಿಚ್ಚಿದ್ದೆ,ಬಿಚ್ಚಿದ್ದು. ಟಿ ಆರ್.ಪಿ ರೇಟಿಂಗ್ ಊರ್ಧ್ವಮುಖವಾಯಿತು!. ಸ್ವಾಮಿಗಳನ್ನು ತೆಗಳುವ ನೆಪದಲ್ಲಿ ಜನ ಅದನ್ನು ಪದೇ,ಪದೇ ನೋಡಿ ಆನಂದಿಸಿದರು. ಸೊ ಕಾಲ್ಡ್ ಗೃಹಿಣಿಯರು ತಮಗೆ ಕಾಮದ ಬಗ್ಗೆ ಏನೂ ಗೊತ್ತಿಲ್ಲಾ ಎಂಬಂತೆ ನಿತ್ಯಾನಂದನನ್ನು ತೆಗಳಿದ್ದೆ ತೆಗಳಿದ್ದು.ತಾವು ಮಾಡಿದರೆ ಒಪ್ಪು,ಅವನು ಮಾಡಿದರೆ ತಪ್ಪು ಎನ್ನುವ ಅಭಿಪ್ರ್ರಾಯ ಅವರಲ್ಲಿ ಇದ್ದಂತಿತ್ತು. ಇವರ್ಯಾರಿಗೂ ಸಂಬೋಗದ ಅನುಭವ ಇಲ್ಲವೇ?.ಬೇಕಾದರೆ ಸರ್ವೆ ಮಾಡಿ ನೋಡಿ.ಯಾವುದೇ ನಿರ್ಧಿಷ್ಟ ಅವಧಿಯ ಅಂಕಿ-ಸಂಖ್ಯೆ ಕ್ರೋಡಿಕರಿಸೋಣ. ಆ ಅವಧಿಯಲ್ಲಿ ಸ್ವಾಮೀ ಹೆಚ್ಚು ಬಾರಿ ಮಾಡಿರುತ್ತಾನೋ,ಇವರುಗಳು ಹೆಚ್ಚು ಬಾರಿ ಸಂಭೋಗ ಮಾಡಿರುತಾರೋ?.ಈ ಬಗ್ಗೆ ಅವರ್ಯಾರೂ ಮಾತಾದುವುದಿಲ್ಲ.ಯಾಕೆಂದರೆ point ಅದಲ್ಲ. ಒಂದು ಮಾತ್ರ ಮೀಸಲಾದ ಹಕ್ಕನ್ನು ಕಾವಿ ಅಪಹರಿಸಿದ ಬಗ್ಗೆ ಅವರಿಗೆ ಅಪಾರ ವ್ಯಥೆ ಇದ್ದಂತೆ ಕಂಡುಬರುತ್ತಿತ್ತು. ಇವರು ಉಗಿದಿದ್ದು ಖಾವಿಯ ಮೇಲೆ ಬಹಳ ಚೆನ್ನಾಗಿ ಕಾಣುತಿತ್ತು. ಬೇಕಾಗಿತ್ತಾ,ಇವರಿಗೆ ಈ ಪಾಡು. ಅಸಲಿಗೆ ಕರೀಮಣಿ ಎಂಬುದನ್ನು ಕಂಡುಹಿದಿದಿದ್ದೆ ಈ ಮಠಗಳು.(ಇದು ವಿಶ್ವದಾದ್ಯಂತ ಇರುವ ಎಲ್ಲಾ ಧರ್ಮಗಳಿಗೆ ಅನ್ವಯಿಸುತ್ತದೆ).ಯಾವಾಗ ತಮ್ಮಲ್ಲಿರುವ ಜ್ಞಾನಬಂಡಾರ ನಿರುಪಯುಕ್ತ ಎಂದು ಕಂಡುಬಂದಾಗ ಅವರು ಆರಂಬಿಸಿದ ಕೆಲಸ ಎಂದರೆ,ಕಾಡಿನಿಂದ ನಾಡಿಗೆ ಬಂದು ಔಷಧಿ ಕೊಡುವುದು,ಪುಸ್ತಕ ಮಾರುವುದು,ಕರಿಮಣಿ ಹಂಚುವುದು ...,ಇತ್ಯಾದಿ. ಹೀಗೆ ಪರಮಾರ್ಥದಲ್ಲಿ ಅನ್ನ ಕಾಣದೇ ಮಾಮೂಲೀ ಜನರ ಕೆಲಸಕ್ಕೆ ಲಗ್ಗೆ ಇಟ್ಟ ಇವರು ತಮ್ಮ ಬಟ್ಟೆಯಿಂದಾಗಿ ಇತರರಿಂದ ಪ್ರತ್ಯೇಕವಾಗಿ ಕಂಡುಬರುತ್ತಾರೆ. ಪಾರಮಾರ್ಥಿಕ ಗುರಿಗಳಿಂದ ವಿಮುಖರಾಗಲು,ಮೆತ್ತಗೆ ಮುಖ್ಯವಾಹಿನಿಗೆ ಸೇರಿಕೊಳ್ಳಲು ಯಾವ ಯಾವ ಮಾರ್ಗಗಳನ್ನು ಹಿಡಿಯಬಹುದೋ ಅವೆಲ್ಲವನ್ನೂ ಅನ್ವೇಷಣೆ ಮಾಡಿದ್ದಾರೆ. ಇವರ ಎಷ್ಟು ಜನಕ್ಕೆ ದೇವರನ್ನು ತೋರಿಸಿದರು ಎಂಬುದಕ್ಕೆ ಇವರಬಳಿ statistics ಇಲ್ಲ.ಆದರೆ ಎಷ್ಟು ಜನಕ್ಕೆ ಮದುವೆ ಮಾಡಿಸಿದ್ದಾರೆ, ಡಿಗ್ರೀ ಮಾರಿದ್ದಾರೆ ಎಂಬ ಬಗ್ಗೆ satistics ಇದೆ. ಈ ಧರ್ಮಗಳನ್ನ ಮಾರುವ ಏಜೆನ್ಸಿ ಗಳಲ್ಲಿ ಧರ್ಮ ವಿಕ್ರಯವಾಗುತ್ತಿಲ್ಲ.ಅದೇನಿದ್ದರು ಕಾಮ್ಪ್ಲಿಮೆಂಟರಿ complimentary) needabahudaada ಸರಕು ಅಷ್ಟೇ. ಆದುದರಿಂದಲೇ ಅವರು ಸಂಭಂದಗಳನ್ನು ಮಾರುವ ಕೆಲಸವನ್ನು monopoly ಮಾಡಿಕೊಂಡಿದ್ದಾರೆ. ನಮ್ಮ ಏಜೆನ್ಸಿಯಿಂದ ಲೈಸೆನ್ಸ್ ಪಡೆಯದಿದ್ದರೆ ನಿಮ್ಮ ಸಂಭಂದವೇ ಅಸಿಂದು ಎಂದು ಪರೋಕ್ಷ ಕಾನೂನು ಮಾಡಿಕೊಂಡಿದ್ದಾರೆ!.



ನಾವು ಜ್ಞಾನಕ್ಕಾಗಿ ತಪಸ್ಸು ಮಾಡುತ್ತೇವೆ ಎನ್ನುವವರು ಜಗತ್ತಿನ ಸೊಂಟದ ಕೆಳಗಿನ ವಿಚಾರಗಳನ್ನೂ ನಾವೇ ನಿರ್ವಹಿಸುತ್ತೇವೆ,ನಾವು ಸಾಮೂಹಿಕ ಮದುವೆ ಮಾಡಿಸುತ್ತೇವೆ ಎಂದು ನಾಚಿಕೆ ಇಲ್ಲದೆ ಇಂತಹ ಸಮಾರಮ್ಬಗಳಲ್ಲಿ ಬಹಿರಂಗವಾಗಿ ಬಾಗವಹಿಸಿ ಆಶಿರ್ವಚನ ನೀಡುತ್ತಾರೆ. ಹಾಗೇ ಆಶಿರ್ವಚನ ನೀಡಲು ಸಂಸಾರದ ಬಗ್ಗೆ ನಿಮಗೆ ಯಾವ ಅನುಬವವಿದೆ?,ತಾವೇ ಸಂಸಾರ ನಡೆಸದೆ ಇನ್ನೊಬ್ಬನಿಗೆ ಉಪದೇಶ ಮಾಡುವದು ಎಷ್ಟು ಸರಿ ಎಂದು ಯಾರೂ ಕೇಳುವುದಿಲ್ಲ.ಅನುಭವ ಪಡೆಯುವುದು ಜ್ಞಾನನ್ವೇಷಿಯ ಪರಮ ಗುರಿ ಹಾಗು ಹಕ್ಕು.ಆದರೆ ಆ ಅನುಭವ ಪಡೆಯಲು ಹೋದರೆ ಗೂಸಾ ಗ್ಯಾರೆ೦ಟಿ!. ಸಂಸಾರದ ಬಗ್ಗೆ Practical ಜ್ಞಾನ ಇಲ್ಲದೆ ಇರುವುದರಿಂದಾಗಿ ಅವರು ನಮಗೆ ನೀಡುವ ಮಾಹಿತಿ/ಸಲಹೆಗಳು ಸಂಪೂರ್ಣವಾಗಿ ಸರಿಯಾಗಿರುವುದಿಲ್ಲಾ,ಆದುದರಿಂದ ಇಂತಹ ಸಮಾರಂಬದಲ್ಲಿ “ಶ್ರೀ“ ಮಾಡುವ ಭಾಷಣವನ್ನು timepass ಎಂದು ಪರಿಗಣಿಸಬಹುದೇ ವಿನಃ ಗಂಭೀರವಾಗಿ ಪರಿಗಣಿಸಬಾರದು. ಪರೀಕ್ಷೆಗೆ ಹೋಗುವ ಹುಡುಗ ಉತ್ತರ ಗೊತ್ತಿಲ್ಲದ ಪ್ರಶ್ನೆಗೆ ಒಟ್ಟಾರೆ ಯಾವುದೋ ಒಂದು ಕಾಗಕ್ಕ-ಗುಬ್ಬಕ್ಕನ ಕಥೆ ಬರೆಯುವಂತೆ ಈ ಸಂತರ ಅವರವರ ಮೂಗಿನ ನೇರಕ್ಕೆ ಏನೋ ಒಂದು ಹೇಳುತ್ತಾರೆ.ಎಲ್ಲರಿಗೂ ಶಿಕ್ಷಣ ಮುಖ್ಯ ಎನ್ನುತ್ತಾರೆ.ಏಕೆಂದರೆ ಅವರದೇ ಶಿಕ್ಷಣ ಸಂಸ್ತೆಗಳಿರುತ್ತವಲ್ಲಾ!.ಎಲ್ಲರೂ ಗುರು/ಹಿರಿಯರ ಮಾತು ಕೇಳಿ ಎನ್ನುತ್ತಾರೆ.ಏಕೆಂದರೆ ಅವರ tribe survive ಆಗಬೇಕಲ್ಲಾ!. ಮದುವೆಯಾದ ನಂತರ ಒಂದಿಬ್ಬರು ಮಕ್ಕಳು ಆದನಂತರ ಪತಿ ಪತ್ನಿಯರು ಸಂಪೂರ್ಣವಾಗಿ ಬ್ರಹ್ಮಚರ್ಯವನ್ನು ಪಾಲಿಸಬೇಕು,ಪರಸ್ಪರರನ್ನು ಸಹೋದರ –ಸಹೋದರಿಯರಂತೆ ಭಾವಿಸಬೇಕು ಎಂದು ಒಬ್ಬ ಬಹಳ ಹೆಸರು ಮಾಡಿರುವ ಒಬ್ಬ ಗುರುಗಳು ಅಪ್ಪಣೆ ಕೊಡಿಸಿದ್ದಾರೆ!.ಇವರ ಉಪದೇಶಗಳನ್ನು ಪಾಲಿಸುತ್ತಾ ಹೋದರೆ ಕಷ್ಟಪಟ್ಟು ಗಳಿಸಿದ ತುತ್ತೂ ಬಾಯಿಗೆ ಇಲ್ಲದಂತಾಗುತ್ತದೆ ಎಂಬುದು ಜನರ ಸುಪ್ತ ಮನಸ್ಸಿಗೆ ಗೊತ್ತಿದೆ.ಯಾಕೆಂದರೆ ಜನ್ಮ ಜನ್ಮಾತರದಿಂದಲೂ ಜನರು ಧಾರ್ಮಿಕ ಶೋಷಣೆಗೆ ಒಳಗಾಗುತ್ತಲೇ ಇದ್ದಾರೆ.ಆದುದರಿಂದ ಗೂಳಿ ಬಿದ್ದರೆ ಆಳಿಗೊಂದು ಕಲ್ಲು ಎಂದು ಗುರುಗಳನ್ನು ಹಣಿಯುತ್ತಾರೆ .ಒಟ್ಟಾರೆ ಎಲ್ಲಿ ಬೆಂಕಿ ಬಿದ್ದರೂ ಚಳಿ ಕಾಯಿಸಿಕೊಳ್ಳಲು ಜನ ಇದ್ದೆ ಇರುತ್ತಾರೆ.


ತಮ್ಮ ಸ್ವಾರ್ಥಕ್ಕಾಗಿ,ತಾವು ಸೃಷ್ಟಿಸಿದ ಕಳಪೆ ಸರಕುಗಳನ್ನು ಮಾರಲಿಕ್ಕಾಗಿ ಅಧ್ಯಾತ್ಮಿಕ ಜಗತ್ತು ಹಲವು ಪದ್ದತಿಗಳನ್ನು,ಮೂಢನ೦ಬಿಕೆಗಳನ್ನು ಸೃಷ್ಟಿಸಿ ಲಾಗಾಯ್ತಿನಿಂದಲೂ ಚಲಾವಣೆ ಮಾಡುತ್ತಾ ಬಂದಿವೆ. ಇಂದು ಇವರುಗಳೇ ಸಾಕಿದನಾಯಿಗಳು ಇವರನ್ನೇ ಕಚ್ಚಲು ಬಂದಿದೆ ಎಂದಾದರೆ ಅದಕ್ಕೆ ಇವರುಗಳೇ ಹೊಣೆಗಾರರು. ಅಧ್ಯಾತ್ಮಿಕ ಜಗತ್ತಿನ ಗಿಲೀಟಿನ ಬೋಧನೆಗಳ ಹಿಂದಿರುವ ದುರುದ್ದೇಶಗಳು, ಲಾಭಕೋರತನ,ಅಸತ್ಯ ಮುಂತಾದುವುಗಳ ಬಗ್ಗೆ ಜನರಲ್ಲಿ ತಿಳುವಳಿಕೆ ಮೂಡಿಸಬೇಕಾಗಿದೆ.ಧಾರ್ಮಿಕತೆಯ ವಿಷಾನಿಲಾದಿಂದ ಹೊರಬಂದು ಸ್ವಚ್ಚ ಗಾಳಿ ಸೇವಿಸುವ,ತನ್ಮೂಲಕ ಸ್ವತಂತ್ರ ಚಿಂತನೆಗಳನ್ನು ರೂಪಿಸಿಕೊಳ್ಳುವ ನಿಟ್ಟಿನಲ್ಲಿ ಪ್ರಯತ್ನ ಪಡುವುದು ಈ ಕಾಲಕ್ಕೆ ನಮ್ಮಿಂದ ಸಾಧ್ಯವೇ?


Thursday, April 1, 2010

ಗುರುಗಳೂ...ಡೈಲಾಗ್ ಗಳೂ ...



ಈ ಪ್ರಸಂಗವನ್ನ ನಾನು ಶಡಕ್ಷರಿಯವರ ಆಣಿಮುತ್ತಿನಲ್ಲಿ ನಾನು ಓದಿದ್ದು,” ಚಿನ್ಮಯಾನಂದರು ಮುಂಬೈಗೆ ಹೋಗಿದ್ದಾಗ ಅವರಿಗೆ ನೆಗಡಿಯಾಯಿತಂತೆ.ಅವರು ಅದಕ್ಕೆ ವೈದ್ಯನ ಬಳಿ ಮಾತ್ರೆ ತೆಗೆದುಕೊಳ್ಳುವುದನ್ನು ನೋಡಿ ಯಾರೋ ನನ್ನಂತಹ ಕಿಡಿಗೇಡಿ ಲಾಯರ್ ಒಬ್ಬ ಅವರನ್ನು ಕೇಳಿದನಂತೆ ‘ನೀವ್ಯಾಕೆ ದೇವರನ್ನು ಕೇಳಿ ನೆಗಡಿ ವಾಸಿಮಾಡಿಕೊಳ್ಳಬಾರದು’ ಅಂತ. ಅದಕ್ಕೆ ಅವರೆಂದರಂತೆ “ನಿನಗೆ ಏನಾದರೂ ವ್ಯಾಜ್ಯ ಇದ್ದಾರೆ ನೇರವಾಗಿ ಸುಪ್ರಿಂ ಕೋರ್ಟ್ಗೇ ಹೋಗುತ್ತಿಯಾ?,ಎಂಟಾಣೆ ಮಾತ್ರೆಯಲ್ಲಿ ಗುಣವಾಗುವ ಕಾಯಿಲೆಗೆ ಸರ್ವಶಕ್ತ ಬಗವಂತನನ್ನೇಕೆ ಕಾಡಬೇಕು?” ಇತ್ಯಾದಿ,ಇತ್ಯಾದಿ..........zzzzzzzzzz

ಅದೇನೋ ತರ್ಕಬದ್ದವಾದ ಮಾತೆ!...ಅದು ವಕೀಲನ ಬಾಯಿ ಮುಚ್ಚಿಸಿತು. ಆದರೆ ಕೇಶವಪ್ರಸಾದ್ ಬಾಯಿ?.


“ನೆಗಡಿಯೇನೋ ವಾಸಿ ಮಾಡಬಹುದು ಬಿಡಿ,ನಿಮ್ಮ ಖಾಯಿಲೆಗೆ ಎಂಟಾಣೆ ಮದ್ದಿನ ಪರಿಣಾಮ ಆಗದೆ ನೀವು ಪರಂಧಾಮವನ್ನೈಯುವ ಸ್ತಿತಿ ಬಂದಾಗಲಾದರೂ ಬಗವಂತನ ಮೊರೆ ಹೋಗಿ ಪ್ರಾಣ ಉಳಿಸಿಕೊಳ್ಬಹುದಲ್ಲ, ಭಕ್ತ ಮಾರ್ಕಂಡೆಯನಂತೆ. ಯಾಕೆಂದರೆ ಜಗತ್ತನ್ನೇ ಉದ್ದಾರ ಮಾಡುವ ಗುರುತರ ಜವಾಬ್ಧಾರಿ ಗುರುವಿನ ಮೇಲಿರುತ್ತದಲ್ಲಾ. ಸ್ವಲ್ಪ ಭಗವಂತನನ್ನು ಕೇಳಿ ನೋಡಿ ,ನಿಮಗಾಗಿ ಅಲ್ಲದಿದ್ದರೂ ನಮ್ಮಂತಹ ಶಿಷ್ಯಕೋಟಿ ಗಾಗಿಯಾದರೂ ..........

ಗುರುಗಳು ಹಾಗೆಲ್ಲಾ ಸ್ವಾರ್ಥಕ್ಕಾಗಿ ವರ ಬೇಡುವುದಿಲ್ಲ. ಅವರಲ್ಲಿ ಶತಾಯುಷಿಗಳಾದವರಿಗಿಂತಲೂ ಅರ್ಜೆಂಟ್ ಅರ್ಜೆಂಟ್ ಆಗಿ ಹೋದವರೇ ಹೆಚ್ಚು....,ಇದಕ್ಕೆ ಕಾರಣ ದೇವರಿಗೆ ಅವರ ಮೇಲಿನ ಪ್ರೀತಿ.ಅದಕ್ಕೆ ಅವರನ್ನು ಅಷ್ಟು ಬೇಗ ಕರೆಸಿಕೊಳ್ಳುತ್ತಾನೆ. ಈ ಅವಿವೇಕಿ ಕೇಶವಪ್ರಸಾದ್ ತಿಳಿಯದೆ ತಲೆಹರಟೆ ಮಾಡುತ್ತಾನೆ, ಕ್ಷಮಿಸಿಬಿಡಿ, ಪ್ಲೀಸ್.


ಗುರುವಿನ ‘ಪವರ್’ ಯಾವುದರಲ್ಲಿರುತ್ತದೆ ಗೊತ್ತಾ. ಸಮಯೋಚಿತ ಡೈಲಾಗ್ ಹೊಡೆದು ಶಿಷ್ಯನ ಬಾಯಿಮುಚ್ಚಿಸುವುದರಲ್ಲಿರುತ್ತದೆ.


ಹೀಗೊಂದು ಸಂಬಾಷಣೆ ಓದಿದ್ದು ನೆನಪಾಗುತ್ತಿದೆ.”ಒಂದು ದಿನ U.G.ಕೃಷ್ಣಮೂರ್ತಿ ರಮಣ ಮಹರ್ಷಿಯನ್ನ ನೋಡಲು ಹೋಗಿದ್ದರಂತೆ. ಯು.ಜಿ. ಕೇಳಿದರಂತೆ “ನಾನು ಕೇಳಿದ್ದನು ಕೊಡಬಲ್ಲಿರಾ?,


ರಮಣ-ನಾನು ಕೊಡಬಲ್ಲೆ. ನೀನು ತೆಗೆದು ಕೊಳ್ಳಬಲ್ಲೆಯಾ ?.... ಅಷ್ಟೇ ಸಂಭಾಷಣೆ ನಡೆದಿದ್ದು ಇವರಿಬ್ಬರ ಮಧ್ಯೆ. ಮರಳಿ ಬಂದು ಬಿಟ್ಟರಂತೆ ಯು.ಜಿ.


ಸರಿ ನನಗೆ ತೆಗೆದು ಕೊಳ್ಳುವ ಸಾಮರ್ಥ್ಯವನ್ನೇ ಕೊಡಿ ಎನ್ನಬಹುದಿತ್ತು. ಆದರೆ ಇವನು ಏನನ್ನು ಕೊಡಬಲ್ಲ ಎಂಬ ಅನುಮಾನ ಬಂದಿರಬೇಕು ಯು.ಜಿ ಗೆ.


ಬರಿ,ಅಸಂಬದ್ದ ಮಾತುಗಳು..ಒಗಟುಗಳು,ದಾರಿತಪ್ಪಿಸುವ ಲೆಚ್ಚರ್ ಗಳು.



ದೇಹದ ಅಜರಾಮರತೆಯ ಬಗ್ಗೆ ನಮ್ಮಲ್ಲಿ ಹಲವು ಕಲ್ಪನೆಗಳಿವೆ. ಈ ಕುರಿತು ಓಶೋ ಒಂದು ಕಡೆ ಬರೆದಿದ್ದು ನೆನಪಾಗುತ್ತಿದೆ.,ಅದನ್ನು ತುರ್ಜುಮೆ ಮಾಡದೆ cut & paste ಮಾಡಿದ್ದೇನೆ.

I know about Sri Aurobindo, because he himself was teaching his whole life that his special work was to give methods to people to attain physical immortality. All old teachers have taught you spiritual immortality; that's not a big problem, because the spiritual element in you is already immortal.
He used to say, "I am doing the real thing. The physical body, which is not immortal, I am going to make it immortal." And one day he died...

The chief disciple, "the Mother" of the Sri Aurobindo ashram, finally found a solution to it. She said, "He is not dead, he has gone into deep samadhi, the deepest that anyone has ever gone. He will wake up again - he is simply asleep."

So they made a marble grave for him, with all the comforts, because he was just sleeping and one day he was going to wake up...Then years passed, but he did not knock from the grave. People started suspecting, but the mother was over ninety, and she was still preaching physical immortality...



Then one day she died. And it was very difficult for the believers, because the believers had some investment; their investment was their own immortality...


I said, "But how long will it take? By that time you will all be dead! Even if they come.... You just go and open the grave, and you will know that it is no longer sleep. There are only skeletons, stinking of death, not the fragrance of immortality.


ಹಾಗೆಂದ ಮಾತ್ರಕ್ಕೆ ಇಂತಹಾ ಚೇಷ್ಟೆಗಳಲ್ಲಿ ಓಶೋ ಹಿಂದೆಬಿದ್ದಿಲ್ಲ.ಇವರ “ಫ್ರಂ ಸೆಕ್ಸ್ ಟು ಸೂಪರ್ಕಾಂಕ್ಶಿಯಸ್”ಎಂಬ ಪುಸ್ತಕದಲ್ಲಿ ಬ್ರಹ್ಮಚರ್ಯದ ಬಗ್ಗೆ ಸನಾತನಿಗಳ ನಂಬಿಕೆಯನ್ನ ಲೇವಡಿ ಮಾಡುವ ಈತ “ಬುಕ್ ಆಫ್ ಮೆಡಿಟೆಷನ್ “ನಲ್ಲಿ (ಇದು ವಿಜ್ಞಾನ ಭೈರವ ತಂತ್ರಕ್ಕೆ ಇವನ ಭಾಷ್ಯ) ಲೈಂಗಿಕ energy ಯಾವ ರೀತಿ ತಲೆಗೆ ಏರಿ ಓಜಸ್ ಆಗುತ್ತದೆ ಎಂಬುದನ್ನ ರಸವತ್ತಾಗಿ ವರ್ಣಿಸುತ್ತಾನೆ. ಯಾವುದು ಸರಿ?ಯಾವುದು ತಪ್ಪು?.

 
ಇಂತಹ ವಿರೋಧಾಭಾಸಗಳು ಹೆಚ್ಚಿನ ಸಂತರಲ್ಲಿ ಕಂಡುಬರುತ್ತದೆ. ಅವರನ್ನೇ ಕೇಳಿದರೆ ಏನಾದರೂ ಉಡಾಫೆ ಉತ್ತರ ಕೊಡುತ್ತಾರೆ.ಇವರು ಎನೆಂದರೂ ಅವರ ಶಿಷ್ಯರು ಚಪ್ಪಾಳೆ ಹೊಡೆಯುತ್ತಾರೆ.ನಂತರ ಶಿಷ್ಯರೇ ಅದಕ್ಕೊಂದು ಅರ್ಥ ಕಟ್ಟಿ ಭಾಷ್ಯ ಬರೆಯುತ್ತಾರೆ.


ಇವರ ಸಂಭಾಷಣೆಗಳು ಯಾವಾಗಲೂ ಅಸಂಬದ್ದವಾಗಿರುತ್ತವೆ. ಈ ತತ್ವಜ್ಞಾನಿಗಳು ಇನ್ನೂ ಚೊರೆ...ಅವರದು ತಲೆಕೆಡಿಸುವ ತಂತ್ರ.ಉದಾ:ನಿಷ್ಷ್ಯಬ್ದವನ್ನ ಆಲಿಸು....ಮೌನದೊಂದಿಗೆ ಮಾತನಾಡು...ಅಸ್ತಿತ್ವವೇ ದೇವರು...ಮುಂತಾದ ಅಪ್ರಾಯೋಗಿಕ ವಿಷಯಗಳ ಬಗ್ಗೆ ಪುಟಗಟ್ಟಲೆ ಬರೆಯುತ್ತಾರೆ....ಪುಸ್ತಕಕ್ಕೆ ಹಾಕಿದ ದುಡ್ಡು ಹೇಗೂ ವೇಷ್ಟಾಗೊದಲ್ಲದೆ ತಲೆನೋವಿನ ಮಾತ್ರೆಗೆ ಇನ್ನಷ್ಟು ಖರ್ಚಾಗುತ್ತದೆ. ಜೊತೆಗೆ ಇಂತಹ ಅಸಂಬದ್ದ ವಿಚಾರಗಳನ್ನು ಪರಸ್ಪರ ಕೊರೆದುಕೊಳ್ಳಲು “ಸತ್ಸಂಗಗಳು” ಎಂದು ಮಾಡಿಕೊಳ್ಳುತ್ತಾರೆ. ಬೇರೆ ಬೇರೆ ಗುರುಗಳದೂ ಬೇರೆ ಬೇರೆ ಸಂಘಗಳಿವೆ. ಇವರೆಲ್ಲರನ್ನೂ ಒಂದೇ ಸಂಘಕ್ಕೆ ಸೇರಿಸಿದರೆ ಹೊಡೆದಾಟವೇ ಆಗಬಹುದು!..ಯಾಕೆಂದರೆ ಎಲ್ಲರಿಗೂ ಅವರ ಮಾರ್ಗವೇ ಸರಿ ಅಲ್ಲವೇ. ಯೆಲ್ಲದಕ್ಕೋ ಇಲ್ಲಿ ಗುರು ಸಿಗುತ್ತಾರೆ. ಅವರ ಫಿ ಕಟ್ಟಲು ಮತ್ತು ನಂಬಿ ಕೆಡಲು ನೀವು ತಯಾರಿರಬೇಕಷ್ಟೇ.



ಹೌದು ಸ್ವಾಮೀ, ಕೆಲವು ಗುರುಗಳು ಬೋದಿಸುವ ವಿದ್ಯೆಗಳು ಒಂದೇ ,ಯರಡೆ?, ನಾನು ಚಿಕ್ಕವನಿದ್ದಾಗ ತುಂಬಾ ತೆಳ್ಳಗಿದೆ. ಯಾರೋ ಹೇಳಿದರು,ಹಠ ಯೋಗ ಮಾಡು, ಬರೀ ದಪ್ಪಗೆ ಆಗುವುದೇನು ಮಹಾ, ಅಷ್ಟ ಸಿದ್ದಿಗಳೂ ಸಿಗುತ್ತವೆ’ಎಂದರು. ಹಠ ಯೋಗ ಮಾಡಿ ಸಿದ್ದಿ ಪಡೆದರೆ ಚಠ ಬೋಗ ಗಳನ್ನೆಲ್ಲಾ ಸುಲಭವಾಗಿ ಈಡೇರಿಸಿಕೊಳ್ಳಬಹುದಲ್ಲಾ ಎಂದುಕೊಂಡು ಯೋಗ ಕ್ಲಾಸ್ ಸೇರಿದೆ. ಅಲ್ಲಿಯ ಗುರು ಯಾವಾಗ ನೋಡಿದರೂ ಬಲಕ್ಕೆ ವಾಲಿಕೊ೦ಡೋ,ಎಡಕ್ಕೆ ವಾಲಿಕೊಂಡೋ, ತಲೆಮೇಲೆ ನಿಂತುಕೊಂಡೋ ಇರುತಿದ್ದ. ಇವನು ಯೋಗ ಮಾಡುವ ಫೋರ್ಸ್ ನೋಡಿ, ಇವ ಕಮ್ಮಿಯೆಂದರೂ ಒಂದು ಸಾವಿರ ವರ್ಷ ಬದುಕುತ್ತಾನೆ ಎಂದುಕೊಂಡೆ. ಮೊನ್ನೆ ಪೇಪರ್ ನಲ್ಲಿ ನೋಡುತ್ತೇನೆ, ಅವನು ತೊಂಬತ್ತಕ್ಕೆ ಡಮಾರ್. ಅವನ ಪ್ರಾಯದ ಜಿಮ್ಮಿ ಕಾರ್ಟರ್ ವಿಸ್ಕಿ ಕುಡುಕೊಂಡು ಆರಾಮಾಗಿದ್ದಾನೆ.....


ಅಧ್ಯಾತ್ಮಿಕ ಜಗತ್ತಿನ ಮೇಲಿನ ನನ್ನ ಅಸಂಖ್ಯ ಆರೋಪಗಳು ಇನ್ನೂ ಅಪೂರ್ಣವಾಗಿರುವ ಕಾರಣ ಈ ಲೇಖನ ಇನ್ನೂ ಮುಂದುವರೆಯುತ್ತದೆ.


Tuesday, March 23, 2010

ಸದ್ಗುರುವಿಗೆ ಜೈ ಹೋ(Part-2)



ಕುವೆಂಪು ಸಾಹೇಬರು ಒಂದು ಕಡೆ ಈ quotation  ಹೇಳಿದ್ದಾರೆ " ಹಿಂದೆ ಗುರು ಇದ್ದ,ಮುಂದೆ ಗುರಿ ಇತ್ತು " ಅಂತ. ಆದರೆ ಅವರು ಇದನ್ನು ಯಾವರ್ಥದಲ್ಲಿ ಹೇಳಿದ್ದಾರೆ ಅನ್ನೋದನ್ನು ಅಡಿಟಿಪ್ಪಣಿಯಲ್ಲಿ ಹೇಳಿದ್ದರೆ ಚೆನ್ನಾಗಿತ್ತು.ಯಾಕೆಂದರೆ ಕೇಶವಪ್ರಸಾದ್ ಹೇಳುವುದು"ಮುಂದೆ 'ಉರಿ' ಇತ್ತು.ಹಿಂದೆ 'ಕುರು' ಇತ್ತು" ಅಂತ!.
ಯಾಕೆಂದ್ರೆ ಆ "ಹಿಂದೆ" ಎನ್ನಬಹುದಾದಂತಹ ಕಾಲಗಟ್ಟದಲ್ಲಿ ನಮ್ಮ ದೇಶದ ಸಹಸ್ತ್ರಾರು ಮಂದಿಗೆ ಇದ್ದದು ಬರೀ ಕಷ್ಟ ,ಕಾರ್ಪಣ್ಯಗಳೇ. ಈ ದೇಶದ ಸೆಕೆ,ಬರಗಾಲ,ಮಳೆಯ ಜೊತೆ ಸದಾ ಜೂಜಾಟದಂತಹ ರೈತಾಪಿ ಬದುಕಿನ 'ಉರಿ' ಒಂದೆಡೆಯಾದರೆ ಇತ್ತ ಜೀತಪದ್ದತಿ,ಜಾತಿಪದ್ದತಿ,ದೇವರು,ದಿಂಡರು ಎಂಬ 'ಕುರು' ಅವನನ್ನು ಕುಳಿತು ವಿಶ್ರಾಂತಿ ಪಡೆದು ಕೊಳ್ಳಲೂ ಬಿಡದಂತಹ ಸನ್ನಿವೇಶವಿತ್ತು. ಆ ದಾರಿಯಲ್ಲಿ ಹೋಗುವ ಪ್ರತಿಯೊಬ್ಬ ಆಕ್ರಮಣಕಾರರು,ರಾಜ ಮಹಾರಾಜರು,ಸಾಮಾನ್ಯರನ್ನು ಸುಲಿದು ಅವರ ಊರಿಗೆ,ಗುಡಿಸಲುಗಳಿಗೆ ಬೆಂಕಿ ಹೆಟ್ಟುತಿದ್ದರು. ಉಳಿದಿದ್ದನ್ನು ನಮ್ಮ ರಿಷಿ,ಮುನಿಗಳು ಬಿಕ್ಷೆಯ ಹೆಸರಲ್ಲಿ ದೊಚುತಿದ್ದರು. ಆ 'ಹಿಂದೆ' ಇದ್ದದು ಇದ್ದವರ ದಬ್ಬಾಳಿಕೆಯೇ ಹೊರತು ಗುರು ,ಗುರಿ ಯಾವುದೂ ಅಲ್ಲ. ಗುರುವನ್ನು ನಂಬಿ ಗುರಿ ಇಟ್ಟವನು ಹೆಬ್ಬೆಟ್ಟನ್ನೇ ಕಳೆದುಕೊಳ್ಳುತಿದ್ದ ಕಾಲವದು!(ಏಕಲವ್ಯ).ದ್ರೋಣ ಅಂದಿನ typical ಗುರು!. ಅತ್ತ ರಾಜ ಹಾಗೇ ದೋಚಿದರೆ ಇತ್ತ ದಟ್ಟ ಕಾನನಗಳ ನಡುವೆ ಪರ್ಣಕುಟಿಗಳಲ್ಲಿ ವಾಸಿಸುವ ರಿಷಿ,ಮುನಿಗಳು ಸುಮ್ಮನಿರುತ್ತಾರೆಯೇ?. ಅಕ್ಷರವೇ ಇವರ ಆಯುಧ.ಆಗಾಗ ರಾಜನ ಆಸ್ತಾನಕ್ಕೆ, ,ಉರು,ಕೇರಿಯ ಗುಡಿಗಳಿಗೆ ದಾಳಿಇಟ್ಟು ದೋಚುವುದೇ ಇವರ ಕೆಲಸ. ಹೊರಗಡೆ ಬ್ರಹ್ಮಚಾರಿಗಳಂತೆ ,ಸಿದ್ದರಂತೆ,ಸಂತರಂತೆ ಮಿಂಚುತಿದ್ದ ಇವರುಗಳಿಗೆ ಕಾಡಿನಲ್ಲಿ ಪರ್ಣಕುಟಿಗಳಲ್ಲಿ ಸಂಸಾರಗಳಿದ್ದವು!. ಆಗಾಗ ಇಲ್ಲಿಗೆ ಬಂದು ಹೋಗುವ ಇಂದ್ರನತಹವರು ಇದ್ದಾರೆ. ಮೈಯೆಲ್ಲಾ ಮೀನಿನ ವಾಸನೆ ಹೊಡಿಯುತಿದ್ದ ಹೆಣ್ಣಾದರೂ ಸರಿ,ದೋಣಿ ದಾಟಿಸುವಾಗ ಸಮಯ ನೋಡಿ ಗರ್ಬವನ್ನು ಅನುಗ್ರಹಿಸುವ ಸದ್ಬುದ್ದಿಯೂ ಪರಾಶರರಂತಹ  ಪರಮ ವಿರಕ್ತರಿಗಿತ್ತು!.
ಇವರುಗಳ ಬುದ್ದಿಶಕ್ತಿಗಳು,ಆತ್ಮಜ್ಞಾನ ಮುಂತಾದವು ಸಾಮಾನ್ಯಜನಗಲಿಗಿಂತ ಹೆಚ್ಚೇನೂ ಇರಲಿಲ್ಲ ಎಂಬುದು ಪುರಾಣ

 ಕಥೆಗಳನ್ನು ಓದಿದರೆ ತಿಳಿಯುತ್ತದೆ.ಋಷಿ ಗಲೆನ್ನಿಸಿಕೊಂಡ ಇವರು ಅರಿಷಡ್ವರ್ಗಗಳ ಮುಷ್ಟಿಯಲ್ಲಿ ಸಿಕ್ಕಿ ಬಾಧೆ ಪಡುತಿದ್ದವರೇ! .
 ರೇಣುಕಾ  "ಕಾಮ"ದಿಂದ ಪ್ರೇರೇಪಿತಳಾಗಿ  ತಪ್ಪು ಮಾಡಿದ್ದಾಳೆ ಎಂಬುದು "ಕ್ರೋಧ"ದಿಂದ ಪ್ರೇರೇಪಿತನಾಗಿರುವ
ಜಮದಗ್ನಿಯ ವಾದ. ತಾನೊಬ್ಬ ದೊಡ್ಡ ತಪಸ್ವಿ ಎಂಬ "ಮದ"ದಿಂದ ಆಕೆಗೆ ಮರಣದಂಡನೆ ವಿಧಿಸುತ್ತಾನೆ.ಅರಿಷಡ್ವರ್ಗಗಳ
ಮುಷ್ಟಿಯಲ್ಲಿ ಬಂಧಿತರಾಗಿದ್ದ ಜಮದಗ್ನಿ  ,ದೂರ್ವಾಸರಂತಹವರಿಗೆ ಮಹರ್ಷಿಗಳೆಂದು ಕರೆಸಿಕೊಳ್ಳುವ ಯೋಗ್ಯತೆ ಉಂಟೆ? ಎಂಬುದು ಕೇಶವ ಪ್ರಸಾದ್ ರ ಪ್ರಶ್ನೆ.

ಅಥವಾ ಇಂತಹಾ ಗುಣ ದೋಷಗಳನ್ನು ಹೊಂದಿದವರನ್ನು ಮಹರ್ಷಿಗಳೆಂಬ ಪಟ್ಟ ನೀಡಿರುವ ಲೇಖಕರ ಬುದ್ಡಿಮತ್ತೆ 
ಎಂತಹದು? ಒಂದೋ ಅವರುಗಳು ಅಜ್ಞಾನಿಗಳಾಗಿರಬೇಕು ಅಥವಾ ಪೂರ್ವಾಗ್ರಹಪೀಡಿಟರಾಗಿರಬೇಕು.ಒಟ್ಟಾರೆ ಇಷ್ಟೆಲ್ಲಾ 
ಐಬು ಗಳಿದ್ದರೂ ಋಷಿಗಳು ಪೂಜರ್ಹರು.ಒಳ್ಳೆಯ ಗುಣಗಳನ್ನು ಹೊಂದಿದ್ದ ಬಲಿ ಚಕ್ರವರ್ತಿ ಮಾತ್ರ ವಧೆಗೆ ಅರ್ಹ!. 
ಸಂಬೋಗಸುಖದಲ್ಲಿರುವ ಶಿವನೂ ಕೂಡಲೇ ಹಾಸಿಗೆಯಿಂದ ಓಡಿಬಂದು ನಮಸ್ಕರಿಸಬೇಕು ಎಂಬ ತೆವಲನ್ನು ಹೊಂದಿದ್ದ 
ದೂರ್ವಾಸ ಮಹಾ ಜ್ಞಾನಿ!.

ಒಟ್ಟಾರೆಯಾಗಿ ಈ ಗುರುಕುಲಗಳು ವಿಕೃತ ಮನಸ್ಸಿನ ಜನಗಳಿಂದ ತುಂಬಿ ತುಳುಕುತ್ತಿತ್ತು. ಇಂದು ಒಬ್ಬ ಮಾತ್ರ ನಿತ್ಯಾನಂದ 
ಅಂದು ಇದ್ದವರೆಲ್ಲ ನಿತ್ಯಾನಂದರೆ!!



ಆದುದರಿಂದಲೇ ಇರಬೇಕು ರಾಕ್ಷಸರು ಈ ಋಷಿಮುನಿಗಳ ಆಶ್ರಮಕ್ಕೆ ನುಗ್ಗಿ ಅವರನ್ನು ಅಟ್ಟಾಡಿಸಿ ಹೊಡೆಯುತಿದ್ದುದು!.
 ಈ ವಿದ್ಯೆ ಎಂಬ ಆಯುಧ ಹಿಡಿದು ಜಟಾಜೂಟದಾರಿಗಳಾಗಿದ್ದವರೆಲ್ಲಾ  ವೈರಾಗ್ಯದ ಮಾರ್ಗ ಹಿಡಿದವರಲ್ಲ. ಕಾಮಸೂತ್ರ 
ಬರೆದ ವಾತ್ಸಾಯನ,ನಾಟ್ಯಶಾಸ್ತ್ರ ಬರೆದ ಭರತ ಇವರ್ಯಾರೂ "ಮುನಿಗಳು" ಎಂಬುದಕ್ಕೆ ಇವರೇ ರಚಿಸಿರುವ ಪರಿಭಾಷೆಯೊಳಗೆ ಬರುವುದಿಲ್ಲ. ಈ ಕಾಡಿನಲ್ಲಿ ಅಡಗಿಕೊಂಡ ಒಬ್ಬೊಬ್ಬನದೂ ಒಂದೊಂದು ವೇಷ!. ಕುಣಿಯುವ ನವಿಲಿಗೆ ಯಾವ ಶಾಸ್ತ್ರ?,ಹಾಡುವ ಕೊಗಿಲಿಗೆ ಯಾವ ಶಾಸ್ತ್ರ?.ಆದರೆ  ಪ್ರಪಂಚದಲ್ಲಿರುವ ಎಲ್ಲ್ಲಾ ಮಾನವ ಚಟುವಟಿಕೆಯನ್ನೂ ತಮ್ಮ monopolyಮಾಡಿಕೊಳ್ಳಬೇಕು ಎಂಬ ಅದಮ್ಯ ತೆವಲು ಈ ಗುರು'ಕುಲ'ದ್ದು!. ಅದಕ್ಕಾಗೆ ಈ ಎಲ್ಲಾ ಶಾಸ್ತ್ರಗಳ ರಚನೆ.ಎಲ್ಲವು ನಮ್ಮ ಲೇಖನಿಯಿಂದಲೇ ಹುಟ್ಟಿದ್ದು.ಇವನ್ನೆಲ ದೇವರು ಕನಸಿನಲ್ಲ್ಲಿ ಬಂದು ಹೇಳಿದ ,ನಾವು ಬರೆದಿತ್ತೆವು ಎಂದು ಎಲ್ಲಾ  ವಿಷಯಗಳ ಮೇಲೆ copyright ಪಡೆಯುವ ಹುನ್ನಾರ.ಶಾಸ್ತ್ರಿಯ ಸಂಗೀತಕ್ಕೆ ಅಷ್ಟೊಂದು ಹೊತ್ತಿಗೆಗಳಿದ್ದರೂ  ಅದು ಜನರ ಮನಸನ್ನು ರಂಜಿಸುವುದಿಲ್ಲ.ತಾನಸೇನ ದೀಪ ಉರಿಸಿದ್ದ.ಇನ್ನೊಬ್ಬ ಮಳೆ ಬರಿಸಿದ್ದಾ ಎಂಬ ಎಸ್ಟೋ ಕಥೆಗಳನ್ನು ಕಟ್ಟಿದರೂ  ಜನರ ಮನಸ್ಸನ್ನು ರಂಜಿಸುವುದರಲ್ಲಿ ಇವು ಬಾವಗೀತೆ,ಜಾನಪದಗೀತೆ,ಕ್ಯಾಬರೆ ಹಾಡುಗಳಿಗಿಂತಲೂ ಹಿಂದೆ ಬಿದ್ದಿವೆ. ಈಗ ಈ ಶಾಸ್ರೀಯ ಸಂಗೀತದಿಂದ ರೋಗ ವಾಸಿಮಾಡಬಹುದು ಇದು ಬೇರೆ ಬೇರೆ ರೀತಿಯ "waves" create ಮಾಡುತ್ತವೆ ಎಂಬ ಪುಕಾರು ಹಬ್ಬಿಸಲಾಗುತ್ತಿದೆ!.ಜೊತೆಗೆ ಇದು 'scientific",ಇದನ್ನು ಪಾಶಿಮಾತ್ಯ ವಿಜ್ಞಾನಿಗಳು ಒಪ್ಪುತಾರೆ  ಎಂಬ ಪಿಳ್ಳೆನೆವ ಬೇರೆ!. actually  ಅಮೆರಿಕಾದಲ್ಲಿನ ಕಂಪೆನಿಯೊಂದು ಕ್ಲಾಸ್ಸಿಕಲ್  ಧ್ವನಿ ಸುರುಳಿಗಳ ಮಾರಾಟ ಹೆಚ್ಚಿಸಿಕೊಳ್ಳಲು ರೂಪಿಸಿದ ಪ್ರಚಾರ ತಂತ್ರವಿದು. wagner ನ ಸಂಗೀತ ಕೇಳಿದರೆ I Q ಉತ್ತಮ ಗೊಳ್ಳುತ್ತದೆ, ಬಾರೋಕ್ ನ  ಸಂಗೀತ ಕೇಳಿದರೆ ಏಕಾಗ್ರತೆ ಹೆಚ್ಚುತ್ತದೆ ಎಂಬ ಗಿಣಿ ಪಾಠವನ್ನೇ ನಮ್ಮ trainer ಗಳು ಹೇಳುತ್ತಾರೆ. ಮಕ್ಕಳನ್ನು ಮಾರ್ಕ್ಸ್ ನ  ಫ್ಯಾಕ್ಟರಿಗಳಂತೆ ಬೆಳೆಸುವ ಪೋಷಕರು Wagner,Boroque ಸಂಗೀತ ಕೇಳಿಸಿದ್ದೇ ಕೇಳಿಸಿದ್ದು!.ಸಾಲದು ಅಂತ ನಮ್ಮ ಕೊಳಲು,ತಂಬೂರಿ,ವೀಣೆಯ ಸಂಗೀತಗಾರರು ನಾವೇನು ಕಮ್ಮಿ ಎನ್ನುತ್ತಾ CD ಮಾರಿದ್ದೇ,ಮಾರಿದ್ದು!. ಈ ಬಾರೋಕ್ ,ವಾಗ್ನೆರ್ ಸಂಗೀತದ ಹಿಂದಿರುವ "ವೈಜ್ಞಾನಿಕ (!) ಸುಳ್ಳುಗಳನ್ನು ಹಲವು ಸಂಶೋದಕರು ಬಹಿರಂಗಪಡಿಸಿದ್ದಾರೆ. ಬೇಕೆಂದರೆ ಅಂತರ್ಜಾಲವನ್ನೊಮ್ಮೆ ಜಾಲಾಡಿ ನೋಡಿ.  ಈ ಶಾಸ್ತ್ರಿಯ ಸಂಗೀತದಿಂದ ಏನಿಲ್ಲವೆಂದರೂ ನಿದ್ದೆ ಒಂದು ಬರುತ್ತದೆ ಅಂತ ನಾನು ಗ್ಯಾರಂಟೀ ಕೊಡಬಲ್ಲೆ. "ನಿದ್ದೆ" ಅಂದರೆ ನಗಬೇಡಿ .ಇದು ನಮ್ಮ ದೇಶದ ಗುರುಗಳು ಮಾರುವ ಒಂದು ಯಶಸ್ವೀ product. . ಎಲ್ಲಾ ಗುರುಗಳು ಪಶಿಮಾತ್ಯರಿಗೆ ಹೇಳುವುದಿಷ್ಟೇ.' ನಿಮ್ಮಲ್ಲಿ ದುಡ್ಡು ಇದೆ,ಆದರೆ ನಿಮಗೆ ಮನಶಾಂತಿ ಇಲ್ಲ .ನಿಮಗೆ ತೃಪ್ತಿ ಇಲ್ಲ. ಅದನ್ನು ನಮ್ಮಿಂದ ಖರಿದಿಸಿ ಅಂತ. ಅವರು ಭಜನೆ ,ಧ್ಯಾನ ಮಾಡುತಾ ನಿದ್ದೆ ಹೋದ ಕೂಡಲೇ ಅವರ ಪರ್ಸ್ ಗಾಯಬ್!. ನಂತರ ಅವರೆಲ್ಲ ಬಂದು ಇಲ್ಲಿ ಪರಿಸರ ಹಾಳು ಮಾಡುತಾರೆ,ಸಂಸ್ಕೃತಿ ಕೆಡಿಸುತ್ತಾರೆ ಎಂದು ಹೇಳಿ ಅವರನ್ನು ಓದ್ದೊಡಿಸುವುದು ಇದ್ದೆ ಇದೆಯಲ್ಲಾ!  .ಕಬ್ಬನ್ನು ಚೆನ್ನಾಗಿ  ರಸತೆಗೆದು ಬಿಸಾಡುವುದು ಇದೇ ಗುರು ಮಹಿಮೆ! ಜೈ ಗುರುದೇವ.
ಅಂದು,ಇಂದು ಎಲ್ಲಾ ಕಾಲದಲ್ಲಿಯೂ ಬೆಲೆಬಾಳುವ ವಸ್ತು ಎಂದರೆ "ಸಮಯ".ಬಹುಶಃ ಎಲ್ಲಾ ಜನರಿಗೂ ಪ್ರಕೃತಿ ಸಮಾನವಾಗಿ ಹಂಚಿರುವ ವಸ್ತುವೆಂದರೆ ಈ ಸಮಯವೊಂದೇ. ಅದಕ್ಕೆ ಗುರುಗಳಿಗೆ ಹೊಟ್ಟೆಯುರಿ. ಅಮಾಯಕರಿಂದ ಈ ಸಮಯವನ್ನೂ ಹೊಡೆಯಲು ಹೊಂಚು ಹಾಕಿದರು ಗುರುರಾಯ &ಕಂಪನಿ. ಆಶ್ರಮ ಗಳಲ್ಲಿ ಕುಳಿತು ದೊಡ್ಡ ದೊಡ್ಡ ಗ್ರಂಥಗಳನ್ನು ಬರೆದರು. ಬೂಮಿಯ ಸಮಸ್ಯೆಗಳಿಗೆ ಸ್ವರ್ಗದಿಂದ ಮದ್ದು ತರಿಸಿದರು! ಪ್ರತಿಯೊಂದು ಕೃತಿ ಬರೆದಾಗ ಅದರ ಕೊನೆಗೆ 'ಪಲಶ್ರುತಿ' ಅಂತ ಒಂದನ್ನು ಸೇರಿಸುತ್ತಾರೆ. ಅದು ಆಗುತ್ತದೋ ಇಲ್ಲವೂ ಗೊತ್ತಿಲ್ಲ,ಆದರೆ ಗುರುವಿನ 'ಪಲಾಹಾರ' ಕ್ಕೆ ದಾರಿ ಮಾತ್ರ ಕಂಡಿತ ಆಗುತ್ತದೆ. ಎಲ್ಲಾ ದೇವರಿಗೂ ಸಹಸ್ತ್ರ ನಾಮಗಳಿವೆ .ಅವನ್ನು ಓದಿ ಮುಗಿಸುವಾಗ ಒಂದು ಗಂಟೆ ಆಗುತ್ತದೆ. ಅದನ್ನು "ತ್ರಿಸಂಧ್ಯ"ವೂ  ಓದಬೇಕಂತೆ!. (ಈ ನರಸಯ್ಯನೂ ಯಾವೂದೋ ಒಂದು ಸಹಸ್ರನಾಮ ಓದಿರಬೇಕು,ಕೊನೆಗೆ ವಾಗ್ದೇವಿ ತನಗೊಲಿದ್ದಿದ್ದಾಳೆ ಎಂಬ ಬ್ರಮೆಯಲ್ಲಿ ಬಾಯಿಗೆ ಬಂದಂತೆ ಮಾತಾಡಿ ತನ್ನ ಮಾತಿಗೆ ತಾನೇ ತಲೆದೂಗುತ್ತಾನೆ!) ಒಟ್ಟಾರೆ ಅವನಿಗೆ ೩ ಗಂಟೆ  ನಷ್ಟ!. ಶಿಸ್ಯನ ನಷ್ಟ ,ಗುರುವಿನ ಲಾಭ!. ಶಿಷ್ಯರನ್ನ ಸುಲಿಯುವ ಇನ್ನೊಂದು ಉಪಾಯವೆಂದರೆ ಅವರು ಒಳ್ಳೊಳೆ ದ್ರವ್ಯಗಳನ್ನು ಒಟ್ಟುಮಾಡುವಂತೆ  ಹೇಳುವುದು.ಅವರ ಮುಂದೆಯೇ ಏನೇನೂ ಅಸಂಬದ್ದ ಮಂತ್ರ ಹೇಳುತ್ತಾ ಅವುಗಳನ್ನೂ ಬೆಂಕಿಗೆ ಸುರಿದು ಬಿಡುವುದು. ಈ ಅನೈತಿಕ ಚಟುವಟಿಕೆಯನ್ನು ಅವರು 'ಯಜ್ಞ'ಎಂದು ಕರೆಯುತ್ತಾರೆ.ಒಟ್ಟಾರೆ ಶಿಸ್ಯರು ಬಲಶಾಲಿಗಳಾಗದಂತೆ ನೋಡಿಕೊಳ್ಳುವುದರಲ್ಲೇ  ಪ್ರಾಚಿನ ಗುರುವಿನ ಯಶಸ್ಸು ಅಡಗಿತ್ತು. ನೀನು ಫಸ್ಟ್ rank ಬರಬೇಕು ಎಂದರೆ ಒಂದೇ ಓದಬೇಕು ,ಅಥವಾ ಇನ್ನೊಬ್ಬ ಓದದಂತೆ ನೋಡಿಕೊಳ್ಳಬೇಕು.ನಮ್ಮ ಗುರು ಪರಂಪರೆ ಅನುಸರಿಸಿದ್ದು ಎರಡನೇ ಮಾರ್ಗ!.ಇದು ಇಲ್ಲಿನ bureaucracy ಯ 'ಗುರು' ಗಳಿಗೂ ಅನ್ವಯಿಸುತ್ತದೆ. 
 
ನಮ್ಮ  ಗುರುಗಳಿಗೆ  ಜ್ಞಾನೋದಯವಾದ ಕೂಡಲೇ ಅವರು ಮಾಡುವ ಕೆಲಸವೆಂದರೆ ಜನ ಸಮೂಹದತ್ತ  ಓಡುವುದು. ಇವರಿಗೆ ಎಲ್ಲಾ ಜನ ದಾರಿ ತಪ್ಪಿದಂತೆಯೇ ಕಾಣುತ್ತಾರೆ. ಅವರನ್ನು ಉದ್ದಾರ ಮಾಡಲು ಮಾರ್ಗ ವೆಂದರೆ  ಶಾಲೆ ತೆರೆಯುವುದು.ಅದೂ ಸರ್ಕಾರಿ ಸಿಲಬಸ್ ಪಾಲಿಸುವ ,ಅಂಗೀಕೃತ,ಅನುದಾನ ಸಹಿತವಾದ ಶಾಲೆಯೇ ಆಗಬೇಕು. ಅಲ್ಲಿ ಗುರುವಿನ ಬೊದನೆ ಊಟಕ್ಕೆ ಉಪ್ಪಿನ ಕಾಯಿ ಇದ್ದಂತೆ. ಮುಖ್ಯವಾದದ್ದು ಸಿಲಬಸ್!. ಪಾಪ ,ಗುರುವಿನ ಸಂದೇಶ ಸಾರಲು ಬೇರೆ ಮಾರ್ಗವೇ ಇಲ್ಲ. ಎಲ್ಲಾ ತೊರೆದೇವು ಎಂದು ಕಾವಿ ಹಾಕಿದವರು ಬಸವಳಿದು ವಿಧಾನಸೌಧದ ಮೂರನೇ ಮಹಡಿಯಲ್ಲಿ ಸುತ್ತುವುದು ನೋಡಬೇಕು!. ಹಣದ ಬಗ್ಗೆ ಇವರ ವ್ಯಾಮೋಹ ಪ್ರಾಪಂಚಿಕರಿಗಿಂತಲೂ ಹೆಚ್ಚೇನೂ ಎನಿಸದಿರದು. ಮೆಡಿಕಲ್,ಇಂಜಿನೀರಿಂಗ್ ಕಾಲೇಜು ತೆಗೆಯದಿದ್ದರೆ ಅವನ ಗುರುಪೀಠಕ್ಕೆ ಅವಮಾನವಲ್ಲವೇ ?. ಅವರು ಜ್ನನೋದಯದಿಂದ ಪಡೆದ ಜ್ಞಾನ,ಗುರು ಮುಖೇನ ಪಡೆದ ಜ್ಞಾನ ಅವರ ಆಶ್ರಮದ ಬಚ್ಚಲ ಕಮೋಡ್ ಹಾಕುವಷ್ಟೂ ಬೆಲೆ ಬಾಳುವುದಿಲ್ಲ ಎಂಬ ಜ್ಞಾನೋದಯವೇ ನಮ್ಮ ಮಹಾಪುರುಷರ ಶಿಕ್ಷಣ ಮೇಧ ಯಜ್ನ್ನಕ್ಕೆ ಮುಖ್ಯಕಾರಣ.ಆದುದರಿಂದಲೇ ತಾಂತ್ರಿಕ ಶಿಕ್ಷಣದತ್ತ ದಾವಂತ. ಅದುದರಿನ್ದಲ್ಲೇ ಗುರುವಿನ ಮಾತು ಕೇಳಿ ಕಾಡಿಗೆ ಹೋಗಿ  ಅಲ್ಲಿ ಜ್ಞಾನೋದಯವಾಯಿತು ಎಂದು ಓಡಿ ಬಂದು ಸಮಾಜಕ್ಕೆ ಗಂಟು ಬೀಳುವುದು! 
ಇಲ್ಲಿ ನನಗೆ ಶಂಕರ ಮೊಕಾಶಿ ಪುಣೆಕರ್ ಅವರ "ಗುರು ವಿನ ಹಾಡು ನೆನಪಾಗುತ್ತದೆ.


"ಏನು ಬಣ್ಣಿಸಲಿ ಗುರುರಾಯನ ಮಹಿಮೆ ಏನು ಬಣ್ಣಿಸಲಿ



ನ್ಯಾಯ ಹಚ್ಚುತ ಪಾಲು ಕೊಡಿಸಿದನು ಗುರುರಾಯ


ಹುಚ್ಚು ಬಿಡಿಸುವ ದೆವ್ವ ಬಿಡಿಸಿದನು ಗುರುರಾಯ


ಪಾದ ತೊಳೆದಗೆ ಕೆಸರು ಸಿಡಿಸಿದನು ಗುರುರಾಯ.................etc etc


(ನಾನು "ಗುರು"ಎಂದು ಹೇಳಿರುವುದು ಬರಿ ಇಲ್ಲಿನ ಶಿಕ್ಷಕರನ್ನಲ್ಲ.ಈ ಮನೋರೋಗಿಗಳು ಎಲ್ಲಾ ಬೂಖಂಡದಲ್ಲೂ ಇದ್ದಾರೆ. ಇಉರೋಪಿನ ಪಾದ್ರಿಗಳೂ ,ಉತ್ತರ ಏಶಿಯಾದ ಸೂಫಿಗಳೂ ,ಆಫ್ರಿಕಾದ 'ಶಮನ್'ಗಳು ...ಅಷ್ಟೇ ಏಕೆ ..ನಮ್ಮ ಕೆಲವು  ಮೂರ್ಖ ಮೇಲಾಧಿಕಾರಿಗಳು...ಮೇಲ್ಕಂದವರನ್ನು ನಂಬುವ ಕೆಲ ಪೋಷಕರು....ಎಲ್ಲರೂ.
 ಅಂದರೆ ಬೋದಿಸುವ ತೆವಲಿರುವ ಎಲ್ಲಾ ಜನರನ್ನೂ ಈ ಪರಿಬಾಷೆ ಕವರ್ ಮಾಡುತ್ತದೆ."ನಾನು ಸರಿ ,ನೀನು ತಪ್ಪು" ಎಂಬ ಖಾಯಿಲೆ ಇರುವ ಹಳೆ XXರ್ಸಿ ಗಳೆಲ್ಲರೂ ಒಂದು ರೀತಿಯ "ಗುರು"ಗಳೇ. ಗುರುತ್ವ ಎಂದರೆ ಎಲ್ಲವನ್ನೂ ಇತರರ expense ನಲ್ಲಿ ಗಿಟ್ಟಿಸಿಕೊಳ್ಳ ಬೇಕೆನ್ನುವ ಒಂದು ಬ್ರಷ್ಟ ಮನಸ್ತಿತಿ.)


Wednesday, March 10, 2010

ಸದ್ಗುರುವಿಗೆ ಜೈ ಹೋ !!!

ಈ ಮಾರ್ಚ್ ತಿಂಗಳು ಒಂದು ಆಧ್ಯಾತ್ಮಿಕ ಕ್ರಾಂತಿ ನಡೆದದ್ದು ನೋಡಿದೆವು. ಒಂದಲ್ಲ ಎರಡು !.ಒಂದನೆಯದು ಶ್ರೀ ಶ್ರೀ ಶ್ರೀ ನಿತ್ಯಾನಂದ ಎಂಬ ಜಗದ್ಗುರುವಿನಿಂದಾಗಿ ಸಾವಿರಾರು ಶಿಷ್ಯರಿಗೆ ಜ್ಞಾನೋದಯವಾಯಿತು.
ಇನ್ನೊಂದು ಉತ್ತರ ಪ್ರದೇಶದಲ್ಲಿ ಕೃಪಾಳು ಮಹಾರಾಜ್ ಎಂಬ ಸಂತನ ಆಶ್ರಮದಲ್ಲಿ ಪ್ರಸಾದ ಪಡೆಯಲು ಹೋಗಿ ,ಅಲ್ಲಿ ನೂಕುನುಗ್ಗಲು ಸಂಭವಿಸಿ ಆತನ ೬೫ ಭಕ್ತರು ಪರಂದಾಮ ಸೇರಿದರು. ಇಷ್ಟು ಜನ ಸತ್ತರೂ ಸಾರ್ವಜನಿಕರು ,ಮಾದ್ಯಮಗಳು ಕೃಪಾಳು ಮಹಾರಾಜನ ಬಗ್ಗೆಯಾಗಲ್ಲಿ,ಆಶ್ರಮ,ದೇವಾಲಯಗಳ mismanagement ಬಗ್ಗೆಯಾಗಲಿ ಸೊಲ್ಲೆತ್ತಲಿಲ್ಲ. ಅವರ ಕಣ್ಣು ಕುಕ್ಕಿದ್ದು ನಿತ್ಯಾನಂದನ ಆಸ್ತಿ ಹಾಗು ಆತನ ಪ್ರಣಯ ಪ್ರಸಂಗ. ಆದರೆ ಕೇಶವಪ್ರಸಾದ್ ಪ್ರಕಾರ ಇದು ನಿತ್ಯಾನಂದನ ವಿಫಲ್ಯವಲ್ಲ. ಇದು ಆತ ಬೋದಿಸುತಿದ್ದ ತತ್ವಗಳ ವಿಫಲ್ಯ.ದೇವರಾಗಿ ಕಾಣುತಿದ್ದ ನಿತ್ಯಾನಂದ ಈಗ ಮನುಷ್ಯನಂತೆ ಕಾಣುತಿದ್ದಾನೆ.ಜನರು ಒಳ್ಳೊಳ್ಳೆ ಬಕ್ಷ್ಯ ,ಬೋಜ್ಯಗಳನ್ನು ಗುರುವಿಗೆ ನೀಡುತ್ತಾರೆ.ಗುರುವಿಗೆ 'ಜಠರ'ಇದೆ ಎಂದು ಒಪ್ಪುವ ಜನ ಆತನಿಗೆ 'ಜನನಾಂಗವೂ' ಇದೆ ಎಂದು ಕೆ ಒಪ್ಪುವುದಿಲ್ಲ?!
 ಸಾವಿರಾರು ವರ್ಷಗಳಿಂದ ಬೋದಿಸಲ್ಪಡುವ ತತ್ವಜ್ಞಾನವೆಂಬ ಸುಳ್ಳಿನ ಕಂತೆಗಳನ್ನು ಶ್ರೀ ಶ್ರೀ ಪರಮಹಂಸ ನಿತ್ಯಾನಂದ ತನ್ನದೇ ಆದ ರೀತಿಯಲ್ಲಿ ಪ್ಯಾಕೇಜ್ ಮಾಡಿ ಮಾರಿದ.ಯೆಶಸ್ವಿಯಾದ. ಆಸ್ತಿಮಾಡಿದ.ಮಜಾಮಾಡಿದ. ಅದನ್ನು ನಂಬಿದವರು ಎಂದಿನಂತೆ ಮಂಗಗಳಾದರು. ಈಗ ಮೈ ಪರಚಿಕೊಳ್ಳುತಿದ್ದಾರೆ.
ಈ ‘ಗುರುತ್ತ್ವ’ ಎಂಬ ಪರಿಕಲ್ಪನೆಯೇ ಅನೈತಿಕವಾದಂತಹುದು ಎನ್ನುತ್ತಾರೆ ಕೇಶವಪ್ರಸಾದ್ .ಮನುಷ್ಯನ ಮನಸಿನಲ್ಲಿ ಮೇಲು-ಕೀಳು ಎಂಬ ಭಾವನೆಯನ್ನು ಬಿತ್ತುವುದು,ಆ ಮೂಲಕ ಜನಕೋಟಿಯ ಶೋಷಣೆಗೆ ವೇದಿಕೆ ಸಿದ್ದಪಡಿಸುವುದು ಇದರ ಉದ್ದೇಶ. ನೀನು ದಡ್ಡ ,ನಾನು ತಿಳಿದವನು! ನನ್ನ ಸೇವೆ ಮಾಡಿ ಸಾರ್ಥಕತೆಯನ್ನು ಪಡೆ ಎನ್ನುತ್ತಾನೆ ಗುರು.
“ಶೋಷಣೆ”ಎಂದರೆ ಜನರ ಅಜ್ಞಾನವನ್ನ ತಮ್ಮ ಸ್ವಾರ್ಥಸಾದನೆಗೆ ಬಳಸಿಕೊಳ್ಳುವುದು. ಈ “ಗುರು ಪರಂಪರೆ”ಮಾಡುವುದು ಅದನ್ನೇ..ಆದುದರಿಂದಲೇ ಹಿಂದೆ ರಾಜ ಮಹಾರಾಜರು ಋಷಿಮುನಿಗಳನ್ನು ಉತ್ಸವ ಮೂರ್ತಿಗಳಾಗಿ ಜನರಿಗೆ ತೋರಿಸುತಿದ್ದುದು.ಅದಕ್ಕೆ ಪ್ರತಿಯಾಗಿ ಅವರು ರಾಜನ ಬಗ್ಗೆ ಜನರ ಮನಸ್ಸಿನಲ್ಲಿ ಒಳ್ಳೆಯ ಅಭಿಪ್ರಾಯ ಮೂಡಿಸುತಿದ್ದುದು.
“ಗುರುವನ್ನು ನಂಬಿ, ಗುರುವನ್ನು ನಂಬಿ ಎಂಬ ಕೂಗನ್ನು ಶತಮಾನಗಳಿಂದ ಬೇರೆಬೇರೆ ಬರಹಗಾರರ ,ಹಾಡುಗಾರರ ಮೂಲಕ ನಮ್ಮ ತಲೆಗೆ ವ್ಯವಸ್ತಿತವಾಗಿ ತುಂಬಲಾಗುತ್ತಿದೆ. ಉದಾ :“ಗುರುವಿನ ಗುಲಾಮನಾಗುವ ತನಕ....”ಹಿಂದೆ ಗುರುವಿದ್ದ... ಇತ್ಯಾದಿ .
ಒಟ್ಟಾರೆ, ಮೌಡ್ಯ ಬಿತ್ತುವ ಉದ್ಯಮ ಇಂದು ಒಬ್ಬ ಸಮರ್ಥ ಸೇಲ್ಸ್ ಮ್ಯಾನ್ ಒಬ್ಬನನ್ನು ,ಒಬ್ಬ ಸೇನಾನಿಯನ್ನ ಕಳೆದು ಕೊಂಡಿದೆ.ಇದು ಜನಸಾಮಾನ್ಯರ ವಿಜಯ. ಕೇಶವಪ್ರಸಾದ್ ಹೇಳುವಂತೆ ನಾವು ಅಸಹ್ಯ ಪಡಬೇಕಿರುವುದು ಶ್ರೀ ಶ್ರೀ ಶ್ರೀ ನಿತ್ಯಾನಂದನ ಬಗ್ಗೆಯಲ್ಲ. ನೂರಾರು ವರ್ಷಗಳ ಹಿಂದೆ ಇಂತಹಾ ಬೋದನೆಗಳನ್ನು ಮಾಡಿ ,ಯಾವುದೇ ಹಗರಣಗಳಲ್ಲಿ ಸಿಕ್ಕಿಬೀಳದೆ ,ಸತ್ತು ಗೋರಿಯಿಂದಲೇ ಜನರ ನಂಬಿಕೆಗಳನ್ನು ಯಶಸ್ವಿಯಾಗಿ ಬಳಸಿಕೊಳ್ಳುತ್ತಿರುವವರ ಬಗ್ಗೆ.


ಶ್ರೀ ಶ್ರೀ ಯವರಿಂದ ಆದ ಜ್ಞಾನೋದಯವನ್ನು ಜನ ಸರಿಯಾಗಿ ಬಳಸಿಕೊಂಡು ಮುಂದೆ ಬೇರೆ ಯಾವುದೇ ಗುರುವಿಗೆ ಮಣೆ ಹಾಕದೆ ಇರುವುದು ಒಳ್ಳೆಯದು.